AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಡ್ಲಘಟ್ಟದಲ್ಲಿ ಈ ಹುಡುಗರಿಗೆ ಮದುವೆ ಭಾಗ್ಯವೇ ಇಲ್ಲ, ಯಾಕೆ ಗೊತ್ತಾ!?

ಚಿಕ್ಕಬಳ್ಳಾಪುರ: ಈಗಿನ ಕಾಲದಲ್ಲಿ, ಮದ್ವೆ ವಯಸ್ಸಿನ ಹುಡುಗರಿಗೆ, ಹೆಣ್​ ಸಿಗೋದೇ ಕಷ್ಟ ಆಗ್ಬಿಟ್ಟಿದೆ. ವಧುವಿನ ಕಡೆಯವ್ರ ಕಂಡೀಷನ್ಸ್​​ಗೆ ವರನ ಮನೆಯವ್ರು ಕಕ್ಕಾಬಿಕ್ಕಿ ಆಗ್ತಿದ್ದಾರೆ. ಅದ್ರಲ್ಲೂ, ಇಲ್ಲೊಂದು ಬಡಾವಣೆಯ ಹುಡುಗರಿಗೆ ಎಷ್ಟೇ ಬೇಡಿಕೊಂಡ್ರೂ ಕನ್ಯಾ ಸಿಗ್ತಿಲ್ಲ. ಕುಡಿಯುವ ನೀರಿಲ್ಲ. ಚರಂಡಿ ವ್ಯವಸ್ಥೆ ಸರಿಯಿಲ್ಲ. ಕರೆಂಟ್​​​ ಯಾವಾಗ ಹೋಗುತ್ತೆ, ಯಾವಾಗ ಬರುತ್ತೆ ಗೊತ್ತಾಗಲ್ಲ. ಸಾಲು ಸಾಲಾಗಿರೋ ಈ ಮನೆಗಳ ಸಾಲಿನಷ್ಟೇ ಸಮಸ್ಯೆಗಳಿವೆ. ಎಸ್.. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಹೊರವಲಯದಲ್ಲಿರೋ ರಾಜೀವ್ ಗಾಂಧಿ ಆಶ್ರಯ ಬಡಾವಣೆ ಇದು. ಬಡವರಿಗೆ ಅಂತಲೇ, ದಶಕದ ಹಿಂದೆ […]

ಶಿಡ್ಲಘಟ್ಟದಲ್ಲಿ ಈ ಹುಡುಗರಿಗೆ ಮದುವೆ ಭಾಗ್ಯವೇ ಇಲ್ಲ, ಯಾಕೆ ಗೊತ್ತಾ!?
ಸಾಧು ಶ್ರೀನಾಥ್​
|

Updated on:Feb 26, 2020 | 1:21 PM

Share

ಚಿಕ್ಕಬಳ್ಳಾಪುರ: ಈಗಿನ ಕಾಲದಲ್ಲಿ, ಮದ್ವೆ ವಯಸ್ಸಿನ ಹುಡುಗರಿಗೆ, ಹೆಣ್​ ಸಿಗೋದೇ ಕಷ್ಟ ಆಗ್ಬಿಟ್ಟಿದೆ. ವಧುವಿನ ಕಡೆಯವ್ರ ಕಂಡೀಷನ್ಸ್​​ಗೆ ವರನ ಮನೆಯವ್ರು ಕಕ್ಕಾಬಿಕ್ಕಿ ಆಗ್ತಿದ್ದಾರೆ. ಅದ್ರಲ್ಲೂ, ಇಲ್ಲೊಂದು ಬಡಾವಣೆಯ ಹುಡುಗರಿಗೆ ಎಷ್ಟೇ ಬೇಡಿಕೊಂಡ್ರೂ ಕನ್ಯಾ ಸಿಗ್ತಿಲ್ಲ.

ಕುಡಿಯುವ ನೀರಿಲ್ಲ. ಚರಂಡಿ ವ್ಯವಸ್ಥೆ ಸರಿಯಿಲ್ಲ. ಕರೆಂಟ್​​​ ಯಾವಾಗ ಹೋಗುತ್ತೆ, ಯಾವಾಗ ಬರುತ್ತೆ ಗೊತ್ತಾಗಲ್ಲ. ಸಾಲು ಸಾಲಾಗಿರೋ ಈ ಮನೆಗಳ ಸಾಲಿನಷ್ಟೇ ಸಮಸ್ಯೆಗಳಿವೆ.

ಎಸ್.. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಹೊರವಲಯದಲ್ಲಿರೋ ರಾಜೀವ್ ಗಾಂಧಿ ಆಶ್ರಯ ಬಡಾವಣೆ ಇದು. ಬಡವರಿಗೆ ಅಂತಲೇ, ದಶಕದ ಹಿಂದೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮನೆಗಳನ್ನ ನಿರ್ಮಿಸಲಾಯ್ತು. ಆದ್ರೆ, ಮೂಲಭೂತ ಸೌಕರ್ಯಗಳಿಲ್ಲದೆ ಜನ ಪರದಾಡ್ತಿದ್ದಾರೆ. ಇದ್ರಿಂದ, ಬಡಾವಣೆಯ ಯುವಕರಿಗೆ ಕನ್ಯೆಯರನ್ನು ಕೊಡ್ತಿಲ್ವಂತೆ.

ಅಂದಹಾಗೇ, ನಗರದಿಂದ 5 ಕಿಲೋಮೀಟರ್ ದೂರದಲ್ಲಿ ಈ ಬಡಾವಣೆ ಇದೆ. ಕುಡಿಯುವ ನೀರು, ಚರಂಡಿ, ರಸ್ತೆ, ವಿದ್ಯುತ್ ಪೂರೈಕೆ ಸೇರಿದಂತೆ ಸರಿಯಾದ ಸೌಲಭ್ಯಗಳಿಲ್ಲ. ರೇಷ್ಮೆ ನೂಲು ತೆಗೆಯೋ ಕಾರ್ಖಾನೆಗಳು ಇರೋದರಿಂದ ಗಬ್ಬು ವಾಸನೆಯಲ್ಲಿ ಜನ ಬಾಳುವಂತಾಗಿದೆ. ಸಂಬಂಧಿಕರು ಕೂಡ ಏರಿಯಾಗೆ ಬರಲು ಹಿಂದೇಟು ಹಾಕ್ತಾರಂತೆ. ಒಟ್ನಲ್ಲಿ, ಸೂರಿಗಾಗಿ ಸೊರಗಿದ್ದ ಬಡವರಿಗೆ ನೆಲೆಯೇನೋ ಸಿಕ್ಕಿದೆ. ಆದ್ರೆ, ಸೌಕರ್ಯಗಳಿಲ್ಲದೆ ಆ ನೆಲೆಯೇ ಜನರಿಗೆ ನರಕದಂತೆ ಭಾಸವಾಗ್ತಿದೆ.

Published On - 12:37 pm, Wed, 26 February 20

ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ