AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ವರದಕ್ಷಿಣೆ ಎಂಬ ಅನಿಷ್ಠ ಪದ್ಧತಿ ಹೇಗೆ ಆರಂಭವಾಯಿತು?

ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದರೂ ಇಂದಿಗೂ ನಮ್ಮ ಸಮಾಜದಲ್ಲಿ ವರದಕ್ಷಿಣೆ ಎಂಬ ಅನಿಷ್ಟ ಪಿಡುಗು ಇಂದಿಗೂ ಜೀವಂತವಾಗಿದೆ. ಈ ವರದಕ್ಷಿಣೆಯ ಕಾರಣದಿಂದ ಅದೆಷ್ಟೋ ಹೆಣ್ಣು ಮಕ್ಕಳ ಜೀವ, ಜೀವನ ಹಾಳಾಗಿದೆ. ಅಷ್ಟಕ್ಕೂ ಈ ಅನಿಷ್ಟ ಪದ್ಧತಿ ಭಾರತದಲ್ಲಿ ಆರಂಭವಾದದ್ದು ಹೇಗೆ ಎಂಬುದರ ಕುತೂಹಲಕಾರಿ ಸಂಗತಿಯನ್ನು ತಿಳಿಯಿರಿ.

ಭಾರತದಲ್ಲಿ ವರದಕ್ಷಿಣೆ ಎಂಬ ಅನಿಷ್ಠ ಪದ್ಧತಿ ಹೇಗೆ ಆರಂಭವಾಯಿತು?
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: May 26, 2026 | 4:55 PM

Share

ನಮ್ಮ ಭಾರತದಲ್ಲಿ ವರದಕ್ಷಿಣೆ ಪದ್ಧತಿ (dowry system) ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ಕೊಡುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದರೂ ಸಹ ಇಂದಿಗೂ ಅದೆಷ್ಟೋ ಕಡೆ ವರದಕ್ಷಿಣೆಯೆಂಬ ಅನಿಷ್ಟ ಪಿಡುಗು ಜೀವಂತವಾಗಿದೆ. ಈ ಪಿಡುಗಿಗೆ ಅದೆಷ್ಟೋ ಮುಗ್ಧ ಹೆಣ್ಣು ಮಕ್ಕಳು ಬಲಿಯಾಗಿದ್ದಾರೆ. ಇತ್ತೀಚಿಗಷ್ಟೇ ಭೋಪಾಲ್‌ನ  33 ವರ್ಷದ  ತ್ವಿಷಾ ಶರ್ಮಾ ಹಾಗೂ ಗ್ರೇಟರ್‌ ನೋಯ್ಡದ 24 ವರ್ಷದ ದೀಪಿಕಾ ನಾಗರ್‌ ಎಂಬ ಇಬ್ಬರು ಮಹಿಳೆಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಹೇಳಲಾಗುತ್ತಿದೆ. ಹೀಗೆ ಎಷ್ಟೋ ಹೆಣ್ಣು ಮಕ್ಕಳು ವರದಕ್ಷಿಣೆ ಪಿಡುಗಿಗೆ ಬಲಿಯಾಗಿದ್ದಾರೆ. ಹೆಣ್ಣು ಮಕ್ಕಳ ಜೀವ ಕಸಿಯುತ್ತಿರುವ ಈ ಅನಿಷ್ಟ ಪಿಡುಗು ಪ್ರಾರಂಭವಾದದ್ದು ಹೇಗೆ ಗೊತ್ತಾ? ಈ ಕುರಿತ ಕೂತೂಹಲಕಾರಿ ಮಾಹಿತಿ ಇಲ್ಲಿದೆ.

ಭಾರತದಲ್ಲಿ ವರದಕ್ಷಿಣೆ ಪದ್ಧತಿ ಆರಂಭವಾದ್ದು ಹೇಗೆ?

ವರದಕ್ಷಿಣೆ ಯಾವಾಗ ಪ್ರಾರಂಭವಾಯಿತು ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಈ ಪದ್ಧತಿ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ. ನಾವು ಇತಿಹಾಸವನ್ನು ಹಿಂತಿರುಗಿ ನೋಡಿದರೆ, ಇದು ಆರಂಭದಲ್ಲಿ ಸಾಮಾಜಿಕ ಪಿಡುಗು ಆಗಿರಲಿಲ್ಲ, ಬದಲಿಗೆ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಒಂದು ಮಾರ್ಗವಾಗಿತ್ತು. ಆದರೆ ಕಾಲ ಕ್ರಮೇಣ ವರದಕ್ಷಿಣೆ ಹೆಣ್ಣು ಮಕ್ಕಳ ಜೀವ ಕಸಿಯುವ ಅನಿಷ್ಟ ಪಿಡುಗಾಯಿತು.

ಹೆಣ್ಣು ಮಕ್ಕಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಒಂದು ಮಾರ್ಗ:

ಪ್ರಾಚೀನ ಭಾರತದಲ್ಲಿ ಅಥವಾ ವೈದಿಕ ಕಾಲದಲ್ಲಿ, ಇಂದು ಪ್ರಚಲಿತದಲ್ಲಿರುವ ದುರಾಸೆಯ ವರದಕ್ಷಿಣೆ ವ್ಯವಸ್ಥೆ ಅಸ್ತಿತ್ವದಲ್ಲಿರಲಿಲ್ಲ. ಹಿಂದೂ ಧರ್ಮಗ್ರಂಥಗಳು ಆ ಸಮಯದಲ್ಲಿ ಕನ್ಯಾದಾನ (ಮಗಳನ್ನು ದಾನ) ಜೊತೆಗೆ ದಕ್ಷಿಣೆ (ಉಡುಗೊರೆಗಳು) ನೀಡುವ ಪದ್ಧತಿಯನ್ನು ಉಲ್ಲೇಖಿಸುತ್ತವೆ. ಒಬ್ಬ ಹುಡುಗಿ ಮದುವೆಯಾದಾಗ, ಮದುವೆಯ ನಂತರ ತನ್ನ ತಂದೆಯ ಆಸ್ತಿಯ ಒಂದು ಭಾಗವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುತ್ತಿದ್ದಳು. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಇಡೀ ವ್ಯವಸ್ಥೆಯನ್ನು ಮಹಿಳೆಯರೇ ಮಹಿಳೆಯರಿಗಾಗಿ ನಡೆಸುತ್ತಿದ್ದರು. ಮದುವೆಯ ಸಮಯದಲ್ಲಿ ಪಡೆದ ಹಣ ಮತ್ತು ಅಮೂಲ್ಯ ಉಡುಗೊರೆಗಳನ್ನು ವರ ಅಥವಾ ಅವನ ಕುಟುಂಬಕ್ಕೆ ಅಲ್ಲ, ವಧುವಿಗೆ ನೇರವಾಗಿ ನೀಡಲಾಗುತ್ತಿತ್ತು. ಈ ಮೂಲಕ ಮಹಿಳೆಯರಿಗೆ ಸಮಾಜದಲ್ಲಿ ಆರ್ಥಿಕ ಬೆಂಬಲ, ಸ್ವಾತಂತ್ರ್ಯವನ್ನು ನೀಡಲಾಯಿತು.

ಸಮಾಜದಲ್ಲಿ ಹೆಮ್ಮೆಯ ಸಂಕೇತ:

ಕಾಲ ಬದಲಾಯಿತು, ಮತ್ತು ಮಧ್ಯಯುಗದ ವೇಳೆಗೆ, ಈ ವರದಕ್ಷಿಣೆ ಪದ್ಧತಿ ಸಂಪೂರ್ಣವಾಗಿ ಬದಲಾಯಿತು.  ರಾಜರು, ಚಕ್ರವರ್ತಿಗಳು ಮತ್ತು ಶ್ರೀಮಂತ ಕುಟುಂಬಗಳ ಯುಗದ ವೇಳೆ, ನಿರ್ದಿಷ್ಟವಾಗಿ ರಜಪೂತ ಕುಟುಂಬಗಳು ತಮ್ಮ ಹೆಣ್ಣುಮಕ್ಕಳ ವಿವಾಹದ ಜೊತೆಗೆ ದೊಡ್ಡ ಮೊತ್ತದ ಹಣ, ಆಭರಣಗಳು ಮತ್ತು ಸೇವಕರನ್ನು ವರದಕ್ಷಿಣೆಯ ರೂಪದಲ್ಲಿ ಗಂಡಿನ ಮನೆಗೆ  ಕಳುಹಿಸಲು ಪ್ರಾರಂಭಿಸಿದವು, ಈ ಪದ್ಧತಿಯು ಪ್ರತಿಷ್ಠೆಯ ಸಂಕೇತವಾಗಿ ಬದಲಾಯಿತು. ಈ ವಿವಾಹಗಳಿಂದ ಪಡೆದ ಅಪಾರ ವರದಕ್ಷಿಣೆಯು ರಾಜಮನೆತನದ ಖಜಾನೆಯನ್ನು ಶ್ರೀಮಂತಗೊಳಿಸಿತು ಮತ್ತು ಈ ಪದ್ಧತಿ ಮುಸ್ಲಿಂ ಸಮುದಾಯಕ್ಕೂ ಹರಡಿತು. ತಮ್ಮ ಹೆಣ್ಣುಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಜವಾಬ್ದಾರಿಯಿಂದ ಬೇಗನೆ ಮುಕ್ತರಾಗಲು, ಪೋಷಕರು ದೊಡ್ಡ ಮೊತ್ತದ ವರದಕ್ಷಿಣೆಯನ್ನು ನೀಡಲು ಪ್ರಾರಂಭಿಸಿದರು. ನಂತರದಲ್ಲಿ ವರದಕ್ಷಿಣೆಯೆಂಬ ಪಿಡುಗು ಸಮಾಜದಲ್ಲಿ  ಮತ್ತಷ್ಟು ಬೇರೂರಿತು.

ಇದನ್ನೂ ಓದಿ: ಚೀನಾದ ಜನರು ಜಿರಳೆಗಳನ್ನು ತಿನ್ನೋದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ?

ವರದಕ್ಷಿಣೆ ಸಮಾಜಿಕ ಪಿಡುಗಾಗಿ ಬದಲಾಯಿತು:

ವಿವಾಹಿತ ಮಹಿಳೆಯರಿಗೆ ಆರ್ಥಿಕ ಬೆಂಬಲ ನೀಡುವ ಒಂದು ಮಾರ್ಗವಾಗಿ ಸ್ಥಾಪಿಸಲಾದ ವರದಕ್ಷಿಣೆ ವ್ಯವಸ್ಥೆಯು ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಸಾಮಾಜಿಕ ಪಿಡುಗಾಗಿ ಬದಲಾಯಿತು. ಈ ಸಮಯದಲ್ಲಿ ಬ್ರಿಟಿಷರು ಮಹಿಳೆಯರ ಸ್ಥಾನವನ್ನು ತೀವ್ರವಾಗಿ ದುರ್ಬಲಗೊಳಿಸುವ ಕಾನೂನನ್ನು ಜಾರಿಗೆ ತಂದರು. ಈ ನಿಯಮವು ಮಹಿಳೆಯರು ಯಾವುದೇ ಆಸ್ತಿಯನ್ನು ಹೊಂದುವುದನ್ನು ಸಂಪೂರ್ಣವಾಗಿ ನಿಷೇಧಿಸಿತು. ಪರಿಣಾಮವಾಗಿ, ಮದುವೆಯ ನಂತರ ವಧು ತನ್ನ ಹೆತ್ತವರಿಂದ ಪಡೆದ ಯಾವುದೇ ಹಣ ಅಥವಾ ಆಸ್ತಿಯು ಕಾನೂನುಬದ್ಧವಾಗಿ ಅವಳ ಗಂಡನ ಒಡೆತನಕ್ಕೆ ಹೋಗಲು ಪ್ರಾರಂಭಿಸಿತು. ಇದು ಹಳೆಯ ಸಂಪ್ರದಾಯವನ್ನು ದುರಾಸೆಯ ಅಪಾಯಕಾರಿ ಆಟವಾಗಿ ಪರಿವರ್ತಿಸಿತು. ಇದರ ಬಳಿಕ ವರನ ಕುಟುಂಬಗಳು ತಮ್ಮ ಮನೆಗೆ ಬರುವ  ವಧುವನ್ನು ಸೊಸೆಯಾಗಿ ನೋಡದೆ ಹಣ, ಆಸ್ತಿಯನ್ನು ಕೊಡುವ ವಸ್ತುವಾಗಿ ನೋಡಲು ಪ್ರಾರಂಭಿಸಿದವು. ಹಣ, ಆಸ್ತಿ, ಬಂಗಾರ ಸೇರಿದಂತೆ ದುಬಾರಿ ವಸ್ತುಗಳ ಸಲುವಾಗಿ ವರದಕ್ಷಿಣೆಯ ಹೆಸರಲ್ಲಿ ಹೆಣ್ಣಿಗೆ ಚಿತ್ರಹಿಂಸೆಯನ್ನು ಕೊಡಲು ಪ್ರಾರಂಭಿಸಿದವು.

ಈ ರೀತಿಯಾಗಿ, ಒಂದು ಕಾಲದಲ್ಲಿ ಮಗಳನ್ನು ತನ್ನ ಹೊಸ ಮನೆಯಲ್ಲಿ ಆರ್ಥಿಕವಾಗಿ ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿಡಲು ಪ್ರಾರಂಭಿಸಲಾದ ವರದಕ್ಷಿಣೆ ಪದ್ಧತಿ, ಇಂದು ಹೆಣ್ಣು ಮಕ್ಕಳ ಜೀವ ಕಸಿಯುತ್ತವೆ. 1961 ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಬಳಿಕವೂ ಇಂದಿಗೂ ಆಧುನಿಕ ಸಮಾಜದಲ್ಲಿ ವರದಕ್ಷಿಣೆಯೆಂಬ ಪಿಡುಗು ಜೀವಂತವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ
ಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೂಜೆ: ವಿಡಿಯೋ
ಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೂಜೆ: ವಿಡಿಯೋ
ಸುಪ್ರೀಂಕೋರ್ಟ್​​ ನೋಟಿಸ್ ಬಗ್ಗೆ ರೇವಣ್ಣ ಫಸ್ಟ್​​ ರಿಯಾಕ್ಷನ್​​
ಸುಪ್ರೀಂಕೋರ್ಟ್​​ ನೋಟಿಸ್ ಬಗ್ಗೆ ರೇವಣ್ಣ ಫಸ್ಟ್​​ ರಿಯಾಕ್ಷನ್​​
ಅಂಕೋಲಾದಲ್ಲಿ ಭಾರಿ ಮಳೆ: ಗೋಕರ್ಣ ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ
ಅಂಕೋಲಾದಲ್ಲಿ ಭಾರಿ ಮಳೆ: ಗೋಕರ್ಣ ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ
ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ
ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ