AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raksha Bandhan 2023: ಒಂದು ಬಾರಿ ಅಣ್ಣ ಎಂದು ಕರೆಯಲು ಅವಕಾಶ ನೀಡು, ನಿನ್ನ ಪ್ರೀತಿಗಾಗಿ ಚಡಪಡಿಸುತ್ತಿರುವ ತಂಗಿ

ಪ್ರತಿ ವರ್ಷವು‌ ರಕ್ಷಾ ಬಂಧನದ ದಿನದಂದು ಹೆಣ್ಣು ಮಕ್ಕಳು ಒಡಹುಟ್ಟಿದವರು ಎಂದು ಅಣ್ಣ ತಮ್ಮ ಇಲ್ಲದೆ ಇರುವರು ಅತಿಯಾಗಿ ಕಾಳಜಿ ಧೈರ್ಯ ನೀಡುವ ಜೀವದೊಂದಿಗೆ ಅಣ್ಣ ಎಂದು ಕರೆಯುತ್ತಾ ರಾಖಿ ಕಟ್ಟಲು ಹೋಗುವುದು ಸಹಜ. ಅಣ್ಣ ತಂಗಿಯ ಸಂಬಂಧ ಉಳಿಯಲು ಗಂಟಾಗಿ ಕೈಯಲ್ಲಿ ರಾಖಿ ಕಟ್ಟುವುದು ಒಂದು ವಾಡಿಕೆ. ಹೀಗೆ ಇರುವಾಗ ನಾನು ಒಂದು ಬಾರಿ ಸಂಬಂಧದಲ್ಲಿ ಅಣ್ಣನಾಗಬೇಕಾದವನಿಗೆ ರಾಖಿ ಕಟ್ಟಲು ಹೋದಾಗ ಆತ ಬಹಳ ಹಿಂಜರಿಯುತ್ತಾನೆ.

Raksha Bandhan 2023: ಒಂದು ಬಾರಿ ಅಣ್ಣ ಎಂದು ಕರೆಯಲು ಅವಕಾಶ ನೀಡು, ನಿನ್ನ ಪ್ರೀತಿಗಾಗಿ ಚಡಪಡಿಸುತ್ತಿರುವ ತಂಗಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Aug 30, 2023 | 10:28 AM

Share

ರಕ್ಷಾ ಬಂಧನ (Raksha Bandhan) ಎನ್ನುವುದು ಸಹೋದರತ್ವವನ್ನು ರೂಪಿಸುವ ಹಬ್ಬ. ಪ್ರತಿ ವರ್ಷವು‌ ರಕ್ಷಾ ಬಂಧನದ ದಿನದಂದು ಹೆಣ್ಣು ಮಕ್ಕಳು ಒಡಹುಟ್ಟಿದವರು ಎಂದು ಅಣ್ಣ ತಮ್ಮ ಇಲ್ಲದೆ ಇರುವರು ಅತಿಯಾಗಿ ಕಾಳಜಿ ಧೈರ್ಯ ನೀಡುವ ಜೀವದೊಂದಿಗೆ ಅಣ್ಣ ಎಂದು ಕರೆಯುತ್ತಾ ರಾಖಿ ಕಟ್ಟಲು ಹೋಗುವುದು ಸಹಜ. ಅಣ್ಣ ತಂಗಿಯ ಸಂಬಂಧ ಉಳಿಯಲು ಗಂಟಾಗಿ ಕೈಯಲ್ಲಿ ರಾಖಿ ಕಟ್ಟುವುದು ಒಂದು ವಾಡಿಕೆ. ಹೀಗೆ ಇರುವಾಗ ನಾನು ಒಂದು ಬಾರಿ ಸಂಬಂಧದಲ್ಲಿ ಅಣ್ಣನಾಗಬೇಕಾದವನಿಗೆ ರಾಖಿ ಕಟ್ಟಲು ಹೋದಾಗ ಆತ ಬಹಳ ಹಿಂಜರಿಯುತ್ತಾನೆ. ಅದಕ್ಕೆ ಕಾರಣವೂ ನನಗೆ ತಿಳಿಯದು. ತಂಗಿ ಎಂದು ಕಂಡರೆ ಜವಾಬ್ದಾರಿ ಹೆಚ್ಚಾಗುತ್ತದೆಯೋ ಎಂದೋ ಆತನ ಮನಸಲ್ಲಿ ನಾನೇ ಮಡದಿಯಾಗಿ ಬರಬೇಕು ಎಂದೆನ್ನುವ ಆಸೆ ಏನಾದರೂ ಇದ್ದಿರಬಹುದು ಎಂದು ನನ್ನ ಅನುಮಾನ.

ಒಂದು ದಿನ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ಈತ ನನ್ನನ್ನು ನಾನು ಇವಳನ್ನು ಸಂಬಂಧಿಕರೊಂದಿಗೆ ನನ್ನ ತಂಗಿ ಎಂದು ನಾನು ಕಂಡೆ ಇಲ್ಲ ಯಾಕೆಂದರೆ ಈಕೆಯನ್ನು ನನ್ನ ಗೆಳತಿ ಎಂದು ಕಂಡಿರುವೆ ಇವಳೊಂದಿಗೆ ಕಳೆದ ಕ್ಷಣವೆಲ್ಲವೂ ಗೆಳೆತನ ಸಂಬಂಧದಿಂದ ಹೊರತು ಇನ್ಯಾವುದು ಇರಲು ಸಾಧ್ಯವಿಲ್ಲ. ಹೆಚ್ಚಿನ ಒಡನಾಟವಿಲ್ಲದೇ ಇದ್ದರೂ ಆಕೆಯನ್ನು ಪ್ರತಿ ಹೆಜ್ಜೆಯಲ್ಲೂ ಗಮನಿಸುತ್ತಾ ರಕ್ಷಕನಾಗಿದ್ದೆ, ಇವಳಿಗೆ ಎಷ್ಟು ಬಾರಿ ತಿಳಿ ಹೇಳಿದರು ಇದನ್ನು ಅರ್ಥೈಸಿಕೊಳ್ಳದೇ ನನಗೆ ನೀನು ಯಾಕೆ ಅಣ್ಣ ಕರೆಯಲು ಬಿಡುವುದಿಲ್ಲ ಜೊತೆಯಾಗಿ ಯಾಕೆ ಬರುವುದಿಲ್ಲ ಎನ್ನುವುದಾಗಿತ್ತು.

ನಾವಿಬ್ಬರೂ ಇದೇ ತರ ಕಿತ್ತಾಡುವುದನ್ನು ಕಂಡು ಪೋಷಕರು ಗಾಬರಿಗೊಳ್ಳುತ್ತಾರೆ. ಈ ಮಕ್ಕಳು ಹೀಗೆ ಇದ್ದರೆ ಮುಂದೊಂದಿನ ಇಬ್ಬರ ಓದಿಗೆ ಬಹುದೊಡ್ಡ ಪರಿಣಾಮ ಉಂಟಾಗಬಹುದು ಎಂದುಕೊಂಡಿದ್ದರು. ಹೀಗಾಗಿ ನಾವೇ ಇವರ ಜಗಳವನ್ನು ನಿಲ್ಲಿಸಬೇಕು ಎಂದು ದಿನಕ್ಕೊಂದು ಪ್ರಯತ್ನವ ಮಾಡುತ್ತಲೇ ಇರುತ್ತಾರೆ. ಅದು ಯಾವುದು ಸಹ ಫಲಕಾರಿಯಾಗಲಿಲ್ಲ. ಹೀಗೆನೆ ಮಾಡಿದ ಉಪಾಯವೆಲ್ಲವೂ ವ್ಯರ್ಥವಾಗಿದೆ ಹಾಗಂತ ಮೌನವಾಗಿ ಕುಳಿತರೆ ಇವರಿಬ್ಬರ ಕಥೆ ಏನಾಗುತ್ತದೆಯೋ ಎಂದು ಭಯ. ಇವರಿಬ್ಬರು ಹತ್ತಿರದಲ್ಲಿದ್ದರೆ ತಾನೆ ಜಗಳ ಎಂದು ನನ್ನನ್ನು ದೂರದ ಊರಿನ ‌ಶಾಲೆಗೆ ಸೇರಿಸಿ ಸರ್ಕಾರದ ವಸತಿ ನಿಲಯದಲ್ಲಿ ಉಳಿದುಕೊಳ್ಳುವಂತೆ ಮಾಡುತ್ತಾರೆ.

ಇದನ್ನೂ ಓದಿ: ಅಣ್ಣನಿಗೆ ಸದಾ ಒಳಿತು ಬಯಸುವ ತಂಗಿಗೆ, ಅಣ್ಣ ತರುವ ಉಡುಗೊರೆಯ ಕಾತುರ

ಅಣ್ಣನ ಅಪ್ಪುಗೆಯ ಪ್ರೀತಿ ಬಯಸುವ ನನಗೆ ಒಂದು ದಿನವು ಆ ಅಣ್ಣನಿಗೆ ರಾಖಿ ಕಟ್ಟಲು ಸಾಧ್ಯವಾಗದೇ ಇರುವುದು ದುಃಖದ ಸಂಗತಿ ಹಾಗೆಯೇ ನಾನು ಎಷ್ಟು ದೊಡ್ಡ ಮಟ್ಟಕ್ಕೆ ತಲುಪಿದರು ಈ ನಿರ್ಲಕ್ಷ್ಯವ ಮರೆಯಲು ಸಾಧ್ಯವಿಲ್ಲ. ನೀ ನನ್ನ ತಂಗಿ ಎಂದು ಒಪ್ಪಿಕೊಳ್ಳದೆ ಇರಬಹುದು ಆದರೆ ನಾನು ಮಾತ್ರ ನಿನಗೆ ಅಣ್ಣನ ಸ್ಥಾನವನ್ನೇ ಭದ್ರವಾಗಿ ಇಟ್ಟಿರುವೆ . ಒಂದಲ್ಲ ಒಂದು ದಿವಸ ಈ ತಂಗಿಗಾಗಿಯೇ ನೀನು ಚಡಪಡಿಸುವೆ, ಯಾವಾಗ ಬಂದರೂ ತಂಗಿಯ ಹೃದಯದ ಬಾಗಿಲು ನಿನಗಾಗಿ ತೆರೆದೆ ಇರುತ್ತದೆ. ರಕ್ಷಾ ಬಂಧನದ ಶುಭಾಶಯಗಳು ಅಣ್ಣ ಶುಭವಾಗಲಿ ನಿನಗೆ ನಿನ್ನ ಪ್ರೀತಿಯ ತಂಗಿಯ ಆಶೀರ್ವಾದ.

ಅನನ್ಯ ಎಚ್, ಸುಬ್ರಹ್ಮಣ್ಯ

Published On - 10:28 am, Wed, 30 August 23

Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!