AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ತ್ವಚೆ ಆರೋಗ್ಯಕರವಾಗಿ ಹೊಳೆಯಬೇಕಾ?; ರೋಸ್ ವಾಟರ್ ಬಳಸಿ

ಮುಖದ ಸೌಂದರ್ಯದ ಬಗ್ಗೆ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ತಲೆ ಕೆಡಿಸಿಕೊಳ್ಳುತ್ತಾರೆ. ತ್ವಚೆ ಆರೋಗ್ಯಯುತವಾಗಿ, ಹೊಳೆಯಬೇಕೆಂಬುದು ಎಲ್ಲರ ಆಸೆ. ಇದಕ್ಕೆ ಸಾವಿರಾರು ರೂಪಾಯಿ ಕೊಟ್ಟು ಬ್ಯೂಟಿ ಪ್ರಾಡಕ್ಟ್​ ಖರೀದಿ ಮಾಡಬೇಕೆಂದೇನೂ ಇಲ್ಲ. ರೋಸ್ ವಾಟರ್ ಅನ್ನು ನಿಮ್ಮ ತ್ವಚೆಗೆ ಬಳಸುವುದರಿಂದ ನಿಮ್ಮ ಚರ್ಮದ ಆರೋಗ್ಯ ಸುಧಾರಿಸುತ್ತದೆ.

ನಿಮ್ಮ ತ್ವಚೆ ಆರೋಗ್ಯಕರವಾಗಿ ಹೊಳೆಯಬೇಕಾ?; ರೋಸ್ ವಾಟರ್ ಬಳಸಿ
ರೋಸ್ ವಾಟರ್ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Jan 25, 2024 | 1:12 PM

ರೋಸ್ ವಾಟರ್ ಅನ್ನು ಸೌಂದರ್ಯವರ್ಧಕವಾಗಿ ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಇದನ್ನು ಗುಲಾಬಿ ಹೂವಿನ ಪರಿಮಳಯುಕ್ತ ಎಸಳುಗಳಿಂದ ರೋಸ್ ವಾಟರ್ ತಯಾರಿಸಲಾಗುತ್ತದೆ. ಅದರ ನೈಸರ್ಗಿಕ ಗುಣಲಕ್ಷಣಗಳು ಎಲ್ಲ ರೀತಿಯ ಚರ್ಮದ ಪ್ರಕಾರಗಳಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ರೋಸ್ ವಾಟರ್ ಅನ್ನು ಅನೇಕ ತ್ವಚೆ ಉತ್ಪನ್ನಗಳಲ್ಲಿ ಕೂಡ ಬಳಸುತ್ತಾರೆ. ನಿಮ್ಮ ತ್ವಚೆ ಹೊಳೆಯುವಂತಾಗಲು ರೋಸ್ ವಾಟರ್ ಬಳಸಿ. ಸುರೋಸ್ಕಿಯ ಸಿಇಓ ಮತ್ತು ಸಂಸ್ಥಾಪಕರಾದ ದೀಪಾಲಿ ಬನ್ಸಾಲ್ ನಿಮ್ಮ ತ್ವಚೆಯ ಆರೈಕೆಯಲ್ಲಿ ರೋಸ್ ವಾಟರ್ ಅನ್ನು ಬಳಸುವುದು ಹೇಗೆಂಬುದರ ಬಗ್ಗೆ ಸಲಹೆ ನೀಡಿದ್ದಾರೆ.

ಹೈಡ್ರೇಟಿಂಗ್ ಟೋನರ್:

ಹೈಡ್ರೇಟಿಂಗ್ ಟೋನರ್ ಆಗಿ ರೋಸ್ ವಾಟರ್ ಅನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ. ರೋಸ್ ವಾಟರ್ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಇದು ಚರ್ಮವನ್ನು ಶಾಂತಗೊಳಿಸುತ್ತದೆ, ಹೈಡ್ರೇಟ್ ಮಾಡುತ್ತದೆ ಮತ್ತು ರಿಫ್ರೆಶ್ ಮಾಡುತ್ತದೆ. ರೋಸ್ ವಾಟರ್ ಟೋನರ್ ಎಲ್ಲಾ ಚರ್ಮದ ಪ್ರಕಾರಗಳಿಗೆ ಸೂಕ್ತವಾಗಿದೆ. ಇದು ಚರ್ಮದ ಪಿಹೆಚ್ ಅನ್ನು ಸಮತೋಲನಗೊಳಿಸುತ್ತದೆ. ಮೊದಲು ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ, ಹತ್ತಿ ಪ್ಯಾಡ್‌ ಅನ್ನು ರೋಸ್ ವಾಟರ್​​ನಲ್ಲಿ ಅದ್ದಿ, ಅದನ್ನು ಮುಖಕ್ಕೆ ನಿಧಾನವಾಗಿ ಉಜ್ಜಿಕೊಳ್ಳಬೇಕು.

ಇದನ್ನೂ ಓದಿ: ಚಳಿಗಾಲದಲ್ಲಿ ಒಣಗುವ ತ್ವಚೆಗೆ ಈ 9 ಫೇಸ್ ಪ್ಯಾಕ್‌ ಹಚ್ಚಿ ನೋಡಿ

ಫೇಸ್ ಮಾಸ್ಕ್‌ಗಳು:

ರೋಸ್ ವಾಟರ್‌ನೊಂದಿಗೆ ವಿವಿಧ ನಿಮಗಿಷ್ಟವಾದ ನೈಸರ್ಗಿಕ ಪದಾರ್ಥಗಳನ್ನು ಹಾಕುವ ಮೂಲಕ ಫೇಸ್​ ಮಾಸ್ಕ್​ಗಳನ್ನು ತಯಾರಿಸಿಕೊಳ್ಳಿ. ರೋಸ್ ವಾಟರ್ ಕೆಂಪು ಮತ್ತು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಚರ್ಮವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ.

ಅಲೋವೆರಾ ಜೆಲ್, ಜೇನುತುಪ್ಪ ಮತ್ತು ರೋಸ್ ವಾಟರ್ ಅನ್ನು ಮಿಶ್ರಣ ಮಾಡಿ. ಈ ಮಿಶ್ರಣವು ಸೂಕ್ಷ್ಮ ಚರ್ಮವನ್ನು ಶಾಂತಗೊಳಿಸುತ್ತದೆ, ಊತವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಮುಖಕ್ಕೆ ಉಲ್ಲಾಸಕರ ನೋಟವನ್ನು ನೀಡುತ್ತದೆ. ಈ ಫೇಸ್​ ಮಾಸ್ಕ್ ಹಾಕಿ 15ರಿಂದ 20 ನಿಮಿಷಗಳ ಕಾಲ ಕುಳಿತುಕೊಳ್ಳಿ. ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಎರಡನೇ ಫೇಸ್ ಮಾಸ್ಕ್‌ಗೆ 2 ಚಮಚ ರೋಸ್ ವಾಟರ್ ಮತ್ತು 1 ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ಜೇನುತುಪ್ಪದ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮತ್ತು ರೋಸ್ ವಾಟರ್‌ನ ಶಾಂತಗೊಳಿಸುವ ಪ್ರಯೋಜನಗಳಿಂದ ಚರ್ಮವನ್ನು ಶುದ್ಧೀಕರಿಸಲಾಗುತ್ತದೆ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಸಮವಾಗಿ ಹಚ್ಚಿಕೊಂಡು, 10ರಿಂದ 15 ನಿಮಿಷಗಳ ಕಾಲ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಇದನ್ನೂ ಓದಿ: ಹೊಳೆಯುವ ತ್ವಚೆ ಬೇಕಾ? ತಮನ್ನಾ ಭಾಟಿಯಾ ಹೇಳಿದ ಬ್ಯೂಟಿ ಸೀಕ್ರೆಟ್ ಇಲ್ಲಿದೆ

ಒತ್ತಡವನ್ನು ಕಡಿಮೆ ಮಾಡಲು ಅರೋಮಾಥೆರಪಿ:

ರೋಸ್ ವಾಟರ್‌ನ ಪರಿಮಳವು ಅದರ ಭೌತಿಕ ಪ್ರಯೋಜನಗಳ ಜೊತೆಗೆ ಮನಸ್ಸು ಮತ್ತು ಭಾವನೆಗಳನ್ನು ಗುಣಪಡಿಸುವ ಗುಣಗಳನ್ನು ಹೊಂದಿದೆ. ಗುಲಾಬಿ ನೀರಿನ ಮೃದುವಾದ ಪರಿಮಳವು ಇಂದ್ರಿಯಗಳನ್ನು ಶಾಂತಗೊಳಿಸುತ್ತದೆ ಮತ್ತು ವಿಶ್ರಾಂತಿಯನ್ನು ನೀಡುತ್ತದೆ.

ಸನ್‌ಬರ್ನ್‌ನಿಂದ ಪರಿಹಾರ:

ರೋಸ್ ವಾಟರ್ ಅದರ ಹಿತವಾದ ಮತ್ತು ಉರಿಯೂತದ ಗುಣಗಳಿಂದ ಸನ್​ಬರ್ನ್​​ಗೆ ಉತ್ತಮ ಚಿಕಿತ್ಸೆಯಾಗಿದೆ. ಇದರ ಅಂತರ್ಗತ ಉರಿಯೂತದ ಗುಣಗಳು ಸೂರ್ಯನಿಂದ ಉಂಟಾಗುವ ಕೆಂಪು ಕಲೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ