AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೂಟ್ಯೂಬ್​ಗೆ ಬಂತು ‘ಶಕೀಲಾ’ ಬಯೊಪಿಕ್​ನ ಮೊದಲ ಹಾಡು ‘ತೇರಾ ಇಷ್ಕ್ ಸತಾವೆ’

ಶಕೀರಾ ಸಿನೆಮಾದ ಮೊದಲ ಹಾಡು ‘ತೇರಾ ಇಷ್ಕ್ ಸತಾವೆ’ ಬಿಡುಗಡೆಯಾಗಿದ್ದು, ರಿಚಾ ಛಡ್ಡಾಳ ಗ್ಲಾಮರ್ ನೋಟಕ್ಕಾಗಿ ಸಿನಿಪ್ರಿಯರು ಫುಲ್ ಫಿದಾ.

ಯೂಟ್ಯೂಬ್​ಗೆ ಬಂತು ‘ಶಕೀಲಾ’ ಬಯೊಪಿಕ್​ನ ಮೊದಲ ಹಾಡು ‘ತೇರಾ ಇಷ್ಕ್ ಸತಾವೆ’
ಶಕೀಲಾ ಪಾತ್ರದಲ್ಲಿ ರಿಚಾ ಛಡ್ಡಾ.
guruganesh bhat
| Edited By: |

Updated on: Dec 18, 2020 | 4:27 PM

Share

ನಟಿ ಶಕೀಲಾ ಜೀವನ ಆಧರಿತ ‘ಶಕೀಲಾ’ ಚಿತ್ರದ ಮೊದಲ ಹಾಡು ‘ತೇರಾ ಇಷ್ಕ್ ಸತಾವೆ’ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದೆ. ರಿಚಾ ಛಡ್ಡಾ-ಪಂಕಜ್ ತ್ರಿಪಾಠಿ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ‘ಶಕೀಲಾ’ ಚಿತ್ರದ ಟ್ರೇಲರ್ ಸಹ ಅಪಾರ ಮೆಚ್ಚುಗೆ ಗಳಿಸಿತ್ತು. ಇದೀಗ ಬಿಡುಗಡೆಯಾಗಿರುವ ‘ತೇರಾ ಇಷ್ಕ್ ಸತಾವೆ’ ಕೂಡ ಸಿನಿಪ್ರಿಯರಲ್ಲಿ ಮತ್ತಷ್ಟು ಉತ್ಸಾಹ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ರಿಚಾಳ ಆಕರ್ಷಕ ಸೌಂದರ್ಯ ನೋಡುಗರನ್ನು ಸಮ್ಮೋಹನಗೊಳಿಸದೆ ಇರಲಾರದು! ಕುಮಾರ್ ಬರೆದ ಈ ಹಾಡಿಗೆ ಮೀಟ್ ಬ್ರದರ್ಸ್, ಖುಷ್ಬೂ ಗ್ರೇವಲ್ ಸ್ವರ ಸಂಯೋಜಿಸಿದ್ದಾರೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

ತೊಂಬತ್ತರ ದಶಕದ ಜನಪ್ರಿಯ ನಟಿ ಶಕೀಲಾಳ ಸಿನಿಪಯಣವನ್ನು ಈ ಚಿತ್ರ ಕಟ್ಟಿಕೊಡುತ್ತದೆ. ಆಕೆ ದಕ್ಷಿಣ ಭಾರತದಲ್ಲಿ ಜನಪ್ರಿಯ ನಟಿಯಾಗಿ ಹೇಗೆ ಕಂಗೊಳಿಸಿದಳು, ಇಲ್ಲಿಯ ನಿರ್ಮಾಪಕರಿಗೆ ಈಕೆಯ ವೃತ್ತಿಜೀವನ ಹೇಗೆ ಪುನರುಜ್ಜೀವನ ದೊರೆಕಿಸಿಕೊಟ್ಟಿತು ಎಂಬುದರ ಜೊತೆಜೊತೆಗೆ ಆಕೆ ನಿಜಜೀವನದಲ್ಲಿ ಅನುಭವಿಸಿದ ಆಘಾತಕಾರಿ ವಿಷಯಗಳನ್ನೂ ಪದರಪದರವಾಗಿ ತೆರೆಯ ಮೇಲೆ ನೋಡಬಹುದಾಗಿದೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದ ಈ ಚಿತ್ರ ಇದೇ 25ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ