Jaundice : ಕಾಮಾಲೆ ಬಂದರೆ ಆತಂಕ ಬೇಡ, ಶೀಘ್ರವಾಗಿ ಗುಣ ಪಡಿಸಿಕೊಳ್ಳುವುದು ಹೇಗೆ?

ಬೇಸಿಗೆ ಆರಂಭವಾಗುತ್ತಿದ್ದಂತೆ ಕಾಡುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಎಷ್ಟೇ ಜಾಗರೂಕರಾಗಿದ್ದರೂ ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಯೇ ಹೆಚ್ಚು. ಈ ಸಮಯದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರನ್ನು ಕಾಡುವ ಸಮಸ್ಯೆಗಳಲ್ಲಿ ಕಾಮಾಲೆ ಕೂಡ ಒಂದು. ಕಾಮಾಲೆ ರೋಗವು ನಿಧಾನವಾಗಿ ಉಲ್ಭಣಗೊಳ್ಳುವುದರಿಂದ ಆರಂಭದಲ್ಲಿ ಯಾವುದೇ ಸೂಚನೆಗಳು ಕಾಣಿಸಿಕೊಳ್ಳುವುದಿಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೇ ಅಧಿಕ. ಹೀಗಾಗಿ ಆರಂಭಿಕ ಹಳ್ಳಿ ಮದ್ದಿನ ಮೂಲಕ ಈ ರೋಗವನ್ನು ಗುಣಪಡಿಸಿಕೊಳ್ಳಬಹುದಾಗಿದೆ.

Jaundice : ಕಾಮಾಲೆ ಬಂದರೆ ಆತಂಕ ಬೇಡ, ಶೀಘ್ರವಾಗಿ ಗುಣ ಪಡಿಸಿಕೊಳ್ಳುವುದು ಹೇಗೆ?
Edited By:

Updated on: Mar 23, 2024 | 12:16 PM

ಕಾಮಾಲೆ ಕಣ್ಣಿಗೆ ಕಾಣುವುದಿಲ್ಲ ಹಳದಿಯಂತೆ ಎಂಬ ಮಾತಿದೆ. ಈ ಕಾಮಾಲೆ ರೋಗವು ಕಾಣಿಸಿಕೊಂಡ ವ್ಯಕ್ತಿಯ ದೇಹವು ಸಂಪೂರ್ಣವಾಗಿ ಬಣ್ಣವು ಬದಲಾಗುತ್ತದೆ. ಯಕೃತಿನ ಸೋಂಕಿನಿಂದ ಈ ಆರೋಗ್ಯ ಸಮಸ್ಯೆಯು ಕಾಣಿಸಿಕೊಳ್ಳುತ್ತವೆ. ಜ್ವರ, ಚಳಿ, ತಲೆನೋವು, ಆಯಾಸ, ದೇಹನಿಶ್ಯಕ್ತಿ, ಕೀಲು ನೋವು, ವಾಕರಿಕೆ, ವಾಂತಿ, ಹಸಿವು ಇಲ್ಲದಿರುವುದು, ಹಳದಿ ಬಣ್ಣದಿಂದ ಕೂಡಿದ ಮೂತ್ರ, ಕಣ್ಣು, ಚರ್ಮ, ಉಗುರುಗಳ ಬಣ್ಣದಲ್ಲಿ ಬದಲಾವಣೆಗಳು ಈ ರೋಗದ ಲಕ್ಷಣವಾಗಿರುತ್ತದೆ. ವ್ಯಕ್ತಿಯ ಕಣ್ಣು ಹಳದಿ ಬಣ್ಣಕ್ಕೆ ತಿರುಗಿ ಇರುವುದರಿಂದ ಅವರ ಮುಖ ಹಳದಿಯಾಗಿ ಕಾಣುತ್ತದೆ. ಇದಿಷ್ಟು ಲಕ್ಷಣಗಳು ಕಾಣಿಸಿಕೊಂಡರೆ ಅದು ಕಾಮಾಲೆ ರೋಗ ಎನ್ನುವುದು ಪಕ್ಕಾ ಆಗುತ್ತದೆ. ಈ ಕಾಯಿಲೆಗೆ ಪಥ್ಯದ ಜೊತೆಗೆ ಔಷಧಿಯನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಜೀವಕ್ಕೆ ಅಪಾಯವಾಗುವುದು ಖಚಿತ.

ಕಾಮಾಲೆ ರೋಗಕ್ಕೆ ಉತ್ತಮ ಮನೆಮದ್ದುಗಳು

  • ಕಾಮಾಲೆ ರೋಗದಿಂದ ಬಳಲುತ್ತಿರುವವರು ಮೂರು ನಾಲ್ಕು ಲೀಟರ್ ನೀರಿಗೆ ಸ್ವಲ್ಪ ಪ್ರಮಾಣದಲ್ಲಿ ಬಾರ್ಲಿ ಹಾಕಿ ಮೂರು ಗಂಟೆಗಳ ಕಾಲ ಚೆನ್ನಾಗಿ ಕುದಿಸಿ ನಿಯಮಿತವಾಗಿ ಸೇವಿಸಬಹುದಾಗಿದೆ.
  • ದೇಹದಲ್ಲಿ ನೀರಿನ ಅಂಶ ಸಾಕಷ್ಟು ಉಳಿಯಲು ನಿಂಬೆಹಣ್ಣು ಮತ್ತು ಮೂಸಂಬಿ ರಸವನ್ನು ಸೇವಿಸಬೇಕು.
  • ಕಪ್ಪು ಜೀರಿಗೆಯ ಕಷಾಯ ಮಾಡಿ ಸೇವಿಸುವುದರಿಂದಲೂ ಈ ಕಾಮಾಲೆ ರೋಗವು ನಿವಾರಣೆಯಾಗುತ್ತದೆ.
  • ಅರಶಿನ ಕಾಯಿಲೆಯಿರುವವರು ಬೇವಿನ ಸೊಪ್ಪನ್ನು ಜ್ಯೂಸ್ ಮಾಡಿ ಸೇವಿಸುವುದು ಪ್ರಯೋಜನಕಾರಿಯಾಗಿದೆ.
  • ತೆಂಗಿನ ನೀರಿನಿಂದ ತಯಾರಿಸಿದ ವಿನೆಗರ್ ಸೇವನೆ ಮಾಡುವುದರಿಂದ ಉರಿಯೂತವನ್ನು ಕಡಿಮೆ ಮಾಡಿ ಯಕೃತ್ತಿನ ಹಾನಿಯ ಅಪಾಯದ ಮಟ್ಟವನ್ನು ತಗ್ಗಿಸುತ್ತದೆ.
  • ಒಂದು ಲೋಟ ಕಬ್ಬಿನ ರಸಕ್ಕೆ ನಿಂಬೆ ರಸವನ್ನು ಬೆರೆಸಿ ಕುಡಿಯುವುದು ಪರಿಣಾಮಕಾರಿ ಎನ್ನಬಹುದು.
  • ದಿನಕ್ಕೆರಡು ಬಾರಿ ಕಬ್ಬಿನ ರಸವನ್ನು ಕುಡಿಯುವುದರಿಂದ ಕಾಮಾಲೆ ರೋಗವನ್ನು ಶಮನವಾಗುತ್ತದೆ.
  •  ಕಾಮಾಲೆ ರೋಗದಿಂದ ವೇಗವಾಗಿ ಚೇತರಿಕೆ ಪಡೆಯಬೇಕೆಂದು ಕೊಂಡರೆ ಆಹಾರ ಕ್ರಮದಲ್ಲಿ 3-4 ಬೆಳ್ಳುಳ್ಳಿಯನ್ನು ಸೇರಿಸಿ ಗುಣ ಮುಖ ಕಾಣುತ್ತೀರಿ.
  • ನೆಲ್ಲಿಕಾಯಿಯ ಕಷಾಯವು ನಿಯಮಿತವಾಗಿ ಸೇವಿಸುವುದರಿಂದ ಕಾಮಾಲೆರೋಗವು ದೂರವಾಗುತ್ತದೆ.
  • ಕಾಫಿ ಮತ್ತು ಗ್ರೀನ್ ಟೀ ಮಿತವಾಗಿ ಸೇವಿಸುವುದರಿಂದ ಲಿವರ್ ನ ಆರೋಗ್ಯವನ್ನು ಸುಧಾರಿಸಿ ರೋಗವನ್ನು ಗುಣ ಪಡಿಸುತ್ತದೆ.
  • ದಿನನಿತ್ಯವು ಟೊಮಾಟೋ ತಿರುಳಿನ ರಸಕ್ಕೆ ಉಪ್ಪು ಮತ್ತು ಸಕ್ಕರೆ ಬೆರೆಸಿ ನಿಯಮಿತವಾಗಿ ಸೇವಿಸುತ್ತ ಬಂದರೆ ಕಾಮಾಲೆ ಶೀಘ್ರ ಗುಣವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us