AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಷ್ಟ ಶಕ್ತಿ ಸಂಹಾರಕ್ಕೆ ಈ ದೇವಿ ಮೀಸೆ ಧರಿಸಿದ್ದಳು, ಇಲ್ಲಿ ದಸರಾಗೆ ನಡೆಯುತ್ತೆ ವಿಶೇಷ ಪೂಜೆ

ದಾವಣಗೆರೆ: ದಸರಾ ಅಂದ್ರೆ ಒಂದು ರೀತಿಯಲ್ಲಿ ದುಷ್ಟ ಶಕ್ತಿಗಳ ಸಂಹಾರದ ಪ್ರತೀಕ. ಪೌರಾಣಿಕವಾಗಿ ಪಾಂಡವರು ಅಜ್ಞಾತ ವಾಸ ಮುಗಿಸಿ ಧರ್ಮ ಯುದ್ಧಕ್ಕಾಗಿ ಬನ್ನಿ ಮರದಲ್ಲಿ ಇಟ್ಟ ಆಯುಧಗಳನ್ನ ಪಡೆದ ದಿನ. ಇದರ ಪ್ರತೀಕವಾಗಿ ಬನ್ನಿಮರಕ್ಕೆ ಪೂಜೆ ಸಲ್ಲಿಸುವುದು ಒಂದು ಸಂಪ್ರಾಯ. ಇದೇ ರೀತಿ ದಸರಾ ಅಂದ್ರೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಗುಡ್ಡದ ಮೇಲೆ ಇರುವ ಉಚ್ಚಂಗೆಮ್ಮನ ಪುಣ್ಯಕ್ಷೇತ್ರದಲ್ಲಿ ವಿಶೇಷ ಆರಾಧನೆ ಇರುತ್ತೆ. ನವರಾತ್ರಿಯ ಪ್ರಯುಕ್ತ ನಿತ್ಯ ವಿಭಿನ್ನ ಪೂಜೆ ನೆರವೇರಿಸಲಾಗುತ್ತೆ. ಕೊನೆಯ ದಿನ ಬನ್ನಿ […]

ದುಷ್ಟ ಶಕ್ತಿ ಸಂಹಾರಕ್ಕೆ ಈ ದೇವಿ ಮೀಸೆ ಧರಿಸಿದ್ದಳು, ಇಲ್ಲಿ ದಸರಾಗೆ ನಡೆಯುತ್ತೆ ವಿಶೇಷ ಪೂಜೆ
ಆಯೇಷಾ ಬಾನು
|

Updated on: Oct 19, 2020 | 9:25 AM

Share

ದಾವಣಗೆರೆ: ದಸರಾ ಅಂದ್ರೆ ಒಂದು ರೀತಿಯಲ್ಲಿ ದುಷ್ಟ ಶಕ್ತಿಗಳ ಸಂಹಾರದ ಪ್ರತೀಕ. ಪೌರಾಣಿಕವಾಗಿ ಪಾಂಡವರು ಅಜ್ಞಾತ ವಾಸ ಮುಗಿಸಿ ಧರ್ಮ ಯುದ್ಧಕ್ಕಾಗಿ ಬನ್ನಿ ಮರದಲ್ಲಿ ಇಟ್ಟ ಆಯುಧಗಳನ್ನ ಪಡೆದ ದಿನ. ಇದರ ಪ್ರತೀಕವಾಗಿ ಬನ್ನಿಮರಕ್ಕೆ ಪೂಜೆ ಸಲ್ಲಿಸುವುದು ಒಂದು ಸಂಪ್ರಾಯ.

ಇದೇ ರೀತಿ ದಸರಾ ಅಂದ್ರೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಗುಡ್ಡದ ಮೇಲೆ ಇರುವ ಉಚ್ಚಂಗೆಮ್ಮನ ಪುಣ್ಯಕ್ಷೇತ್ರದಲ್ಲಿ ವಿಶೇಷ ಆರಾಧನೆ ಇರುತ್ತೆ. ನವರಾತ್ರಿಯ ಪ್ರಯುಕ್ತ ನಿತ್ಯ ವಿಭಿನ್ನ ಪೂಜೆ ನೆರವೇರಿಸಲಾಗುತ್ತೆ. ಕೊನೆಯ ದಿನ ಬನ್ನಿ ಮುಡಿದು ಅಂಭುಚೇಧನ ಮಾಡಲಾಗುವುದು. ಅಲ್ಲಿಯ ತನಕ ದೇವಿಯ ಆರಾಧನೆ ನಡೆಯುತ್ತದೆ.

ದುಷ್ಟ ಶಕ್ತಿ ಸಂಹಾರಕ್ಕೆ ಉಚ್ಚಂಗೆಮ್ಮ ಮೀಸೆ ಧರಿಸಿದ್ದಳು: ಉಚ್ಚಂಗೆಮ್ಮ ಚಿತ್ರದುರ್ಗ ಪಾಳೇಗಾರರ ಕುಲದೇವತೆ. ಯಾವುದೇ ಯುದ್ಧ ಹಾಗೂ ಶುಭ ಸಮಾರಂಭಗಳಿದ್ದರೂ ಈ ದೇವಿಗೆ ಪೂಜೆ ಸಲ್ಲಿಸಿಯೇ ಮುಂದಿನ ಕಾರ್ಯ ಮಾಡುತ್ತಿದ್ದರು. ದುಷ್ಟ ಶಕ್ತಿಗಳ ಉಪಟಳ ಹೆಚ್ಚಾದ ಸಮಯದಲ್ಲಿ ಈ ಉಪಟಳ ತಡೆಯಲು ಹತ್ತಾರು ಪ್ರಯತ್ನಗಳು ನಡೆದವು. ಆದ್ರೆ ಯಾವುದೇ ಪ್ರಯೋಜನ ಆಗಲಿಲ್ಲ. ದುಷ್ಟ ಶಕ್ತಿಯ ಉಪಟಳ ತೀವ್ರವಾಯಿತು.

ಈ ವೇಳೆ ಉಚ್ಚಂಗೆಮ್ಮನೇ ಮೀಸೆ ಧರಿಸಿ ಖಡ್ಗ ಹಿಡಿದು ದುಷ್ಟ ಶಕ್ತಿಯ ಸಂಹಾರ ಮಾಡಿದ್ದಳು ಎಂದು ಹೇಳಲಾಗುತ್ತೆ. ಹಾಗೂ ಇದೊಂದು ಐತಿಹಾಸಿಕ ಸತ್ಯ. ಇದೇ ರೀತಿ ಸವದತ್ತಿ ಯಲ್ಲಮ್ಮನಿಗೂ ಮಡ್ರಳ್ಳಿ ಚೌಡಮ್ಮನಿಗೂ ಮೀಸೆ ಇರುವುದನ್ನ ನೋಡಬಹುದು. ಹೀಗೆ ಹೆಣ್ಣು ದೇವತೆಗಳಾದ್ರು ಮೀಸೆ ಧರಿಸಿ ಯಾರ ಕೈಯಿಂದಲೂ ಆಗದ ದುಷ್ಟ ಶಕ್ತಿಯ ಸಂಹಾರ ಮಾಡಿದ್ದು ದಸರಾದ ವಿಜಯದಶಮಿ ದಿನ. ಹೀಗಾಗಿ ಮೀಸೆ ಧರಿಸಿದ ದೇವತೆಗೆ ದಸರಾದಲ್ಲಿ ಒಂದು ರೀತಿಯ ವಿಶೇಷ ಪೂಜೆ ಸಲ್ಲಿಸಲಾಗುತ್ತೆ.

ಇಸ್ಕಾನ್​​ನ ಸಸ್ಯಾಹಾರಿ ಹೋಟೆಲ್ ಒಳಗೆ ಚಿಕನ್ ತಿಂದ ಯುವಕ
ಇಸ್ಕಾನ್​​ನ ಸಸ್ಯಾಹಾರಿ ಹೋಟೆಲ್ ಒಳಗೆ ಚಿಕನ್ ತಿಂದ ಯುವಕ
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್