AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Cares Fundನಿಂದ ಬಂದ ಹತ್ತಾರು ವೆಂಟಿಲೇಟರ್​ ಅನಾಥವಾಗಿ ಬಿದ್ದಿವೆ, ಎಲ್ಲಿ?

ಕೊಪ್ಪಳ: ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡ್ ಪಕ್ಕದ ಕೊಠಡಿಯಲ್ಲಿಯೇ ಇನ್​ಸ್ಟಾಲ್ ಮಾಡದ ಹತ್ತಾರು ವೆಂಟಿಲೇಟರ್​​ಗಳು ಅನಾಥವಾಗಿ ಬಿದ್ದಿವೆ. ಕೊರೊನಾ ಚಿಕಿತ್ಸೆಯಲ್ಲಿ ಅತ್ಯಮೂಲ್ಯ ಪಾತ್ರ ನಿರ್ವಹಿಸುವ ವೆಂಟಿಲೇಟರ್​ಗಳು ಇದ್ದರೂ ಅವುಗಳನ್ನು ಇನ್​ಸ್ಟಾಲ್​ ಮಾಡದೇ ಆರೋಗ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ವಹಿಸಿದೆ. ವೆಂಟಿಲೇಟರ್ ಮಾನಿಟರ್ ಮಾಡಲು ಸೂಕ್ತ ಸಿಬ್ಬಂದಿ‌ ಇರದ ಕಾರಣ ಹೀಗೆ ಇನ್​ಸ್ಟಾಲ್ ಆಗದೇ ಅನಾಥವಾಗಿವೆ ಎಂದು ಆಸ್ಪತ್ರೆ ಮೂಲಗಳು ಹೇಳುತ್ತಿವೆ. ಕೋವಿಡ್ ವಾರ್ಡ್​ ಪಕ್ಕದಲ್ಲಿಯೇ ಈ ವೆಂಟಿಲೇಟರ್​ಗಳು ಬಿದ್ದಿವೆ. ಗಮನಾರ್ಹವೆಂದರೆ ಜಿಲ್ಲೆಯಲ್ಲಿ ‌ಒಂದು‌ ವಾರದಲ್ಲಿ‌ 30 ಕ್ಕೂ […]

PM Cares Fundನಿಂದ ಬಂದ ಹತ್ತಾರು ವೆಂಟಿಲೇಟರ್​ ಅನಾಥವಾಗಿ ಬಿದ್ದಿವೆ, ಎಲ್ಲಿ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Aug 31, 2020 | 12:09 PM

Share

ಕೊಪ್ಪಳ: ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡ್ ಪಕ್ಕದ ಕೊಠಡಿಯಲ್ಲಿಯೇ ಇನ್​ಸ್ಟಾಲ್ ಮಾಡದ ಹತ್ತಾರು ವೆಂಟಿಲೇಟರ್​​ಗಳು ಅನಾಥವಾಗಿ ಬಿದ್ದಿವೆ. ಕೊರೊನಾ ಚಿಕಿತ್ಸೆಯಲ್ಲಿ ಅತ್ಯಮೂಲ್ಯ ಪಾತ್ರ ನಿರ್ವಹಿಸುವ ವೆಂಟಿಲೇಟರ್​ಗಳು ಇದ್ದರೂ ಅವುಗಳನ್ನು ಇನ್​ಸ್ಟಾಲ್​ ಮಾಡದೇ ಆರೋಗ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ವಹಿಸಿದೆ.

ವೆಂಟಿಲೇಟರ್ ಮಾನಿಟರ್ ಮಾಡಲು ಸೂಕ್ತ ಸಿಬ್ಬಂದಿ‌ ಇರದ ಕಾರಣ ಹೀಗೆ ಇನ್​ಸ್ಟಾಲ್ ಆಗದೇ ಅನಾಥವಾಗಿವೆ ಎಂದು ಆಸ್ಪತ್ರೆ ಮೂಲಗಳು ಹೇಳುತ್ತಿವೆ. ಕೋವಿಡ್ ವಾರ್ಡ್​ ಪಕ್ಕದಲ್ಲಿಯೇ ಈ ವೆಂಟಿಲೇಟರ್​ಗಳು ಬಿದ್ದಿವೆ. ಗಮನಾರ್ಹವೆಂದರೆ ಜಿಲ್ಲೆಯಲ್ಲಿ ‌ಒಂದು‌ ವಾರದಲ್ಲಿ‌ 30 ಕ್ಕೂ ಹೆಚ್ಚು ಜಾನ ಸಾವನ್ನಪ್ಪಿದ್ರೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ನಿಜಕ್ಕೂ ಆಘಾತಕಾರಿಯಾಗಿದೆ.

ವೆಂಟಿಲೇಟರ್ ಕೊರತೆಯೇ ಈ ಸಾವುಗಳಿಗೆ ಕಾರಣ ಅನ್ನೋ ಮಾಹಿತಿಯೂ ಇದೆ. ಇಂತಹ ಗಂಭೀರವಾದ ಆರೋಪದ ನಡುವೆಯೂ ವೆಂಟಿಲೇಟರ್ ಇದ್ರೂ ಇನ್​ಸ್ಟಾಲ್ ಮಾಡದ ಆರೋಗ್ಯ ಇಲಾಖೆಗೆ ಬುದ್ಧಿ ಹೇಳುವವರು ಯಾರು? ಎಂದು ಜಿಲ್ಲೆಯ ಜನ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

Published On - 9:49 am, Mon, 31 August 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು