AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Color Olo: ಮಾನವರು ಇದುವರೆಗೆ ನೋಡಿರದ ಹೊಚ್ಚ ಹೊಸ ಬಣ್ಣವನ್ನು ಕಂಡು ಹಿಡಿದ ವಿಜ್ಞಾನಿಗಳು

ಮಾನವರು ಇದುವರೆಗೆ ನೋಡಿರದ ಹೊಸ ಬಣ್ಣವನ್ನು ಕಂಡುಹಿಡಿಯಲಾಗಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಸೈನ್ಸ್ ಅಡ್ವಾನ್ಸಸ್‌ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಸಂಶೋಧಕರು ಈ ಹೊಸ ಬಣ್ಣಕ್ಕೆ ಓಲೋ ಎಂದು ಹೆಸರಿಟ್ಟಿದ್ದು, ಈ ವಿಶೇಷ ಬಣ್ಣವನ್ನು ಜಗತ್ತಿನಲ್ಲಿ ಈವರೆಗೆ ಬರೀ 5 ಜನ ಮಾತ್ರ ನೋಡಿದ್ದಾರಂತೆ. ಈ ಹೊಚ್ಚ ಹೊಸ ಬಣ್ಣ ನವಿಲಿನ ನೀಲಿ ಬಣ್ಣದೊಂದಿಗೆ ಹೋಲಿಕೆಯನ್ನು ಹೊಂದಿದ್ದು, ಇದನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

New Color Olo: ಮಾನವರು ಇದುವರೆಗೆ ನೋಡಿರದ ಹೊಚ್ಚ ಹೊಸ ಬಣ್ಣವನ್ನು ಕಂಡು ಹಿಡಿದ ವಿಜ್ಞಾನಿಗಳು
ಸಾಂದರ್ಭಿಕ ಚಿತ್ರImage Credit source: Getty Images
ಮಾಲಾಶ್ರೀ ಅಂಚನ್​
| Edited By: |

Updated on:Apr 22, 2025 | 5:18 PM

Share

ಕ್ಯಾಲಿಫೋರ್ನಿಯಾ, ಏ. 22: ವಿಜ್ಞಾನಿಗಳು (Scientists) ಒಂದಲ್ಲಾ ಒಂದು ಕುತೂಲಹಕಾರಿ ಸಂಶೋಧನೆ, ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ಇಲ್ಲೊಂದು ವಿಜ್ಞಾನಿಗಳ ತಂಡ ಸಂಶೋಧನೆಯೊಂದನ್ನು ಮಾಡಿ ಹೊಸ ಬಣ್ಣವೊಂದನ್ನು (new color) ಕಂಡು ಹಿಡಿದಿದ್ದಾರೆ.  ಏಪ್ರಿಲ್‌ 18 ರಂದು ಸೈನ್ಸ್‌ ಅಡ್ವಾನ್ಸಸ್‌ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಸಂಶೋಧನೆಯ ಪ್ರಕಾರ, ಈ ಹೊಸ ಬಣ್ಣವನ್ನು ವಿಜ್ಞಾನಿಗಳು ಓಲೋ  (Olo) ಎಂದು ಹೆಸರಿಸಿದ್ದು, ಈ ವಿಶೇಷ ಬಣ್ಣವನ್ನು ಜಗತ್ತಿನಲ್ಲಿ ಕೇವಲ 5 ಮಂದಿ ಮಾತ್ರ ನೋಡಿದ್ದಾರಂತೆ. ನವಿಲಿನ ನೀಲಿ ಬಣ್ಣದೊಂದಿಗೆ ಹೋಲಿಕೆಯನ್ನು ಹೊಂದಿರುವ ಈ ಬಣ್ಣವನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲಂತೆ. ಈ ಬಣ್ಣವನ್ನು ನೋಡಬೇಕಿದ್ದರೆ ಕಣ್ಣಿನ ರೆಟಿನಾಗಳ ಮೇಲೆ ಲೇಸರ್‌ ಕಿರಣಗಳನ್ನು ಹಾಯಿಸಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಬರಿಗಣ್ಣಿಗೆ ಕಾಣದ ಹೊಚ್ಚ ಹೊಸ ಬಣ್ಣವನ್ನು ಕಂಡು ಹಿಡಿದ ವಿಜ್ಞಾನಿಗಳು:

ಅಮೆರಿಕಾದ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಈ ಹೊಚ್ಚ ಹೊಸ ಬಣ್ಣವನ್ನು ಕಂಡು ಹಿಡಿದಿದ್ದಾರೆ. ನವಿಲಿನ ನೀಲಿ ಬಣ್ಣ ಅಥವಾ ಟೀಲ್‌ ಬಣ್ಣಕ್ಕೆ ಹೋಲಿಕೆಯಾಗುವ ಈ “ಓಲೋ” ಬಣ್ಣ ಬರಿಗಣ್ಣಿಗೆ ಕಾಣಿಸುವುದಿಲ್ಲ. ಈ ಬಣ್ಣವನ್ನು ನೋಡಬೇಕಿದ್ದರೆ ಕಣ್ಣಿನ ರೆಟಿನಾಗಳ ಮೇಲೆ ಲೇಸರ್‌ ಕಿರಣಗಳನ್ನು ಹಾಯಿಸಬೇಕು. ಆಗ ಮಾತ್ರ ಈ ಬಣ್ಣ ಕಣ್ಣಿಗೆ ಗೋಚರವಾಗುತ್ತದೆ. ನೀಲಿ ಮತ್ತು ಹಸಿರು ಮಿಶ್ರಿತವಾದ ಈ ವಿಶೇಷ ಬಣ್ಣವನ್ನು ಈವರೆಗೆ ಕೇವಲ 5 ಮಂದಿ ಮಾತ್ರ ನೋಡಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಕುರಿತ ಪೋಸ್ಟ್‌ ಒಂದನ್ನು Pop Base ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ಇದನ್ನೂ ಓದಿ
Image
ತಪ್ಪಿಯೂ ಅಡುಗೆ ಕೋಣೆಯಲ್ಲಿ ಬ್ಲಾಕ್ ಗ್ರಾನೈಟ್ ಬಳಕೆ ಮಾಡಬೇಡಿ!
Image
ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಏಕೆ? ಪೌರಾಣಿಕ ಕಥೆ ಇಲ್ಲಿದೆ
Image
ಬೇಸಿಗೆಯಲ್ಲಿ ಹಸಿ ಮಾವು ತಿನ್ಬೇಕಂತೆ; ಯಾಕೆ ಗೊತ್ತಾ?
Image
ಯುವಕರೇ ಕೆಲಸದ ಸ್ಥಳದಲ್ಲಿ ಗಂಟೆಗಟ್ಟಲೆ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೀರಾ?

ಪೋಸ್ಟ್ ಇಲ್ಲಿದೆ ನೋಡಿ:

ವಾಸ್ತವವಾಗಿ ವಿಜ್ಞಾನಿಗಳು ಇಲ್ಲಿಯವರೆಗೆ ಮನುಷ್ಯರು ನೋಡಿರದ ಬಣ್ಣವನ್ನು ಕಂಡುಹಿಡಿದಿದ್ದಾರೆ. ಏಪ್ರಿಲ್ 18 ರಂದು ಸೈನ್ಸ್‌ ಅಡ್ವಾನ್ಸ್‌ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಸಂಶೋಧನೆಯ ಪ್ರಕಾರ, ಈ ಬಣ್ಣಕ್ಕೆ ಓಲೋ ಎಂದು ಹೆಸರಿಡಲಾಗಿದೆ. ಓಲೋ ಹೇಗಿರುತ್ತದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಲು ಸಾಧ್ಯವಿಲ್ಲ, ಆದರೆ ಅದು ನವಿಲು ನೀಲಿ ಅಥವಾ ಟೀಲ್ ಬಣ್ಣದಂತೆಯೇ ಇರುತ್ತದೆ ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: ತಪ್ಪಿಯೂ ಅಡುಗೆ ಕೋಣೆಯಲ್ಲಿ ಬ್ಲಾಕ್ ಗ್ರಾನೈಟ್ ಬಳಕೆ ಮಾಡಬೇಡಿ! ಏಕೆ ಗೊತ್ತಾ

ಇದು ನಾವು ನೋಡುವ ಬಣ್ಣವಲ್ಲ, ಇದು ಸಂಪೂರ್ಣವಾಗಿ ವಿಭಿನ್ನವಾದ ಬಣ್ಣವಾಗಿದೆ. ದೈನಂದಿನ ಜೀವನದಲ್ಲಾಗಿರಲಿ ಅಥವಾ ಸ್ಮಾರ್ಟ್‌ಫೋನ್‌, ಮಾನಿಟರ್‌, ಟಿವಿ  ಡಿಸ್ಪ್ಲೇಗಳಲ್ಲಾಗಲಿ ಈ ಬಣ್ಣವನ್ನು ನೋಡಲು ಸಾಧ್ಯವಿಲ್ಲ. ಈ ಬಣ್ಣ ವಿಆರ್‌ ಹೆಡ್‌ಸೆಟ್‌ ತಂತ್ರಜ್ಞಾನಕ್ಕಿಂತ ಬಹಳ ದೂರದಲ್ಲಿದ್ದು ಇದನ್ನು ಕೇವಲ ರೆಟಿನಾಗಳ ಮೇಲೆ ಲೇಸರ್‌ ಕಿರಣಗಳನ್ನು ಹಾಯಿಸಿದಾಗ ಮಾತ್ರ ನೋಡಲು ಸಾಧ್ಯ ಎಂದು ಈ ಸಂಶೋಧನೆಯ ವಿಜ್ಞಾನಿ ಆಸ್ಟಿನ್ ರೂರ್ಡಾ ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Tue, 22 April 25

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ