Relationship: ಸಂಗಾತಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ, ಖುಷಿ ಖುಷಿಯಾಗಿರಲು ಇಲ್ಲಿದೆ ಟಿಪ್ಸ್

Relationship: ಸಂಬಂಧ(Relationship)ವೆಂದಮೇಲೆ ಏರಿಳಿತಗಳು ಇದ್ದೇ ಇರುತ್ತವೆ, ನಾನು ಹೇಳಿದ್ದೇ ಸರಿ ಎನ್ನುವ ವಾದಗಳೂ ಇರುತ್ತದೆ. ಆದರೆ ಬಂಧವೆಂದರೆ ಅಷ್ಟೇ ಅಲ್ಲ ವಾದ, ಮುನಿಸು, ನಂಬಿಕೆ, ಪ್ರೀತಿ ಎಲ್ಲವನ್ನೂ ಒಳಗೊಂಡಿರುವಂಥದ್ದು.

Relationship: ಸಂಗಾತಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ, ಖುಷಿ ಖುಷಿಯಾಗಿರಲು ಇಲ್ಲಿದೆ ಟಿಪ್ಸ್
Relationship
Follow us
| Updated By: ನಯನಾ ರಾಜೀವ್

Updated on: Jun 11, 2022 | 12:13 PM

ಸಂಬಂಧ(Relationship)ವೆಂದಮೇಲೆ ಏರಿಳಿತಗಳು ಇದ್ದೇ ಇರುತ್ತವೆ, ನಾನು ಹೇಳಿದ್ದೇ ಸರಿ ಎನ್ನುವ ವಾದಗಳೂ ಇರುತ್ತದೆ. ಆದರೆ ಬಂಧವೆಂದರೆ ಅಷ್ಟೇ ಅಲ್ಲ ವಾದ, ಮುನಿಸು, ನಂಬಿಕೆ, ಪ್ರೀತಿ ಎಲ್ಲವನ್ನೂ ಒಳಗೊಂಡಿರುವಂಥದ್ದು. ಪ್ರತಿಯೊಂದು ಸಂಬಂಧಗಳು ಕೂಡ ಭಿನ್ನ, ನಿಮ್ಮ ಸಂಬಂಧಗಳನ್ನು ಸುಧಾರಿಸಲು, ಸಂತೋಷವಾಗಿರಲು, ಮಾನಸಿಕ ಆರೋಗ್ಯ ಕಾಪಾಡಲು, ಒತ್ತಡವನ್ನು ದೂರವಾಗಿಸಲು, ಸಂಗಾತಿ ಜತೆ ನೆಮ್ಮದಿಯಾಗಿರಲು ಕೆಲವು ಸೂತ್ರಗಳಿವೆ.

ಒಂದೊಮ್ಮೆ ನೀವು ದುಡುಕಿ ಆಡುವ ಮಾತುಗಳು ನಿಮ್ಮ ಸಂಬಂಧವನ್ನೇ ಹಾಳುಮಾಡಬಹುದು, ಹಾಗಾಗಿ ಸಂಗಾತಿಗೆ ಬೇಸರವೆನಿಸುವ ಹಾಗೆ ಮಾತನಾಡುವುದನ್ನು ಕಡಿಮೆ ಮಾಡಿ, ಹೆಚ್ಚು ಪ್ರೀತಿ ಕೊಡಿ ಸದಾ ಜೀವನದಲ್ಲಿ ಖುಷಿಖುಷಿಯಾಗಿರಿ. ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳವುದು ಹೇಗೆ, ಸಂಗಾತಿಯೊಂದಿಗೆ ಖುಷಿಯಾಗಿರಲು ಏನು ಮಾಡಬೇಕು ಎಂಬುದರ ಕುರಿತು ಇಲ್ಲಿವೆ ಕೆಲವು ಟಿಪ್ಸ್

ಸಂವಹನ ಇರಲಿ: ಸಂಗಾತಿಯ ಮಾತುಗಳನ್ನು ಮೌನವಾಗಿ ಆಲಿಸುವುದು ಸಂಬಂಧವನ್ನು ಉಳಿಸಿಕೊಳ್ಳುವ ಪ್ರಮುಖ ಘಟ್ಟವಾಗಿದೆ. ಎಂದೂ ನಿಮ್ಮ ಸಂಗಾತಿ ಯಾವುದೋ ಒಂದು ವಿಚಾರವನ್ನು ಪ್ರಸ್ತಾಪ ಮಾಡಿದಾಗ ಮಾತಿಗೂ ಮುಂಚೆಯೇ ನಿಮ್ಮ ಮಾತುಗಳನ್ನಾಡಿ ಮುಗಿಸಬೇಡಿ ಅವರಿಗೂ ಅವಕಾಶ ನೀಡಿ.

ನೀವು ಅಂದುಕೊಂಡಿದ್ದು ಸಂಭವಿಸದೇ ಇರಬಹುದು: ಒಂದೊಮ್ಮೆ ನೀವು ಅಂದುಕೊಂಡಿದ್ದು, ಸಂಭವಿಸದೇ ಇದ್ದಾಗ ಅಥವಾ ಕನಸುಗಳು ನೆರವೇರದೇ ಇದ್ದಾಗ ಸಂಗಾತಿಯೊಂದಿಗೆ ಜಗಳವಾಡಬೇಡಿ, ಆ ಕನಸನ್ನು ನೆರವೇರಿಸಿಕೊಳ್ಳಲು ನಾವು ಏನೆಲ್ಲಾ ಪ್ರಯತ್ನ ಮಾಡಬೇಕು ಎಂಬುದರ ಕಡೆಗೆ ಹೆಚ್ಚು ಗಮನಕೊಡಿ.

ಮನಸ್ಸು ಓದಲು ಸಾಧ್ಯವಿಲ್ಲ: ನೀವು ಮನಸ್ಸಿನಲ್ಲಿ ಅಂದುಕೊಂಡಿರುವುದೇ ನಡೆಯಬೇಕು ಅಥವಾ ವ್ಯಕ್ತಿ ನಡೆದುಕೊಳ್ಳಬೇಕು ಎಂದು ಬಯಸುವುದು ತಪ್ಪು, ನಿಮ್ಮ ಮನಸ್ಸನ್ನು ಓದಲು ಯಾರಿಗೂ ಸಾಧ್ಯವಿಲ್ಲ. ನೀವು ಮೊದಲು ಖುಷಿಯಾಗಿರಿ: ನೀವು ನಿಮ್ಮನ್ನ ಮೊದಲು ಖುಷಿಯಾಗಿಟ್ಟುಕೊಳ್ಳಿ, ನೀವು ಸಂತೋಷದಿಂದಿದ್ದರೆ ನಿಮ್ಮ ಸುತ್ತಮುತ್ತಲಿನವರೂ ಖುಷಿಯಾಗಿರುತ್ತಾರೆ.

ಸಲಹೆಗಳಿರಲಿ ಜಗಳ ಬೇಡ: ನೀವು ಯಾವುದೇ ವಿಚಾರದ ಕುರಿತು ನಿಮ್ಮ ಸಂಗಾತಿಗೆ ಸಲಹೆಗಳನ್ನು ನೀಡಲು ಪ್ರಯತ್ನಿಸಿ, ಆ ವಿಷಯ ಕುರಿತು ಜಗಳವಾಡಬೇಡಿ, ಸುಲಭವಾಗಿ ಅರ್ಥವಾಗುವಂತೆ ಅವರಿಗೆ ತಿಳಿಸಿ.

ಹೊಗಳಿಕೆಯಿರಲಿ: ಸಂಗಾತಿ ಉತ್ತಮ ಕೆಲಸ ಮಾಡಿದರೆ ಹೊಗಳಿಕೆ ಇದ್ದರೆ ಅವರು ಇನ್ನೂ ಉತ್ತಮ ಕೆಲಸಗಳನ್ನು ಮಾಡಬಲ್ಲರು, ಆದರೆ ಏನೋ ತಪ್ಪು ಮಾಡಿದಾಗ ಮನಸ್ಸಿಗೆ ನೋವಾಗುವಂತೆ ಮಾತನಾಡಿಬೇಡಿ, ಆ ಸಮಯದಲ್ಲಿ ಶಾಂತತೆ ಕಾಪಾಡಿಕೊಂಡು ಬಳಿಕ ನಿಧಾನವಾಗಿ ಅವರಿಗೆ ಅರ್ಥಮಾಡಿಸಲು ಪ್ರಯತ್ನಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ