Marriage Preparation Tips: ಮದುವೆ ತಯಾರಿಯ ವೇಳೆ ಒತ್ತಡ ಅನುಭವಿಸಬೇಡಿ? ವಧು – ವರರು ಈ ಟಿಪ್ಸ್ ಪಾಲಿಸಿ

ಮದುವೆ ಎನ್ನುವ ಎರಡಕ್ಷರ ಎರಡು ಕುಟುಂಬಗಳ ನಡುವಿನ ಬೆಸುಗೆ, ಎರಡು ಮನಸ್ಸುಗಳ ಮಿಲನ. ಪ್ರತಿಯೊಂದು ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಎಲ್ಲಾ ರೀತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹೆಣ್ಣಾದವಳು ಗಂಡನ ಮನೆಯ ಸಂಪ್ರದಾಯಗಳಿಗೆ ಒಗ್ಗಿಕೊಳ್ಳಬೇಕಾಗುತ್ತದೆ. ಇದಕ್ಕೆ ಕೆಲವು ದಿನಗಳ ಮುಂಚೆಯೇ ಮಾನಸಿಕವಾಗಿ ತಯಾರಿ ನಡೆಸಬಹುದು. ಆದರೆ ಮದುವೆಯ ತಯಾರಿ ನಡೆಯುತ್ತಿದ್ದಂತೆ ವಧು ವರರು ಒತ್ತಡವನ್ನು ಅನುಭವಿಸುತ್ತಾರೆ. ಸಮಯ ಮಿತಿಯೊಂದಿಗೆ ನೀರಿಕ್ಷೆಗಳು ಕೂಡ ಕಾರಣವಾಗಿರುತ್ತದೆ. ಮದುವೆಗೆ ಕೆಲವೇ ದಿನಗಳು ಬಾಕಿಯಿರುವಾಗಲೇ ಈ ಕೆಲವು ಟಿಪ್ಸ್ ಗಳನ್ನು ಪಾಲಿಸಿ ಮದುವೆಯ ಸಿದ್ಧತೆಯನ್ನು ಮಾಡಿಕೊಳ್ಳಿ.

Marriage Preparation Tips: ಮದುವೆ ತಯಾರಿಯ ವೇಳೆ ಒತ್ತಡ ಅನುಭವಿಸಬೇಡಿ? ವಧು - ವರರು ಈ ಟಿಪ್ಸ್ ಪಾಲಿಸಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 06, 2024 | 5:49 PM

ಮದುವೆಯೆನ್ನುವುದು ಎಲ್ಲರ ಜೀವನದಲ್ಲಿ ಒಮ್ಮೆ ಘಟಿಸುವಂತಹ ಸುಂದರವಾದ ಅಧ್ಯಾಯ. ಹೀಗಾಗಿ ಪ್ರತಿಯೊಬ್ಬರು ತಮ್ಮ ಮದುವೆಯ ಕುರಿತು ನಾನಾ ಬಗೆಯ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಈ ಕಾರಣಕ್ಕಾಗಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್, ದುಬಾರಿ ಬೆಲೆಯ ಬಟ್ಟೆಗಳ ಆಯ್ಕೆ ಹೀಗೆ ಮದುವೆ ತಯಾರಿಯು ಜೋರಾಗಿಯೇ ನಡೆಯುತ್ತಿರುತ್ತದೆ. ಆದರೆ ಕೆಲವೊಮ್ಮೆ ವಧು ವರರು ತಮ್ಮ ಮದುವೆಯ ತಯಾರಿಯ ನಡುವೆ ಒತ್ತಡವನ್ನು ಅನುಭವಿಸುವುದಿದೆ. ಹೀಗಾಗಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡು ಒತ್ತಡವನ್ನು ತಪ್ಪಿಸುವುದು ತುಂಬಾನೇ ಸುಲಭ.

ವಿವಾಹ ಪೂರ್ವತಯಾರಿ ವೇಳೆ ಈ ಅಂಶಗಳು ನೆನಪಿನಲ್ಲಿರಲಿ:

  1. ಪರಿಣಾಮಕಾರಿ ಸಂವಹನವಿರಲಿ : ಮದುವೆಯಾಗುವ ಸಂಗಾತಿಯೊಂದಿಗೆ ಮುಕ್ತ ಮತ್ತು ಪ್ರಾಮಾಣಿಕ ಸಂವಹನವನ್ನು ಬೆಳೆಸಿಕೊಳ್ಳಿ. ಮದುವೆಯ ಬಗ್ಗೆ ಯಾವ ರೀತಿ ಪ್ಲಾನ್ ಮಾಡಿಕೊಂಡಿದ್ದೀರಿ ಎನ್ನುವುದನ್ನು ಚರ್ಚಿಸಿ. ಈ ವೇಳೆಯಲ್ಲಿ ನಿರೀಕ್ಷೆಗಳು ಹಾಗೂ ಆದ್ಯತೆಗಳ ಬಗ್ಗೆ ಗಮನ ಕೊಡಿ.
  2. ಜವಾಬ್ದಾರಿಗಳ ಹಂಚಿಕೆಯಿರಲಿ : ವಧುವಾಗಲಿ ವರನಾಗಲಿ ಸಂಪೂರ್ಣ ಮದುವೆಗೆ ಸಂಬಂಧ ಪಟ್ಟ ಕೆಲಸಗಳನ್ನೆಲ್ಲಾ ಒಬ್ಬರೇ ತಮ್ಮೆಲ್ಲರಿಗೂ ಹೆಗಲ ಮೇಲೆ ಹಾಕಿಕೊಳ್ಳಬೇಡಿ. ಆತ್ಮೀಯ ಸ್ನೇಹಿತರು, ಕುಟುಂಬ ಸದಸ್ಯರಿಗೆ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಒತ್ತಡದಿಂದ ಮುಕ್ತರಾಗುವುದನ್ನು ಕಲಿಯಿರಿ.
  3. ಅಂದುಕೊಂಡಂತೆ ಆಗಬೇಕು ಎನ್ನುವ ನಿರೀಕ್ಷೆ ಬೇಡ : ಎಲ್ಲರೂ ಕೂಡ ತಮ್ಮ ಮದುವೆಯು ತಾವು ಅಂದುಕೊಂಡಂತೆ ನಡೆಯಲಿ ಎಂದುಕೊಳ್ಳುತ್ತಾರೆ. ಆದರೆ ಸನ್ನಿವೇಶಗಳು, ಎರಡು ಕುಟುಂಬಗಳ ನಡುವೆ ಮಾತುಕಥೆಗಳು ನಡೆದಾಗ ನಿರೀಕ್ಷೆಯಂತೆ ನಡೆಯಲು ಸಾಧ್ಯವಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಿ.
  4. ವಿರಾಮ ತೆಗೆದುಕೊಳ್ಳಿ : ವಿರಾಮವಿಲ್ಲದೇ ಕೆಲಸ ಮಾಡುವುದರಿಂದ ಮದುವೆಯ ದಿನ ನಿಮ್ಮ ಮುಖದಲ್ಲಿ ಆಯಾಸ ಸುಸ್ತು ಕಾಣಬಹುದು. ವಿವಾಹದ ಪೂರ್ವ ತಯಾರಿಯ ನಡುವೆಯೇ ವಿಶ್ರಾಂತಿಯು ಅಗತ್ಯವಾಗಿ ಬೇಕಾಗುತ್ತದೆ.
  5. ಬಜೆಟ್ ನಿರ್ವಹಣೆಯ ಬಗ್ಗೆ ಗಮನವಿರಲಿ : ಯಾವುದೇ ಸಮಾರಂಭದಲ್ಲಿ ಹಣದ ನಿರ್ವಹಣೆ ಬಹಳ ಮುಖ್ಯ. ಮದುವೆಯಂತಹ ಕಾರ್ಯಕ್ರಮಗಳಲ್ಲಿ ದೊಡ್ಡ ಮಟ್ಟದ ಬಜೆಟ್ ಆಗಿರುವ ಕಾರಣ ಆಯಾಯ ಕೆಲಸಕ್ಕೆ ಇಂತಿಷ್ಟು ಹಣವನ್ನು ಎತ್ತಿಟ್ಟು ಹಣಕಾಸಿನ ಒತ್ತಡವನ್ನು ನಿಭಾಯಿಸಿಕೊಳ್ಳಿ. ಈ ರೀತಿ ಯೋಜನೆ ರೂಪಿಸಿಕೊಳ್ಳುವುದರಿಂದ ಅತಿಯಾಗಿ ಖರ್ಚು ಆಗದಂತೆ ತಡೆಯಬಹುದಾಗಿದೆ.
  6. ಸ್ವ-ಆರೈಕೆಯತ್ತ ಗಮನ ನೀಡಿ : ಮದುವೆಯ ತಯಾರಿಯ ನಡುವೆ ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಗಮನ ಕೊಡಿ. ನಿಯಮಿತ ವ್ಯಾಯಾಮವನ್ನು ಅಳವಡಿಸಿಕೊಳ್ಳಿ, ಸಾಕಷ್ಟು ನಿದ್ರೆ ಹಾಗೂ ಸಮಯಕ್ಕೆ ಸರಿಯಾಗಿ ಆಹಾರ ಸೇವನೆಯು ಒತ್ತಡವನ್ನು ಪರಿಣಾಮಕಾರಿ ನಿರ್ವಹಿಸುವಂತೆ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ