AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Duologue NXT: ಉದ್ಯಮಿ ಸನಾ ಸಾಜನ್ ಜೊತೆ ಟಿವಿ9 ನೆಟ್‌ವರ್ಕ್ ಎಂಡಿ, ಸಿಇಒ ಬರುಣ್ ದಾಸ್ ವಿಶೇಷ ಸಂವಾದ

'ಡ್ಯುಯೊಲಾಗ್ ವಿತ್ ಬರುಣ್ ದಾಸ್' ಮೂರು ಸೀಸನ್‌ಗಳು ಭಾರಿ ಯಶಸ್ಸನ್ನು ಕಂಡಿದ್ದವು. ಇದೀಗ ಡ್ಯುಯೊಲಾಗ್ NXT ಎಂಬ ಹೊಸ ಆವೃತ್ತಿ ಆರಂಭವಾಗಿದ್ದು, ಇದರ ಮೊದಲ ಕಂತಿನಲ್ಲಿ ಜಾಗತಿಕ ತಾರೆ ರೋನಾ-ಲೀ ಶಿಮೊನ್ ಭಾಗವಸಿದ್ದರು. ಇದೀಗ ಸಾಮಾಜಿಕ ಹೋರಾಟಗಾರ್ತಿ, ಡ್ಯಾನ್ಯೂಬ್ ಗ್ರೂಪ್ ನಿರ್ದೇಶಕಿ ಡಾ. ಸನಾ ಸಾಜನ್‌ ಭಾಗವಹಿಸಿದ್ದು, ತಮ್ಮ ಯಶಸ್ಸಿನ ಗುಟ್ಟಿನ ಬಗ್ಗೆ ಶೇರ್‌ ಮಾಡಿಕೊಂಡಿದ್ದಾರೆ.

Duologue NXT: ಉದ್ಯಮಿ ಸನಾ ಸಾಜನ್ ಜೊತೆ ಟಿವಿ9 ನೆಟ್‌ವರ್ಕ್ ಎಂಡಿ, ಸಿಇಒ ಬರುಣ್ ದಾಸ್ ವಿಶೇಷ ಸಂವಾದ
ಡ್ಯುಯೊಲಾಗ್ NXT
ಮಾಲಾಶ್ರೀ ಅಂಚನ್​
|

Updated on:Sep 26, 2025 | 8:21 PM

Share

‘ಡ್ಯುಯೊಲಾಗ್ ವಿತ್ ಬರುಣ್ ದಾಸ್’ ಸರಣಿಯ ಹೊಸ ಆವೃತ್ತಿಯಾಗಿರುವಂತಹ ಡ್ಯುಯೊಲಾಗ್ NXT (Duologue NXT) ಎಂಬ ಹೊಸ ಕಾರ್ಯಕ್ರಮ ಈಗಾಗಲೇ ಚಾಲನೆ ಸಿಕ್ಕಿದೆ. ಇದೊಂದು ಯಶಸ್ವಿ ಮಹಿಳೆಯರ ಸ್ಪೂರ್ತಿದಾಯಕ ಕಥೆಗಳ ಬಗೆಗಿನ ಪಾಡ್‌ಕ್ಯಾಸ್ಟ್ ಕಾರ್ಯಕ್ರಮವಾಗಿದ್ದು, ಈ ಶೋನ ಮೊದಲ ಅತಿಥಿಯಾಗಿ ಜಾಗತಿಕ ತಾರೆ ರೋನಾ-ಲೀ ಶಿಮೊನ್ ಭಾಗವಹಿಸಿದ್ದರು. ಇದೀಗ ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ್ತಿ, ಡ್ಯಾನ್ಯೂಬ್ ಗ್ರೂಪ್ ನಿರ್ದೇಶಕಿ ಡಾ. ಸನಾ ಸಾಜನ್‌ ಭಾಗವಹಿಸಿದ್ದು, ತಮ್ಮ ಯಶಸ್ಸಿನ ಗುಟ್ಟು, ಹೋರಾಟದ ಕಥೆಯನ್ನು ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

ಉದ್ಯಮಿ ಸನಾ ಸಾಜನ್ ಜೊತೆ  ಬರುಣ್ ದಾಸ್ ವಿಶೇಷ ಸಂವಾದ:

ಸನಾ ಸಾಜನ್‌ ಅವರೊಂದಿಗಿನ ಈ ಸಂವಾದ ಕಾರ್ಯಕ್ರಮದಲ್ಲಿ ಉದ್ದೇಶ, ಉತ್ಸಾಹ ಮತ್ತು ಸ್ವಂತ ಮಾರ್ಗವನ್ನು ಸೃಷ್ಟಿಸುವ ಧೈರ್ಯದ ಕುರಿತು ಸ್ಪೂರ್ತಿದಾಯಕ ಸಂವಾದ ನಡೆಸಲಾಯಿತು.  ಡಾ. ಸನಾ ಸಾಜನ್ ತಮ್ಮ ಸವಾಲುಗಳು ಮತ್ತು ಸಾಧನೆಗಳನ್ನು ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರೊಂದಿಗೆ ಹಂಚಿಕೊಂಡರು. “ಸನಾ ಪ್ರತಿ ಸವಾಲನ್ನು ಅವಕಾಶವಾಗಿ ಪರಿವರ್ತಿಸುವ ಮತ್ತು ಆಧುನಿಕ ಬದಲಾವಣೆಗೆ ಶ್ರಮಿಸುವ ಸ್ಪೂರ್ತಿದಾಯಕ ವ್ಯಕ್ತಿ, ನಿಜವಾದ ನಾಯಕತ್ವವು ಸತ್ಯಾಸತ್ಯತೆ ಮತ್ತು ಉದ್ದೇಶದಲ್ಲಿದೆ ಎಂದು ತೋರಿಸುತ್ತದೆ” ಎಂದು ಬರುಣ್ ದಾಸ್ ಸಂಭಾಷಣೆಯನ್ನು ನೆನಪಿಸಿಕೊಳ್ಳುತ್ತಾ ಹೇಳಿದರು.

Duologue Nxt (2)

ಬರುಣ್ ದಾಸ್ ಅವರೊಂದಿಗಿನ ಸ್ಪೂರ್ತಿದಾಯಕ ಸಂಭಾಷಣೆಯ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಸನಾ “ಡ್ಯುಯೊಲಾಗ್ NXT ನಲ್ಲಿ ಬರುಣ್ ದಾಸ್ ಅವರೊಂದಿಗಿನ ನನ್ನ ಸಂಭಾಷಣೆ ನಿಜಕ್ಕೂ ಅದ್ಭುತವಾಗಿತ್ತು, ಇದು  ಮಾನಸಿಕವಾಗಿ ಉತ್ತೇಜನಕಾರಿಯಾಗಿತ್ತು. ನಾನು ಅವರೊಂದಿಗೆ ಅದ್ಭುತ ಸಮಯವನ್ನು ಕಳೆದಿದ್ದೇನೆ ಮತ್ತು ಈ ರೀತಿಯ ಹೆಚ್ಚಿನ ಸಂಭಾಷಣಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ. ಬದಲಾವಣೆಯನ್ನು ಅಳವಡಿಸಿಕೊಳ್ಳುವುದು, ಜೀವನದ ದ್ವಂದ್ವಗಳನ್ನು ಸ್ವೀಕರಿಸುವ ಬಗ್ಗೆಯೂ ಸನಾ ಮನಬಿಚ್ಚಿ ಮಾತನಾಡಿದ್ದಾರೆ.   ನನ್ನ ಈ ಸಾಧನೆಯ ಹಾದಿ “ಇದು ಜೀವಮಾನದ ಪ್ರಯಾಣವಾಗಿದೆ, ಇಲ್ಲಿ ಏರಿಳಿತಗಳು ಸಾಕಷ್ಟು ಇದ್ದವು, ಕೆಲವೊಮ್ಮೆ ನೀವು ನಿಜವಾಗಿಯೂ ಸೇರಿರುವ ಸ್ಥಳವನ್ನು ತಲುಪಲು ಹಿಂದಕ್ಕೆ ಅಥವಾ ಪಕ್ಕಕ್ಕೆ ಚಲಿಸಬೇಕಾಗುತ್ತದೆ,  ಈ  ಹಿನ್ನಡೆಗಳು ಕೆಲವೊಮ್ಮೆ ನಿಮಗೆ ಅನಿರೀಕ್ಷಿತ  ಮೆಟ್ಟಿಲುಗಳಾಗುತ್ತವೆ” ಎಂಬುದನ್ನು ಅವರು ವಿವರಿಸುತ್ತಾರೆ.

ಇದನ್ನೂ ಓದಿ: ಕ್ಯಾನ್ಸರ್‌ ಗೆದ್ದು ಸಾಧನೆಯ ಶಿಖರವನ್ನೇರಿದ ಕನಿಕಾ ಟೆಕ್ರಿವಾಲ್‌ ಎಲ್ಲರಿಗೂ ಸ್ಪೂರ್ತಿ

ಈ ಡ್ಯುಯೊಲಾಗ್ ನೆಕ್ಸ್ಟ್ ಕಾರ್ಯಕ್ರಮದ ಈ ಸಂಚಿಕೆಯು ಕೇವಲ ಸಂಭಾಷಣೆಯಲ್ಲ ಬದಲಿಗೆ ಮಹತ್ವಾಕಾಂಕ್ಷೆ, ಸಹಾನುಭೂತಿ ಮತ್ತು ಬದಲಾವಣೆಯ ಕಲೆಯನ್ನು ಪ್ರತಿಬಿಂಬಿಸಲು ಆಹ್ವಾನವಾಗಿದೆ. ನ್ಯೂಸ್9, ಡ್ಯುಯೊಲೊಗ್ ಯೂಟ್ಯೂಬ್ ಚಾನೆಲ್ (@Duologuewithbarundas)  ಮತ್ತು ನ್ಯೂಸ್9 ಪ್ಲಸ್ ಅಪ್ಲಿಕೇಶನ್‌ನಲ್ಲಿ ಡಾ. ಸನಾ ಸಾಜನ್ ಅವರೊಂದಿಗೆ ಡ್ಯುಯೊಲೊಗ್ NXT ಯ ಪೂರ್ಣ ಸಂಚಿಕೆಯನ್ನು ನೀವು  ವೀಕ್ಷಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 pm, Fri, 26 September 25

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ