AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಳಿ ಮತ್ತು ಖಾರವನ್ನು ಸಿಹಿಮಾಡುವ ಶಕ್ತಿ ಈ ಹಣ್ಣಿಗಿದೆ, ಯಾವುದು ಈ ಹಣ್ಣು?

ನೀವು ಈ ಹಣ್ಣನ್ನು ತಿನ್ನುವಾಗ ಯಾವುದೇ ರುಚಿಯನ್ನು ನೀಡುವುದಿಲ್ಲ. ಇದು ಯಾವುದೇ ರುಚಿಯನ್ನು ಹೊಂದಿಲ್ಲ. ಆದರೆ ಈ ಹಣ್ಣನ್ನು ನೀವು ಸೇವಿಸಿದ 10 ನಿಮಿಷದ ನಂತರ ಲಿಂಬೆ ಹಣ್ಣು, ನೆಲ್ಲಿ ಕಾಯಿ, ಅಥವಾ ಯಾವುದೇ ಹುಳಿ ಅಥವಾ ಖಾರದ ಪದಾರ್ಥಗಳನ್ನು ಸೇವಿಸಿದರೂ ಕೂಡ ನಿಮಗೆ ಸಿಹಿ ರುಚಿಯನ್ನು ನೀಡುತ್ತದೆ.

ಹುಳಿ ಮತ್ತು ಖಾರವನ್ನು ಸಿಹಿಮಾಡುವ ಶಕ್ತಿ ಈ ಹಣ್ಣಿಗಿದೆ, ಯಾವುದು ಈ ಹಣ್ಣು?
ಮಿರಾಕಲ್​​ ಫ್ರೂಟ್ಸ್ Image Credit source: IndiaMART
TV9 Web
| Edited By: |

Updated on: Feb 24, 2023 | 10:08 AM

Share

ಹೆಸರೇ ಹೇಳುವಂತೆ ಒಂದು ಮಿರಾಕಲ್​​ ಸೃಷ್ಟಿಸುವ ಹಣ್ಣು ಇದಾಗಿದೆ. ಇದನ್ನು ತಿಂದ ನಂತರ ನೀವು ಯಾವುದೇ ಹುಳಿ ಅಥವಾ ಖಾರದ ಪದಾರ್ಥವನ್ನು ಸೇವಿಸಿದರೂ ನಿಮಗೆ ಸಿಹಿಯನ್ನು ನೀಡುತ್ತದೆ. ಹಸಿರ ಎಲೆಗಳ ಮಧ್ಯೆ ಚಿಕ್ಕದಾದ ಕೆಂಪು ಬಣ್ಣದಲ್ಲಿ ಈ ಹಣ್ಣುಗಳನ್ನು ಕಾಣಬಹುದು. ಈ ಮಿರಾಕಲ್​​  ಹಣ್ಣಿನಿಂದ ಸಾಕಷ್ಟು ಅಚ್ಚರಿಯ ಸಂಗತಿಯನ್ನು ನೀವು ತಿಳಿದುಕೊಳ್ಳಬೇಕಿದೆ. ಜೊತೆಗೆ ಇದು ಕ್ಯಾನ್ಸರ್​ ಹಾಗೂ ಮಧುಮೇಹದಂತಹ ಕಾಯಿಲೆಗಳ ರೋಗಿಗಳಿಗೆ ಈ ಹಣ್ಣು ಬಹಳ ಉತ್ತಮವಾಗಿದೆ.

ಮಿರಾಕಲ್​​ ಫ್ರೂಟ್ಸ್​​ ವಿಶೇಷತೆಗಳು:

ನೀವು ಈ ಹಣ್ಣನ್ನು ತಿನ್ನುವಾಗ ಯಾವುದೇ ರುಚಿಯನ್ನು ನೀಡುವುದಿಲ್ಲ. ಈ ಹಣ್ಣು ಯಾವುದೇ ರುಚಿಯನ್ನು ಹೊಂದಿಲ್ಲ. ಆದರೆ ಈ ಹಣ್ಣನ್ನು ನೀವು ಸೇವಿಸಿದ 10 ನಿಮಿಷದ ನಂತರ ಲಿಂಬೆ ಹಣ್ಣು, ನೆಲ್ಲಿ ಕಾಯಿ, ಅಥವಾ ಯಾವುದೇ ಹುಳಿ ಅಥವಾ ಖಾರದ ಪದಾರ್ಥಗಳನ್ನು ಸೇವಿಸಿದರೂ ಕೂಡ ನಿಮಗೆ ಸಿಹಿ ರುಚಿಯನ್ನು ನೀಡುತ್ತದೆ. ಉದಾಹರಣೆಗೆ ನೀವು ಈ ಹಣ್ಣನ್ನು ತಿಂದ ನಂತರ ನಿಂಬೆ ಹಣ್ಣನ್ನು ತಿಂದರೆ ಯಾವುದೇ ಸಿಹಿ ಹಣ್ಣನ್ನು ತಿಂದಂತೆ ಅನುಭವವಾಗುತ್ತದೆ. ಅಂದರೆ ಸಕ್ಕರೆಗಿಂತ ಹೆಚ್ಚಿನ ಸಿಹಿಯನ್ನು ಇದು ನೀಡುತ್ತದೆ.

ಮಿರಾಕಲ್​​ ಫ್ರೂಟ್ಸ್​​ನ ಆರೋಗ್ಯ ಪ್ರಯೋಜನಗಳು ಇಲ್ಲಿವೆ:

ಈ ಹಣ್ಣು ನಿಮ್ಮ ಆರೋಗ್ಯದ ಮೇಲೂ ಸಾಕಷ್ಟು ಪ್ರಯೋಜನವನ್ನು ನೀಡುವ ಔಷಧಿಯ ಗುಣಗಳನ್ನು ಹೊಂದಿದೆ. ಇತ್ತೀಚೆಗೆ ಹೆಚ್ಚಾಗಿ ಕಂಡುಬರುವ ಕ್ಯಾನ್ಸರ್​ ಹಾಗೂ ಮಧುಮೇಹಕ್ಕೆ ಇದು ಯಾವ ರೀತಿ ಪ್ರಯೋಜನಕಾರಿಯಾಗಿದೆ ಎಂದು ತಿಳಿದುಕೊಳ್ಳಿ.

ಕ್ಯಾನ್ಸರ್​​ ರೋಗಿಗಳಿಗಾಗಿ:

ಕ್ಯಾನ್ಸರ್​​ ರೋಗಿಗಳಿಗೆ ಕಿಮೋಥೆರಪಿ ಮಾಡಿಸಿದ ನಂತರ ರೋಗಿಗೆ ಯಾವುದೇ ಆಹಾರದ ರುಚಿಯನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕಿಮೋಥೆರಫಿ ಮಾಡಿಸಿದ ರೋಗಿಗಳಿಗೆ ಈ ಹಣ್ಣನ್ನು ಅವರಿಗೆ ತಿನ್ನಲು ಕೊಡಲಾಗುತ್ತದೆ. ಇದು ಬೇರೆ ಆಹಾರವನ್ನು ರೋಗಿಗಳು ಸೇವಿಸಿದಾಗ ರುಚಿಯನ್ನು ನೀಡುವಲ್ಲಿ ಸಹಾಯಕವಾಗಿದೆ.

ಇದನ್ನೂ ಓದಿ: ಸುಡು ಬೇಸಿಗೆಯಲ್ಲಿ ಲಿಚಿ ತಿನ್ನಿರಿ, ಇದರ ಪ್ರಯೋಜನಗಳು ಹೀಗಿವೆ

ಮಧುಮೇಹಿ ರೋಗಿಗಳಿಗಾಗಿ:

ಪ್ರತಿ ಬಾರಿ ಯಾವುದೇ ಹಬ್ಬ ಹರಿದಿನಗಳಲ್ಲಿ ಅಥವಾ ವಿಶೇಷ ದಿನಗಳಲ್ಲಿ ಸಿಹಿ ತಿಂಡಿಗಳನ್ನು ಮಾಡಿದಾಗ ಮಧುಮೇಹಿಗಳನ್ನು ಸಿಹಿಯಿಂದ ದೂರವಿರಿಸುತ್ತಾರೆ. ಆದ್ದರಿಂದ ರೋಗಿಗಳಿಗೆ ಸಕ್ಕರೆ ತಿನ್ನುವ ಬಯಕೆ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಹಣ್ಣು ಆರೋಗ್ಯಕರವಾದ ಸಕ್ಕರೆಯ ಅಂಶವನ್ನು ಒದಗಿಸುತ್ತದೆ. ಆದ್ದರಿಂದ ಮಧುಮೇಹಿಗಳಿಗೂ ಈ ಹಣ್ಣು ಆತ್ಯಂತ ಪ್ರಯೋಜನಕಾರಿಯಾಗಿದೆ.

ಮಿರಾಕಲ್​ ಹಣ್ಣಿನ ಗಿಡ ಬೆಳೆಸುವ ವಿಧಾನ:

ಪಶ್ಚಿಮ ಆಫ್ರಿಕಾದಲ್ಲಿ ಈ ಹಣ್ಣಿನ ಗಿಡವನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ. ಆದರೆ ನೀವಿದನ್ನು ಭಾರತದಲ್ಲೂ ಬೆಳೆಸಬಹುದು. ಈ ಹಣ್ಣಿನ ಬೀಜದಿಂದ ಗಿಡ ಮಾಡಬಹುದು. ಈ ಗಿಡ ಮೊಳಕೆಯೊಡೆಯಲು ಸುಮಾರು 16 ವಾರಗಳು ಬೇಕಾಗುತ್ತವೆ. ಕೆಲವೊಮ್ಮೆ ಇನ್ನೂ ಹೆಚ್ಚು ದಿನಗಳಾಗಬಹುದು. ಗಿಡ ಬೆಳಸಿದ ಮೂರು ನಾಲ್ಕು ತಿಂಗಳಲ್ಲಿ ಕಾಯಿ ಬಿಡಲು ಪ್ರಾರಂಭಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್