Re-Use Pomegranate Peels: ದಾಳಿಂಬೆ ಸಿಪ್ಪೆಗಳನ್ನು ಮರುಬಳಕೆ ಮಾಡಬಹುದೇ? ವೈರಲ್ ವಿಡಿಯೋ ಇಲ್ಲಿದೆ

ಹಣ್ಣು ತಿಂದು ಉಳಿದಿರುವಂತಹ ದಾಳಿಂಬೆ ಸಿಪ್ಪೆಗಳನ್ನು ಮರುಬಳಕೆ ಮಾಡುವುದು ಹೇಗೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಇನ್‌ಸ್ಟಾಗ್ರಾಂನಲ್ಲಿ ಅಮೇರಿಕಾ ಮೂಲದ ಜನಪ್ರಿಯ ಕಂಟೆಂಟ್ ಕ್ರಿಯೆಟರ್ ಕಾರ್ಲೀಯವರು ದಾಳಿಂಬೆಯ ಸಿಪ್ಪೆಯನ್ನು ಯಾವ ರೀತಿ ಮರುಬಳಕೆ ಮಾಡಬಹುದು ಎಂಬ ವಿಡಿಯೋ ಹರಿ ಬಿಟ್ಟಿದ್ದಾರೆ.

Re-Use Pomegranate Peels: ದಾಳಿಂಬೆ ಸಿಪ್ಪೆಗಳನ್ನು ಮರುಬಳಕೆ ಮಾಡಬಹುದೇ? ವೈರಲ್ ವಿಡಿಯೋ ಇಲ್ಲಿದೆ
ದಾಳಿಂಬೆ ಸಿಪ್ಪೆಗಳ ಮರುಬಳಕೆ Image Credit source: iStock
Follow us
| Updated By: ಅಕ್ಷತಾ ವರ್ಕಾಡಿ

Updated on:Dec 28, 2022 | 2:36 PM

ಇತ್ತೀಚಿಗೆ ಅಮೇರಿಕಾದ ಕಂಟೆಂಟ್ ಕ್ರಿಯೇಟರ್ ದಾಳಿಂಬೆಯ ಸಿಪ್ಪೆ(Pomegranate Peels)ಯನ್ನು ಸಹ ಅಡುಗೆ ಮನೆಯಲ್ಲಿ ಪರಿಣಾಮಕಾರಿಯಾಗಿ ಮರುಬಳಕೆ(Re-Use) ಮಾಡಬಹುದು ಎಂದು ಬಹಿರಂಗ ಪಡಿಸಿದ್ದಾರೆ. ದಾಳಿಂಬೆ ಅನೇಕ ಪ್ರಯೋಜನಗಳನ್ನು ಹೊಂದಿರುವ ಅದ್ಭುತ ಹಣ್ಣು. ಈ ಹಣ್ಣಿನ ಸಿಪ್ಪೆಯನ್ನು ಅನೇಕ ವಸ್ತುಗಳನ್ನು ತಯಾರಿಸಲು ಮರುಬಳಕೆ ಮಾಡಬಹುದು. ಉಳಿದ ದಾಳಿಂಬೆ ಸಿಪ್ಪೆಯನ್ನು ಹೇಗೆಲ್ಲಾ ಬಳಸಬಹುದು ಎಂಬ ಮಾಹಿತಿ ಇಲ್ಲಿದೆ.ಅಡುಗೆ ಮನೆಯಲ್ಲಿ ಪ್ರತಿಯೊಬ್ಬರೂ ಕೂಡ ಅಡುಗೆಮನೆಯಲ್ಲಿ ಪ್ರತಿಯೊಂದು ಪದಾರ್ಥಗಳನ್ನು ಬಳಸಲು ಇಷ್ಟಪಡುತ್ತಾರೆ. ತರಕಾರಿಯ ಕಾಂಡ, ಹೂವು ಮತ್ತು ಎಲೆಗಳವರೆಗೆ ಯಾವುದೇ ಭಾಗವು ವ್ಯರ್ಥವಾಗದಂತೆ ಸಂಪೂರ್ಣವಾಗಿ ಬಳಕೆ ಮಾಡಲಾಗುತ್ತದೆ.

ಅಮೇರಿಕನ್ ಕಂಟೆಂಟ್ ಕ್ರಿಯೇಟರ್ ದಾಳಿಂಬೆಯ ಸಿಪ್ಪೆಯನ್ನು ಸಹ ಅಡುಗೆ ಮನೆಯಲ್ಲಿ ಪರಿಣಾಮಕಾರಿಯಾಗಿ ಮರುಬಳಕೆ ಮಾಡಬಹುದು ಎಂದು ಬಹಿರಂಗಪಡಿಸಿದ್ದಾರೆ. ದಾಳಿಂಬೆ ಸಿಪ್ಪೆಯನ್ನು ಸುವಾಸನೆಯುಕ್ತ ಮತ್ತು ಆರೋಗ್ಯಕರ ಚಹಾವನ್ನಾಗಿ ಮಾಡಲು ಅವರು ಸರಳವಾದ ಹ್ಯಾಕ್ ಅಥವಾ ಟ್ರಿಕ್ ಒಂದನ್ನು ಹಂಚಿಕೊಂಡಿದ್ದಾರೆ.

ದಾಳಿಂಬೆ ಸಿಪ್ಪೆಯನ್ನು ಏಕೆ ಮರುಬಳಕೆ ಮಾಡಬೇಕು?- ದಾಳಿಂಬೆಯ ಆರೋಗ್ಯ ಪ್ರಯೋಜನಗಳು:

ದಾಳಿಂಬೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುವ ಅತ್ಯುತ್ತಮ ಹಣ್ಣು ಎಂದು ತಿಳಿದುಬಂದಿದೆ. ‘ಏಕ್ ಅನಾರ್, ಸೌ ಬಿಮಾರ್’ (ಒಂದು ದಾಳಿಂಬೆಯು ನೂರು ರೋಗಗಳನ್ನು ಗುಣಪಡಿಸುತ್ತದೆ) ಎಂಬ ಮಾತಿದೆ. ಪ್ರಕಾಶಮಾನವಾದ ಕೆಂಪು ಬಣ್ಣದ ಈ ಹಣ್ಣು ವಿಟಮಿನ್ ಸಿ, ಪೊಟ್ಯಾಷಿಯಮ್, ಆ್ಯಂಟಿಆಕ್ಸಿಡೆಂಟ್ ಪೈಬರ್‌ನ ಅತ್ಯುತ್ತಮ ಮೂಲವಾಗಿದೆ. ದಾಳಿಂಬೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಯಾವುದೇ ಕೊಲೆಸ್ಟಾಲ್ ಅಂಶವನ್ನು ಹೊಂದಿರುವುದಿಲ್ಲ ಮತ್ತು ತೂಕ ನಷ್ಟಕ್ಕೆ ಪ್ರಯೋಜನಕಾರಿಯಾಗಿದೆ.ನಂಬಲು ಕಷ್ಟವಾಗಿದ್ದರೂ, ದಾಳಿಂಬೆಯ ಸಿಪ್ಪೆಗಳು ಅದರ ಹಣ್ಣಿಗಿಂತ ಉತ್ತಮ ಆರೋಗ್ಯದೊಂದಿಗೆ ಇನ್ನಷ್ಟು ಸಮೃದ್ಧವಾಗಿದೆ. ಹಾಗಾಗಿ ಇದು ದಾಳಿಂಬೆಯ ಸಿಪ್ಪೆಗಳನ್ನು ಮರುಬಳಕೆ ಮಾಡುವ ಪರವಾಗಿ ಉತ್ತಮ ವಾದವನ್ನು ಮಾಡುತ್ತದೆ.

ಇದನ್ನೂ ಓದಿ: ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಸೂಪ್ ಪ್ರಯತ್ನಿಸಿ

ಉಳಿದ ದಾಳಿಂಬೆ ಸಿಪ್ಪೆಗಳನ್ನು ಮರುಬಳಕೆ ಮಾಡುವುದು ಹೇಗೆ ವೈರಲ್ ವಿಡಿಯೋ

ಹಣ್ಣು ತಿಂದು ಉಳಿದಿರುವಂತಹ ದಾಳಿಂಬೆ ಸಿಪ್ಪೆಗಳನ್ನು ಮರುಬಳಕೆ ಮಾಡುವುದು ಹೇಗೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಇನ್‌ಸ್ಟಾಗ್ರಾಂನಲ್ಲಿ ಅಮೇರಿಕಾ ಮೂಲದ ಜನಪ್ರಿಯ ಕಂಟೆಂಟ್ ಕ್ರಿಯೆಟರ್ ಕಾರ್ಲೀಯವರು ದಾಳಿಂಬೆಯ ಸಿಪ್ಪೆಯನ್ನು ಯಾವ ರೀತಿ ಮರುಬಳಕೆ ಮಾಡಬಹುದು ಎಂಬ ವಿಡಿಯೋ ಹರಿ ಬಿಟ್ಟಿದ್ದಾರೆ. ಈ ವಿಡಿಯೋ 9.9 ಮಿಲಿಯನ್ ವೀಕ್ಷಣೆಗಳು ಮತ್ತು 463,07 ಲೈಕ್ಸ್ ಪಡೆಯುವ ಮೂಲಕ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ.

View this post on Instagram

A post shared by Carleigh Bodrug (@plantyou)

ಇದನ್ನೂ ಓದಿ: ಪಾರ್ಸ್ಲಿ ಟೀ ಮಾಡುವ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳು ಇಲ್ಲಿವೆ

ಈ ವಿಡಿಯೋ ಕ್ಲಿಪ್‌ನಲ್ಲಿ ದಾಳಿಂಬೆ ಸಿಪ್ಪೆಯನ್ನು ಎಸೆಯಬಾರದು. ಅದರ ಬದಲಿಗೆ ಅದನ್ನು ಬಹಳ ಉಪಯುಕ್ತವಾದ ಪುಡಿಯಾಗಿ ಮಾಡಬಹುದು ಎಂದು ಕಾರ್ಲೀ ವಿವರಿಸಿದರು. ಸಿಪ್ಪೆಗಳನ್ನು ಬೇಕಿಂಗ್ ಟ್ರೇನಲ್ಲಿ ಇರಿಸಿ ಮತ್ತು ಅವುಗಳನ್ನು ಗರಿಗರಿಯಾಗಿ ನಿರ್ಜಲೀಕರಣಗೊಳಿಸಬೇಕು. ನಂತರ ಆ ದಾಳಿಂಬೆ ಸಿಪ್ಪೆಗಳನ್ನು ಒಂದು ಬ್ಲೆಂಡರ್‌ನ ಸಹಾಯದಿಂದ ಚೆನ್ನಾಡಿ ಪುಡಿ ಮಾಡಬೇಕು. ಈಗ ಆಂಟಿಆಕ್ಸಿಂಟ್‌ನಿಂದ ಸಮೃದ್ಧವಾದ ಚಹಾವನ್ನು ತಯಾರಿಸಲು ಈ ಪುಡಿಯನ್ನು ಬಳಸಬಹುದು ಅಥವಾ ಸಲಾಡ್‌ಗಳ ಮೇಲೂ ಆ ಪುಡಿಯನ್ನು ಸಿಂಪಡಿಸಬಹುದು ಅಥವಾ ಸ್ಮೂದಿ ಮತ್ತು ಪಾನೀಯಗಳೊಂದಿಗೂ ಬೆರೆಸಿ ಕುಡಿಯಬಹುದು ಎಂಬುವುದರ ಕುರಿತು ತಮ್ಮ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 2:36 pm, Wed, 28 December 22

ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್