AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ ಇಂತಹ ಜನಗಳಿಂದ ಆದಷ್ಟು ದೂರವಿರಿ

ಜೀವನದಲ್ಲಿ ಸಂತೋಷವಾಗಿರಬೇಕು, ನೆಮ್ಮದಿಯ ಜೀವನ ನಡೆಸಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ನಮ್ಮ ಸುತ್ತ ಮುತ್ತಲಿನ ಜನರ ಕಾರಣದಿಂದ ಆ ಸಂತೋಷ, ನೆಮ್ಮದಿಯೆಲ್ಲಾ ಹಾಳಾಗಿ ಹೋಗುತ್ತದೆ. ಆದ್ದರಿಂದ ಸಂತೋಷವನ್ನು ಹಾಳು ಮಾಡುವ ಈ ಕೆಲವೊಂದಿಷ್ಟು ಜನರಿಂದ ಆದಷ್ಟು ದೂರವಿರುವುದು ತುಂಬಾನೇ ಒಳ್ಳೆಯದು.

ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ ಇಂತಹ ಜನಗಳಿಂದ ಆದಷ್ಟು ದೂರವಿರಿ
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on:May 27, 2026 | 6:55 PM

Share

ನಮ್ಮ ಸುತ್ತಮುತ್ತಲಿನ ಜನರು ನಮ್ಮ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಾರೆ. ಹೌದು ಕೆಟ್ಟ ಸಹವಾಸವು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಅದೇ ಒಳ್ಳೆಯ ಜನರ ಸಹವಾಸವು ಉತ್ತಮ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಅದೇ ರೀತಿ ಈ ಕೆಲವೊಂದಿಷ್ಟು ಜನರಿಂದ ಜೀವನದ ಸಂತೋಷವೆಲ್ಲಾ (happiness) ಹಾಳಾಗಿಬಿಡುತ್ತದೆ. ಈ ಜನರು ಜೀವನದಲ್ಲಿ ನಕಾರಾತ್ಮಕತೆಯನ್ನು ತರುತ್ತಾರೆ ಮತ್ತು ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾರೆ. ಅಲ್ಲದೆ ಇಂತಹ ಜನರು ಗೆದ್ದಲುಗಳಂತೆ, ನಮ್ಮ ಜೀವನದ ಶಾಂತಿ ಮತ್ತು ಸಂತೋಷವನ್ನು ಮೌನವಾಗಿ ಕಸಿದುಕೊಳ್ಳುತ್ತಾರೆ. ಹಾಗಾಗಿ ಈ ಕೆಲವೊಂದಿಷ್ಟು ಜನರಿಂದ ದೂರವಿರುವ ಮೂಲಕ ಸಂತೋಷದ ಜೀವನ ನಡೆಸಿ.

ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ ಈ ಜನಗಳಿಂದ ದೂರವಿರಿ:

ಯಾವಾಗಲೂ ಅಳುವ ಮತ್ತು ದೂರು ನೀಡುವ ಜನರು: ಇವರು ಜೀವನದಲ್ಲಿ ಎಂದಿಗೂ ಒಳ್ಳೆಯದನ್ನು ನೋಡದ ಜನರು. ಇಂತಹ ಜನರು ಯಾವಾಗಲೂ ನಕಾರಾತ್ಮಕವಾಗಿಯೇ ಯೋಚಿಸುತ್ತಿರುತ್ತಾರೆ. ಇವರ ಈ ನಕಾರಾತ್ಮಕತೆ ನಿಮ್ಮ ಮನಸ್ಥಿತಿಯನ್ನು ಹಾಳುಮಾಡಬಹುದು. ಅಂತಹ ಜನರು ನಿಮ್ಮ ಸಕಾರಾತ್ಮಕ ಶಕ್ತಿಯನ್ನು, ಸಂತೋಷವನ್ನು ಕಸಿದುಕೊಳ್ಳುತ್ತಾರೆ. ಹಾಗಾಗಿ ಯಾವಾಗಲೂ ಇತರರನ್ನು ದೂರುವ, ನಕಾರಾತ್ಮಕ ಮಾತುಗಳನ್ನಾಡುವ ಜನರಿಂದ ದೂರವಿರುವುದು ಉತ್ತಮ.

ತಮ್ಮ ಸ್ವಂತ ಹಿತಾಸಕ್ತಿಗಳನ್ನು ಮಾತ್ರ ಬಯಸುವ ಜನರು: ನಮ್ಮ ಸುತ್ತಮುತ್ತ ಕೆಲವೊಂದಿಷ್ಟು ಸ್ವಾರ್ಥ ಸ್ವಭಾವದ ಜನಗಳಿರುತ್ತಾರೆ. ಅವರು ತಮ್ಮ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಅವರು ತಮ್ಮ ಕಾರ್ಯವನ್ನು ಸಾಧಿಸುವವರೆಗೆ ಮಾತ್ರ ನಿಮ್ಮ ಜೊತೆ ಇರುತ್ತಾರೆ, ನಂತರ ನಿಮ್ಮ ಬೆನ್ನಿಗೆ ಚೂರಿ ಹಾಕಿ ಹೋಗುತ್ತಾರೆ. ಇಂತಹ ಜನಗಳಿಂದ ನೋವು, ನಂಬಿಕೆ ದ್ರೋಹ ಹೊರತು ನಿಮಗೆ ಬೇರೇನು ಸಿಗುವುದಿಲ್ಲ. ಆದ್ದರಿಂದ ಸ್ವಾರ್ಥಿಗಳಿಂದ ದೂರವಿರಿ.

ಚಾಡಿಕೋರರು: ನಿಮ್ಮ ಜೊತೆ ಇರುವ ಯಾರಾದರೂ ಯಾವಾಗಲೂ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ನಿರಂತರವಾಗಿ ಇತರರ ಬಗ್ಗೆ ಚಾಡಿ ಹೇಳುತ್ತಿದ್ದರೆ ಅಂತಹ ಜನಗಳಿಂದ ದೂರವಿರಿ. ಇವರ ಈ ಕೆಟ್ಟ ಮನಸ್ಥಿಯ ಕಾರಣದಿಂದ ನಿಮ್ಮ ಮನಸ್ಸು ಹಾಳಾಗುತ್ತದೆ. ಜೊತೆಗೆ ಅವರು ಸಂಬಂಧಗಳನ್ನೂ ಹಾಳು ಮಾಡುತ್ತಾರೆ. ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಬಯಸಿದರೆ ಚಾಡಿಕೋರರಿಂದ ದೂರವಿರಿ.

ಇದನ್ನೂ ಓದಿ: ಅತಿಯಾದ ಕೋಪ ದೇಹದ ಎಷ್ಟೆಲ್ಲಾ ದುಷ್ಪರಿಣಾಮಗಳನ್ನು ಬೀರುತ್ತವೆ ಗೊತ್ತಾ?

ನಿಮ್ಮ ಪ್ರಗತಿ ಮತ್ತು ಸಂತೋಷವನ್ನು ನೋಡಿ ಅಸೂಯೆ ಪಡುವವರು: ನಿಮ್ಮ ಸಂತೋಷ, ಏಳಿಗೆಯನ್ನು ನೋಡಿ ಕೆಲವರು ತಾವು ಖುಷಿ ಪಟ್ಟವರಂತೆ ನಟಿಸಿ ಹಿಂದೆಯಿಂದ ಅಸೂಯೆಪಟ್ಟುಕೊಳ್ಳುತ್ತಾರೆ. ಇಂತಹ ಜನರಿಂದ ನೆಮ್ಮದಿಯೇ ಹಾಳಾಗುತ್ತದೆ. ನಿಮ್ಮ ಸುತ್ತಮುತ್ತಲೂ ಇಂತಹ ಜನರಿದ್ದರೆ ಅವರಿಂದ ಸಾಧ್ಯವಾದಷ್ಟು ದೂರವಿರಿ.

ನಿಮ್ಮನ್ನು ಪ್ರೋತ್ಸಾಹಿಸದ ಜನ: ನೀವು ಹೊಸ ಕಾರ್ಯಗಳನ್ನು ಅಥವಾ ಸಕಾರಾತ್ಮಕವಾದ ಏನನ್ನಾದರು ಮಾಡಲು ಮುಂದಾದಾಗ ಅದಕ್ಕೆ ಬೆಂಬಲ ನೀಡದೆ ನಕಾರಾತ್ಮಕ ಮಾತುಗಳನ್ನಾಡಿ ನಿಮಗೆ ಭಯ ಹುಟ್ಟಿಸುವ ಜನರಿಂದ ಆದಷ್ಟು ದೂರವಿರಿ. ಇವರು ನಿಮ್ಮ ಸಂತೋಷ, ಆತ್ಮವಿಶ್ವಾಸ ಎರಡನ್ನೂ ಕಿತ್ತುಕೊಳ್ಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:54 pm, Wed, 27 May 26

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ಅರೆಬೆತ್ತಲೆ ಮೆರವಣಿಗೆ!
ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರ ತಲೆ ಬೋಳಿಸಿ, ಅರೆಬೆತ್ತಲೆ ಮೆರವಣಿಗೆ!
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ಸಿಎಂ ರಾಜೀನಾಮೆ ಸುದ್ದಿ ನಡುವೆ ಕುತೂಹಲ ಮೂಡಿಸಿದ ಮುಸ್ಲಿಂ ನಾಯಕರ ಸಭೆ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು
ಪದತ್ಯಾಗಕ್ಕೂ ಮುನ್ನವೇ ತಮ್ಮ ಕನಸು ನನಸು ಮಾಡಲು ಮುಂದಾದ ಸಿದ್ದರಾಮಯ್ಯ
ಪದತ್ಯಾಗಕ್ಕೂ ಮುನ್ನವೇ ತಮ್ಮ ಕನಸು ನನಸು ಮಾಡಲು ಮುಂದಾದ ಸಿದ್ದರಾಮಯ್ಯ
ರಾಜೀನಾಮೆ ಸುದ್ದಿ ನಡುವೆ ಆಪ್ತರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ
ರಾಜೀನಾಮೆ ಸುದ್ದಿ ನಡುವೆ ಆಪ್ತರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ
ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿದ್ದರಾಮಯ್ಯ ನಿವಾಸಕ್ಕೆ ಬಂದ ಫ್ಯಾನ್ಸ್
ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿದ್ದರಾಮಯ್ಯ ನಿವಾಸಕ್ಕೆ ಬಂದ ಫ್ಯಾನ್ಸ್
ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಸಿಡಿದೆದ್ದ ಅಹಿಂದ
ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಸಿಡಿದೆದ್ದ ಅಹಿಂದ
ಪೋರ್ಷೆ ಕಾರು ಅಪಘಾತದ ಆರೋಪಿ ಅಗರ್ವಾಲ್ ಉದ್ಧಟತನ!
ಪೋರ್ಷೆ ಕಾರು ಅಪಘಾತದ ಆರೋಪಿ ಅಗರ್ವಾಲ್ ಉದ್ಧಟತನ!