
ನಾಗರ ಪಂಚಮಿ (Nagara Panchami) ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ. ಈ ಬಾರಿ ಈ ಹಬ್ಬವನ್ನು ಆಗಸ್ಟ್ 27 ರಂದು ಆಚರಿಸಲಾಗುತ್ತಿದೆ. ನಾಗರ ಪಂಚಮಿಯ ದಿನ ನಾಗ ದೇವರಿಗೆ ಹಾಲೆರೆದು, ವಿಶೇಷ ಖಾದ್ಯಗಳನ್ನು ಮಾಡಿ ನೈವೇದ್ಯವಾಗಿ ಇಡಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ದೇವರ ನೈವೇದ್ಯಕ್ಕಾಗಿ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಹುರಿಗಡಲೆ ಮತ್ತು ಬೆಲ್ಲ ಬಳಸಿ ರುಚಿಕರ ತಂಬಿಟ್ಟು ತಯಾರಿಸುವಂತೆ, ದಕ್ಷಿಣ ಕನ್ನಡ, ಉಡುಪಿ ಮತ್ತು ಮಲೆನಾಡು ಭಾಗಗಳಲ್ಲಿ ನಾಗರ ಪಂಚಮಿಯ ದಿನ ಅರಶಿನ ಎಲೆ ಕಡುಬು ಮಾಡಲಾಗುತ್ತದೆ. ಈ ಬಾರಿಯ ನಾಗರ ಪಂಚಮಿ ಹಬ್ಬಕ್ಕೆ ನೀವು ಕೂಡ ಮನೆಯಲ್ಲಿ ಅರಶಿನ ಎಲೆ ಕಡುಬನ್ನು ಮಾಡಿ, ಇದರ ಈಸಿ ರೆಸಿಪಿ ಇಲ್ಲಿದೆ.
ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ನಾಗರಪಂಚಮಿಯ ದಿನ ಸಾಂಪ್ರದಾಯಿಕ ತಿನಿಸು ಅರಶಿನ ಎಲೆ ಕಡುಬು ತಯಾರಿಸಲಾಗುತ್ತದೆ. ಈ ಬಾರಿ ಹಬ್ಬಕ್ಕೆ ನೀವು ಕೂಡ ಈ ಸಿಹಿ ಕಡುಬನ್ನು ಮನೆಯಲ್ಲಿ ತಯಾರಿಸಿ. ಇದರ ಈಸಿ ರೆಸಿಪಿಯನ್ನು Sandhya Shetty’s Kitchen ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಅರಿಶಿನ ಎಲೆ ಕಡುಬು ಮಾಡಲು ಬೇಕಾಗುವ ಪದಾರ್ಥಗಳು: ಅಕ್ಕಿ, ನೀರು, ತುರಿದ ತೆಂಗಿನಕಾಯಿ, ಪುಡಿ ಮಾಡಿದ ಬೆಲ್ಲ, ತುಪ್ಪ, ಏಲಕ್ಕಿ, ಉಪ್ಪು, ಅರಿಶಿನ ಎಲೆ
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯಂದು ಸುಲಭವಾಗಿ ‘ತ್ರಿವರ್ಣ’ ಖಾದ್ಯ ತಯಾರಿಸಿ; ರೆಸಿಪಿ ಇಲ್ಲಿದೆ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ