AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಳಿ ಮತ್ತು ಖಾರವನ್ನು ಸಿಹಿಮಾಡುವ ಶಕ್ತಿ ಈ ಹಣ್ಣಿಗಿದೆ, ಯಾವುದು ಈ ಹಣ್ಣು?

ನೀವು ಈ ಹಣ್ಣನ್ನು ತಿನ್ನುವಾಗ ಯಾವುದೇ ರುಚಿಯನ್ನು ನೀಡುವುದಿಲ್ಲ. ಇದು ಯಾವುದೇ ರುಚಿಯನ್ನು ಹೊಂದಿಲ್ಲ. ಆದರೆ ಈ ಹಣ್ಣನ್ನು ನೀವು ಸೇವಿಸಿದ 10 ನಿಮಿಷದ ನಂತರ ಲಿಂಬೆ ಹಣ್ಣು, ನೆಲ್ಲಿ ಕಾಯಿ, ಅಥವಾ ಯಾವುದೇ ಹುಳಿ ಅಥವಾ ಖಾರದ ಪದಾರ್ಥಗಳನ್ನು ಸೇವಿಸಿದರೂ ಕೂಡ ನಿಮಗೆ ಸಿಹಿ ರುಚಿಯನ್ನು ನೀಡುತ್ತದೆ.

ಹುಳಿ ಮತ್ತು ಖಾರವನ್ನು ಸಿಹಿಮಾಡುವ ಶಕ್ತಿ ಈ ಹಣ್ಣಿಗಿದೆ, ಯಾವುದು ಈ ಹಣ್ಣು?
ಮಿರಾಕಲ್​​ ಫ್ರೂಟ್ಸ್ Image Credit source: IndiaMART
TV9 Web
| Edited By: |

Updated on: Feb 24, 2023 | 10:08 AM

Share

ಹೆಸರೇ ಹೇಳುವಂತೆ ಒಂದು ಮಿರಾಕಲ್​​ ಸೃಷ್ಟಿಸುವ ಹಣ್ಣು ಇದಾಗಿದೆ. ಇದನ್ನು ತಿಂದ ನಂತರ ನೀವು ಯಾವುದೇ ಹುಳಿ ಅಥವಾ ಖಾರದ ಪದಾರ್ಥವನ್ನು ಸೇವಿಸಿದರೂ ನಿಮಗೆ ಸಿಹಿಯನ್ನು ನೀಡುತ್ತದೆ. ಹಸಿರ ಎಲೆಗಳ ಮಧ್ಯೆ ಚಿಕ್ಕದಾದ ಕೆಂಪು ಬಣ್ಣದಲ್ಲಿ ಈ ಹಣ್ಣುಗಳನ್ನು ಕಾಣಬಹುದು. ಈ ಮಿರಾಕಲ್​​  ಹಣ್ಣಿನಿಂದ ಸಾಕಷ್ಟು ಅಚ್ಚರಿಯ ಸಂಗತಿಯನ್ನು ನೀವು ತಿಳಿದುಕೊಳ್ಳಬೇಕಿದೆ. ಜೊತೆಗೆ ಇದು ಕ್ಯಾನ್ಸರ್​ ಹಾಗೂ ಮಧುಮೇಹದಂತಹ ಕಾಯಿಲೆಗಳ ರೋಗಿಗಳಿಗೆ ಈ ಹಣ್ಣು ಬಹಳ ಉತ್ತಮವಾಗಿದೆ.

ಮಿರಾಕಲ್​​ ಫ್ರೂಟ್ಸ್​​ ವಿಶೇಷತೆಗಳು:

ನೀವು ಈ ಹಣ್ಣನ್ನು ತಿನ್ನುವಾಗ ಯಾವುದೇ ರುಚಿಯನ್ನು ನೀಡುವುದಿಲ್ಲ. ಈ ಹಣ್ಣು ಯಾವುದೇ ರುಚಿಯನ್ನು ಹೊಂದಿಲ್ಲ. ಆದರೆ ಈ ಹಣ್ಣನ್ನು ನೀವು ಸೇವಿಸಿದ 10 ನಿಮಿಷದ ನಂತರ ಲಿಂಬೆ ಹಣ್ಣು, ನೆಲ್ಲಿ ಕಾಯಿ, ಅಥವಾ ಯಾವುದೇ ಹುಳಿ ಅಥವಾ ಖಾರದ ಪದಾರ್ಥಗಳನ್ನು ಸೇವಿಸಿದರೂ ಕೂಡ ನಿಮಗೆ ಸಿಹಿ ರುಚಿಯನ್ನು ನೀಡುತ್ತದೆ. ಉದಾಹರಣೆಗೆ ನೀವು ಈ ಹಣ್ಣನ್ನು ತಿಂದ ನಂತರ ನಿಂಬೆ ಹಣ್ಣನ್ನು ತಿಂದರೆ ಯಾವುದೇ ಸಿಹಿ ಹಣ್ಣನ್ನು ತಿಂದಂತೆ ಅನುಭವವಾಗುತ್ತದೆ. ಅಂದರೆ ಸಕ್ಕರೆಗಿಂತ ಹೆಚ್ಚಿನ ಸಿಹಿಯನ್ನು ಇದು ನೀಡುತ್ತದೆ.

ಮಿರಾಕಲ್​​ ಫ್ರೂಟ್ಸ್​​ನ ಆರೋಗ್ಯ ಪ್ರಯೋಜನಗಳು ಇಲ್ಲಿವೆ:

ಈ ಹಣ್ಣು ನಿಮ್ಮ ಆರೋಗ್ಯದ ಮೇಲೂ ಸಾಕಷ್ಟು ಪ್ರಯೋಜನವನ್ನು ನೀಡುವ ಔಷಧಿಯ ಗುಣಗಳನ್ನು ಹೊಂದಿದೆ. ಇತ್ತೀಚೆಗೆ ಹೆಚ್ಚಾಗಿ ಕಂಡುಬರುವ ಕ್ಯಾನ್ಸರ್​ ಹಾಗೂ ಮಧುಮೇಹಕ್ಕೆ ಇದು ಯಾವ ರೀತಿ ಪ್ರಯೋಜನಕಾರಿಯಾಗಿದೆ ಎಂದು ತಿಳಿದುಕೊಳ್ಳಿ.

ಕ್ಯಾನ್ಸರ್​​ ರೋಗಿಗಳಿಗಾಗಿ:

ಕ್ಯಾನ್ಸರ್​​ ರೋಗಿಗಳಿಗೆ ಕಿಮೋಥೆರಪಿ ಮಾಡಿಸಿದ ನಂತರ ರೋಗಿಗೆ ಯಾವುದೇ ಆಹಾರದ ರುಚಿಯನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕಿಮೋಥೆರಫಿ ಮಾಡಿಸಿದ ರೋಗಿಗಳಿಗೆ ಈ ಹಣ್ಣನ್ನು ಅವರಿಗೆ ತಿನ್ನಲು ಕೊಡಲಾಗುತ್ತದೆ. ಇದು ಬೇರೆ ಆಹಾರವನ್ನು ರೋಗಿಗಳು ಸೇವಿಸಿದಾಗ ರುಚಿಯನ್ನು ನೀಡುವಲ್ಲಿ ಸಹಾಯಕವಾಗಿದೆ.

ಇದನ್ನೂ ಓದಿ: ಸುಡು ಬೇಸಿಗೆಯಲ್ಲಿ ಲಿಚಿ ತಿನ್ನಿರಿ, ಇದರ ಪ್ರಯೋಜನಗಳು ಹೀಗಿವೆ

ಮಧುಮೇಹಿ ರೋಗಿಗಳಿಗಾಗಿ:

ಪ್ರತಿ ಬಾರಿ ಯಾವುದೇ ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ದಿನಗಳಲ್ಲಿ ಸಿಹಿ ತಿಂಡಿಗಳನ್ನು ಮಾಡಿದಾಗ ಮಧುಮೇಹಿಗಳನ್ನು ಸಿಹಿಯಿಂದ ದೂರವಿರಿಸುತ್ತಾರೆ. ಆದ್ದರಿಂದ ರೋಗಿಗಳಿಗೆ ಸಕ್ಕರೆ ತಿನ್ನುವ ಬಯಕೆ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಹಣ್ಣು ಆರೋಗ್ಯಕರವಾದ ಸಕ್ಕರೆಯ ಅಂಶವನ್ನು ಒದಗಿಸುತ್ತದೆ. ಆದ್ದರಿಂದ ಮಧುಮೇಹಿಗಳಿಗೂ ಈ ಹಣ್ಣು ಆತ್ಯಂತ ಪ್ರಯೋಜನಕಾರಿಯಾಗಿದೆ.

ಮಿರಾಕಲ್​ ಹಣ್ಣಿನ ಗಿಡ ಬೆಳೆಸುವ ವಿಧಾನ:

ಪಶ್ಚಿಮ ಆಫ್ರಿಕಾದಲ್ಲಿ ಈ ಹಣ್ಣಿನ ಗಿಡವನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ. ಆದರೆ ನೀವಿದನ್ನು ಭಾರತದಲ್ಲೂ ಬೆಳೆಸಬಹುದು. ಈ ಹಣ್ಣಿನ ಬೀಜದಿಂದ ಗಿಡ ಮಾಡಬಹುದು. ಈ ಗಿಡ ಮೊಳಕೆಯೊಡೆಯಲು ಸುಮಾರು 16 ವಾರಗಳು ಬೇಕಾಗುತ್ತವೆ. ಕೆಲವೊಮ್ಮೆ ಇನ್ನೂ ಹೆಚ್ಚು ದಿನಗಳಾಗಬಹುದು. ಗಿಡ ಬೆಳಸಿದ ಮೂರು ನಾಲ್ಕು ತಿಂಗಳಲ್ಲಿ ಕಾಯಿ ಬಿಡಲು ಪ್ರಾರಂಭಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?