AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿ ನೀರು ಶವರ್ ಅಥವಾ ತಣ್ಣೀರು ಸ್ನಾನ – ಇವೆರಡರಲ್ಲಿ ಉತ್ತಮ ಆರೋಗ್ಯಕ್ಕೆ ಯಾವುದು ಉತ್ತಮ?

Cold vs Hot Shower: ಸಮಯ ಮತ್ತು ಋತುವನ್ನು ಗಮನದಲ್ಲಿಟ್ಟುಕೊಂಡು ಸ್ನಾನದ ನೀರನ್ನು ಸಹ ನೀವು ಆಯ್ಕೆ ಮಾಡಬಹುದು.

ಬಿಸಿ ನೀರು ಶವರ್ ಅಥವಾ ತಣ್ಣೀರು ಸ್ನಾನ - ಇವೆರಡರಲ್ಲಿ ಉತ್ತಮ ಆರೋಗ್ಯಕ್ಕೆ ಯಾವುದು ಉತ್ತಮ?
ಬಿಸಿ ನೀರು ಶವರ್ ಅಥವಾ ತಣ್ಣೀರು ಸ್ನಾನImage Credit source: waterpik.com
ಸಾಧು ಶ್ರೀನಾಥ್​
|

Updated on: May 27, 2023 | 6:06 AM

Share

ಬಿಸಿ ನೀರು ಶವರ್ (hot water bath) ಅಥವಾ ತಣ್ಣೀರು ಸ್ನಾನ (Cold Shower) ಇವೆರಡರಲ್ಲಿ ಉತ್ತಮ ಆರೋಗ್ಯಕ್ಕೆ ಯಾವುದು ಉತ್ತಮ? ಆಯುರ್ವೇದ ಏನು ಹೇಳುತ್ತದೆ? ಬಿಸಿ ನೀರಿನಿಂದ ಸ್ನಾನ ಮಾಡಬೇಕೋ ಅಥವಾ ತಣ್ಣನೆಯ ನೀರಿನೊಂದಿಗೆ ಸ್ನಾನ ಮಾಡಬೇಕೋ ಎಂಬ ಸಂದೇಹ ಹಲವರಿಗೆ ಇರುತ್ತದೆ. ಕೆಲವರು ತಣ್ಣೀರು ಸ್ನಾನ ಮಾಡಿದರೆ ದೇಹ ಹುರಿಗಟ್ಟುತ್ತದೆ, ಗಟ್ಟಿಯಾಗುತ್ತದೆ, ಸದೃಢವಾಗಿರುತ್ತದೆ. ಕಾಯಿಲೆ ಹತ್ತಿರಕ್ಕೂ ಸುಳಿಯುವುದಿಲ್ಲ ಎನ್ನುತ್ತಾರೆ. ಇನ್ನು ಕೆಲವರು ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ನರಗಳಿಗೆ ಒಳ್ಳೆಯದು ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ತಣ್ಣೀರು ಸ್ನಾನ ಮಾಡುವುದೇ? ಅಥವಾ ಬಿಸಿ ನೀರಿನಿಂದ ಸ್ನಾನ ಮಾಡುವುದೇ? ಯಾವುದು ಉತ್ತಮ ಎಂದು ತಿಳಿದುಕೊಳ್ಳೋಣ… ಆಯುರ್ವೇದದ ಪ್ರಕಾರ, ತಣ್ಣನೆಯ ಅಥವಾ ಬಿಸಿನೀರಿನೊಂದಿಗೆ ಸ್ನಾನ ಮಾಡುವುದು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಇವೆರಡರ ಪ್ರಯೋಜನಗಳೇನು ಎಂದು ತಿಳಿದುಕೊಳ್ಳೋಣ? (Lifestyle News)

– ತಣ್ಣನೆಯ ಶವರ್ ತೆಗೆದುಕೊಳ್ಳುವುದು ನರಗಳನ್ನು ಉತ್ತೇಜಿಸುತ್ತದೆ, ಬೆಳಗ್​​ ಬೆಳಿಗ್ಗೆಯೇ ನಿಮ್ಮ ದೇಹಕ್ಕೆ ಇದು ಶಕ್ತಿಯನ್ನು ನೀಡುತ್ತದೆ. ಆಹ್ಲಾದತೆ ತುಂಬುತ್ತದೆ. ಸೋಮಾರಿತನವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

– ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

– ಪುರುಷರಲ್ಲಿ ಟೆಸ್ಟೋಸ್ಟೆರಾನ್​​ ಅನ್ನು (Testosterone) ಉತ್ತೇಜಿಸುವ ಮೂಲಕ ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸುತ್ತದೆ. ಟೆಸ್ಟೋಸ್ಟೆರಾನ್ ಎಂಬುದು ಪುರುಷ ಲೈಂಗಿಕ ಹಾರ್ಮೋನ್, ಟೆಸ್ಟೋಸ್ಟೆರಾನ್ ಮುಖ್ಯವಾಗಿ ಸೆಕ್ಸ್ ಡ್ರೈವ್‌ಗೆ ಸಂಬಂಧಿಸಿದೆ.

– ಶ್ವಾಸಕೋಶದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. – ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತನ್ಮೂಲಕ ಸೋಂಕು-ವಿರೋಧಿ ಹೋರಾಟದ ಕೋಶಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ.

ಬಿಸಿನೀರು ಸ್ನಾನದ ಪ್ರಯೋಜನಗಳು!

– ಬಿಸಿ ತಾಪಮಾನವು ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಆದ್ದರಿಂದ ಬಿಸಿನೀರಿನ ಸ್ನಾನ ದೇಹವನ್ನು ಶುದ್ಧಗೊಳಿಸುತ್ತದೆ.

– ಸ್ನಾಯು ಟೋನ್ ಸುಧಾರಿಸುತ್ತದೆ. ಇದು ಗಂಟಲಿನ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಸಹ ಸಹಾಯ ಮಾಡುತ್ತದೆ.

– ದೇಹದಲ್ಲಿ ಕಡಿಮೆ ಸಕ್ಕರೆ ಮಟ್ಟವನ್ನು ಉತ್ತೇಜಿಸುತ್ತದೆ, ಇದು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

– ಸ್ಟೀಮ್ ವಾಯುಮಾರ್ಗಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ, ನಿಮ್ಮ ಗಂಟಲು ತೆರೆಯಲು, ಉಸಿರುಕಟ್ಟಿಕೊಳ್ಳುವ ಮೂಗು ಮತ್ತು ಕೆಮ್ಮು ಮತ್ತು ಶೀತ ಬಂದಾಗ ಪ್ರಯೋಜನಕಾರಿಯಾಗಿದೆ.

ಆಯುರ್ವೇದದ ಪ್ರಕಾರ ಯಾವ ನೀರು ಒಳ್ಳೆಯದು:

ಆಯುರ್ವೇದದ ಪ್ರಕಾರ ನೀವು ದೇಹಕ್ಕೆ ಬೆಚ್ಚಗಿನ ನೀರನ್ನು ಮತ್ತು ತಲೆಗೆ ತಣ್ಣನೆಯ ನೀರನ್ನು ಬಳಸಬೇಕು. ಏಕೆಂದರೆ ಕಣ್ಣು ಮತ್ತು ಕೂದಲನ್ನು ಬಿಸಿ ನೀರಿನಿಂದ ತೊಳೆಯುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ನೀರಿನ ತಾಪಮಾನವು ಕೆಲವು ಅಂಶಗಳನ್ನು ಅವಲಂಬಿಸಿರುತ್ತದೆ:

ವಯಸ್ಸಿಗೆ ತಕ್ಕಂತೆ ಯುವಕರು ತಣ್ಣೀರಿನಿಂದ ಸ್ನಾನ ಮಾಡಿದರೆ ಉತ್ತಮ. ವೃದ್ಧರು, ಮಕ್ಕಳು ಬಿಸಿನೀರಿನ ಸ್ನಾನ ಮಾಡುವುದು ಉತ್ತಮ. ಏಕೆಂದರೆ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಅನಾರೋಗ್ಯ ಕಾಡಬಹುದು.

ಸಮಯ, ಹವಾಮಾನ: ಸಮಯ ಮತ್ತು ಋತುವನ್ನು ಗಮನದಲ್ಲಿಟ್ಟುಕೊಂಡು ಸ್ನಾನದ ನೀರನ್ನು ಸಹ ನೀವು ಆಯ್ಕೆ ಮಾಡಬಹುದು. ಉದಾಹರಣೆಗೆ, ಬೆಳಿಗ್ಗೆ ಬೇಗನೆ ತಣ್ಣೀರಿನಿಂದ ಸ್ನಾನ ಮಾಡುವುದು ಉತ್ತಮ. ಆದರೆ ರಾತ್ರಿ ಸ್ನಾನಕ್ಕೆ ಬಿಸಿನೀರು ಉತ್ತಮ. ಅದೇ ರೀತಿ ಚಳಿಯಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದು ಉತ್ತಮ.

ನೀವು ಅಜೀರ್ಣ ಅಥವಾ ಯಕೃತ್ತಿನ ಅಸ್ವಸ್ಥತೆಗಳಂತಹ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ ತಣ್ಣೀರಿನಿಂದ ಸ್ನಾನ ಮಾಡುವುದು ಉತ್ತಮ. ನೀವು ಕಫ ಅಥವಾ ವಾತ ಸಂಬಂಧಿತ ಅಸ್ವಸ್ಥತೆಗಳಿಂದ ಬಳಲುತ್ತಿದ್ದರೆ, ಬಿಸಿನೀರಿನ ಸ್ನಾನ ಒಳ್ಳೆಯದು.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?