AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ರಜಾ ಸಮಯದಲ್ಲಿ ಮಕ್ಕಳಿಗಾಗಿ ಶಿಕ್ಷಕರು ಮಾಡಿದ್ದೇನು ಗೊತ್ತಾ.?

ಹಾವೇರಿ: ಕೊರೊನಾ ಆರ್ಭಟ ಶುರುವಾದ ಮೇಲೆ ಶಾಲೆಗೆ ರಜೆ‌ ಇದೆ. ಶಾಲೆಗೆ ಮಕ್ಕಳು ಬರುತ್ತಿಲ್ಲ. ಶಿಕ್ಷಕರು ಶಾಲೆಗೆ ಬಂದು ಹೋಗುತ್ತಿದ್ದಾರೆ. ಆದರೆ ಹಾವೇರಿ ನಗರದ ನಾಗೇಂದ್ರಮಟ್ಟಿಯಲ್ಲಿರುವ ಸರಕಾರಿ ಶಾಲೆ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಇತ್ತು. 3೦೦ಕ್ಕೂ ಅಧಿಕ ಮಕ್ಕಳಿದ್ದ ಶಾಲೆಗೆ ಕುಡಿಯುವ ನೀರಿಗೆ ಟ್ಯಾಂಕ್‌ ಇರಲಿಲ್ಲ. ಕೊರೊನಾ ರಜೆ ಸಮಯವನ್ನೆ ಸದುಪಯೋಗ ಮಾಡಿಕೊಂಡ ಈ ಶಾಲೆ ಶಿಕ್ಷಕರು ಮಕ್ಕಳಿಗಾಗಿ 10 ಸಾವಿರ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಕಟ್ಟಿದ್ದಾರೆ. ಬಿಸಿಯೂಟದ ನಂತರ ಮಕ್ಕಳು,ನೀರಿಗಾಗಿ ಪಕ್ಕದ‌ […]

ಕೊರೊನಾ ರಜಾ ಸಮಯದಲ್ಲಿ ಮಕ್ಕಳಿಗಾಗಿ ಶಿಕ್ಷಕರು ಮಾಡಿದ್ದೇನು ಗೊತ್ತಾ.?
ಸಾಧು ಶ್ರೀನಾಥ್​
| Edited By: |

Updated on:Aug 16, 2020 | 11:18 AM

Share

ಹಾವೇರಿ: ಕೊರೊನಾ ಆರ್ಭಟ ಶುರುವಾದ ಮೇಲೆ ಶಾಲೆಗೆ ರಜೆ‌ ಇದೆ. ಶಾಲೆಗೆ ಮಕ್ಕಳು ಬರುತ್ತಿಲ್ಲ. ಶಿಕ್ಷಕರು ಶಾಲೆಗೆ ಬಂದು ಹೋಗುತ್ತಿದ್ದಾರೆ. ಆದರೆ ಹಾವೇರಿ ನಗರದ ನಾಗೇಂದ್ರಮಟ್ಟಿಯಲ್ಲಿರುವ ಸರಕಾರಿ ಶಾಲೆ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಇತ್ತು. 3೦೦ಕ್ಕೂ ಅಧಿಕ ಮಕ್ಕಳಿದ್ದ ಶಾಲೆಗೆ ಕುಡಿಯುವ ನೀರಿಗೆ ಟ್ಯಾಂಕ್‌ ಇರಲಿಲ್ಲ. ಕೊರೊನಾ ರಜೆ ಸಮಯವನ್ನೆ ಸದುಪಯೋಗ ಮಾಡಿಕೊಂಡ ಈ ಶಾಲೆ ಶಿಕ್ಷಕರು ಮಕ್ಕಳಿಗಾಗಿ 10 ಸಾವಿರ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಕಟ್ಟಿದ್ದಾರೆ.

ಬಿಸಿಯೂಟದ ನಂತರ ಮಕ್ಕಳು,ನೀರಿಗಾಗಿ ಪಕ್ಕದ‌ ಮನೆಗಳಿಗೆ ಸುತ್ತಾಡುವ ಪರಿಸ್ಥಿತಿ ಇತ್ತು.. ನಗರದ ನಾಗೇಂದ್ರನಮಟ್ಟಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 8ರಲ್ಲಿ ಒಂದರಿಂದ ಎಂಟನೆ ತರಗತಿಯವರೆಗೆ ಕಲಿಸಲಾಗುತ್ತಿದೆ. 360 ವಿದ್ಯಾರ್ಥಿಗಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲೆಗೆ ಬರುವ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಇತ್ತು. ಬಿಸಿಯೂಟ ಸೇವಿಸಿದ ನಂತರ ಶಾಲೆ ಮಕ್ಕಳು ಕುಡಿಯುವ ನೀರಿಗಾಗಿ ಶಾಲೆ ಪಕ್ಕದ‌ ಮನೆಗಳಿಗೆ ಸುತ್ತಾಡುವ ಪರಿಸ್ಥಿತಿ ಇತ್ತು.

ಶಾಲೆ ಶಿಕ್ಷಕರು ನಗರಸಭೆ ಸೇರಿದಂತೆ‌ ಅನೇಕರಿಗೆ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಹೇಳಿದ್ದರು. ಆದರೆ ಯಾರೂ ಶಾಲಾ‌ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಕೆಲಸಕ್ಕೆ ಕೈ ಹಾಕಿರಲಿಲ್ಲ. ಈಗ ಎಲ್ಲೆಲ್ಲೂ ಕೊರೊನಾ ಆರ್ಭಟವಿದೆ. ಶಾಲೆಗೂ ರಜೆ ಇದೆ. ಕೊರೊನಾ ರಜೆ ಸಮಯವನ್ನೆ ಶಾಲೆ ಶಿಕ್ಷಕರು ಸದುಪಯೋಗ ಮಾಡಿಕೊಂಡಿದ್ದಾರೆ. ತಾವೇ ಸ್ವತಃ ಸಲಿಕೆ, ಗುದ್ದಲಿ ಹಿಡಿದು ಕಲ್ಲು, ಮಣ್ಣು, ಮರಳು, ಸಿಮೆಂಟ್‌ ಖರೀದಿಸಿ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ.

ಶಾಲಾ ಶಿಕ್ಷಕರೆ ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ.. ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಗಾರೆ ಕೆಲಸ‌ ಮಾಡುತ್ತಿರುವುದರಿಂದ ಅವರ ಸಹಕಾರದಿಂದ ಶಾಲೆಯ ಐದು ಜನ ಶಿಕ್ಷಕರು ಸೇರಿಕೊಂಡು ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ. ಏಪ್ರೀಲ್ ತಿಂಗಳಲ್ಲಿ ಕೆಲಸ ಆರಂಭಿಸಿ ಮೂರರಿಂದ ಮೂರೂವರೆ ತಿಂಗಳ ಕಾಲ ಶ್ರಮವಹಿಸಿ ಮಕ್ಕಳಿಗಾಗಿ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಿಸಿದ್ದಾರೆ. ಸುಮಾರು ಹತ್ತು ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ ನಿರ್ಮಿಸಿದ್ದಾರೆ.

ಶಾಲಾ‌ ಶಿಕ್ಷಕರು ಶಾಲಾ ಆವರಣದಲ್ಲಿ ಸಿಕ್ಕ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ತಮ್ಮ ಕೈಲಾದಷ್ಟು ಸ್ವಂತ ಹಣ ಸೇರಿಸಿ ಈ ಕೆಲಸ ಮಾಡಿದ್ದಾರೆ. ಶಾಲೆಯ ಮೇಲೆ ಪ್ರೀತಿ ಹೊಂದಿದ ಕೆಲವರು ಅಲ್ಪಸ್ವಲ್ಪ ಹಣಕಾಸಿನ ನೆರವು ಸಹ ನೀಡಿದ್ದಾರೆ. ಅದನ್ನೆಲ್ಲ ಬಳಸಿಕೊಂಡು ಶಿಕ್ಷಕರು ಮರಳು, ಸಿಮೆಂಟ್,‌ ಕಡಿ, ಇಟ್ಟಿಗೆ ಖರೀದಿಸಿ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ. ಶಾಲೆಯಲ್ಲಿ 360 ವಿದ್ಯಾರ್ಥಿಗಳು ಇರುವುದರಿಂದ ನೀರು ಕುಡಿಯುವುದಕ್ಕೆ ಮುಗಿಬೀಳುವುದು ತಪ್ಪಲಿ ಎಂದು ಟ್ಯಾಂಕಿಗೆ ಏಳು ನಲ್ಲಿಗಳನ್ನು ಅಳವಡಿಸಿದ್ದಾರೆ. ನೀರಿನ ಟ್ಯಾಂಕ್‌ ಇರುವ ಜಾಗಕ್ಕೆ ದೊಡ್ಡದಾದ ಗೇಟ್ ಅಳವಡಿಸಿದ್ದಾರೆ.

ಒಂದು ವೇಳೆ‌ ನಲ್ಲಿ ನೀರು ಕೆಳಕ್ಕೆ ಬಿದ್ರೆ ವೇಸ್ಟ್ ಆಗಿ ಹರಿದು ಹೋಗದಂತೆ ವ್ಯವಸ್ಥೆ ಮಾಡಿದ್ದಾರೆ. ಶಾಲಾ ಮಕ್ಕಳು ಕುಡಿಯುವ ನೀರಿಗೆ ಪರಿತಪಿಸಿ, ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಶಾಲೆ ಶಿಕ್ಷಕರೆ ಕೊರೊನಾ ರಜೆ ಸಮಯದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ. ಶಾಲಾ ಮಕ್ಕಳಿಗೆ ಆಗುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಿಕ್ಷಕರೆ ಟ್ಯಾಂಕ್ ನಿರ್ಮಿಸಿದ್ದಾರೆ.

ಮೂವತ್ತು ಸಾವಿರ ರುಪಾಯಿಗೂ ಅಧಿಕ ಹಣ ಖರ್ಚು ಮಾಡಿ ಹತ್ತು ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಿದ್ದಾರೆ. ಕೊರೊನಾ ರಜೆ‌ ಸಮಯವನ್ನೆ ಉಪಯೋಗ ಮಾಡಿಕೊಂಡು ಶಾಲೆ ಶಿಕ್ಷಕರು ಮಕ್ಕಳ‌ ಕುಡಿಯುವ ನೀರಿನ ದಾಹ ನೀಗಿಸಲು ಮಾಡಿರುವ ಕೆಲಸ ನಿಜಕ್ಕೂ ಮಾದರಿ.-ಪ್ರಭುಗೌಡ.ಎನ್.ಪಾಟೀಲ

Published On - 11:17 am, Sun, 16 August 20

ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ