ಪ್ರತಿದಿನ ಬೆಳಿಗ್ಗೆ ಒಂದು ಬೌಲ್ ದಾಳಿಂಬೆ ಸೇವಿಸಿದ್ರೆ ರಕ್ತದಲ್ಲಿ ಈ ಬದಲಾವಣೆ ಖಂಡಿತ
ದಾಳಿಂಬೆ ರಕ್ತದ ಆರೋಗ್ಯ ಒಳ್ಳೆಯ ಹಣ್ಣು, ಇದನ್ನು ಪ್ರತಿದಿನ ಬೆಳಿಗ್ಗೆ ಸೇವನೆ ಮಾಡಬೇಕು. ದಾಳಿಂಬೆ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವ ಮೂಲಕ, ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಮತ್ತು ಅಪಧಮನಿಯ ಪ್ಲೇಕ್ ನಿರ್ಮಾಣವನ್ನು ತಡೆಯುವ ಮೂಲಕ ಹೃದಯದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ದಾಳಿಂಬೆ (Pomegranate) ದೇಹಕ್ಕೆ ಬಹಳಷ್ಟು ಶಕ್ತಿಯನ್ನು ನೀಡುತ್ತದೆ. ರಕ್ತದ ಪರಿಚಲನೆಯಿಂದ ಹಿಡಿದು, ಹೃದಯದ ಆರೋಗ್ಯಕ್ಕೂ ಇದು ಹೆಚ್ಚು ಒಳ್ಳೆಯದು. ದಾಳಿಂಬೆಯ ಉತ್ಕರ್ಷಣ ನಿರೋಧಕ, ವಿಟಮಿನ್ ಮತ್ತು ಪೋಷಕಾಂಶಗಳ ಸಮೃದ್ಧಿಯಾಗಿರುತ್ತದೆ ಎಂದು ಇಂಡಿಯಾ ಎಕ್ಸ್ಪ್ರೆಸ್ ಒಂದು ವರದಿಯನ್ನು ಮಾಡಿದೆ. ಪ್ರತಿದಿನ ಒಂದು ಬೌಲ್ ದಾಳಿಂಬೆ ತಿನ್ನಬೇಕು. ಇದು ರೋಗನಿರೋಧಕ (immunity) ಶಕ್ತಿಯನ್ನು ಹೆಚ್ಚಿಸುತ್ತದೆ, ಚರ್ಮದ ಕಾಂತಿಯನ್ನು ಸುಧಾರಿಸುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಅದರ ಫೈಬರ್ ಮತ್ತು ಪೋಷಕಾಂಶದ ಅಂಶದಿಂದಾಗಿ ಹೃದಯದ ಆರೋಗ್ಯ, ಉರಿಯೂತ ಮತ್ತು ಜೀರ್ಣಕ್ರಿಯೆಯ ಮೇಲೆ ಅದರ ಸಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ.
ದಾಳಿಂಬೆ ಆರೋಗ್ಯಕರ ಹಣ್ಣು ಆಗಿದ್ದು, ಸಮತೋಲಿತ ಈ ಆಹಾರವು ಒಟ್ಟಾರೆ ಯೋಗಕ್ಷೇಮ ಮತ್ತು ರೋಗನಿರೋಧಕ ಶಕ್ತಿಗೆ ನಿರ್ಣಾಯಕವಾಗಿದೆ . ದಾಳಿಂಬೆ ಅತ್ಯಂತ ಆರೋಗ್ಯಕರ ಮತ್ತು ಪೌಷ್ಟಿಕ ಹಣ್ಣುಗಳಲ್ಲಿ ಒಂದಾಗಿದೆ. ದಾಳಿಂಬೆ ಅತ್ಯಂತ ಆರೋಗ್ಯಕರ ಮತ್ತು ಪೌಷ್ಟಿಕ ಹಣ್ಣುಗಳಲ್ಲಿ ಒಂದಾಗಿದೆ. ಆದರೆ ಪ್ರತಿದಿನ ಬೆಳಿಗ್ಗೆ ಅದನ್ನು ಸೇವಿಸುವುದು ಸೂಕ್ತವೇ? ಪ್ರತಿ ದಿನವನ್ನು ಒಂದು ಬೌಲ್ ದಾಳಿಂಬೆಯನ್ನು ಸೇವನೆ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ. ಅದು ಕೂಡ ಬೆಳಿಗ್ಗಿನ ಹೊತ್ತು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ದಾಳಿಂಬೆ ಆಂಟಿಆಕ್ಸಿಡೆಂಟ್ಗಳು, ವಿಟಮಿನ್ಗಳು ಮತ್ತು ಪೋಷಕಾಂಶಗಳ ಶಕ್ತಿಶಾಲಿ ಕೇಂದ್ರವಾಗಿದೆ.
ಇದು ಕರುಳಿಗೆ ಒಳ್ಳೆಯ ಆಹಾರವಾಗಿದೆ. ಇದು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಶೀತ ಮತ್ತು ಸೋಂಕುಗಳನ್ನು ದೂರವಿಡುತ್ತದೆ. ಆಂಟಿಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿರುವ ಇದು ಚರ್ಮದ ಮೇಲೆ ತನ್ನ ಉತ್ತಮ ಪರಿಣಾಮವನ್ನು ಬೀರುತ್ತದೆ. ಜತೆಗೆ ನಾರಿನಂಶ ಹೆಚ್ಚಿರುವುದರಿಂದ ಕರುಳಿಗೆ ಹೆಚ್ಚು ಆರೋಗ್ಯವನ್ನು ನೀಡುತ್ತದೆ. ವಿಶೇಷವಾಗಿ ದಾಳಿಂಬೆಗಳಲ್ಲಿ ಪ್ಯೂನಿಕಾಲಾಜಿನ್ಗಳು ಮತ್ತು ಆಂಥೋಸಯಾನಿನ್ಗಳಿಂದ ತುಂಬಿರುವುದರಿಂದ ದೇಹವನ್ನು ಸ್ವತಂತ್ರ ರಾಡಿಕಲ್ ಹಾನಿ ಮತ್ತು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತವೆ.
ಹೈದರಾಬಾದ್ನ ಯಶೋದಾ ಆಸ್ಪತ್ರೆಗಳ ಸಲಹೆಗಾರ ಜನರಲ್ ಫಿಸಿಶಿಯನ್ ಮತ್ತು ಮಧುಮೇಹ ತಜ್ಞ ಡಾ. ರಂಗ ಸಂತೋಷ್ ಕುಮಾರ್ ಹೆಳುವ ಪ್ರಕಾರ, ಅವುಗಳ ಪಾಲಿಫಿನಾಲ್ಗಳು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ, ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ. ದಾಳಿಂಬೆ ರಸವು ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಅದರ ಉರಿಯೂತ ನಿವಾರಕ ಗುಣಲಕ್ಷಣಗಳಿಂದಾಗಿ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ನ್ಯೂಟ್ರಸಿ ಜೀವನಶೈಲಿಯ ಸಂಸ್ಥಾಪಕಿ ಡಾ. ರೋಹಿಣಿ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಆರೋಗ್ಯಕರ, ಹೊಳೆಯುವ ಚರ್ಮ ಬೇಕಾ? ಈ 5 ಆಹಾರ ಸೇವಿಸಿ
ದಾಳಿಂಬೆ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವ ಮೂಲಕ, ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಮತ್ತು ಅಪಧಮನಿಯ ಪ್ಲೇಕ್ ನಿರ್ಮಾಣವನ್ನು ತಡೆಯುವ ಮೂಲಕ ಹೃದಯದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ವಿಟಮಿನ್ ಸಿ ಮತ್ತು ಕೆ, ಪೊಟ್ಯಾಸಿಯಮ್ ಮತ್ತು ಆಹಾರದ ಫೈಬರ್ ಸೇರಿದಂತೆ ಅಗತ್ಯ ಪೋಷಕಾಂಶಗಳ ಸೇವನೆಯು ನಿಮ್ಮ ಆಹಾರದಲ್ಲಿ ಅತ್ಯಗತ್ಯ.ನೀವು ಬೆಳಿಗ್ಗೆ ಒಂದು ಬಟ್ಟಲು ದಾಳಿಂಬೆಯನ್ನು ಸೇವಿಸಬಹುದು. ನಾರಿನ ಅಂಶವು ಉತ್ತಮ ಜೀರ್ಣಕ್ರಿಯೆಗೆ ಕೊಡುಗೆ ನೀಡುತ್ತದೆ, ಇದು ಮಲಬದ್ಧತೆಗೂ ಪರಹಾರವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ