AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Banana Flower Recipe : ಆರೋಗ್ಯಕರ ಬಾಳೆಹೂವಿನ ಪಕೋಡ, ಮಾಡೋದು ಸುಲಭ

ಬಾಳೆಗಿಡದ ಪ್ರತಿಯೊಂದು ಭಾಗವು ಪ್ರಯೋಜನಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಾಳೆ ಎಲೆ, ಬಾಳೆ ಹಣ್ಣು, ಬಾಳೆ ದಿಂಡು ಸೇರಿದಂತೆ ಬಾಳೆ ಹೂವಿನ ಉಪಯೋಗವನ್ನು ತಿಳಿದವರೇ ಬಲ್ಲರು. ಈ ಬಾಳೆ ಹೂವಿನಿಂದಲೂ ವಿಶೇಷವಾದ ಅಡುಗೆ ಮಾಡಿ ಸವಿಯುತ್ತಾರೆ. ನೀವೇನಾದರೂ ಸಂಜೆಯ ಕಾಫಿ ಟೀ ಜೊತೆಗೆ ಈ ಬಾಳೆ ಹೂವಿನ ಪಕೋಡ ಮಾಡಿ ಸವಿದರೆ ಅದರ ಮಜಾನೇ ಬೇರೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ.

Banana Flower Recipe : ಆರೋಗ್ಯಕರ ಬಾಳೆಹೂವಿನ ಪಕೋಡ, ಮಾಡೋದು ಸುಲಭ
ಬಾಳೆಹೂವುImage Credit source: Times Of India
ಸಾಯಿನಂದಾ
| Updated By: ನಯನಾ ರಾಜೀವ್|

Updated on:Jul 15, 2024 | 2:04 PM

Share

ಎಲ್ಲರೂ ಕೂಡ ಈ ಬಾಳೆಗೊನೆಯನ್ನು ನೋಡಿರಬಹುದು, ಈ ಗೊನೆಯ ತುದಿಯಲ್ಲಿರುವ ಬಾಳೆ ಹೂವಿನ ಉಪಯೋಗದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಈ ಬಾಳೆ ಹೂವು ನೋಡಲು ಎಷ್ಟು ಸುಂದರವೋ, ಇದರಿಂದ ತಯಾರಿಸಿದ ಖಾದ್ಯವು ಅಷ್ಟೇ ರುಚಿಕರವಾಗಿರುತ್ತದೆ. ಇದರಿಂದ ವಿವಿಧ ರುಚಿಕರವಾದ ಆಹಾರವನ್ನು ತಯಾರಿಸಲಾಗುತ್ತದೆ. ಮಳೆಗಾಲದಲ್ಲಿ ಬಿಸಿ ಬಿಸಿ ಬಾಳೆಹೂವಿನ ಪಕೋಡ ಟೀ ಕಾಫಿ ಜೊತೆಗೆ ಸವಿದರೆ ಮನಸ್ಸಿಗೂ ಮಾತ್ರವಲ್ಲದೇ ಆರೋಗ್ಯಕ್ಕೂ ಒಳ್ಳೆಯದು.

ಬಾಳೆ ಹೂವಿನ ಪಕೋಡ ಮಾಡಲು ಬೇಕಾಗುವ ಸಾಮಗ್ರಿಗಳು * ಮೈದಾ ಹಿಟ್ಟು * ಅಕ್ಕಿ ಹಿಟ್ಟು * ಖಾರದ ಪುಡಿ * ಶುಂಠಿ ಬೆಳ್ಳುಳ್ಳಿ ಪೇಸ್ಟ್ * ಗರಂ ಮಸಾಲಾ ಪುಡಿ * ನೀರು * ರುಚಿಗೆ ತಕ್ಕಷ್ಟು ಉಪ್ಪು

ಮತ್ತಷ್ಟು ಓದಿ: Jackfruits Seeds Holige : ಹಲಸಿನ ಬೀಜದ ಹೋಳಿಗೆ ಮಾಡುವುದು ಹೇಗೆ? ಇಲ್ಲಿದೆ ರೆಸಿಪಿ

ಬಾಳೆ ಹೂವಿನ ಪಕೋಡ ಮಾಡುವ ವಿಧಾನ * ಮೊದಲಿಗೆ ಈ ಬಾಳೆ ಹೂವನ್ನು ಬಿಡಿಸುವಾಗ ಅದರಲ್ಲಿರುವ ಉದ್ದದ ಕಡ್ಡಿಯನ್ನು ತಗೆಯಬೇಕು. * ಆ ಬಳಿಕ ಮೈದಾ ಹಿಟ್ಟು, ಸ್ವಲ್ಪ ಅಕ್ಕಿ ಹಿಟ್ಟು, ಖಾರದ ಪುಡಿ,ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲಾ ಪುಡಿ, ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಪಕೋಡ ಹದಕ್ಕೆ ಹಿಟ್ಟನ್ನು ಕಲಸಿಕೊಳ್ಳಬೇಕು. * ಇದಕ್ಕೆ ಈಗಾಗಲೇ ಕಡ್ಡಿ ತೆಗೆದ ಬಾಳೆ ಹೂವನ್ನು ಸೇರಿಸಿಕೊಳ್ಳಬೇಕು. * ಸ್ಟವ್ ಮೇಲೆ ಬಾಣಲೆಯನ್ನಿಟ್ಟು ಎಣ್ಣೆಯನ್ನು ಹಾಕಿ. ಅದು ಚೆನ್ನಾಗಿ ಕಾದ ನಂತರ ಈಗಾಗಲೇ ಸಿದ್ಧವಾಗಿಸಿಕೊಂಡ ಈ ಮಸಾಲೆಯನ್ನು ಕರಿಯಬೇಕು. * ಕಂದು ಬಣ್ಣಕ್ಕೆ ಬರುತ್ತಿದ್ದಂತೆ ಎಣ್ಣೆಯಿಂದ ತೆಗೆದರೆ ಬಾಳೆ ಹೂವಿನ ರುಚಿಯಾದ ಕುರುಕಲು ಪಕೋಡ ಸವಿಯಲು ಸಿದ್ಧ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:00 pm, Mon, 15 July 24

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ