Hair Growth: ತುದಿ ಕತ್ತರಿಸಿದರೆ ಕೂದಲು ಉದ್ದವಾಗುತ್ತಾ?

ಪ್ರತಿ 6ರಿಂದ 8 ವಾರಗಳಿಗೊಮ್ಮೆ ನಿಮ್ಮ ಕೂದಲನ್ನು ಟ್ರಿಮ್ ಮಾಡುವುದರಿಂದ ಸ್ಪ್ಲಿಟ್ ಆದ ತುದಿಗಳನ್ನು ತಡೆಯಬಹುದು. ನಿಯಮಿತವಾದ ಟ್ರಿಮ್ಮಿಂಗ್ ಕೂದಲಿನ ಮೇಲೆ ಪರಿಣಾಮ ಬೀರಬಲ್ಲದು. ನಿಮ್ಮ ಕೂದಲಿನ ತುದಿಗಳನ್ನು ಟ್ರಿಮ್ ಮಾಡುವುದು ನಿಮ್ಮ ನೆತ್ತಿಯ ಕಿರುಚೀಲಗಳ ಮೇಲೆ ಪರಿಣಾಮ ಬೀರುವುದಿಲ್ಲ.

Hair Growth: ತುದಿ ಕತ್ತರಿಸಿದರೆ ಕೂದಲು ಉದ್ದವಾಗುತ್ತಾ?
ಕೂದಲು ಕತ್ತರಿಸುವುದುImage Credit source: iStock
Follow us
|

Updated on: Nov 22, 2023 | 7:03 PM

ಮೃದುವಾದ ಮತ್ತು ರೇಷ್ಮೆಯಂತಹ ಸುಂದರವಾದ ಕೂದಲು ಯಾರಿಗೆ ತಾನೇ ಇಷ್ಟವಿಲ್ಲ? ಬಹುತೇಕ ಮಹಿಳೆಯರು ಕೂದಲ ಆರೋಗ್ಯಕ್ಕಾಗಿ ಏನೇನೋ ಪ್ರಯೋಗಗಳನ್ನು ಮಾಡುತ್ತಾರೆ. ಕೂದಲಿನ ಬೆಳವಣಿಗೆ, ಕಾಳಜಿಯ ಬಗ್ಗೆ ಮೊದಲಿನಿಂದಲೂ ಕೆಲವು ನಂಬಿಕೆಗಳಿವೆ. ಕೂದಲಿಗೆ ಶಾಂಪೂ ಹಾಕಿದರೆ ಹಾಳಾಗುತ್ತದೆ, ಕೂದಲಿಗೆ ನೈಸರ್ಗಿಕ ಎಣ್ಣೆಯನ್ನೇ ಹಾಕಬೇಕು, ಕೂದಲು ಬೆಳೆಯಬೇಕೆಂದರೆ ಆಗಾಗ ಕೂದಲ ತುದಿಯನ್ನು ಕತ್ತರಿಸಬೇಕು. ಹೀಗೆ ಕೆಲವು ನಂಬಿಕೆಗಳಿವೆ. ಆದರೆ, ಇದು ನಿಜವೇ? ಕೂದಲನ್ನು ಆಗಾಗ ಕಟ್ ಮಾಡುತ್ತಿದ್ದರೆ ಮಾತ್ರ ಕೂದಲು ಬೆಳೆಯುತ್ತದಾ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ನಿಮ್ಮ ಕೂದಲಿನ ತುದಿಗಳನ್ನು ಟ್ರಿಮ್ ಮಾಡುವುದು ನಿಮ್ಮ ನೆತ್ತಿಯ ಕಿರುಚೀಲಗಳ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ಪ್ರತಿ 6ರಿಂದ 8 ವಾರಗಳಿಗೊಮ್ಮೆ ನಿಮ್ಮ ಕೂದಲನ್ನು ಟ್ರಿಮ್ ಮಾಡುವುದರಿಂದ ಸ್ಪ್ಲಿಟ್ ಆದ ತುದಿಗಳನ್ನು ತಡೆಯಬಹುದು. ನಿಯಮಿತವಾದ ಟ್ರಿಮ್ಮಿಂಗ್ ಕೂದಲಿನ ಮೇಲೆ ಪರಿಣಾಮ ಬೀರಬಲ್ಲದು.

ಇದನ್ನೂ ಓದಿ: Hair Care: ಚಳಿಗಾಲದಲ್ಲಿ ಕೂದಲು ತೊಳೆಯುವಾಗ ಈ ತಪ್ಪುಗಳನ್ನು ಮಾಡದಿರಿ

ಟ್ರೈಕಾಲಾಜಿಕಲ್ ಸೊಸೈಟಿಯ ಅಧ್ಯಯನದ ಪ್ರಕಾರ, ಕೂದಲು ಸಾಮಾನ್ಯವಾಗಿ ಜನಾಂಗೀಯತೆಯ ಆಧಾರದ ಮೇಲೆ ತಿಂಗಳಿಗೆ 0.5ರಿಂದ 1.7 ಸೆಂ.ಮೀವರೆಗೆ ಬೆಳೆಯುತ್ತದೆ. ನಿಮ್ಮ ತಳಿಶಾಸ್ತ್ರ, ಲಿಂಗ, ವಯಸ್ಸು ಮತ್ತು ಆಹಾರ ಪದ್ಧತಿ ನಿಮ್ಮ ಕೂದಲಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳಾಗಿವೆ.

ಋತುಗಳು ಕೂಡ ನಿಮ್ಮ ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಚರ್ಮ ಮತ್ತು ನೆತ್ತಿಯ ವರ್ಧಿತ ರಕ್ತ ಪರಿಚಲನೆಯಿಂದಾಗಿ ಬೇಸಿಗೆಯಲ್ಲಿ ನಿಮ್ಮ ಕೂದಲು ವೇಗವಾಗಿ ಬೆಳೆಯುತ್ತದೆ. ಶೀತ ವಾತಾವರಣದಲ್ಲಿ ನಿಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಆಂತರಿಕ ಅಂಗಗಳಿಗೆ ರಕ್ತದ ಹರಿವು ಹೆಚ್ಚಾಗುತ್ತದೆ. ಅದು ಕೂದಲಿನ ಬೆಳವಣಿಗೆಯನ್ನು ನಿಧಾನಗೊಳಿಸಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ