AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಡ್ಲಘಟ್ಟದಲ್ಲಿ ಈ ಹುಡುಗರಿಗೆ ಮದುವೆ ಭಾಗ್ಯವೇ ಇಲ್ಲ, ಯಾಕೆ ಗೊತ್ತಾ!?

ಚಿಕ್ಕಬಳ್ಳಾಪುರ: ಈಗಿನ ಕಾಲದಲ್ಲಿ, ಮದ್ವೆ ವಯಸ್ಸಿನ ಹುಡುಗರಿಗೆ, ಹೆಣ್​ ಸಿಗೋದೇ ಕಷ್ಟ ಆಗ್ಬಿಟ್ಟಿದೆ. ವಧುವಿನ ಕಡೆಯವ್ರ ಕಂಡೀಷನ್ಸ್​​ಗೆ ವರನ ಮನೆಯವ್ರು ಕಕ್ಕಾಬಿಕ್ಕಿ ಆಗ್ತಿದ್ದಾರೆ. ಅದ್ರಲ್ಲೂ, ಇಲ್ಲೊಂದು ಬಡಾವಣೆಯ ಹುಡುಗರಿಗೆ ಎಷ್ಟೇ ಬೇಡಿಕೊಂಡ್ರೂ ಕನ್ಯಾ ಸಿಗ್ತಿಲ್ಲ. ಕುಡಿಯುವ ನೀರಿಲ್ಲ. ಚರಂಡಿ ವ್ಯವಸ್ಥೆ ಸರಿಯಿಲ್ಲ. ಕರೆಂಟ್​​​ ಯಾವಾಗ ಹೋಗುತ್ತೆ, ಯಾವಾಗ ಬರುತ್ತೆ ಗೊತ್ತಾಗಲ್ಲ. ಸಾಲು ಸಾಲಾಗಿರೋ ಈ ಮನೆಗಳ ಸಾಲಿನಷ್ಟೇ ಸಮಸ್ಯೆಗಳಿವೆ. ಎಸ್.. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಹೊರವಲಯದಲ್ಲಿರೋ ರಾಜೀವ್ ಗಾಂಧಿ ಆಶ್ರಯ ಬಡಾವಣೆ ಇದು. ಬಡವರಿಗೆ ಅಂತಲೇ, ದಶಕದ ಹಿಂದೆ […]

ಶಿಡ್ಲಘಟ್ಟದಲ್ಲಿ ಈ ಹುಡುಗರಿಗೆ ಮದುವೆ ಭಾಗ್ಯವೇ ಇಲ್ಲ, ಯಾಕೆ ಗೊತ್ತಾ!?
ಸಾಧು ಶ್ರೀನಾಥ್​
|

Updated on:Feb 26, 2020 | 1:21 PM

Share

ಚಿಕ್ಕಬಳ್ಳಾಪುರ: ಈಗಿನ ಕಾಲದಲ್ಲಿ, ಮದ್ವೆ ವಯಸ್ಸಿನ ಹುಡುಗರಿಗೆ, ಹೆಣ್​ ಸಿಗೋದೇ ಕಷ್ಟ ಆಗ್ಬಿಟ್ಟಿದೆ. ವಧುವಿನ ಕಡೆಯವ್ರ ಕಂಡೀಷನ್ಸ್​​ಗೆ ವರನ ಮನೆಯವ್ರು ಕಕ್ಕಾಬಿಕ್ಕಿ ಆಗ್ತಿದ್ದಾರೆ. ಅದ್ರಲ್ಲೂ, ಇಲ್ಲೊಂದು ಬಡಾವಣೆಯ ಹುಡುಗರಿಗೆ ಎಷ್ಟೇ ಬೇಡಿಕೊಂಡ್ರೂ ಕನ್ಯಾ ಸಿಗ್ತಿಲ್ಲ.

ಕುಡಿಯುವ ನೀರಿಲ್ಲ. ಚರಂಡಿ ವ್ಯವಸ್ಥೆ ಸರಿಯಿಲ್ಲ. ಕರೆಂಟ್​​​ ಯಾವಾಗ ಹೋಗುತ್ತೆ, ಯಾವಾಗ ಬರುತ್ತೆ ಗೊತ್ತಾಗಲ್ಲ. ಸಾಲು ಸಾಲಾಗಿರೋ ಈ ಮನೆಗಳ ಸಾಲಿನಷ್ಟೇ ಸಮಸ್ಯೆಗಳಿವೆ.

ಎಸ್.. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಹೊರವಲಯದಲ್ಲಿರೋ ರಾಜೀವ್ ಗಾಂಧಿ ಆಶ್ರಯ ಬಡಾವಣೆ ಇದು. ಬಡವರಿಗೆ ಅಂತಲೇ, ದಶಕದ ಹಿಂದೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮನೆಗಳನ್ನ ನಿರ್ಮಿಸಲಾಯ್ತು. ಆದ್ರೆ, ಮೂಲಭೂತ ಸೌಕರ್ಯಗಳಿಲ್ಲದೆ ಜನ ಪರದಾಡ್ತಿದ್ದಾರೆ. ಇದ್ರಿಂದ, ಬಡಾವಣೆಯ ಯುವಕರಿಗೆ ಕನ್ಯೆಯರನ್ನು ಕೊಡ್ತಿಲ್ವಂತೆ.

ಅಂದಹಾಗೇ, ನಗರದಿಂದ 5 ಕಿಲೋಮೀಟರ್ ದೂರದಲ್ಲಿ ಈ ಬಡಾವಣೆ ಇದೆ. ಕುಡಿಯುವ ನೀರು, ಚರಂಡಿ, ರಸ್ತೆ, ವಿದ್ಯುತ್ ಪೂರೈಕೆ ಸೇರಿದಂತೆ ಸರಿಯಾದ ಸೌಲಭ್ಯಗಳಿಲ್ಲ. ರೇಷ್ಮೆ ನೂಲು ತೆಗೆಯೋ ಕಾರ್ಖಾನೆಗಳು ಇರೋದರಿಂದ ಗಬ್ಬು ವಾಸನೆಯಲ್ಲಿ ಜನ ಬಾಳುವಂತಾಗಿದೆ. ಸಂಬಂಧಿಕರು ಕೂಡ ಏರಿಯಾಗೆ ಬರಲು ಹಿಂದೇಟು ಹಾಕ್ತಾರಂತೆ. ಒಟ್ನಲ್ಲಿ, ಸೂರಿಗಾಗಿ ಸೊರಗಿದ್ದ ಬಡವರಿಗೆ ನೆಲೆಯೇನೋ ಸಿಕ್ಕಿದೆ. ಆದ್ರೆ, ಸೌಕರ್ಯಗಳಿಲ್ಲದೆ ಆ ನೆಲೆಯೇ ಜನರಿಗೆ ನರಕದಂತೆ ಭಾಸವಾಗ್ತಿದೆ.

Published On - 12:37 pm, Wed, 26 February 20

ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ