Chanakya Niti: ಯೌವನಲ್ಲಿ ಕಲಿಯುವ ಈ ವಿಷಯಗಳು ನಿಮ್ಮ ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತದೆ

ಯೌವನವು ನಮ್ಮ ಜೀವನದ ಅತ್ಯಂತ ನಿರ್ಣಾಯಕ ಹಂತವಾಗಿದ್ದು, ಈ ಹಂತದಲ್ಲಿನ ನಮ್ಮ ಉತ್ತಮ ಅಭ್ಯಾಸಗಳು, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವು ಉತ್ತಮ ಭವಿಷ್ಯಕ್ಕೆ ಬಲವಾದ ಬುನಾದಿಯನ್ನು ಹಾಕುತ್ತದೆ. ಹಾಗಾಗಿ ಯೌವನದಲ್ಲಿ ಈ ಪ್ರಮುಖ ವಿಚಾರಗಳನ್ನು ಕಲಿಯಲೇಬೇಕು, ಇದುವೇ ನಮ್ಮ ಬದುಕನ್ನು ಬದಲಿಸುವ ಅಸ್ತ್ರ ಎಂದು ಹೇಳಿದ್ದಾರೆ ಆಚಾರ್ಯ ಚಾಣಕ್ಯ. ಹಾಗಿದ್ದರೆ ಯೌನದಲ್ಲಿ ಯಾವೆಲ್ಲಾ ಸಂಗತಿಗಳನ್ನು ಕಲಿಯಬೇಕು ಎಂಬುದನ್ನು ನೋಡೋಣ ಬನ್ನಿ.

Chanakya Niti: ಯೌವನಲ್ಲಿ ಕಲಿಯುವ ಈ ವಿಷಯಗಳು ನಿಮ್ಮ ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತದೆ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 01, 2026 | 7:25 PM

ಆಚಾರ್ಯ ಚಾಣಕ್ಯರು (Acharya Chanakya) 20 ರಿಂದ 30 ವರ್ಷ ವಯಸ್ಸಿನ ಅವಧಿಯನ್ನು ಜೀವನದ ಅತ್ಯಂತ ನಿರ್ಣಾಯಕ ಹಂತ ಎಂದು ಬಣ್ಣಿಸಿದ್ದಾರೆ. ಅವರ ಪ್ರಕಾರ, ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು, ಅಳವಡಿಸಿಕೊಳ್ಳುವ ಅಭ್ಯಾಸಗಳು ಇಡೀ ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತವೆ. ಆದ್ದರಿಂದ ಈ ಯೌವನದ ವಯಸ್ಸಿನಲ್ಲಿ ಸ್ನೇಹಿತರನ್ನು ಮಾಡುವುದರಿಂದ ಹಿಡಿದು ಸಮಯಕ್ಕೆ ಮೌಲ್ಯವನ್ನು ನೀಡುವುದರ ವರೆಗೆ ಕೆಲವೊಂದು ಪ್ರಮುಖ ಸಂಗತಿಗಳನ್ನು ಕಲಿಯಲೇಬೇಕು, ಇಲ್ಲದಿದ್ದರೆ ಭವಿಷ್ಯವೇ ಹಾಳಾಗಬಹುದು ಎಂದು ಎಚ್ಚರಿಸಿದ್ದಾರೆ. ಯಶಸ್ಸು ಗಳಿಕೆ, ಉತ್ತಮ ಭವಿಷ್ಯದ ದೃಷ್ಟಿಯಿಂದ 30 ವರ್ಷ ವಯಸ್ಸು ದಾಟುವ ಮುನ್ನ ಯುವಕರು ಯಾವೆಲ್ಲಾ ಪ್ರಮುಖ ಜೀವನ ಪಾಠವನ್ನು ಕಲಿಯಲೇಬೇಕು ಎಂಬುದನ್ನು ನೋಡೋಣ ಬನ್ನಿ.

ಯೌವನದಲ್ಲಿಯೇ ಈ ವಿಷಯಗಳನ್ನು ಕಲಿಯಬೇಕು:

ನಿಮ್ಮ ಸ್ನೇಹಿತರನ್ನು ಬುದ್ಧಿವಂತಿಕೆಯಿಂದ ಆರಿಸಿ: ಆಚಾರ್ಯ ಚಾಣಕ್ಯರು ಕೆಟ್ಟ ಸ್ನೇಹಿತ ಹಾವಿನಂತೆ, ಅವನು ಯಾವುದೇ ಸಮಯದಲ್ಲಿ ನಿಮ್ಮನ್ನು ಕಚ್ಚಬಹುದು ಎಂದು ಹೇಳಿದ್ದಾರೆ. ಅಲ್ಲದೆ ಅವರ ಪ್ರಕಾರ, ಜೀವನದಲ್ಲಿನ ಯಶಸ್ಸು ನೀವು ನಿಮ್ಮ ಸಮಯವನ್ನು ಕಳೆಯುವ ಜನರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ. ನಿಮ್ಮ ಸ್ನೇಹಿತರು ನಕಾರಾತ್ಮಕ ಗುಣಗಳನ್ನು ಹೊಂದಿದ್ದರೆ, ಸೋಮಾರಿಯಾಗಿದ್ದರೆ ಅಥವಾ ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದರೆ, ನೀವು ಜೀವನದಲ್ಲಿ ಎಂದಿಗೂ ಮುಂದುವರಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಜೀವನದಲ್ಲಿ ಯಾವಾಗಲೂ ಮುಂದುವರಿಯಲು ನಿಮ್ಮನ್ನು ಪ್ರೇರೇಪಿಸುವ ಮತ್ತು ನಿಮ್ಮ ಸರಿತಪ್ಪುಗಳ ಬಗ್ಗೆ ಉತ್ತಮ ಸಲಹೆ ನೀಡುವ ಜನರೊಂದಿಗೆ ಸ್ನೇಹ ಬೆಳೆಸಿಕೊಳ್ಳಿ.

ಹಣಕ್ಕೆ ಬೆಲೆ ಕೊಡುವುದನ್ನು ಕಲಿಯಿರಿ:  ಯೌವನದಲ್ಲಿ, ಅನೇಕರು ಪ್ರದರ್ಶನ ಮತ್ತು ಸಂತೋಷಕ್ಕಾಗಿ ಬಹಳಷ್ಟು ಹಣವನ್ನು ವ್ಯರ್ಥ ಮಾಡುತ್ತಾರೆ. ಇದು ಬಹುದೊಡ್ಡ ತಪ್ಪು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅವರ ಪ್ರಕಾರ, 30 ವರ್ಷಕ್ಕಿಂತ ಮೊದಲು, ನೀವು ಹಣವನ್ನು ಗಳಿಸುವುದು ಮಾತ್ರವಲ್ಲದೆ ಹೂಡಿಕೆ ಮಾಡಲು ಮತ್ತು ಹಣವನ್ನು ಬುದ್ಧಿವಂತಿಕೆಯಿಂದ ಉಳಿಸಲು ಕಲಿಯಬೇಕು.

ರಹಸ್ಯಗಳನ್ನು ಮುಚ್ಚಿಡಲು ಕಲಿಯಿರಿ: ಇತ್ತೀಚಿನ ದಿನಗಳಲ್ಲಿ ಯುವಕರು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ನಿಜ ಜೀವನದಲ್ಲಿ ತಮ್ಮ ಎಲ್ಲಾ ರಹಸ್ಯಗಳನ್ನು ಹಂಚಿಕೊಳ್ಳುತ್ತಾರೆ. ಆಚಾರ್ಯ ಚಾಣಕ್ಯರು ನಿಮ್ಮ ಪ್ರಮುಖ ಜೀವನ ಯೋಜನೆಗಳು ಮತ್ತು ದೌರ್ಬಲ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನೀವು ನಿಮ್ಮ ರಹಸ್ಯಗಳನ್ನು ಹಂಚಿಕೊಂಡಾಗ, ಇತರರು ಅವುಗಳನ್ನು ಬಳಸಿಕೊಳ್ಳಬಹುದು. ಆದ್ದರಿಂದ ಯಶಸ್ಸು ಸಾಧಿಸಲು ನಿಮ್ಮ ಯೋಜನೆಗಳನ್ನು ರಹಸ್ಯವಾಗಿಡುವುದನ್ನು ಕಲಿಯಿರಿ.

ಅಪಾಯಗಳನ್ನು ತೆಗೆದುಕೊಳ್ಳಲು ಕಲಿಯಿರಿ: ಚಾಣಕ್ಯ ನೀತಿಯ ಪ್ರಕಾರ, ನೀವು ಹೊಸದನ್ನು ಪ್ರಾರಂಭಿಸಲು ಬಯಸಿದರೆ, ವೈಫಲ್ಯದ ಭಯವನ್ನು ಬಿಟ್ಟುಬಿಡಬೇಕು ಎಂದಿದ್ದಾರೆ. ಸೋಲಿಗೆ ಹೆದರುವ ವ್ಯಕ್ತಿಯು ಎಂದಿಗೂ ದೊಡ್ಡ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಯೌವನದಲ್ಲಿ ಯಶಸ್ಸನ್ನು ಸಾಧಿಸುವ ಸಲುವಾಗಿ ಪ್ರತಿಯೊಂದು ಅಪಾಯಗಳನ್ನು ತೆಗೆದುಕೊಳ್ಳಲು ಕಲಿಯಿರಿ.

ಇದನ್ನೂ ಓದಿ: ತಪ್ಪಿಯೂ ರೀತಿಯ ಜನರಿಗೆ ಸಹಾಯ ಮಾಡಲು ಹೋಗ್ಬೇಡಿ

ಎಲ್ಲರನ್ನೂ ನಂಬಬೇಡಿ: ನಮ್ಮ ಯೌವನದಲ್ಲಿ, ನಾವು ಜನರ ಸಿಹಿ ಮಾತುಗಳಿಗೆ ಬಲಿಯಾಗುತ್ತೇವೆ ಮತ್ತು ಎಲ್ಲರನ್ನೂ ಬೇಗನೆ ನಂಬುತ್ತೇವೆ. ಚಾಣಕ್ಯ ನೀತಿಯ ಪ್ರಕಾರ, ನಾವು ಯಾರನ್ನೂ ಸಂಪೂರ್ಣವಾಗಿ ಸಂಪೂರ್ಣವಾಗಿ ನಂಬಬಾರದು. ಕೆಲವೊಮ್ಮೆ ಜನರು ತಮ್ಮ ಸ್ವಂತ ಲಾಭಕ್ಕಾಗಿ ನಮ್ಮ ಹತ್ತಿರ ಬರುತ್ತಾರೆ ಮತ್ತು ಆದ್ದರಿಂದ, ನೀವು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಬೇಕು, ಭಾವನೆಗಳನ್ನು ನಿಯಂತ್ರಿಸಬೇಕು. ಅತಿಯಾಗಿ ನಂಬುವುದರಿಂದ ಮೋಸ ಹೋಗುವ ಸಾಧ್ಯತೆ ಇರುತ್ತದೆ.

ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ:ಆಚಾರ್ಯ ಚಾಣಕ್ಯರ ಪ್ರಕಾರ, ವ್ಯಕ್ತಿಯ ಅತ್ಯಂತ ಅಮೂಲ್ಯ ಆಸ್ತಿ ಎಂದರೆ ಸಮಯ. ಈ ಅಮೂಲ್ಯ ಸಮಯವನ್ನು ಸರಿಯಾಗಿ ಸದುಪಯೋಗ ಪಡಿಸುವುದುದನ್ನು ಯೌವನದಲ್ಲಿಯೇ ಕಲಿಯಬೇಕು. ಸೋಮಾರಿತನ, ಮೋಜು ಮಸ್ತಿಯಲ್ಲಿ ಟೈಮ್‌ ವೇಸ್ಟ್‌ ಮಾಡರೆ, ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳುವವರು ಮಾತ್ರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ.

ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಲು ಕಲಿಯಿರಿ: ಆಚಾರ್ಯ ಚಾಣಕ್ಯರ ಪ್ರಕಾರ, ಯುವಕರು ವೃತ್ತಿ ಮತ್ತು ಹಣ, ಯಶಸ್ಸಿನ ಹುಡುಕಾಟದಲ್ಲಿ ತಮ್ಮ ಆರೋಗ್ಯವನ್ನು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ. ಭವಿಷ್ಯದಲ್ಲಿ ಈ ಯಶಸ್ಸನ್ನು ಅನುಭವಿಸಲು ಆರೋಗ್ಯವೂ ಉತ್ತಮವಾಗಿರಬೇಕು ಆದ್ದರಿಂದ ಯುವಜನರು ಉತ್ತಮ ಆಹಾರ ಸೇವನೆ, ವ್ಯಾಯಾಮ ಮಾಡುವುದು, ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us