Health benefits of Buttermilk: ಶಾಖದ ಅಲೆ ಹೆಚ್ಚಾಗುತ್ತಿದೆ, ಮಜ್ಜಿಗೆ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ

ಬೇಸಿಗೆ ದಿನಗಳಲ್ಲಿ ಹಾಗೂ ಇತರ ದಿನಗಳಲ್ಲಿ ಎಲ್ಲ ಮನೆಯ ತಾಯಂದಿರು ಮಕ್ಕಳಿಗೆ, ಯುವಕರಿಗೆ ಮಜ್ಜಿಗೆ ಕುಡಿಯಿರಿ ಎಂದು ಹೇಳುವುದು ಮಲೆನಾಡಿನಲ್ಲಿ ತೀರ ಸಾಮಾನ್ಯ. ಆದರೆ ಈ ತಾಯಂದಿರು ಹೇಳಿದಂತೆ ಮಜ್ಜಿಗೆಯನ್ನು ಸೇವಿಸುವವರು ಹತ್ತರಲ್ಲಿ ಒಬ್ಬರು ಇಬ್ಬರು.

Health benefits of Buttermilk: ಶಾಖದ ಅಲೆ ಹೆಚ್ಚಾಗುತ್ತಿದೆ, ಮಜ್ಜಿಗೆ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ
ಡಾ ರವಿಕಿರಣ ಪಟವರ್ಧನ ಶಿರಸಿ.
Follow us
|

Updated on: Mar 06, 2023 | 6:30 AM

ಬೇಸಿಗೆ ದಿನಗಳಲ್ಲಿ ಹಾಗೂ ಇತರ ದಿನಗಳಲ್ಲಿ ಎಲ್ಲ ಮನೆಯ ತಾಯಂದಿರು ಮಕ್ಕಳಿಗೆ, ಯುವಕರಿಗೆ ಮಜ್ಜಿಗೆ ಕುಡಿಯಿರಿ ಎಂದು ಹೇಳುವುದು ಮಲೆನಾಡಿನಲ್ಲಿ ತೀರ ಸಾಮಾನ್ಯ. ಆದರೆ ಈ ತಾಯಂದಿರು ಹೇಳಿದಂತೆ ಮಜ್ಜಿಗೆಯನ್ನು ಸೇವಿಸುವವರು ಹತ್ತರಲ್ಲಿ ಒಬ್ಬರು ಇಬ್ಬರು ಇನ್ನು ಎಂಟು ಜನರು ಇದಕ್ಕೆ ನಕಾರಾತ್ಮಕ ಭಾವನೆಯನ್ನು ತೋರಿಸುತ್ತ ಮೂಗು ಮುರಿಯುವವರು ಯುವಜನರೇ. ಏರಿಯೆಟೆಡ್ ತಂಪು ಪಾನೀಯ, ಇತರ ತಂಪು ಪಾನೀಯ, ಪುಡಿ ಹಾಕಿ ತಯಾರು ಮಾಡುವ ತಂಪು ಗಳಿಗೆ ಹೇಳುವ ಮೊದಲೇ ಅಡ್ಡಿ ಇಲ್ಲ ಹೇಳುವಂತ ಒಂದು ಮಾನಸಿಕತೆ ಈಗ ಎಲ್ಲರ ಮನದಲ್ಲಿ. ಇವುಗಳು ಆರೋಗ್ಯಕರ ಲಾಭವನ್ನು ನೀಡದೆ ಅನಾರೋಗ್ಯವನ್ನು ಉಂಟುಮಾಡುವಂತಹ ಎಲ್ಲ ಅವಕಾಶಗಳನ್ನು ಭರಪೂರದಲ್ಲಿ ಒದಗಿಸುತ್ತವೆ.

ಎಲ್ಲ ಯುವ ಜನತೆ ಚರ್ಮ ,ಕೇಶ, ಮುಖದ ಸೌಂದರ್ಯದ ಕಡೆಗೆ ಹೆಚ್ಚಿನ ಒಲವು. ಆದರೆ ಇವುಗಳ ಆರೋಗ್ಯ ಕಾಪಾಡುವಲ್ಲಿ ಮಜ್ಜಿಗೆ ಮಹತ್ತರ ಪಾತ್ರವನ್ನು ವಹಿಸುತ್ತದೆ ,ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲವು ನಿಮ್ಮ ಚರ್ಮಕ್ಕೆ ಒಳ್ಳೆಯದು. ಮಜ್ಜಿಗೆ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಅತ್ಯುತ್ತಮ ಸ್ಕಿನ್ ಕ್ಲೆನ್ಸರ್ ಮತ್ತು ಟೋನರ್ ಆಗಿದೆ. ಇದು ಟ್ಯಾನ್, ಮೊಡವೆ ಕಲೆಗಳು ಮತ್ತು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಹೊಳಪು ನೀಡುತ್ತದೆ, ವಯಸ್ಸಾಗುವುದನ್ನು ವಿಳಂಬಗೊಳಿಸುತ್ತದೆ. ಇಂತಹ ಇವತ್ತಿನ ತೊಂದರೆಯ ವಿದ್ಯಮಾನಗಳಿಂದ ದೂರ ಮಾಡುವ ಗುಣವನ್ನು ಹೊಂದಿರುವಂತಹ ಮಜ್ಜಿಗೆಯನ್ನು ಅಮೃತ ಸಮಾನ ಎಂದು ಕರೆದಿರುತ್ತಾರೆ.

ಇದನ್ನೂ ಓದಿ: ದಿನಕ್ಕೆ 3 ದಾಳಿಂಬೆ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಮಜ್ಜಿಗೆ ಒಂದು ಅತ್ಯುತ್ತಮ ಜಲಸಂಚಯನ ಪಾನೀಯವಾಗಿದ್ದು ಅದು ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಬೆವರುವಿಕೆಯಿಂದ ಕಳೆದುಹೋದ ಎಲೆಕ್ಟ್ರೋಲೈಟ್‌ಗಳನ್ನು ಬದಲಾಯಿಸುತ್ತದೆ ಮತ್ತು ನಿರ್ಜಲೀಕರಣವನ್ನು ತಡೆಯುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಜ್ಜಿಗೆ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪರಿಣಾಮವಾಗಿ ಹೆಚ್ಚಿದ ರೋಗನಿರೋಧಕ ಶಕ್ತಿಗೆ ಕಾರಣವಾಗುತ್ತದೆ. ಇದು ನಿಯಮಿತ ಕರುಳಿನ ಚಲನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಡಾ ರವಿಕಿರಣ ಪಟವರ್ಧನ ಶಿರಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು