AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನು ಯಾಕ ಬರಲಿಲ್ಲವ್ವಾ ನನ್ನ ಪತಿರಾಯಾ.. ‘ಗಂಡನ ಮನೆ’ ಎದುರು ಹೆಂಡತಿ ಧರಣಿ!

ಬಾಗಲಕೋಟೆ: ತವರು ಮನೆಗೆ ಹೋಗಿದ್ದ ತನ್ನನ್ನು ಮರಳಿ ಗಂಡ ತನ್ನ ಮನೆಗೆ ಕರೆದುಕೊಂಡು ಬಾರದ ಹಿನ್ನೆಲೆಯಲ್ಲಿ ಗಂಡನ ವಿರುದ್ಧ, ಆತನ ನೆಯ ಎದುರು ಹೆಂಡತಿ ಧರಣಿ ನಡೆಸಿರುವ ಘಟನೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಮುಪಗಾರ ಗಲ್ಲಿಯಲ್ಲಿ ನಡೆದಿದೆ. ಅತ್ತೆ ಸೊಸೆ ಜಗಳದಿಂದ ಆರು ತಿಂಗಳ ಹಿಂದೆ ವಿಜಯಪುರ ಜಿಲ್ಲೆ ಗುಣಕಿಬೊಮ್ಮನಳ್ಳಿಯಲ್ಲಿ ತನ್ನ ತವರು ಮನೆ ಸೇರಿದ್ದ ವಿದ್ಯಾ ಶಿಂದೋಳಿಮಠ ಇದೀಗ ಮತ್ತೊಮ್ಮೆ ಗಂಡನ ಮನೆಗೆ ಬರಲು ಬಯಸಿದಳು. ಅಂತೆಯೇ, ಪತಿ ಶ್ರೀಧರನ ಮನೆ ಬಳಿ ಬಂದಿಳಿದಳು. ಆದರೆ, […]

ಇನ್ನು ಯಾಕ ಬರಲಿಲ್ಲವ್ವಾ ನನ್ನ ಪತಿರಾಯಾ.. ‘ಗಂಡನ ಮನೆ’ ಎದುರು ಹೆಂಡತಿ ಧರಣಿ!
KUSHAL V
| Edited By: ಸಾಧು ಶ್ರೀನಾಥ್​|

Updated on: Aug 13, 2020 | 12:55 PM

Share

ಬಾಗಲಕೋಟೆ: ತವರು ಮನೆಗೆ ಹೋಗಿದ್ದ ತನ್ನನ್ನು ಮರಳಿ ಗಂಡ ತನ್ನ ಮನೆಗೆ ಕರೆದುಕೊಂಡು ಬಾರದ ಹಿನ್ನೆಲೆಯಲ್ಲಿ ಗಂಡನ ವಿರುದ್ಧ, ಆತನ ನೆಯ ಎದುರು ಹೆಂಡತಿ ಧರಣಿ ನಡೆಸಿರುವ ಘಟನೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಮುಪಗಾರ ಗಲ್ಲಿಯಲ್ಲಿ ನಡೆದಿದೆ.

ಅತ್ತೆ ಸೊಸೆ ಜಗಳದಿಂದ ಆರು ತಿಂಗಳ ಹಿಂದೆ ವಿಜಯಪುರ ಜಿಲ್ಲೆ ಗುಣಕಿಬೊಮ್ಮನಳ್ಳಿಯಲ್ಲಿ ತನ್ನ ತವರು ಮನೆ ಸೇರಿದ್ದ ವಿದ್ಯಾ ಶಿಂದೋಳಿಮಠ ಇದೀಗ ಮತ್ತೊಮ್ಮೆ ಗಂಡನ ಮನೆಗೆ ಬರಲು ಬಯಸಿದಳು.

ಅಂತೆಯೇ, ಪತಿ ಶ್ರೀಧರನ ಮನೆ ಬಳಿ ಬಂದಿಳಿದಳು. ಆದರೆ, ಹೆಂಡತಿ ಬರುವ ವಿಚಾರ ಗೊತ್ತಾಗಿದ್ದೇ ತಡ ಶ್ರೀಧರ ಬೀಗ ಹಾಕಿಕೊಂಡು ತನ್ನ ಕುಟುಂಬದವರೊಂದಿಗೆ ಅಲ್ಲಿಂದ ಎಸ್ಕೇಪ್​ ಆಗಿದ್ದಾನೆ ಎಂದು ತಿಳಿದುಬಂದಿದೆ.

ಹಾಗಾಗಿ, ಗಂಡನ ಮನೆ ಎದುರು ನನಗೆ ನ್ಯಾಯ ಬೇಕೆಂದು ವಿದ್ಯಾ, ಧರಣಿ ನಡೆಸಲು ಮುಂದಾದಳು. ಮನೆ ಎದುರು ಧರಣಿ‌‌ ನಡೆಸುತ್ತಿರುವ ಮಹಿಳೆ ಬೀಗ ಹಾಕಿಕೊಂಡು ಹೋಗಿರುವ ಪತಿ ಹಾಗೂ ಆತನ ಕುಟುಂಬದವರು ಮರಳುವವರೆಗೂ ಅಲ್ಲೇ ಇರಲು ನಿರ್ಧರಿಸಿದ್ದಾಳೆ. ಮಗಳು ಮತ್ತು ತಂದೆ ಸಮೇತ ಧರಣಿ ನಡೆಸುತ್ತಿರುವ ವಿದ್ಯಾ ಪತಿರಾಯ ಶ್ರೀಧರ ಬರೋವರೆಗೂ ಇಲ್ಲಿಂದ ಕದಲವುದಿಲ್ಲ ಎಂದು ಡಿಸೈಡ್​ ಮಾಡಿದ್ದಾಳೆ.

Follow Us
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್