Loneliness Health Issues: ಒಂಟಿತನದಿಂದ ಈ 5 ಗಂಭೀರ ಕಾಯಿಲೆ ಬರಬಹುದು

ನೀವು ಒಂಟಿಯಾಗಿದ್ದೀರಾ ಅಥವಾ ಒಂಟಿಯಾಗಿರಲು ಇಷ್ಟಪಡುತ್ತೀರಾ? ಜನರ ಜೊತೆ ಸಾಮಾಜಿಕವಾಗಿ ಸಾಕಷ್ಟು ಬೆರೆಯದಿರುವುದು ಅಥವಾ ಒಂಟಿತನವು ಈ ಮಾರಣಾಂತಿಕ ಕಾಯಿಲೆಯ ಅಪಾಯವನ್ನುಂಟುಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

Loneliness Health Issues: ಒಂಟಿತನದಿಂದ ಈ 5 ಗಂಭೀರ ಕಾಯಿಲೆ ಬರಬಹುದು
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 23, 2023 | 2:45 PM

ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯ ಪರಸ್ಪರ ಸಂಬಂಧವನ್ನು ಹೊಂದಿವೆ ಎಂದು ಹೇಳುವಂತೆ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯದಿರುವುದು ಅಥವಾ ಒಂಟಿಯಾಗಿರಲು ಬಯಸುವುದು ಹಲವಾರು ರೋಗಗಳನ್ನು ಪ್ರಚೋದಿಸಬಹುದು ಎಂದು ತಜ್ಞರು ಹೇಳುತ್ತಾರೆ. ಅಧ್ಯಯನಗಳ ಪ್ರಕಾರ ಒಂಟಿತನವು ಅಕಾಲಿಕ ಮರಣಕ್ಕೆ ಕಾರಣವಾಗಬಹುದು. ಇದು ಮಾತ್ರವಲ್ಲದೆ ಒಂಟಿತನವು ಹೃದ್ರೋಗ, ಖಿನ್ನತೆ, ಆತಂಕ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮುಂತಾದ ಕಾಯಿಲೆಗಳಿಗೂ ಕಾರಣವಾಗಬಹುದು.ಒಂಟಿತನವು ಅನೇಕ ರೋಗಗಳ ಕಾರಣ ಮತ್ತು ಲಕ್ಷಣವಾಗಿರಬಹುದು. ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆಸ್ಪತ್ರೆಗಳಿಗೆ ಭೇಟಿ ನೀಡುವ ಅನೇಕ ರೋಗಿಗಳು ಮನೋವಿಕೃತತೆಯಿಂದ ಬಳಲುತ್ತಿದ್ದಾರೆ. ಇದರರ್ಥ ಅವರಿಗೆ ಯಾವುದೇ ದೈಹಿಕ ಸಮಸ್ಯೆ ಅಥವಾ ಹಾನಿ ಆಗಿಲ್ಲ. ಬದಲಾಗಿ ಅವರಿಗೆ ಹೆಚ್ಚು ಮಾನಸಿಕ ಹಾನಿಯಾಗಿರುತ್ತದೆ. ಸಾಮಾಜಿಕವಾಗಿ, ಭಾವನಾತ್ಮಕವಾಗಿ ಈ ಮುಂತಾದ ಕಾರಣಗಳಿಂದ ಒಂಟಿತನ ಉಂಟಾಗಬಹುದು” ಎಂದು ರೂಬಿ ಹಾಲ್ ಕ್ಲಿನಿಕ್‌ನ ಮನಶಾಸ್ತ್ರಜ್ಞ ಸಲಹೆಗಾರ ಡಾ. ರುಚಾ ಶ್ರೀಖಂಡೆ ಹೇಳುತ್ತಾರೆ.

ಆರ್ಥಿಕ ಸಮಸ್ಯೆಗಳು, ಪ್ರಿತಿಪಾತ್ರರ ಸಾವು ಅಥವಾ ಅವರಿಂದ ಬೇರ್ಪಡುವಿಕೆ, ಮಾನಸಿಕ ಆಘಾತ ಮುಂತಾಂದವುಗಳಿಂದ ಒಂಟಿತನ ಉಂಟಾಗುತ್ತದೆ ಎಂದು ಡಾ. ಶ್ರೀಖಂಡೆ ಹೇಳುತ್ತಾರೆ.

ಒಂಟಿತನದಿಂದಾಗಿ ಉಂಟಾಗಬಹುದದಾದ ಆರೋಗ್ಯ ಸಮಸ್ಯೆಗಳು:

ಡಿಸ್ಟೆಮಿಯಾ ಅಥವಾ ನಿರಂತರ ಖಿನ್ನತೆ: ಇದು ಒಂಟಿತನದಿಂದ ಉಂಟಾಗಬಹುದಾದ ಪ್ರಮುಖ ಅಸ್ವಸ್ಥತೆಗಳಲ್ಲಿ ಒಂದಾಗಿದೆ. ಇದರಿಂದ ಬಳಲುತ್ತಿರುವ ವ್ಯಕ್ತಿಗೆ ದೈಹಿಕ ಕಾಯಿಲೆ ಇಲ್ಲದಿದ್ದರೂ ಅವನು ಯಾವಾಗಲೂ ಯಾರೋಂದಿಗೂ ಬೆರೆಯದೆ ಒಂಟಿಯಾಗಿರಲು ಬಯಸುತ್ತಾನೆ.

ಸಾಮಾಜಿಕ ಆತಂಕ ಅಥವಾ ಆತಂಕದ ಅಸ್ವಸ್ಥತೆ: ಸಾಮಾಜಿಕ ಆತಂಕದ ಅಸ್ವಸ್ಥತೆ ಹೊಂದಿರುವ ಜನರು ಬೇರೆ ವ್ಯಕ್ತಿಗಳ ಜೊತೆ ಮಾತನಾಡಲು ಭಯಪಡುತ್ತಾರೆ. ಈ ರೋಗಲಕ್ಷಣ ಹೊಂದಿರುವ ಜನರು ಸಾಮಾಜಿಕವಾಗಿ ಮಾತನಾಡಲು ಮುಜುಗರ ಪಡುತ್ತಾರೆ ಅಥವಾ ಭಯಪಡುತ್ತಾರೆ.

ಇದನ್ನೂ ಓದಿ:Health Tips: ನವಜಾತ ಶಿಶುಗಳ ಆರೈಕೆಗೆ ಸಂಬಂಧಿಸಿದ ಸತ್ಯ, ಮಿಥ್ಯ ಅಂಶಗಳಾವುವು?

ದೀರ್ಘಕಾಲದ ರೋಗಗಳು: ಅಧಿಕ ರಕ್ತದೊತ್ತಡ, ಹೃದಯಾಘಾತ, ಸ್ಥೂಲಕಾಯತೆ ಮತ್ತು ಇತರ ದೀರ್ಘಕಾಲದ ದೈಹಿಕ ಸಮಸ್ಯೆಗಳು ಒಂಟಿತನದಿಂದ ಉಂಟಾಗಬಹುದು.

ಕ್ಯಾನ್ಸರ್: ಒಂಟಿತನದ ಭಾವನೆಗಳು ಒತ್ತಡದಿಂದಾಗಿ ಹಾರ್ಮೋನ್‌ನಲ್ಲಿ ಬದಲಾವಣೆಗಳನ್ನು ಬಿಡುಗಡೆ ಮಾಡುವುದನ್ನು ಪ್ರಚೋದಿಸುತ್ತದೆ. ಮತ್ತು ಇದು ಕ್ಯಾನ್ಸರ್ ಅಪಾಯವನ್ನು ಉಂಟುಮಾಡುತ್ತದೆ.

ಮಧುಮೇಹ: ಟೈಪ್ 2 ಮಧುಮೇಹದ ಅಪಾಯವು ಅಧಿಕ ತೂಕ ಹೊಂದಿರುವ ಜನರಲ್ಲಿ ಅಥವಾ ಕಳಪೆಮಟ್ಟದ ಜೀವನ ಶೈಲಿಯನ್ನು ಹೊಂದಿರುವ ಜನರಲ್ಲಿ ಹೆಚ್ಚಾಗಿ ಇರುತ್ತದೆ. ಒತ್ತಡ ಮತ್ತು ಒಂಟಿತನವು ಈ ಮಧುಮೇಹದ ಕಾಯಿಲೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ.

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ