AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Self-Validation: ನಿಮ್ಮನ್ನು ನೀವು ಮೊದಲ ಅರ್ಥ ಮಾಡಿಕೊಳ್ಳಿ, ಸ್ವಯಂ ಮೌಲ್ಯೀಕರಣ ಅಗತ್ಯ ಯಾಕೆ?

ಸ್ವಯಂ ಸ್ಥಿತಿಸ್ಥಾಪಕತ್ವ ಮತ್ತು ಸ್ವ-ಪ್ರೀತಿಯ ಪ್ರಯಾಣವು ನಮ್ಮನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂದು ಕಲಿಯುವುದರೊಂದಿಗೆ ಪ್ರಾರಂಭವಾಗುತ್ತದೆ. ನೆಮ್ಮದಿಯನ್ನು ಕಂಡುಕೊಳ್ಳಲು ನಾವು ಕ್ರಮೇಣ ಕಲಿಯಬೇಕಾದ ಮತ್ತು ಅದನ್ನು ಕಾರ್ಯಗತಗೊಳಿಸಬೇಕಾದ ಪ್ರಮುಖ ವಿಷಯಗಳಲ್ಲಿ ಸ್ವಯಂ ಪ್ರೀತಿ ಕೂಡಾ ಒಂದು.

Self-Validation: ನಿಮ್ಮನ್ನು ನೀವು ಮೊದಲ ಅರ್ಥ ಮಾಡಿಕೊಳ್ಳಿ, ಸ್ವಯಂ ಮೌಲ್ಯೀಕರಣ ಅಗತ್ಯ ಯಾಕೆ?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Feb 09, 2023 | 3:41 PM

ಸುರಕ್ಷಿತ ಜನರನ್ನು ಹುಡುಕುವುದರಿಂದ ಹಿಡಿದು ನಾವು ನಮ್ಮ ಭಾವನೆಗಳನ್ನು ತಟಸ್ಥವಾಗಿ ವೀಕ್ಷಿಸಲು ಕಲಿಯುವವರೆಗೆ, ನಮ್ಮನ್ನು ನಾವು ಸ್ವಯಂ ಮೌಲ್ಯೀಕರಿಸಲು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವೊಂದು ವಿಷಯಗಳು ಇಲ್ಲಿವೆ. ಸ್ವಯಂ ಸ್ಥಿತಿಸ್ಥಾಪಕತ್ವ ಮತ್ತು ಸ್ವ-ಪ್ರೀತಿಯ ಪ್ರಯಾಣವು ನಮ್ಮನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂದು ಕಲಿಯುವುದರೊಂದಿಗೆ ಪ್ರಾರಂಭವಾಗುತ್ತದೆ. ನೆಮ್ಮದಿಯನ್ನು ಕಂಡುಕೊಳ್ಳಲು ನಾವು ಕ್ರಮೇಣ ಕಲಿಯಬೇಕಾದ ಮತ್ತು ಅದನ್ನು ಕಾರ್ಯಗತಗೊಳಿಸಬೇಕಾದ ಪ್ರಮುಖ ವಿಷಯಗಳಲ್ಲಿ ಸ್ವಯಂ ಪ್ರೀತಿ ಕೂಡಾ ಒಂದು. ನಮ್ಮನ್ನು ನಾವು ಪ್ರೀತಿಸಲು ಕಲಿಯುವುದು ಮತ್ತು ನಮ್ಮನ್ನು ನಾವೇ ಪ್ರಮುಖ ಆದ್ಯತೆಯಾಗಿ ಸ್ವೀಕರಿಸುವುದು, ಇವುಗಳನ್ನು ಉದ್ದೇಶಿಸಿ ಸೈಕೋಥೆರಪಿಸ್ಟ್ ಎಮಿಲಿ ಹೆಚ್ ಸ್ಯಾಂಡರ್ಸ್ ‘ಸ್ವಯಂ ಮೌಲ್ಯಮಾಪನವು ಅನೇಕ ಕಾರಣಗಳಿಗಾಗಿ ತುಂಬಾ ಮುಖ್ಯವಾಗಿದೆ. ವಿಶೇಷವಾಗಿ ನಮ್ಮ ಬಗ್ಗೆ ಭಾವನಾತ್ಮಕವಾಗಿ ಕಾಳಜಿವಹಿಸುವ ಯಾರಾದರೂ ಇಲ್ಲದಿದ್ದಾಗ. ನಿಮ್ಮ ಭಾವನೆಗಳು, ಅಗತ್ಯಗಳಿಗೆ ಹೊಂದಿಕೊಳ್ಳಲು ನಿಮ್ಮನ್ನು ನೀವೇ ಪ್ರಸ್ತುತಪಡಿಸಿ ಹಾಗೂ ಮೌಲ್ಯೀಕರಿಸಿ’ ಎಂದು ಹೇಳಿದ್ದಾರೆ.

ಭಾವನಾತ್ಮಕ ಅಂಶಗಳನ್ನು ಬಲಪಡಿಸಲು ಕೆಲವೊಂದು ಸಣ್ಣ ವಿಷಯಗಳು ಇಲ್ಲಿವೆ. ಈ ವಿಷಯಗಳನ್ನು ಅಳವಡಿಸಿಕೊಂಡಾಗ ನಮ್ಮನ್ನು ಸ್ವಯಂ ಮೌಲ್ಯಮಾಪನ ಮಾಡಲು ಸಾಧ್ಯ ಎಂದು ಎಮಿಲಿ ಹೇಳುತ್ತಾರೆ.

ಇದನ್ನೂ ಓದಿ: Lifestyle Tips: ನೀವು 6 ಗಂಟೆಗಿಂತ ಕಡಿಮೆ ನಿದ್ರೆ ಮಾಡುತ್ತೀರಾ? ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ

ಭಾವನೆಗಳು: ನಮ್ಮ ಭಾವನೆಗಳನ್ನು ತಟಸ್ಥವಾಗಿ ನೋಡಲು ನಾವು ಕಲಿಯಬೇಕು. ನಮ್ಮ ಭಾವನೆಗಳನ್ನು ಒಳ್ಳೆಯದು ಅಥವಾ ಕೆಟ್ಟದ್ದು ಎಂದು ನಿರ್ಣಯಿಸುವುದು ಅದು ನಮಗೆ ವಿಷಕಾರಿಯಾಗಬಹುದು. ಹಾಗಾಗಿ ಒಮ್ಮೆ ನಾವು ಭಾವನೆಗಳನ್ನು ತಟಸ್ಥವೆಂದು ಪರಿಗಣಿಸಲು ಕಲಿತರೆ, ನಮಗೆ ಅಗತ್ಯವಿರುವ ಸ್ವಯಂ ಮೌಲ್ಯೀಕರಣವನ್ನು ಹೊಂದಲು ಸಾಧ್ಯವಾಗುತ್ತದೆ.

ಹೋಲಿಕೆ: ನಾವು ಅನುಭವಿಸುವ ರೀತಿಯನ್ನು ಇತರರ ಭಾವನೆಗಳೊಂದಿಗೆ ಹೋಲಿಸುವುದು ಒಂದು ಕೆಟ್ಟ ಗುಣವಾಗಿದೆ. ಅದು ನಮ್ಮಲ್ಲಿ ಹೆಚ್ಚಿನವರನ್ನು ಶೋಚನೀಯಗೊಳಿಸುತ್ತದೆ. ನಮ್ಮನ್ನು ಮತ್ತು ನಮ್ಮ ಪ್ರತ್ಯೇಕತೆಯನ್ನು ಅಳವಡಿಸಿಕೊಳ್ಳಲು ಕಲಿಯುವುದು ಸ್ವಯಂ ಪ್ರೀತಿ ಮತ್ತು ಸ್ವಯಂ ದೃಢೀಕರಣದ ಹಂತಗಳಲ್ಲಿ ಒಂದಾಗಿದೆ.

ಅಗತ್ಯ: ನಮಗೆ ಬೇಕಾದುದನ್ನು ಸ್ವಯಂ ನಾವೇ ಪಡೆದುಕೊಳ್ಳಲು ಕಲಿಯಬೇಕು. ನಮ್ಮ ಬಗ್ಗೆ ನಮಗೆ ಸ್ಪಷ್ಟತೆಯನ್ನು ಪಡೆದರೆ, ನಮಗೆ ಅಗತ್ಯವಿರುವ ಮತ್ತು ಬಯಸಿದ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಪರಿಸ್ಥಿತಿಗಳನ್ನು ಉತ್ತಮವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.

ಜನರು: ನಮ್ಮ ಸುತ್ತಲಿನ ಜನರು ಮತ್ತು ನಾವು ಹೊಂದುವ ಸ್ನೇಹಿತರ ಗುಂಪು ನಮ್ಮ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಸುರಕ್ಷಿತ ಜನರನ್ನು ಹುಡುಕಲು ಕಲಿಯುವುದು ಹಾಗೂ ಯಾರೊಂದಿಗೆ ನಾವು ಮುಕ್ತವಾಗಿ ತೆರೆದುಕೊಳ್ಳಬೇಕು ಎಂಬುದು ನಮ್ಮ ಭಾವನೆಗಳು ಬೆಳೆಯಲು ಸುರಕ್ಷಿತ ಮತ್ತು ಆರೋಗ್ಯಕರ ಸ್ಥಳವನ್ನು ರಚಿಸಲು ಮುಖ್ಯವಾಗಿರುತ್ತದೆ.

5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ