AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Hacks: ಸಾಬೂನಿನ ಉಳಿದ ತುಂಡುಗಳನ್ನು ಈ ರೀತಿ ಉಪಯೋಗಿಸಿ

ದೇಹದ ಅಂದದ ಜೊತೆಗೆ ಸ್ವಚ್ಛತೆಯನ್ನು ಕಾಪಾಡಲು ಬಹಳ ದುಬಾರಿ ಸಾಬೂನುಗಳನ್ನು ಖರೀದಿಸಿ ಅವುಗಳನ್ನು ಉಪಯೋಗ ಮಾಡುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿಯೂ ಅನೇಕ ರೀತಿಯ ಸಾಬೂನುಗಳು ಬಂದಿದ್ದು, ಆಯ್ಕೆಗಳು ಹೆಚ್ಚಾಗಿವೆ. ಜೊತೆಗೆ ಸಾಬೂನುಗಳನ್ನು ಬಳಸುವವರ ಸಂಖ್ಯೆಯೂ ಅಧಿಕವಾಗಿದೆ. ಆದರೆ ಎಷ್ಟೇ ಒಳ್ಳೆಯ ಸಾಬೂನುಗಳನ್ನೂ ಖರೀದಿಸಿ ತಂದರೂ, ಸ್ವಲ್ಪ ಸಮಯ ಕಳೆದ ನಂತರ ಸಾಬೂನು ತುಂಡುಗಳು ಉಳಿಯುವುದು ಸಾಮಾನ್ಯವಾಗಿದೆ. ಈ ಸಾಬೂನು ತುಂಡುಗಳು ಚಿಕ್ಕದಾದ ಮೇಲೆ ಕೆಳಗೆ ಬಿದ್ದು ಹಾಳಾಗುತ್ತದೆ. ಅಲ್ಲದೆ ಇದನ್ನು ಎಸೆಯುವ ಬದಲು ವಿವಿಧ ರೀತಿಯಲ್ಲಿ ಬಳಸಬಹುದು. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮಗೆ ಬಂದರೆ ಇಲ್ಲಿದೆ ಉತ್ತರ.

Kitchen Hacks: ಸಾಬೂನಿನ ಉಳಿದ ತುಂಡುಗಳನ್ನು ಈ ರೀತಿ ಉಪಯೋಗಿಸಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 21, 2024 | 4:58 PM

Share

ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಹಾಗಾಗಿ ದೇಹದ ಅಂದದ ಜೊತೆಗೆ ಸ್ವಚ್ಛತೆಯನ್ನು ಕಾಪಾಡಲು ಬಹಳ ದುಬಾರಿ ಸಾಬೂನುಗಳನ್ನು ಖರೀದಿಸಿ ಅವುಗಳನ್ನು ಉಪಯೋಗ ಮಾಡುತ್ತಿದ್ದೇವೆ. ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿಯೂ ಅನೇಕ ರೀತಿಯ ಸಾಬೂನುಗಳು ಬಂದಿದ್ದು, ಆಯ್ಕೆಗಳು ಹೆಚ್ಚಾಗಿವೆ. ಜೊತೆಗೆ ಸಾಬೂನುಗಳನ್ನು ಬಳಸುವವರ ಸಂಖ್ಯೆಯೂ ಅಧಿಕವಾಗಿದೆ. ಆದರೆ ಎಷ್ಟೇ ಒಳ್ಳೆಯ ಸಾಬೂನುಗಳನ್ನೂ ಖರೀದಿಸಿ ತಂದರೂ, ಸ್ವಲ್ಪ ಸಮಯ ಕಳೆದ ನಂತರ ಸಾಬೂನು ತುಂಡುಗಳು ಉಳಿಯುವುದು ಸಾಮಾನ್ಯವಾಗಿದೆ. ಈ ಸಾಬೂನು ತುಂಡುಗಳು ಚಿಕ್ಕದಾದ ಮೇಲೆ ಕೆಳಗೆ ಬಿದ್ದು ಹಾಳಾಗುತ್ತದೆ. ಅಲ್ಲದೆ ಇದನ್ನು ಎಸೆಯುವ ಬದಲು ವಿವಿಧ ರೀತಿಯಲ್ಲಿ ಬಳಸಬಹುದು. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮಗೆ ಬಂದರೆ ಇಲ್ಲಿದೆ ಉತ್ತರ.

  • ನಿಮ್ಮ ಮನೆಯ ಬಾಗಿಲು ಮರದ್ದಾದರೆ ಕೆಲವು ಬಾರಿ ಅವುಗಳನ್ನು ಹಾಕಿ, ತೆಗೆಯುವಾಗ ಶಬ್ದ ಬರುತ್ತದೆ. ಆಗ ನೀವು ಡೋರ್ ಸೈಡರ್ ಗಳಿಗೆ ಉಳಿದ ಈ ಸಾಬೂನು ತುಂಡುಗಳನ್ನು ಸರಿಯಾಗಿ ಹಚ್ಚಿರಿ. ಈ ರೀತಿ ಮಾಡಿದರೆ ಬಾಗಿಲಿನಿಂದ ಶಬ್ದ ಬರುವುದಿಲ್ಲ.
  • ಕೆಲವೊಮ್ಮೆ ವಾರ್ಡ್ ರೋಬ್ ಅಥವಾ ಕಪಾಟುಗಳಿಂದ ಕೆಟ್ಟ ವಾಸನೆ ಬರುತ್ತದೆ. ಅಲ್ಲದೆ ತೊಳೆಯುವ ಬಟ್ಟೆಯನ್ನು ಹಾಕಿಡುವ ಬ್ಯಾಗ್ ನಲ್ಲಿಯೂ, ಜೊತೆಗೆ ಇತರ ಶೆಲ್ಫ್ ಗಳಿಂದಲೂ ವಾಸನೆ ಬರುತ್ತದೆ. ಇದನ್ನು ತಡೆಯಲು ಫ್ರೆಶನರ್ ಗಳನ್ನು ಬಳಸುವ ಬದಲು ಉಳಿದಿರುವ ಸಾಬೂನು ತುಂಡುಗಳನ್ನು ಟಿಶ್ಯೂ ಪೇಪರ್ ಅಥವಾ ಬಟ್ಟೆಯಲ್ಲಿ ಕಟ್ಟಿ ವಾಸನೆ ಬರುವ ಜಾಗದಲ್ಲಿ ಇಡುವುದು ಉತ್ತಮ.
  • ಜಾಕೆಟ್, ಬ್ಯಾಗ್, ಪ್ಯಾಂಟ್ ಜಿಪ್ ಗಳು ಸರಿಯಾಗಿ ಹಾಕಲು ಅಥವಾ ತೆಗೆಯಲು ಬರದಿದ್ದಾಗ ಈ ಉಳಿದ ಸಾಬೂನಿನ ತುಂಡುಗಳು ಕೆಲಸಕ್ಕೆ ಬರುತ್ತದೆ. ಕೆಲವೊಮ್ಮೆ ಜಿಪ್ ಗಳು ತುಂಬಾ ಗಟ್ಟಿಯಾಗಿರುತ್ತದೆ ಅವುಗಳನ್ನು ಎಳೆಯಲು ಎಷ್ಟೇ ಬಲ ಹಾಕಿದರೂ ಸಾಕಾಗುವುದಿಲ್ಲ. ಆಗ ಈ ಉಳಿದ ಸಾಬೂನನ್ನು ಅವುಗಳ ಮೇಲೆ ಹಚ್ಚಿದರೆ ಯಾವುದೇ ರೀತಿಯ ಜಿಪ್ ಸಮಸ್ಯೆ ಇರುವುದಿಲ್ಲ.
  • ಮನೆಯ ಅಥವಾ ಗೇಟ್ ನ ಬೀಗಗಳು ಹಳೆಯದಾಗಿದ್ದಾಗ, ಅವುಗಳನ್ನು ತೆರೆಯುವುದು ಮತ್ತು ಲಾಕ್ ಮಾಡುವುದು ತುಂಬಾ ಕಷ್ಟವಾಗುತ್ತದೆ. ನೀವು ಅವುಗಳನ್ನು ಸುಲಭವಾಗಿ ತೆರೆಯಬೇಕಾದರೆ ನಿಮ್ಮ ಶಕ್ತಿಯನ್ನು ಬಳಸುವ ಬದಲು ಅದಕ್ಕೆ ಸಾಬೂನನ್ನು ಹಚ್ಚುವುದರಿಂದ ಲಾಕ್ ಸುಲಭವಾಗಿ ತೆರೆಯುತ್ತದೆ.

(ಸೂಚನೆ: ಅಂತರ್ಜಾಲದಲ್ಲಿ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ. ಮುಂದಿನ ಯಾವುದೇ ಪರಿಣಾಮಗಳಿಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ.)

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಉತ್ತರ ಪ್ರದೇಶದ ಬುಲಂದ್‌ಶಹರ್ ಕಾರ್ಖಾನೆಯಲ್ಲಿ ಬೆಂಕಿ ದುರಂತ
ಉತ್ತರ ಪ್ರದೇಶದ ಬುಲಂದ್‌ಶಹರ್ ಕಾರ್ಖಾನೆಯಲ್ಲಿ ಬೆಂಕಿ ದುರಂತ
ಪ್ರಪೋಸಲ್ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಪ್ರೇಮಿಯಿಂದ ಬಾಂಬ್ ದಾಳಿ
ಪ್ರಪೋಸಲ್ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಪ್ರೇಮಿಯಿಂದ ಬಾಂಬ್ ದಾಳಿ
ಈಗ ಸ್ವಲ್ಪ ಕನ್ನಡ ಬರುತ್ತೆ, ಮುಂದಿನ ಸಲ ಜಾಸ್ತಿ ಮಾತಾಡುವೆ: ರಾಮ್ ಚರಣ್
ಈಗ ಸ್ವಲ್ಪ ಕನ್ನಡ ಬರುತ್ತೆ, ಮುಂದಿನ ಸಲ ಜಾಸ್ತಿ ಮಾತಾಡುವೆ: ರಾಮ್ ಚರಣ್
ಗುಲ್ಮಾರ್ಗ್‌ನಲ್ಲಿ ಆಕಾಶದ ಮಧ್ಯೆ ಸಿಲುಕಿದ 300 ಪ್ರವಾಸಿಗರು!
ಗುಲ್ಮಾರ್ಗ್‌ನಲ್ಲಿ ಆಕಾಶದ ಮಧ್ಯೆ ಸಿಲುಕಿದ 300 ಪ್ರವಾಸಿಗರು!
ಧರ್ಮೇಂದ್ರ ಪರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ನಟಿ ಹೇಮಾ ಮಾಲಿನಿ
ಧರ್ಮೇಂದ್ರ ಪರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ನಟಿ ಹೇಮಾ ಮಾಲಿನಿ
ಕೊಯಮತ್ತೂರು ಬಾಲಕಿ ಹತ್ಯೆ ಕುರಿತ ಸುದ್ದಿಗೋಷ್ಠಿಯಲ್ಲಿ ನಕ್ಕ ಮಹಿಳಾ ಪೊಲೀಸ್!
ಕೊಯಮತ್ತೂರು ಬಾಲಕಿ ಹತ್ಯೆ ಕುರಿತ ಸುದ್ದಿಗೋಷ್ಠಿಯಲ್ಲಿ ನಕ್ಕ ಮಹಿಳಾ ಪೊಲೀಸ್!
SIR ಸಭೆಗೆ ಗೈರಾದ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರಿಗೆ ‘ಕೈ’ ಕೊಕ್
SIR ಸಭೆಗೆ ಗೈರಾದ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರಿಗೆ ‘ಕೈ’ ಕೊಕ್
ಶಿವಮೊಗ್ಗ KSCA ಮೈದಾನದಲ್ಲಿ ಕ್ರಿಕೆಟ್ ಆಟಗಾರ ಅಕ್ಷಯ್ ಅಂತಿಮ ದರ್ಶನ
ಶಿವಮೊಗ್ಗ KSCA ಮೈದಾನದಲ್ಲಿ ಕ್ರಿಕೆಟ್ ಆಟಗಾರ ಅಕ್ಷಯ್ ಅಂತಿಮ ದರ್ಶನ
ಒಂದೇ ನೋಂದಣಿಯಲ್ಲಿ 2 ಮಕ್ಕಳಿಗೆ ಜನನ ಪ್ರಮಾಣಪತ್ರ: ಲೋಕಾ ದಾಳಿ
ಒಂದೇ ನೋಂದಣಿಯಲ್ಲಿ 2 ಮಕ್ಕಳಿಗೆ ಜನನ ಪ್ರಮಾಣಪತ್ರ: ಲೋಕಾ ದಾಳಿ
ಪೊಲೀಸ್ ಠಾಣೆ ಮುಂದೆಯೇ ಬೆಂಗಳೂರು 'ಪಂಕ್ಚರ್ ಮಾಫಿಯಾ' ಆಟ!
ಪೊಲೀಸ್ ಠಾಣೆ ಮುಂದೆಯೇ ಬೆಂಗಳೂರು 'ಪಂಕ್ಚರ್ ಮಾಫಿಯಾ' ಆಟ!