AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dandruff Problem: ತಲೆಹೊಟ್ಟು, ತುರಿಕೆ ಸಮಸ್ಯೆಯೇ? ಇಲ್ಲಿದೆ ಪರಿಹಾರ

ತಲೆಯ ಹೊಟ್ಟಿನಿಂದಾಗಿ ನಿರಂತರ ತುರಿಕೆಯನ್ನು ಅನುಭವಿಸಬೇಕಾಗುತ್ತದೆ, ಹೇರ್ ಕಲರಿಂಗ್ ಅಥವಾ ಕೂದಲಿನಲ್ಲಿ ಎಣ್ಣೆಯ ಜಿಡ್ಡು ಉಳಿದುಕೊಳ್ಳುವುದು, ಬೆವರಿದಾದ ಆ ಬೆವರಿನಲ್ಲಿ ಧೂಳಿನ ಕಣಗಳು ಸೇರಿಕೊಳ್ಳುವುದರೊಂದಿಗೆ ತಲೆ ಹೊಟ್ಟು ಶುರುವಾಗುತ್ತದೆ.

Dandruff Problem: ತಲೆಹೊಟ್ಟು, ತುರಿಕೆ ಸಮಸ್ಯೆಯೇ? ಇಲ್ಲಿದೆ ಪರಿಹಾರ
Dandruff
TV9 Web
| Updated By: ನಯನಾ ರಾಜೀವ್

Updated on: Jun 30, 2022 | 9:00 AM

Share

ತಲೆಯ ಹೊಟ್ಟಿನಿಂದಾಗಿ ನಿರಂತರ ತುರಿಕೆಯನ್ನು ಅನುಭವಿಸಬೇಕಾಗುತ್ತದೆ, ಹೇರ್ ಕಲರಿಂಗ್ ಅಥವಾ ಕೂದಲಿನಲ್ಲಿ ಎಣ್ಣೆಯ ಜಿಡ್ಡು ಉಳಿದುಕೊಳ್ಳುವುದು, ಬೆವರಿದಾದ ಆ ಬೆವರಿನಲ್ಲಿ ಧೂಳಿನ ಕಣಗಳು ಸೇರಿಕೊಳ್ಳುವುದರೊಂದಿಗೆ ತಲೆ ಹೊಟ್ಟು ಶುರುವಾಗುತ್ತದೆ.

ಕೂದಲಿನ ಬುಡದಲ್ಲಿ ಎಣ್ಣೆ ಇಲ್ಲದೇ ಇದ್ದಾಗ ಕೂಡ ಶಿಲೀಂಧ್ರಗಳ ಸೋಂಕಿನಿಂದ ತಲೆಹೊಟ್ಟಿನ ಸಮಸ್ಯೆ ಕಂಡುಬರುತ್ತದೆ. ತಲೆಹೊಟ್ಟಿನ ಸಮಸ್ಯೆಗೆ ನೀವು ಮನೆಯಲ್ಲಿಯೇ ಕೆಲವೊಂದು ಮನೆಮದ್ದುಗಳನ್ನು ಪಾಲಿಸಬಹುದಾಗಿದೆ. ಆದರೆ ಈ ಮನೆಮದ್ದುಗಳ ಬಳಕೆಯನ್ನು ನೀವು ನಿಯಮಿತವಾಗಿ ಪಾಲಿಸಬೇಕು.

ಆಪಲ್ ಸೈಡರ್ ವಿನೆಗರ್: ಆಲ್ಕಲೈನ್ ವಿನೆಗರ್ ಅಲ್ಲಿರುವ ಆಸಿಡಿಕ್ ಅಂಶವು ವಿನೆಗರ್ ಅನ್ನು ಕೂದಲಿಗೆ ಹಾಕಿ ಮಸಾಜ್ ಮಾಡುವುದರಿಂದ ಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ತೆಂಗಿನ ಎಣ್ಣೆ: ತೆಂಗಿನೆಣ್ಣೆಯಲ್ಲಿ ನೈಸರ್ಗಿಕ ಅಂಶಗಳಿದ್ದು ಇದು ತುರಿಕೆ ಹಾಗೂ ಹೊಟ್ಟನ್ನು ಕಡಿಮೆ ಮಾಡುತ್ತದೆ. ತೆಂಗಿನೆಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಅದರಲ್ಲಿ ಹತ್ತಿಯನ್ನು ಅದ್ದಿ ಹತ್ತಿ ಮೂಲಕ ಕೂದಲಿಗೆ ಹಚ್ಚಿ.

ಬೇಕಿಂಗ್ ಸೋಡಾ: ಬೇಕಿಂಗ್ ಸೋಡಾದ ಜತೆಗೆ ನೀರು ಬೆರೆಸಿ ಕೂದಲಿಗೆ ಹಚ್ಚಿ 15 ನಿಮಿಷಗಳನ್ನು ಬಿಟ್ಟು ಕೂದಲು ತೊಳೆಯುವುದರಿಂದ ಹೊಟ್ಟಿನ ಸಮಸ್ಯೆ ನಿವಾರಣೆಯಾಗಲಿದೆ.

ಯೋಗರ್ಟ್​: ಕೋಲ್ಡ್​ ಯೋಗರ್ಟ್​ ಅನ್ನು ಕೂದಲಿಗೆ ಹಚ್ಚುವುದರಿಂದ ಹೊಟ್ಟಿನ ಸಮಸ್ಯೆ ಕಡಿಮೆಯಾಗಲಿದೆ.

ಜೇನುತುಪ್ಪ: ಜೇನು ತುಪ್ಪದಲ್ಲಿ ಆಂಟಿ ಬಯಾಟಿಕ್ಸ್ ಇರುವ ಕಾರಣ ಬ್ಯಾಕ್ಟೀರಿಯಾದಿಂದ ನಿಮ್ಮ ಕೂದಲನ್ನು ದೂರಿಇರಿಸಬಲ್ಲದು.

ನಿಂಬೆ ರಸ: ನಿಂಬೆ ರಸದಲ್ಲಿರುವ ಆ್ಯಸಿಡಿಟಿ ಅಂಶದಿಂದ ತುರಿಕೆ ಕಸಿಮೆಯಾಗಲಿದೆ. ಕೂದಲಿಗೆ ಹಚ್ಚಿ 10 ನಿಮಿಷ ಹಾಗೆಯೇ ಬಿಟ್ಟು ನಂತರ ಶ್ಯಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನ ಬಳಸಿ.

ಲೋಳೆಸರ: ಲೋಳೆಸರ ಅಥವಾ ಅಲೋವೆರಾ ನೈಸರ್ಗಿಕ ತಂಪಿನ ಗುಣಗಳನ್ನು ಹೊಂದಿದ್ದು ಇದು ತುರಿಕೆಯ ನೆತ್ತಿಯನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಅಲೊವೇರಾ ಜೆಲ್ ತೆಗೆದುಕೊಂಡು ಕೂದಲಿನ ಬುಡಕ್ಕೆ ನೆತ್ತಿಗೆ ಹಚ್ಚಿ ಹಾಗೂ 15-20 ನಿಮಿಷ ಹಾಗೆಯೇ ಬಿಡಿ. ಬಳಿಕ ತಲೆ ಸ್ನಾನ ಮಾಡಿ

ಈರುಳ್ಳಿ ರಸ: ಈರುಳ್ಳಿಯು ಆ್ಯಂಟಿಮೈಕ್ರೋಬಿಯಲ್‌ ಅಂಶಗಳು ಹೊಟ್ಟನ್ನು ಕಡಿಮೆ ಮಾಡುತ್ತವೆ. ರಸವನ್ನು ಕೂದಲಿಗೆ ಪೂರ್ತಿಯಾಗಿ ಹಚ್ಚಿ 20 ನಿಮಿಷ ಬಿಡಿ. ನಂತರ ಮೃದು ಶ್ಯಾಂಪೂವಿನಿಂದ ತಲೆಸ್ನಾನ ಮಾಡಿ.

ಈ ಮೇಲಿನ ಮಾಹಿತಿಯು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು