AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ತಲೆಗೂದಲು ಉದುರುವುದನ್ನು ತಡೆಯಲು ಇಲ್ಲಿವೆ ಮನೆ ಉಪಾಯಗಳು

ತಲೆಗೂದಲು ಸಂರಕ್ಷಣೆಗೆ ಮನೆ ಉಪಾಯಗಳ ಜೊತೆ ಆಹಾರ ಮತ್ತು ಜೀವನ ಶೈಲಿಯ ಕಡೆಯೂ ಗಮನ ನೀಡಬೇಕಾಗುತ್ತದೆ. ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವಂತೆ ತಲೆಗೂದಲಿನ ಸಂರಕ್ಷಣೆಗೆ ಪೌಷ್ಠಿಕಾಂಶಭರಿತ ಆಹಾರ, ಮತ್ತು ಉತ್ತಮ ಜೀವನಶೈಲಿ ಅತ್ಯಗತ್ಯ.

ಮಳೆಗಾಲದಲ್ಲಿ ತಲೆಗೂದಲು ಉದುರುವುದನ್ನು ತಡೆಯಲು ಇಲ್ಲಿವೆ ಮನೆ ಉಪಾಯಗಳು
ಮಳೆಗಾಲದಲ್ಲಿ ಕೂದಲುದುರುವ ಸಮಸ್ಯೆ
TV9 Web
| Edited By: |

Updated on: Aug 16, 2022 | 2:05 PM

Share

ಬೆಂಗಳೂರು: ತಲೆಗೂದಲಿಗೆ ಪ್ರತಿ ಸೀಸನಲ್ಲಿ ಬೇರೆ ಬೇರೆ ಬಗೆಯ ಸಂರಕ್ಷಣೆ ಬೇಕಾಗುತ್ತದೆ. ನಾವೀಗ ಮಾನ್ಸೂನ್ ಸೀಸನಲ್ಲಿದ್ದೇವೆ. ಮಳೆಗಾಲದ (Monsoon) ಹವಾಮಾನ ಮತ್ತು ಗಾಳಿಯಲ್ಲಿರುವ ತೇವಾಂಶ ನಿಮ್ಮ ತಲೆಗೂದಲಿಗೆ ಕೆಲ ಸಮಸ್ಯೆಗಳನ್ನು ತಂದೊಡ್ಡಬಹುದು. ಮಳೆಗಾಲದಲ್ಲಿ ಕೂದಲು ಹೆಚ್ಚು ಉದುರುವುದು (hair fall) ನಿಮ್ಮ ಗಮನಕ್ಕೆ ಬಂದಿರಬಹುದು. ವಾತಾವರಣದಲ್ಲಿ ಅಧಿಕ ತೇವಾಂಶದಿಂದ (humidity) ತಲೆ ಬುರುಡೆ ಎಣ್ಣೆಯುಕ್ತವಾಗುವುದರಿಂದ ಕೂದಲು ಉದುರುವಿಕೆಗೆ ಇದೇ ಪ್ರಮುಖ ಕಾರಣವಾಗುತ್ತದೆ.

ಹಾಗಂತ ನೀವೇನೂ ಜಾಸ್ತಿ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಈ ಸಮಸ್ಯೆಗೆ ಕೆಲ ನೈಸರ್ಗಿಕ ಪರಿಹಾರಗಳಿವೆ.

ಬಿಸಿಯೆಣ್ಣೆ ಮಸಾಜ್: ನಿಮ್ಮ ಕೂದಲು ಸಂರಕ್ಷಣೆಗೆ ಅತ್ಯಂತ ಪರಿಣಾಮಕಾರಿ ವಸ್ತು ಎಂದರೆ ಹೇರ್ ಆಯಿಲ್. ಕೂದಲು ಉದುರುವುದನ್ನು ತಡೆಯಬೇಕೆಂದರೆ ಒಂದು ಬಟ್ಟಲಿನಲ್ಲಿ ಒಂದಷ್ಟು ಕೊಬ್ಬರಿಯೆಣ್ಣೆ ತೆಗೆದುಕೊಂಡು ಕಾಯಿಸಿರಿ. ನಂತರ ಅದು ಉಗುರು ಬೆಚ್ಚಗಾಗುವರೆಗೆ ಕಾಯ್ದು ಅದರಿಂದ ತಲೆ ಮಸಾಜ್ ಮಾಡಿಕೊಳ್ಳಿ. ಹಾಗೆ ಮಾಡುವುದರಿಂದ ತಲೆ ಬುರುಡೆ ಭಾಗಕ್ಕೆ ರಕ್ತ ಸಂಚಾರ ಹೆಚ್ಚಾಗಿ ಎಣ್ಣೆ ನಿಮ್ಮ ಕೂದಲಿನ ಬೇರಿನ ಭಾಗ ತಲುಪುವುದು ಸಾಧ್ಯವಾಗುತ್ತದೆ. ಹಾಗಾದಾಗ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಮೆಂತೆ ಮತ್ತು ಸೋಂಪು ಕಾಳುಗಳ ಹೇರ್ ಪ್ಯಾಕ್: ಬುರುಡೆಯಲ್ಲಿ ಹೊಸ ಕೂದಲಿನ ಬೆಳವಣಿಗೆಗೆ ಮೆಂತೆ ಮತ್ತು ಸೋಂಪು ಕಾಳುಗಳು ಬಹಳ ಪ್ರಯೋಜನಕಾರಿಯಾಗಿವೆ. ಈ ಎರಡು ಕಾಳುಗಳ ಮಿಶ್ರಣ ತಯಾರಿಸಿ ಹೇರ್ ಪ್ಯಾಕ್ ಆಗಿ ಬಳಸಲು ನೀವು ಮಾಡಬೇಕಿರುವುದು ಇಷ್ಟು: ಅವರೆಡನ್ನೂ ರಾತ್ರಿಯೆಲ್ಲ ನೆನೆಯಿಟ್ಟು ಬೆಳಗಿನ ಸಮಯದಲ್ಲಿ ಮಿಕ್ಸರ್ ನಲ್ಲಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ.

ನಂತರ ಆ ಪೇಸ್ಟನ್ನು ನಿಮ್ಮ ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿರಿ. ಅರ್ಧಗಂಟೆಯ ನಂತರ ಕೂದಲು ಮತ್ತು ಬರುಡೆಯನ್ನು ಚೆನ್ನಾಗಿ ತೊಳೆದುಕೊಳ್ಳಿ.

ಉತ್ತಮ ಮತ್ತು ತ್ವರಿತ ಫಲಿತಾಂಶಗಳಿಗಾಗಿ ಹೀಗೆ ವಾರಕ್ಕೆರಡು ಸಲ ಮಾಡಿ.

ಗಿಡಮೂಲಿಕೆಗಳ ಹೇರ್ ಪ್ಯಾಕ್: ಕೂದಲು ಉದರುವುದನ್ನು ತಡೆಯಲು ಇದು ನಿಸ್ಸಂದೇಹವಾಗಿ ಅತ್ಯುತ್ತಮ ಉಪಾಯ. ಇದನ್ನು ತಯಾರಿಸಿಕೊಳ್ಳಲು ನಿಮಗೆ ಬೇಕಿರುವುದು ಲೋಳೆ ರಸ (ಅಲೋ ವೆರಾ), ಕರಿಬೇವಿನ ಎಲೆಗಳು, ನೆಲ್ಲಿಕಾಯಿ, ಮೆಂತೆ ಕಾಳು ಮತ್ತು ದಾಸವಾಳ ಹೂವು. ಇವೆಲ್ಲವನ್ನು ಮಿಕ್ಸರ್ ನಲ್ಲಿ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಅದನ್ನು ತಲೆಗೆ ಚೆನ್ನಾಗಿ ಹಚ್ಚಿಕೊಂಡು 40 ನಿಮಿಷಗಳ ನಂತರ ಸ್ನಾನ ಮಾಡಿ. ಈ ಮಿಶ್ರಣ ನಿಮ್ಮ ತಲೆಗೂದಲನ್ನು ಆರೋಗ್ಯವಾಗಿಡುತ್ತದೆ ಮತ್ತು ಪಿಎಚ್ ಕಾಯ್ದುಕೊಳ್ಳಲು ನೆರವಾಗುತ್ತದೆ. ವಾರಕ್ಕೊಮ್ಮೆ ಇದನ್ನು ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ತಲೆಗೂದಲು ಸಂರಕ್ಷಣೆಗೆ ಮನೆ ಉಪಾಯಗಳ ಜೊತೆ ಆಹಾರ ಮತ್ತು ಜೀವನ ಶೈಲಿಯ ಕಡೆಯೂ ಗಮನ ನೀಡಬೇಕಾಗುತ್ತದೆ. ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವಂತೆ ತಲೆಗೂದಲಿನ ಸಂರಕ್ಷಣೆಗೆ ಪೌಷ್ಠಿಕಾಂಶಭರಿತ ಆಹಾರ, ಮತ್ತು ಉತ್ತಮ ಜೀವನಶೈಲಿ ಅತ್ಯಗತ್ಯ. ಯೋಗ ಮತ್ತು ಪ್ರಾಣಯಾಮಗಳ ಮೂಲಕವೂ ಕೂದಲು ಉದುರುವುದನ್ನು ನಿಯಂತ್ರಿಸಬಹುದು.

Follow Us
Web contact
Web contact

TV9 Kannada

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?