AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Road Trip Tips: ಬೇಸಿಗೆಯಲ್ಲಿ ರೋಡ್ ಟ್ರಿಪ್ ಹೋಗಲು ಯೋಜಿಸುತ್ತಿದ್ದೀರಾ? ಈ ಸಲಹೆ ಪಾಲಿಸಿ

ಸುಗಮ ಮತ್ತು ಆನಂದದಾಯಕ ಪ್ರವಾಸವನ್ನು ಮಾಡಬೇಕೆಂಬುದುದು ಎಲ್ಲರ ಬಯಕೆ. ಈ ಬೇಸಿಗೆಯಲ್ಲಿ ರೋಡ್ ಟ್ರಿಪ್ ಹೋಗಲು ಯೋಜಿಸಿದ್ದೀರಾ, ಪ್ರವಾಸ ಹೋಗುವ ಮೊದಲು ನೀವು ಪಾಲಿಸಬೇಕಾದ ಅಗತ್ಯ ಸಲಹೆಗಳು ಇಲ್ಲಿವೆ.

Road Trip Tips: ಬೇಸಿಗೆಯಲ್ಲಿ ರೋಡ್ ಟ್ರಿಪ್ ಹೋಗಲು ಯೋಜಿಸುತ್ತಿದ್ದೀರಾ? ಈ ಸಲಹೆ  ಪಾಲಿಸಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on:Apr 08, 2023 | 6:49 PM

Share

ಹೆಚ್ಚಿನ ಜನರು ರೋಡ್ ಟ್ರಿಪ್ ಮಾಡಲು ಇಷ್ಟಪಡುತ್ತಾರೆ. ಹೊಸ ಸ್ಥಳಗಳನ್ನು ಅನ್ವೇಷಿಸಲು ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಅದ್ಭುತವಾದ ಕ್ಷಣಗಳನ್ನು ಕಳೆಯಲು ರೋಡ್‌ಟ್ರಿಪ್‌ಗಳು ಉತ್ತಮ ಮಾರ್ಗವಾಗಿದೆ. ಆದರೆ ಈ ರಸ್ತೆ ಪ್ರವಾಸನ್ನು ಮಾಡುವ ಮೊದಲು ಅಗತ್ಯ ಯೋಜನೆಗಳನ್ನು ರಚಿಸುವುದು ಮುಖ್ಯವಾಗಿರುತ್ತದೆ. ಸುಗಮ ಮತ್ತು ಆನಂದದಾಯಕ ಪ್ರವಾಸವನ್ನು ಕೈಗೊಳ್ಳಬೇಕೆಂದರೆ ಅದರ ಹಿಂದೆ ಒಂದು ಉತ್ತಮ ಯೋಜನೆಯ ಅಗತ್ಯವಿರುತ್ತದೆ. ನೀವು ಹೋಗಬೇಕಾದ ಸ್ಥಳ, ಮಾರ್ಗಗಳಿಂದ ಹಿಡಿದು ಅಗತ್ಯ ವಸ್ತುಗಳ ಪ್ಯಾಕಿಂಗ್ ಮಾಡುವುದನ್ನು ಯೋಜಿಸುವವರೆಗೆ ಈ ಕೆಲವು ಅಗತ್ಯ ಸಲಹೆಗಳನ್ನು ನೀವು ಪಾಲಿಸಬೇಕಾಗುತ್ತದೆ. ಹಾಪ್ ಎನ್ ಬಾಪ್ ನ ಸಂಸ್ಥಾಪಕರಾದ ಏಕ್ತಾ ಮೋಹನಾನಿ ಕಮ್ರಾ ಅವರು ಬೇಸಿಗೆಯ ಪ್ರವಾಸವನ್ನು ಯೋಜಿಸಲು ಸಹಾಯ ಮಾಡುವ ಐದು ಅಗತ್ಯ ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಮಾರ್ಗವನ್ನು ಯೋಜಿಸಿ: ಈಗ ಇರುವ ಬೇಸಿಗೆ ಶಾಖದ ಪರಿಸ್ಥಿತಿಯನ್ನು ಪರಿಗಣಿಸಿ, ಯಾವ ಸ್ಥಳ ಪ್ರವಾಸಕ್ಕೆ ಯೋಗ್ಯವೆಂದು ನಿರ್ಧರಿಸಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಮಾರ್ಗವನ್ನು ಯೋಜಿಸಿ. ನೀವು ಸರಿಯಾದ ಮಾರ್ಗದಲ್ಲಿ ತೆರಳಲು ನಕ್ಷೆ ಅಥವಾ ಜಿಪಿಎಸ್​​ನ್ನು ಬಳಸಿ.

ನಿಮ್ಮ ವಾಹನವನ್ನು ಪರಿಶೀಲಿಸಿ: ನಿಮ್ಮ ರೋಡ್ ಟ್ರಿಪ್‌ನ್ನು ಪ್ರಾರಂಭಿಸುವ ಮೊದಲು, ನಿಮ್ಮ ವಾಹನವು ಉತ್ತಮ ಸ್ಥಿತಿಯಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸುರಕ್ಷಿತ ಮತ್ತು ಶಾಂತ ರೀತಿಯ ಪ್ರವಾಸಕ್ಕಾಗಿ ನಿಮ್ಮ ವಾಹನವನ್ನು ಸರ್ವಿಸ್ ಮಾಡಿ ಹಾಗೂ ಟೈರ್‌ಗಳು, ಬ್ರೇಕ್‌ಗಳು ಮತ್ತು ತೈಲವನ್ನು ಪರಿಶೀಲಿಸಿ.

ಇದನ್ನೂ ಓದಿ: ಸಕ್ಕರೆ ಕಾಯಿಲೆ ವಿರುದ್ಧ ಜಾಗೃತಿ: 40 ದಿನಗಳಲ್ಲಿ ಕಾಶ್ಮೀರ-ಕನ್ಯಾಕುಮಾರಿ ಸೈಕಲ್​ ಯಾತ್ರೆ ಮಾಡಿದ ಧಾರವಾಡದ ವ್ಯಕ್ತಿ

ಹೆಚ್ಚು ಜಾಗವಿರುವ ಪ್ಯಾಕೆಜ್ ಬ್ಯಾಗ್ ಇರಿಸಿ: ತಿಂಡಿ ಮತ್ತು ನೀರು ಸೇರಿದಂತೆ ನಿಮ್ಮ ಪ್ರವಾಸಕ್ಕೆ ಬೇಕಾದ ಎಲ್ಲ ಅಗತ್ಯ ವಸ್ತುಗಳ ಪಟ್ಟಿಯನ್ನು ಮಾಡಿ. ಪ್ರಯಾಣದಲ್ಲಿ ಯಾವುದೇ ಕಿರಿಕಿರಿಯನ್ನು ಉಂಟುಮಾಡದಂತೆ ಸ್ಮಾರ್ಟ್ ಪ್ಯಾಕ್ ಮಾಡಿ ಮತ್ತು ಆರಾಮದಾಯಕ ಬಟ್ಟೆಗಳನ್ನು ಧರಿಸಿ.

ಬಹು ಚಾಲಕರು: ಪ್ರಯಾಣದಲ್ಲಿ ವಿಳಂಬ ಮತ್ತು ದೀರ್ಘಾವಧಿಯ ನಿಲುಗಡೆಯನ್ನು ತಪ್ಪಿಸಲು ಕನಿಷ್ಟ ಇಬ್ಬರು ವ್ಯಕ್ತಿಗಳಿಗಾದರೂ ಡ್ರೈವಿಂಗ್ ಗೊತ್ತಿರಬೇಕು. ಇದರಿಂದ ಒಬ್ಬ ಡ್ರೈವ್​ ಮಾಡುವಾಗ ಇನ್ನೊಬ್ಬ ವಿಶ್ರಾಂತಿ ಪಡೆಯಬಹುದು.

ಬೇಗ ಪ್ರಯಾಣಿಸಿ: ಶಾಖದ ಹೊಡೆತದಿಂದ ತಪ್ಪಿಸಲು ಬೆಳಗ್ಗೆ ಬೇಗನೆ ನಿಮ್ಮ ಪ್ರಯಾಣವನ್ನು ಆರಂಭಿಸಬೇಕು. ಇದರಿಂದ ನೀವು ನಿಮ್ಮ ಪ್ರವಾಸದ ಸ್ಥಳಕ್ಕೆ ಬೇಗ ತಲುಪುವುದರ ಜೊತೆಗೆ ಬೇಸಿಗೆ ಬಳಲಿಕೆಯ ಅಪಾಯವು ನಿಮಗೆ ಇರುವುದಿಲ್ಲ.

Published On - 6:49 pm, Sat, 8 April 23

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!