AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eye Flu: ಮಳೆಗಾಲದಲ್ಲಿ ಕಣ್ಣಿನ ಸೋಂಕಿನ ಅಪಾಯ ಹೆಚ್ಚುತ್ತಿದೆ, ಅದರ ಲಕ್ಷಣ, ತಡೆಗಟ್ಟುವ ಕ್ರಮಗಳು

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನೀರಿನ ಮಟ್ಟ ಏರಿಕೆಯಾಗಿದ್ದು, ಒಂದೆಡೆ ಜಲಾವೃತದಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೆ ಮತ್ತೊಂದೆಡೆ ಮಳೆಯಿಂದಾಗಿ ಕಣ್ಣಿನ ಸೋಂಕಿನ ಭೀತಿಯೂ ಹೆಚ್ಚುತ್ತಿದೆ. ಕೆಲವು ದಿನಗಳಿಂದ ಕಣ್ಣಿನ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರ ಲಕ್ಷಣಗಳು, ಕಾರಣಗಳು ಮತ್ತು ಅದನ್ನು ತಡೆಗಟ್ಟುವ ಕ್ರಮದ ಬಗ್ಗೆ ತಿಳಿಯಿರಿ.

Eye Flu: ಮಳೆಗಾಲದಲ್ಲಿ ಕಣ್ಣಿನ ಸೋಂಕಿನ ಅಪಾಯ ಹೆಚ್ಚುತ್ತಿದೆ, ಅದರ ಲಕ್ಷಣ, ತಡೆಗಟ್ಟುವ ಕ್ರಮಗಳು
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Jul 24, 2023 | 5:05 PM

Share

ಮಳೆಗಾಲವು ಅನೇಕ ರೋಗಗಳನ್ನು ಸಹ ಹೊತ್ತು ತರುತ್ತದೆ. ಏಕೆಂದರೆ ಈ ಋತುವಿನಲ್ಲಿ ಗರಿಷ್ಠ ಬ್ಯಾಕ್ಟೀರಿಯಾಗಳು ಪ್ರವರ್ಧಮಾನಕ್ಕೆ ಬರುತ್ತವೆ. ಒಂದೆಡೆ ಅತಿವೃಷ್ಟಿ ಮಳೆಯಿಂದಾಗಿ ಜನ ಕಂಗಾಲಾಗಿದ್ದಾರೆ ಮತ್ತೊಂದೆಡೆ ರೋಗ ರುಜಿನಗಳೂ ಮುತ್ತಿಗೆ ಹಾಕುತ್ತಿವೆ. ಇವುಗಳಲ್ಲಿ ಕಣ್ಣಿನ ಸೋಂಕು ಕೂಡ ಒಂದು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಕಾಂಜಂಕ್ಟಿವಿಟಿಸ್ ಎಂದೂ ಕರೆಯುತ್ತಾರೆ. ಈ ಕಣ್ಣಿನ ಕಾಯಿಲೆಯಿಂದಾಗಿ, ಉರಿ, ನೋವು ಮತ್ತು ಕಣ್ಣು ಕೆಂಪಾಗುವಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಸರಿಯಾದ ರೀತಿಯಲ್ಲಿ ಕಾಳಜಿ ವಹಿಸುವ ಮೂಲಕ ವೈರಲ್ ಸೋಂಕುಗಳ ಕಾಯಿಲೆಗಳು ಹರಡುವುದನ್ನು ತಪ್ಪಿಸಬಹುದು.

ಕಣ್ಣಿನ ಸೋಂಕು ಎಂದರೇನು?

ಕಣ್ಣಿನ ಸೋಂಕನ್ನು ಪಿಂಕ್ ಐ ಅಥವಾ ವೈದ್ಯಕೀಯ ಭಾಷೆಯಲ್ಲಿ ಕಾಂಜಂಕ್ಟಿವಿಟಿಸ್ ಎಂದು ಕರೆಯುತ್ತಾರೆ. ಇದು ಮಳೆಗಾಲದಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಈ ಪ್ರಕರಣಗಳಲ್ಲಿ ಕಣ್ಣಿನ ಬಿಳಿ ಭಾಗದಲ್ಲಿ ಸೋಂಕು ಸಂಭವಿಸುತ್ತದೆ. ಕಣ್ಣಿನ ಸೋಂಕಿನ ಹೆಚ್ಚಿನ ಪ್ರಕರಣಗಳು ಶೀತ ಕೆಮ್ಮಿನಂತಹ ವೈರಸ್ ನಿಂದ ಉಂಟಾಗುತ್ತದೆ. ಮಳೆಗಾಲದಲ್ಲಿ ಶಿಲೀಂಧ್ರಗಳ ಸೋಂಕಿನೊಂದಿಗೆ ವಾಯು ಮಾಲಿನ್ಯ, ಪರಿಸರದಲ್ಲಿನ ತೇವಾಂಶಯುಕ್ತ ವಾತಾರಣದಿಂದ ಕೂಡಾ ಈ ಸೋಂಕು ಹರಡುತ್ತದೆ. ಇದರಿಂದಾಗಿ ಹೆಚ್ಚಿನ ಜನರು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತಾರೆ.

ಕಣ್ಣಿನ ಸೋಂಕು ಹೇಗೆ ಹರಡುತ್ತದೆ?

ಬೇಸಿಗೆಯ ನಂತರ, ಮಳೆಯಿಂದಾಗಿ ಹವಾಮಾನದಲ್ಲಿ ತ್ವರಿತ ಬದಲಾವಣೆ ಕಂಡುಬರುತ್ತದೆ. ಈ ಋತುವಿನಲ್ಲಿ ವಾಯು ಮಾಲಿನ್ಯ ಮತ್ತು ತೇವಾಂಶದಿಂದ ಶಿಲೀಂದ್ರಗಳ ಸೋಂಕಿನ ಸಮಸ್ಯೆಗಳು ಉದ್ಭವಿಸುತ್ತದೆ. ಇದರಲ್ಲಿ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚು ಕಾಡುತ್ತದೆ. ಈ ಋತುವಿನಲ್ಲಿ ಶಿಲೀಂದ್ರಗಳ ಸೋಂಕು ಹೆಚ್ಚಾಗುವುದರಿಂದ, ಕಣ್ಣುಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ವಿಶೇಷವಾಗಿ ತಮ್ಮ ಕಣ್ಣುಗಳಿಗೆ ಕಾಂಟೆಕ್ಟ್ ಲೆನ್ಸ್ ಧರಿಸುವ ಜನರು.

ಕಣ್ಣಿನ ಜ್ವರದ ಲಕ್ಷಣಗಳು:

• ಕಣ್ಣು ಕೆಂಪಾಗುವುದು

• ಕಣ್ಣಿನಲ್ಲಿ ಬಿಳಿ ಲೋಳೆ ಕಾಣಿಸಿಕೊಳ್ಳುವುದು

• ಕಣ್ಣು ಊತಕೊಳ್ಳುವುದು

• ಕಣ್ಣು ನೋವು

• ಕಣ್ಣಿನ ತುರಿಕೆ ಕಾಣಿಸಿಕೊಳ್ಳುವುದು

ಕಣ್ಣಿನ ಸೋಂಕನ್ನು ತಪ್ಪಿಸುವುದು ಹೇಗೆ?

• ಕಣ್ಣಿನ ಸೋಂಕು ಭಾದಿತ ವ್ಯಕ್ತಿಯು ಕಪ್ಪು ಕನ್ನಡಕವನ್ನು ಧರಿಸಬೇಕು

• ಟಿವಿ ಅಥವಾ ಮೊಬೈಲ್ ನೋಡುವುದನ್ನು ತಪ್ಪಿಸಿ

• ಪದೇ ಪದೇ ಕಣ್ಣುಗಳನ್ನು ಕೈಯಿಂದ ಮುಟ್ಟಬೇಡಿ

• ಕಣ್ಣಿನ ಸೋಂಕನ್ನು ತಪ್ಪಿಸಲು, ಮಳೆಯಲ್ಲಿ ಒದ್ದೆಯಾಗುವುದನ್ನು ತಪ್ಪಿಸಿ

ಇದನ್ನೂ ಓದಿ:ಕರ್ನಾಟಕ, ದೆಹಲಿ ಸೇರಿದಂತೆ ಹಲವೆಡೆ ಮದ್ರಾಸ್ ಐ ಪ್ರಕರಣಗಳು ಹೆಚ್ಚಳ, ಲಕ್ಷಣಗಳು, ತಡೆಗಟ್ಟುವ ಮಾರ್ಗ, ಚಿಕಿತ್ಸೆ ಬಗ್ಗೆ ಮಾಹಿತಿ ಇಲ್ಲಿದೆ

ನಿಮಗೆ ಕಣ್ಣಿನ ಜ್ವರ ಬಂದಾಗ ಏನು ಮಾಡಬೇಕು:

ಉಗುರು ಬೆಚ್ಚಗಿನ ನೀರಿನಿಂದ ಕಣ್ಣುಗಳನ್ನು ಸ್ವಚ್ಛಗೊಳಿಸಿ. ಕಣ್ಣುಗಳನ್ನು ಸ್ವಚ್ಛಗೊಳಿಸಲು ಶುದ್ಧ ಮತ್ತು ಹತ್ತಿ ಬಟ್ಟೆಯನ್ನು ಬಳಸಿ. ಕಣ್ಣಿನ ಜ್ವರದ ಲಕ್ಷಣಗಳು ಕಾಣಿಸಿಕೊಂಡಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ

ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೇವಿಸಬೇಕಾದ ಆಹಾರಗಳು:

ಋತುಗಳ ಬದಲಾವಣೆಯಾದಾಗಲೆಲ್ಲಾ, ನಿಮ್ಮ ಆಹಾರದ ಬಗ್ಗೆ ನೀವು ಸರಿಯಾದ ಗಮನವನ್ನು ನೀಡಬೇಕು. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.

ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಈ ಕೆಲವೊಂದು ಆಹಾವನ್ನು ಸೇವಿಸಿ: ಕ್ಯಾರೆಟ್, ನೆಲ್ಲಿಕಾಯಿ, ಬಾದಾಮಿ, ಹಸಿರು ಎಲೆ ತರಕಾರಿಗಳು, ಮೀನು, ಮೊಟ್ಟೆ, ಟೊಮೆಟೊ, ಡ್ರೈ ನಟ್ಸ್ ಮತ್ತು ಬೀಜಗಳು

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ