Cooking Tips: ಬೆಂಡೆಕಾಯಿಯನ್ನು ಲೋಳೆಯಾಗದಂತೆ ಫ್ರೈ ಮಾಡುವುದು ಹೇಗೆ?; ಸುಲಭದ ಉಪಾಯ ಹೀಗಿದೆ

Okra Tips: ನೀವು ಬೆಂಡೆ ಕಾಯಿಯನ್ನು ಬೇಯಿಸುವಾಗ ಲೋಳೆಯಿಂದಾಗಿ ನಿಮ್ಮ ಪಾತ್ರೆಯೆಲ್ಲ ಅಂಟಂಟಾಗುತ್ತದೆಯೇ? ಎಷ್ಟೇ ಪ್ರಯತ್ನಿಸಿದರೂ ಬೆಂಡೆಕಾಯಿಯ ಲೋಳೆ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲವೇ? ಹಾಗಾದರೆ, ಇಲ್ಲಿದೆ ಸರಳ ಉಪಾಯ.

Cooking Tips: ಬೆಂಡೆಕಾಯಿಯನ್ನು ಲೋಳೆಯಾಗದಂತೆ ಫ್ರೈ ಮಾಡುವುದು ಹೇಗೆ?; ಸುಲಭದ ಉಪಾಯ ಹೀಗಿದೆ
ಬೆಂಡೆಕಾಯಿ
Follow us
| Updated By: ಸುಷ್ಮಾ ಚಕ್ರೆ

Updated on: Oct 28, 2022 | 7:25 PM

ಬೆಂಡೆಕಾಯಿ (Lady Finger) ಎಂದರೆ ಬಹುತೇಕರಿಗೆ ಇಷ್ಟ. ಆದರೆ, ಅದರಲ್ಲಿ ಲೋಳೆ ಇರುವುದರಿಂದ ಬೆಂಡೆಕಾಯಿಯ (Okra)  ಪದಾರ್ಥವನ್ನು ಮಾಡುವುದು ತುಸು ಕಿರಿಕಿರಿಯ ಕೆಲಸ. ವರ್ಷಪೂರ್ತಿ ಲಭ್ಯವಿರುವ ಬಹುಮುಖ ತರಕಾರಿಗಳಲ್ಲಿ ಒಂದಾಗಿದೆ. ಬೆಂಡೆಕಾಯಿಯನ್ನು ಸಾಂಬಾರ್, ಗ್ರೇವಿ, ಪಲ್ಯ, ಸಾಸಿವೆ, ಫ್ರೈ ಹೀಗೆ ನಾನಾ ರೀತಿಯಲ್ಲಿ ಬಳಸಲಾಗುತ್ತದೆ. ನೀವು ಪ್ರತಿ ಬಾರಿ ಬೆಂಡೆ ಕಾಯಿಯನ್ನು ಬೇಯಿಸುವಾಗ ಅದರಲ್ಲಿರುವ ಲೋಳೆಯಿಂದಾಗಿ ನಿಮ್ಮ ಪಾತ್ರೆಯೆಲ್ಲ ಅಂಟಂಟಾಗುತ್ತದೆಯೇ? ಎಷ್ಟೇ ಪ್ರಯತ್ನಿಸಿದರೂ ಬೆಂಡೆಕಾಯಿಯ ಲೋಳೆ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲವೇ? ಹಾಗಾದರೆ, ಇಲ್ಲಿದೆ ಸರಳ ಉಪಾಯ.

ಬೆಂಡೆಕಾಯಿಯ ಪದಾರ್ಥವನ್ನು ತಯಾರಿಸುವ ಮೊದಲು ನೀವು ಅನುಸರಿಸಬೇಕಾದ 4 ಸುಲಭ ಕ್ರಮಗಳು ಇಲ್ಲಿವೆ:

1. ಹುಣಸೆ ಹಣ್ಣು/ ಲಿಂಬೆ ಹಣ್ಣು ಹಾಕಿ: ಬೆಂಡೆಕಾಯಿಯನ್ನು ಫ್ರೈ ಮಾಡುವಾಗ ಅದರ ಜೊತೆ ಲಿಂಬೆಹಣ್ಣು, ಹುಣಸೆ ಹಣ್ಣು ಅಥವಾ ಮೊಸರನ್ನು ಕೊಂಚ ಹಾಕುವುದರಿಂದ ಅದು ಲೋಳೆಯ ಅಂಶವನ್ನು ಬಿಡುವುದಿಲ್ಲ. ಆಮ್ಲೀಯ ಗುಣವುಳ್ಳ ವಸ್ತುಗಳನ್ನು ಹಾಕುವುದರಿಂದ ಬೆಂಡೆಕಾಯಿಯ ಲೋಳೆ ಕಡಿಮೆಯಾಗುತ್ತದೆ. ಬೆಂಡೆಕಾಯಿ ಫ್ರೈ ಮಾಡುವಾಗ ಅಥವಾ ಬೇಯಿಸುವಾಗ ಆಮ್ಲೀಯ ಅಂಶಗಳನ್ನು ಸೇರಿಸುವುದರಿಂದ ಜಿಗುಟುತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Lady Finger Benefits: ಬೆಂಡೆಕಾಯಿಯಿಂದ ಮಧುಮೇಹ ನಿಯಂತ್ರಣ ಸಾಧ್ಯ, ಇತರೆ ಪ್ರಯೋಜನಗಳನ್ನು ತಿಳಿಯಿರಿ

2. ಅಡುಗೆ ಮಾಡುವಾಗ ಮುಚ್ಚಿಡಬೇಡಿ: ಬೆಂಡೆಕಾಯಿಯ ಅಡುಗೆ ಮಾಡುವ ಸಮಯದಲ್ಲಿ ಯಾವುದೇ ಹಂತದಲ್ಲಿ ಬೆಂಡೆಕಾಯಿಯ ಹೋಳುಗಳಿರುವ ಪಾತ್ರೆಯನ್ನು ಮುಚ್ಚಿಡಬೇಡಿ. ಬಿಸಿ ಶಾಖದಲ್ಲಿ ಬೆಂಡೆಕಾಯಿಯನ್ನು ಬೇಯಿಸುವಾಗ ಆ ಪಾತ್ರೆ ಓಪನ್ ಆಗಿರಲಿ.

3. ಉಪ್ಪನ್ನು ಸೇರಿಸಬೇಡಿ: ಬೆಂಡೆಕಾಯಿ ಬೇಯಿಸುವಾಗ ಅದಕ್ಕೆ ಬೇಗ ಉಪ್ಪು ಸೇರಿಸಬೇಡಿ. ಆ ಬೆಂಡೆಕಾಯಿ ಸಂಪೂರ್ಣವಾಗಿ ಬೆಂದ ನಂತರ ಅಥವಾ ಫ್ರೈ ಆದ ನಂತರವೇ ಉಪ್ಪು ಸೇರಿಸಿ. ಬೇಗ ಉಪ್ಪು ಸೇರಿಸುವುದರಿಂದ ಬೆಂಡೆಕಾಯಿ ಲೋಳೆಯಾಗುತ್ತದೆ.

ಇದನ್ನೂ ಓದಿ: Lady Finger Benefits: ಬೆಂಡೆಕಾಯಿ ತಿನ್ನುವುದರಿಂದಾಗುವ ಅದ್ಭುತ ಪ್ರಯೋಜನಗಳನ್ನು ತಿಳಿಯಿರಿ

4. ಕಡಲೆ ಹಿಟ್ಟು ಬಳಸಿ: ಬೆಂಡೆಕಾಯಿ ಬೇಯಿಸುವಾಗ ಅಥವಾ ಹುರಿಯುವಾಗ ಅದಕ್ಕೆ ಸ್ವಲ್ಪ ಕಡಲೆ ಹಿಟ್ಟನ್ನು ಸೇರಿಸಿದರೆ ಅದು ಲೋಳೆಯಾಗುವುದಿಲ್ಲ. ಕಡಲೆ ಹಿಟ್ಟು ಸೇರಿಸಿದ ನಂತರ ಬೆಂಡೆಕಾಯಿಯನ್ನು ಕೆಲವು ನಿಮಿಷಗಳ ಕಾಲ ಹುರಿಯಿರಿ. ಆಗ ಲೋಳೆಯ ಅಂಶ ಸಂಪೂರ್ಣವಾಗಿ ಹೋಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ