AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon Foods: ಮಳೆಗಾಲದಲ್ಲಿ ನೀವು ತಿನ್ನುವ ಆಹಾರಗಳು ಹೇಗಿರಬೇಕು? ಇಲ್ಲಿವೆ ಸಲಹೆಗಳು

Monsoon Foods: ಬೇಸಿಗೆ ಕಳೆದು ಇನ್ನೇನು ಮುಂಗಾರು( Monsoon)ಶುರುವಾಗಲಿದೆ, ನೀವು ಸೇವಿಸುವ ಆಹಾರದ ಮೇಲೆ ನಿಮ್ಮ ಆರೋಗ್ಯ ನಿಂತಿದೆ. ಹೌದು ಹವಾಮಾನ ಬದಲಾಗುತ್ತಿದ್ದಂತೆ ಆಹಾರ ಪದ್ಧತಿಗಳನ್ನು ಬದಲಾಯಿಸಿಕೊಳ್ಳಬೇಕು.

Monsoon Foods: ಮಳೆಗಾಲದಲ್ಲಿ ನೀವು ತಿನ್ನುವ ಆಹಾರಗಳು ಹೇಗಿರಬೇಕು? ಇಲ್ಲಿವೆ ಸಲಹೆಗಳು
Monsoon Foods
TV9 Web
| Edited By: |

Updated on: Jun 11, 2022 | 9:54 AM

Share

ಬೇಸಿಗೆ ಕಳೆದು ಇನ್ನೇನು ಮುಂಗಾರು( Monsoon)ಶುರುವಾಗಲಿದೆ, ನೀವು ಸೇವಿಸುವ ಆಹಾರದ ಮೇಲೆ ನಿಮ್ಮ ಆರೋಗ್ಯ ನಿಂತಿದೆ. ಹೌದು ಹವಾಮಾನ ಬದಲಾಗುತ್ತಿದ್ದಂತೆ ಆಹಾರ ಪದ್ಧತಿಗಳನ್ನು ಬದಲಾಯಿಸಿಕೊಳ್ಳಬೇಕು. ಒಂದು ವೇಳೆ ಬೇಸಿಗೆಯಲ್ಲಿ ಸೇವಿಸಿದ ಆಹಾರವನ್ನೇ ಮಳೆಗಾಲದಲ್ಲಿ ಸೇವಿಸಿದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹಾಗಾದರೆ ಮುಂಗಾರು ಅಥವಾ ಮಳೆಗಾಲದಲ್ಲಿ ನೀವು ಎಂತಹ ಆಹಾರ ಸೇವಿಸಬೇಕು ಎನ್ನುವುದರ ಕುರಿತು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಮಳೆಗಾಲದಲ್ಲಿ ದೇಹದ ಉಷ್ಣಾಂಶವು ಕಡಿಮೆ ಇರಲಿದ್ದು, ದೇಹ ಬೆವರದ ಕಾರಣ ಆಹಾರಗಳು ಅಷ್ಟು ಸುಲಭವಾಗಿ ಜೀರ್ಣವಾಗುವುದಿಲ್ಲ, ಹಾಗಾಗಿ ಮಳೆಗಾಲದಲ್ಲಿ ಲಘುವಾದ ಆಹಾರವನ್ನೇ ಆದಷ್ಟು ಸೇವನೆ ಮಾಡಿದರೆ ಒಳಿತು.

ಸ್ಟ್ರೀಟ್​ಫುಡ್ ಅವಾಯ್ಡ್​ ಮಾಡಿ: ಮಳೆಗಾಲದ ಸಂದರ್ಭದಲ್ಲಿ ಸ್ಟ್ರೀಟ್​ ಫುಡ್, ಹೊರಗಡೆ ಜ್ಯೂಸ್​ ಕುಡಿಯುವುದರಿಂದ ಕಲುಷಿತ ನೀರಿನಿಂದಾಗಿ ಹೊಟ್ಟೆಯಲ್ಲಿ ಇನ್​ಫೆಕ್ಷನ್ ಉಂಟಾಗಲಿದ್ದು, ಹೊಟ್ಟೆನೋವು, ಡೀಸೆಂಟ್ರಿ, ವಾಂತಿ ಸೇರಿದಂತೆ ಅನೇಕ ರೀತಿಯ ಉದರ ಸಮಸ್ಯೆಗಳು ಉಂಟಾಗಬಹುದು.

ಮಜ್ಜಿಗೆ ಬಳಕೆ ಮಾಡಿ: ಯೋಗರ್ಟ್​, ಮಜ್ಜಿಗೆ, ಸೋಯಾಬೀನ್, ಬೆಣ್ಣೆ ಸೇರಿದಂತೆ ಪ್ರೊಬಯಾಟಿಕ್​ಗಳನ್ನು ಬಳಕೆ ಮಾಡಿ ಇವುಗಳು ನಿಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತವೆ.

ಹೆಚ್ಚು ನೀರು ಕುಡಿಯಿರಿ: ಮಳೆಗಾಲದಲ್ಲಿ ಬಾಯಾರಿಕೆ ಕಡಿಮೆ, ಹಾಗೆಂದ ಮಾತ್ರಕ್ಕೆ ನೀರು ಕುಡಿಯದೇ ಇರಬೇಡಿ, ದೇಹವನ್ನು ಹೈಡ್ರೇಟ್​ ಆಗಿರಿಸಿಕೊಳ್ಳುವುದು ಬಹುಮುಖ್ಯವಾದದ್ದು, ನೀರು ನಿಮ್ಮ ದೇಹದಲ್ಲಿರುವ ಬೇಡದ ಅಂಶವನ್ನು ಹೊರಹಾಕುತ್ತದೆ.

ಹಸಿ ತರಕಾರಿಗಳನ್ನು ತಿನ್ನಬೇಡಿ: ಮಳೆಗಾಲದಲ್ಲಿ ಹಸಿ ತರಕಾರಿಗಳನ್ನು ತಿನ್ನಬೇಡಿ ಅವುಗಳಲ್ಲಿ ಬ್ಯಾಕ್ಟೀರಿಯಾ, ವೈರಸ್​ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಹೀಗಾಗಿ ತರಕಾರಿಗಳನ್ನು ಬೇಯಿಸಿಯೇ ತಿನ್ನಿ.

ಕುದಿಸಿದ ನೀರನ್ನು ಬಳಸಿ: ಒಂದೊಮ್ಮೆ ನೀವು ನಲ್ಲಿ ನೀರನ್ನು ಕುಡಿಯಲು ಬಳಸುತ್ತಿದ್ದರೆ ನೀವು ಕುದಿಸಿದ ನೀರನ್ನು ಬಳಸಿ, ಹಾಗೆಯೇ ಒಂದೊಮ್ಮೆ ನೀವು ಹೊರಗಡೆ ಹೋಗುವಂತಿದ್ದರೆ ಮನೆಯಿಂದಲೇ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗಿ.

ಸೀಫುಡ್​ಗಳಿಂದ ದೂರವಿರಿ: ನೀವು ಮಳೆಗಾಲದ ಸಂದರ್ಭದಲ್ಲಿ ಸೀಫುಡ್​ಗಳನ್ನು ತಿನ್ನುವಾಗ ಎಚ್ಚರದಿಂದಿರಿ, ಸಮುದ್ರದ ನೀರು ಕಲುಷಿತವಾಗಿದ್ದರೆ, ಅಲ್ಲಿಯ ಮೀನುಗಳನ್ನು ತಿಂದರೆ ಡೀಸೆಂಟ್ರಿ ರೀತಿಯ ಸಮಸ್ಯೆಗಳು ಕಾಡಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ