AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಸಂಗಾತಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ, ಖುಷಿ ಖುಷಿಯಾಗಿರಲು ಇಲ್ಲಿದೆ ಟಿಪ್ಸ್

Relationship: ಸಂಬಂಧ(Relationship)ವೆಂದಮೇಲೆ ಏರಿಳಿತಗಳು ಇದ್ದೇ ಇರುತ್ತವೆ, ನಾನು ಹೇಳಿದ್ದೇ ಸರಿ ಎನ್ನುವ ವಾದಗಳೂ ಇರುತ್ತದೆ. ಆದರೆ ಬಂಧವೆಂದರೆ ಅಷ್ಟೇ ಅಲ್ಲ ವಾದ, ಮುನಿಸು, ನಂಬಿಕೆ, ಪ್ರೀತಿ ಎಲ್ಲವನ್ನೂ ಒಳಗೊಂಡಿರುವಂಥದ್ದು.

Relationship: ಸಂಗಾತಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ, ಖುಷಿ ಖುಷಿಯಾಗಿರಲು ಇಲ್ಲಿದೆ ಟಿಪ್ಸ್
Relationship
TV9 Web
| Updated By: ನಯನಾ ರಾಜೀವ್|

Updated on: Jun 11, 2022 | 12:13 PM

Share

ಸಂಬಂಧ(Relationship)ವೆಂದಮೇಲೆ ಏರಿಳಿತಗಳು ಇದ್ದೇ ಇರುತ್ತವೆ, ನಾನು ಹೇಳಿದ್ದೇ ಸರಿ ಎನ್ನುವ ವಾದಗಳೂ ಇರುತ್ತದೆ. ಆದರೆ ಬಂಧವೆಂದರೆ ಅಷ್ಟೇ ಅಲ್ಲ ವಾದ, ಮುನಿಸು, ನಂಬಿಕೆ, ಪ್ರೀತಿ ಎಲ್ಲವನ್ನೂ ಒಳಗೊಂಡಿರುವಂಥದ್ದು. ಪ್ರತಿಯೊಂದು ಸಂಬಂಧಗಳು ಕೂಡ ಭಿನ್ನ, ನಿಮ್ಮ ಸಂಬಂಧಗಳನ್ನು ಸುಧಾರಿಸಲು, ಸಂತೋಷವಾಗಿರಲು, ಮಾನಸಿಕ ಆರೋಗ್ಯ ಕಾಪಾಡಲು, ಒತ್ತಡವನ್ನು ದೂರವಾಗಿಸಲು, ಸಂಗಾತಿ ಜತೆ ನೆಮ್ಮದಿಯಾಗಿರಲು ಕೆಲವು ಸೂತ್ರಗಳಿವೆ.

ಒಂದೊಮ್ಮೆ ನೀವು ದುಡುಕಿ ಆಡುವ ಮಾತುಗಳು ನಿಮ್ಮ ಸಂಬಂಧವನ್ನೇ ಹಾಳುಮಾಡಬಹುದು, ಹಾಗಾಗಿ ಸಂಗಾತಿಗೆ ಬೇಸರವೆನಿಸುವ ಹಾಗೆ ಮಾತನಾಡುವುದನ್ನು ಕಡಿಮೆ ಮಾಡಿ, ಹೆಚ್ಚು ಪ್ರೀತಿ ಕೊಡಿ ಸದಾ ಜೀವನದಲ್ಲಿ ಖುಷಿಖುಷಿಯಾಗಿರಿ. ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳವುದು ಹೇಗೆ, ಸಂಗಾತಿಯೊಂದಿಗೆ ಖುಷಿಯಾಗಿರಲು ಏನು ಮಾಡಬೇಕು ಎಂಬುದರ ಕುರಿತು ಇಲ್ಲಿವೆ ಕೆಲವು ಟಿಪ್ಸ್

ಸಂವಹನ ಇರಲಿ: ಸಂಗಾತಿಯ ಮಾತುಗಳನ್ನು ಮೌನವಾಗಿ ಆಲಿಸುವುದು ಸಂಬಂಧವನ್ನು ಉಳಿಸಿಕೊಳ್ಳುವ ಪ್ರಮುಖ ಘಟ್ಟವಾಗಿದೆ. ಎಂದೂ ನಿಮ್ಮ ಸಂಗಾತಿ ಯಾವುದೋ ಒಂದು ವಿಚಾರವನ್ನು ಪ್ರಸ್ತಾಪ ಮಾಡಿದಾಗ ಮಾತಿಗೂ ಮುಂಚೆಯೇ ನಿಮ್ಮ ಮಾತುಗಳನ್ನಾಡಿ ಮುಗಿಸಬೇಡಿ ಅವರಿಗೂ ಅವಕಾಶ ನೀಡಿ.

ನೀವು ಅಂದುಕೊಂಡಿದ್ದು ಸಂಭವಿಸದೇ ಇರಬಹುದು: ಒಂದೊಮ್ಮೆ ನೀವು ಅಂದುಕೊಂಡಿದ್ದು, ಸಂಭವಿಸದೇ ಇದ್ದಾಗ ಅಥವಾ ಕನಸುಗಳು ನೆರವೇರದೇ ಇದ್ದಾಗ ಸಂಗಾತಿಯೊಂದಿಗೆ ಜಗಳವಾಡಬೇಡಿ, ಆ ಕನಸನ್ನು ನೆರವೇರಿಸಿಕೊಳ್ಳಲು ನಾವು ಏನೆಲ್ಲಾ ಪ್ರಯತ್ನ ಮಾಡಬೇಕು ಎಂಬುದರ ಕಡೆಗೆ ಹೆಚ್ಚು ಗಮನಕೊಡಿ.

ಮನಸ್ಸು ಓದಲು ಸಾಧ್ಯವಿಲ್ಲ: ನೀವು ಮನಸ್ಸಿನಲ್ಲಿ ಅಂದುಕೊಂಡಿರುವುದೇ ನಡೆಯಬೇಕು ಅಥವಾ ವ್ಯಕ್ತಿ ನಡೆದುಕೊಳ್ಳಬೇಕು ಎಂದು ಬಯಸುವುದು ತಪ್ಪು, ನಿಮ್ಮ ಮನಸ್ಸನ್ನು ಓದಲು ಯಾರಿಗೂ ಸಾಧ್ಯವಿಲ್ಲ. ನೀವು ಮೊದಲು ಖುಷಿಯಾಗಿರಿ: ನೀವು ನಿಮ್ಮನ್ನ ಮೊದಲು ಖುಷಿಯಾಗಿಟ್ಟುಕೊಳ್ಳಿ, ನೀವು ಸಂತೋಷದಿಂದಿದ್ದರೆ ನಿಮ್ಮ ಸುತ್ತಮುತ್ತಲಿನವರೂ ಖುಷಿಯಾಗಿರುತ್ತಾರೆ.

ಸಲಹೆಗಳಿರಲಿ ಜಗಳ ಬೇಡ: ನೀವು ಯಾವುದೇ ವಿಚಾರದ ಕುರಿತು ನಿಮ್ಮ ಸಂಗಾತಿಗೆ ಸಲಹೆಗಳನ್ನು ನೀಡಲು ಪ್ರಯತ್ನಿಸಿ, ಆ ವಿಷಯ ಕುರಿತು ಜಗಳವಾಡಬೇಡಿ, ಸುಲಭವಾಗಿ ಅರ್ಥವಾಗುವಂತೆ ಅವರಿಗೆ ತಿಳಿಸಿ.

ಹೊಗಳಿಕೆಯಿರಲಿ: ಸಂಗಾತಿ ಉತ್ತಮ ಕೆಲಸ ಮಾಡಿದರೆ ಹೊಗಳಿಕೆ ಇದ್ದರೆ ಅವರು ಇನ್ನೂ ಉತ್ತಮ ಕೆಲಸಗಳನ್ನು ಮಾಡಬಲ್ಲರು, ಆದರೆ ಏನೋ ತಪ್ಪು ಮಾಡಿದಾಗ ಮನಸ್ಸಿಗೆ ನೋವಾಗುವಂತೆ ಮಾತನಾಡಿಬೇಡಿ, ಆ ಸಮಯದಲ್ಲಿ ಶಾಂತತೆ ಕಾಪಾಡಿಕೊಂಡು ಬಳಿಕ ನಿಧಾನವಾಗಿ ಅವರಿಗೆ ಅರ್ಥಮಾಡಿಸಲು ಪ್ರಯತ್ನಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್