AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon Hacks: ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸ್ತೀರಾ? ಈ ಅಪಾಯ ಖಂಡಿತ, ಇಲ್ಲಿದೆ ತಜ್ಞರ ಸಲಹೆ

ಮಳೆಗಾಲದಲ್ಲಿ ವಾತಾವರಣದಲ್ಲಿನ ತೇವಾಂಶದ ಕಾರಣ ಬಟ್ಟೆಗಳು ಹೆಚ್ಚಾಗಿ ಸರಿಯಾಗಿ ಒಣಗದೆ ವಾಸನೆ ಬರಲಾರಂಭಿಸುತ್ತದೆ.ಅಲ್ಲದೆ ಈ ಋತುವಿನಲ್ಲಿ ಸೂಕ್ಷ್ಮಾಣುಗಳು ಬಟ್ಟೆಯ ಮೇಲೆ ಹೆಚ್ಚು ಸಂಗ್ರಹವಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಕೆಲವು ಸರಳ ಸಲಹೆಗಳನ್ನು ಪಾಲಿಸಿ.

Monsoon Hacks: ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸ್ತೀರಾ? ಈ ಅಪಾಯ ಖಂಡಿತ, ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 03, 2023 | 4:49 PM

Share

ಮಳೆಗಾಲ ಯಾರಿಗೆ ಇಷ್ಟವಿಲ್ಲ ಹೇಳಿ. ಈ ಋತುವಿನಲ್ಲಿನ ತಂಪಾದ ವಾತಾವರಣ, ಜಿಟಿಜಿಟಿ ಮಳೆ ಇವೆಲ್ಲವನ್ನೂ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಇಂತಹ ತಂಪಿನ ವಾತವಾರಣದಲ್ಲಿ ಬಟ್ಟೆಗಳನ್ನು ಒಣಗಿಸುವುದು ಒಂದು ದೊಡ್ಡ ಸವಾಲಾಗಿದೆ. ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಒಣಗಿಸುವುದು ಹೇಗೆ ಎಂಬ ಚಿಂತೆ ಒಂದೆಡೆಯಾದರೆ, ಆ ಬಟ್ಟೆಗಳು ದುರ್ವಾಸನೆ ಬಾರದಂತೆ ನೋಡಿಕೊಳ್ಳುವುದು ಹೇಗೆ ಎಂಬುದು ಇನ್ನೊಂದು ದೊಡ್ಡ ಸಮಸ್ಯೆಯಾಗಿದೆ. ವಾಸ್ತವವಾಗಿ ಮಳೆಯ ಸಮಯದಲ್ಲಿ ಕೊಳಕು ಶಿಲೀಂದ್ರಗಳು ಮತ್ತು ಬ್ಯಾಕೀರಿಯಾಗಳು ನಮ್ಮ ಬಟ್ಟೆಗಳ ಮೇಲೆ ಹೆಚ್ಚು ಸಂಗ್ರಹವಾಗುತ್ತದೆ. ಮತ್ತು ಇದರಿಂದ ನಾವು ಅನಾರೋಗ್ಯಕ್ಕೂ ಒಳಗಾಗಬಹುದು. ಇದರೊಂದಿಗೆ ಬಟ್ಟೆಗಳನ್ನು ಸರಿಯಾಗಿ ಒಣಗಿಸದಿದ್ದರೆ ದುರ್ವಾಸನೆ ಬರಲಾರಂಭಿಸುತ್ತದೆ. ಹಾಗಾಗಿ ಈ ಮಾನ್ಸೂನ್ ಋತುವಿನಲ್ಲಿ ಅಗತ್ಯವಾಗಿ ಬಟ್ಟೆಗಳ ಸುಚಿತ್ವವನ್ನು ಕಾಪಾಡಿಕೊಳ್ಳಬೇಕು.

ಮಳೆಗಾಲದಲ್ಲಿ ಬಟ್ಟೆಗಳು ತೇವ ಹಾಗೂ ಶಿಲೀಂದ್ರ ಮುಕ್ತವಾಗಿರಲು ಈ ಸರಳ ಸಲಹೆಗಳನ್ನು ಪಾಲಿಸಿ:

ಒದ್ದೆಯಾದ ಬಟ್ಟೆಗಳನ್ನು ಆ ತಕ್ಷಣ ತೊಳೆಯಿರಿ:

ಮಳೆಗಾಲದಲ್ಲಿ ನೀವು ಹೊರಗಡೆ ಒದ್ದೆಯಾಗಿ ಬಂದರೆ, ಆ ಬಟ್ಟೆಗಳನ್ನು ತಕ್ಷಣ ಒಗೆಯಿರಿ. ಅಲ್ಲದೆ ಒದ್ದೆಯಾದ ಮತ್ತು ಕೊಳಕು ಬಟ್ಟೆಗಳನ್ನು ನಾಳೆ ಅಥವಾ ಮುಂದಿನ ಬಾರಿ ಒಗೆಯುವ ಸಲುವಾಗಿ ಲಾಂಡ್ರಿ ಬ್ಯಾಗ್ ಅಥವಾ ಬಕೆಟ್​​ಗಳಲ್ಲಿ ಹಾಕಿಡುವುದು ಕೆಟ್ಟ ಅಭ್ಯಾಸವಾಗಿದೆ. ವಾಸ್ತವವಾಗಿ ಹೀಗೆ ಮಾಡುವುದರಿಂದ, ಸೂಕ್ಷ್ಮಾಣು ಜೀವಿಗಳು ಮತ್ತು ಕೆಟ್ಟ ವಾಸನೆಯು ಬಟ್ಟೆಯ ಮೇಲೆ ಹಾಗೆಯೇ ಉಳಿದುಕೊಳ್ಳುತ್ತದೆ. ಅಲ್ಲದೆ ಇದರಿಂದ ಬಟ್ಟೆಯ ಗುಣಮಟ್ಟವೂ ಹಾಳಾಗಿಬಿಡುತ್ತದೆ. ಆದ್ದರಿಂದ ಒದ್ದೆ ಬಟ್ಟೆಗಳನ್ನು ತಕ್ಷಣ ಒಗೆಯುವ ಮೂಲಕ ಅವುಗಳ ಸ್ವಚ್ಛತೆಯನ್ನು ಕಾಪಾಡಿ.

ಪರಿಮಳಯುಕ್ತ ಫ್ಯಾಬ್ರಿಕ್ ಕಂಡಿಷನರ್ ಬಳಸಿ:

ಮಳೆಗಾಲದಲ್ಲಿ ಬಟ್ಟೆಯ ವಾಸನೆಯನ್ನು ಹೋಗಲಾಡಿಸಲು, ಬಟ್ಟೆ ಒಗೆದ ನಂತರ ಫ್ಯಾಬ್ರಿಕ್ ಕಂಡಿಷನರ್ ಬಳಸಿ. ಹೀಗೆ ಮಾಡುವುದರಿಂದ ಮಳೆಗಾಲದಲ್ಲಿ ಬಟ್ಟೆಗಳಿಂದ ಬರುವ ದುರ್ವಾಸನೆಯನ್ನು ತಡೆಯಬಹುದು. ಕಂಫರ್ಟ್, ಸಾಫ್ಟ್ ಟಚ್ ಇತ್ಯಾದಿ ಫ್ಯಾಬ್ರಿಕ್ ಕಂಡಿಷನರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಳೆಗಾಲದಲ್ಲಿ ಮಾತ್ರವಲ್ಲದೆ ಇತರ ಋತುವಿನಲ್ಲೂ ಬಟ್ಟೆಗಳಿಂದ ಸೂಸುವ ವಾಸನೆಯನ್ನು ತಡೆಗಟ್ಟಲು ಪರಿಮಳಯುಕ್ತ ಮಾರ್ಜಕಗಳನ್ನು ಬಳಸುವುದು ಸೂಕ್ತವಾಗಿದೆ.

ಇದನ್ನೂ ಓದಿ:Healthy soups for the Monsoon: ಮಳೆಗಾಲದಲ್ಲಿ ಈ ಸೂಪ್​​ಗಳನ್ನು ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿ

ಬಟ್ಟೆಗಳನ್ನು ಸಂಪೂರ್ಣವಾಗಿ ಒಣಗಲು ಬಿಡಿ:

ಬಟ್ಟೆ ಒಗೆದ ಬಳಿಕ ಅವುಗಳನ್ನು ಕೈಗಳಿಂದ ಹಿಂಡುವ ಬದಲು ವಾಷಿಂಗ್ ಮೆಷಿನ್ ನಲ್ಲಿರುವ ಡ್ರೆಯರ್ ನಲ್ಲಿ ಹಾಕಿಬಿಡಿ. ಹೀಗೆ ಮಾಡುವುದರಿಂದ ಬಟ್ಟೆಗಳು ಬೇಗನೆ ಒಣಗುತ್ತವೆ. ಅಲ್ಲದೆ ಮಳೆಗಾಲದಲ್ಲಿ ಒದ್ದೆಯಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ತೊಳೆದ ಬಟ್ಟೆಗಳು ಸಂಪೂರ್ಣವಾಗಿ ಒಣಗಿದ ಬಳಿಕ ಅವುಗಳಿಗೆ ಇಸ್ತ್ರಿ ಮಾಡಿ ನಂತರವೇ ಅವುಗಳನ್ನು ಕಪಾಟುಗಳಲ್ಲ್ಲಿ ಜೋಡಿಸಿರಿ.

ಕರ್ಪೂರವನ್ನು ಬಳಸಲು ಮರೆಯದಿರಿ:

ಮಳೆಗಾಲದಲ್ಲಿ ಬಟ್ಟೆ, ಬೂಟುಗಳು ಸ್ವಲ್ಪ ಒದ್ದೆಯಾದರೂ ಅವುಗಳಿಂದ ದುರ್ವಾಸನೆ ಹೊರಸೂಸುತ್ತದೆ. ಈ ವಾಸನೆಯನ್ನು ಹೋಗಲಾಡಿಸಲು ಸುಲಭವಾದ ಮಾರ್ಗವೆಂದರೆ ಕೆಲವು ಕರ್ಪೂರದ ತುಂಡುಗಳನ್ನು ಕಪಾಟುಗಳು, ಶೂ ಕ್ಯಾಬಿನೆಟ್ ಗಳಲ್ಲಿ ಇಡಿ. ಹೀಗೆ ಮಾಡುವುದರಿಂದ ದುರ್ವಾಸೆಯನ್ನು ಹೋಗಲಾಡಿಸಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್