AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ

ನೀವು 2 ಲಕ್ಷ ರೂ ವಿಮಾ ಮೊತ್ತದ ಪಾಲಿಸಿಯನ್ನು ತೆಗೆದುಕೊಂಡರೆ, ಮೊದಲ ಐದು ವರ್ಷಗಳಲ್ಲಿ ವಿಮಾ ಮೊತ್ತದ ವ್ಯಾಪ್ತಿ 2 ಲಕ್ಷ, 6 ರಿಂದ 10 ವರ್ಷಗಳವರೆಗೆ 2.50 ಲಕ್ಷ, 11 ರಿಂದ 15 ವರ್ಷಗಳವರೆಗೆ 3 ಲಕ್ಷ ಮತ್ತು 16 ರಿಂದ 20 ರವರೆಗೆ ವರ್ಷಗಳ ವ್ಯಾಪ್ತಿ 4 ಲಕ್ಷ ರೂ. ಆಗಿರುತ್ತದೆ.

LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ
LIC
TV9 Web
| Edited By: |

Updated on: Jul 31, 2021 | 5:57 PM

Share

ನೀವು ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ (LIC)ನ ಯಾವುದಾದರೂ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಜೀವನ್ ಪ್ರಗತಿ ಸ್ಕೀಮ್ (Jeevan Pragati Scheme)​ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಈ ಪಾಲಿಸಿಯಲ್ಲಿ ನೀವು ದಿನಕ್ಕೆ 200 ರೂ.ಗಳನ್ನು ಹೂಡಿಕೆ ಮಾಡಿದರೆ ಸಾಕು. ಆ ಬಳಿಕ 28 ಲಕ್ಷ ರೂಪಾಯಿಯಾಗಿ ಹಿಂಪಡೆಯಬಹುದು. ಅಷ್ಟೇ ಅಲ್ಲದೆ ಈ ಪಾಲಿಸಿಯ ಮತ್ತೊಂದು ವಿಶೇಷತೆಯೆಂದರೆ ಇದರಲ್ಲಿ ನೀವು 15,000 ಕ್ಕಿಂತ ಹೆಚ್ಚು ಪಿಂಚಣಿಯನ್ನು ಸಹ ಪಡೆಯಬಹುದು. ಹಾಗಿದ್ರೆ ಈ ವಿಶೇಷ ಯೋಜನೆಯ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ…

LIC ಜೀವನ್ ಪ್ರಗತಿ ಯೋಜನೆ (Jeevan Pragati Scheme): LIC ಯ ಜೀವನ್ ಪ್ರಗತಿ ಯೋಜನೆ ಪಾಲಿಸಿಯಲ್ಲಿ ನೀವು ಎಷ್ಟು ವಿಮಾ ಮೊತ್ತವನ್ನು ಪಡೆಯುತ್ತೀರಿ ಅದು ಅಂತ್ಯದ ವೇಳೆಗೆ ಸುಮಾರು ಎರಡು ಪಟ್ಟು ಹೆಚ್ಚಾಗುತ್ತದೆ. ಇದೊಂದು ನಾನ್​ ಲಿಂಕ್ ಪಾಲಿಸಿ ಆಗಿರುವುದರಿಂದ ಹೆಚ್ಚಿನ ಪ್ರಯೋಜನ ಸಿಗುತ್ತೆ.

ಈ ಪಾಲಿಸಿಯ ಪ್ರಯೋಜನಗಳೇನು? ಅಲ್ಪಾವಧಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ಪಾಲಿಸಿದಾರನು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಅವುಗಳಲ್ಲಿ ಮುಖ್ಯವಾದವು ಈ ಕೆಳಗಿನಂತಿವೆ.

>> ಇದು ಒಂದು ದತ್ತಿ ಯೋಜನೆಯಾಗಿದ್ದು, ಇಲ್ಲಿ ಹೂಡಿಕೆ ಮಾಡುವುದು ಹೆಚ್ಚು ಭದ್ರತೆ ಹಾಗೂ ಇದು ಹೆಚ್ಚಿನ ಉಳಿತಾಯವನ್ನು ಒದಗಿಸುತ್ತದೆ. >> ಪಾಲಿಸಿಯಲ್ಲಿ ರಿಸ್ಕ್ ಕವರ್ ಪ್ರತಿ ಐದು ವರ್ಷಗಳಿಗೊಮ್ಮೆ ಹೆಚ್ಚಾಗುತ್ತದೆ. >> ಮೊದಲ ಐದು ವರ್ಷಗಳ ವಿಮಾ ಮೊತ್ತವು ಒಂದೇ ಆಗಿರುತ್ತದೆ. >> ಇದರ ನಂತರ 6 ರಿಂದ 10 ವರ್ಷಗಳೊಳಗೆ ಇದು 25% ರಿಂದ 125% ಗೆ ಹೆಚ್ಚಾಗುತ್ತದೆ. >> 11 ರಿಂದ 15 ವರ್ಷಗಳವರೆಗೆ ವಿಮಾ ಮೊತ್ತವು 150% ಆಗುತ್ತದೆ. >> 16 ರಿಂದ 20 ವರ್ಷಗಳವರೆಗೆ ವಿಮಾ ಮೊತ್ತವು ಮೂಲ ವಿಮೆಯ 200% ಆಗುತ್ತದೆ.

ಅಕಾಲಿಕ ಮರಣವಾದ್ರೆ? ಈ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರು ಮರಣ ಹೊಂದಿದರೆ ಸಾವಿನ ಮೇಲೆ ವಿಮಾ ಮೊತ್ತ + ಸರಳ ರಿವರ್ಷನರಿ ಬೋನಸ್ (ಠೇವಣಿ ಬೋನಸ್) + ಅಂತಿಮ ಸೇರ್ಪಡೆ ಬೋನಸ್ (ಯಾವುದಾದರೂ ಇದ್ದರೆ) ಆತನ/ಅವಳ ನಾಮಿನಿಗೆ ಪಾವತಿಸಲಾಗುತ್ತದೆ.

ಅಂದರೆ, ನೀವು 2 ಲಕ್ಷ ರೂ ವಿಮಾ ಮೊತ್ತದ ಪಾಲಿಸಿಯನ್ನು ತೆಗೆದುಕೊಂಡರೆ, ಮೊದಲ ಐದು ವರ್ಷಗಳಲ್ಲಿ ವಿಮಾ ಮೊತ್ತದ ವ್ಯಾಪ್ತಿ 2 ಲಕ್ಷ, 6 ರಿಂದ 10 ವರ್ಷಗಳವರೆಗೆ 2.50 ಲಕ್ಷ, 11 ರಿಂದ 15 ವರ್ಷಗಳವರೆಗೆ 3 ಲಕ್ಷ ಮತ್ತು 16 ರಿಂದ 20 ರವರೆಗೆ ವರ್ಷಗಳ ವ್ಯಾಪ್ತಿ 4 ಲಕ್ಷ ರೂ. ಆಗಿರುತ್ತದೆ. ಅಂದರೆ ವರ್ಷ ಕಳೆಯುತ್ತಿದ್ದಂತೆ ವಿಮಾ ಮೊತ್ತವು ದುಪ್ಪಟ್ಟಾಗುತ್ತದೆ. ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯ ಕೂಡ ಈ ಪಾಲಿಸಿಯ ಅಡಿಯಲ್ಲಿ ಬರುತ್ತದೆ. ಇದಕ್ಕಾಗಿ ನೀವು ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

28 ಲಕ್ಷ ರೂ ಸಿಗಲಿದೆ: ಈ ಯೋಜನೆಯಡಿಯಲ್ಲಿ, 20 ವರ್ಷಗಳ ನಂತರ 15 ಲಕ್ಷಗಳ ಮೊತ್ತದ ವಿಮಾ ಮೊತ್ತ ಮತ್ತು 200 ರೂಗಳ ದೈನಂದಿನ ಹೂಡಿಕೆಯ ಮೇಲೆ ನೀವು ಸುಮಾರು 28 ಲಕ್ಷ ರೂಪಾಯಿಗಳನ್ನು ಪಡೆಯಬಹುದು.

ಎಲ್ಐಸಿ ಜೀವನ್ ಪ್ರಗತಿ ಯೋಜನೆಯ ನಿಯಮಗಳು: ವಯಸ್ಸು: 12 ರಿಂದ 45 ವರ್ಷಗಳಿನವರು ಈ ಪಾಲಿಸಿ ಪಡೆಯಬಹುದು. ಪಾಲಿಸಿ ಅವಧಿ: 12 ರಿಂದ 20 ವರ್ಷಗಳು ಗರಿಷ್ಠ ಮೆಚ್ಯೂರಿಟಿ ವಯಸ್ಸು: 65 ವರ್ಷಗಳು ಕವರ್ ಮೊತ್ತ ಕನಿಷ್ಠ ರೂ .1,50,000 ಗರಿಷ್ಠ ಯಾವುದೇ ಮಿತಿ ಇಲ್ಲ

ಎಲ್‌ಐಸಿ ಜೀವನ್ ಪ್ರಗತಿ ಯೋಜನೆಯ ಸೆರೆಂಡರ್ ವ್ಯಾಲ್ಯೂ: ಪಾಲಿಸಿದಾರರು 3 ವರ್ಷಗಳ ಕಾಲ ಪ್ರೀಮಿಯಂ ಪಾವತಿಸಿದ್ದರೆ ಅವರು ಪಾಲಿಸಿಯನ್ನು ಒಪ್ಪಿಸಬಹುದು ಮತ್ತು ಸೆರೆಂಡರ್ ಮೌಲ್ಯವನ್ನು ಪಡೆಯಬಹುದು.

ಇದನ್ನೂ ಓದಿ: ಕಡಿಮೆ ಬೆಲೆಯ ಪವರ್​ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜ್​ ಮಾಡಬಹುದು

ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

( lic jeevan pragati yojana invest 200 rupees daily and get 28 lakh )

Follow Us
TV9 Web
TV9 Web

TV9 Kannada

Read More
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು