ಕಾಶ್ಮೀರಕ್ಕೆ ಹೋಗಲು ಪ್ಲಾನ್ ಮಾಡುತ್ತಿರುವವರಿಗೆ ಸಿಹಿ ಸುದ್ದಿ; IRCTC ವತಿಯಿಂದ 6 ದಿನದ ಜನ್ನತ್-ಎ-ಕಾಶ್ಮೀರ ಟೂರ್ ಪ್ಯಾಕೇಜ್ ಘೋಷಣೆ

ಕಾಶ್ಮೀರಕ್ಕೆ ಹೋಗಬೇಕು ಎಂದುಕೊಂಡವರಿಗೆ IRCTC ಸಿಹಿ ಸುದ್ದಿ ನೀಡಿದ್ದು 6 ದಿನಗಳ ಕಾಶ್ಮೀರ ಟೂರ್ ಪ್ಯಾಕೇಜ್ ಘೋಷಿಸಿದೆ. ಈ ಪ್ಯಾಕೇಜ್​ನಲ್ಲಿ ಊಟ, ವಸತಿ ಸೇರಿದಂತೆ ಎಲ್ಲಾ ರೀತಿಯ ವೆಚ್ಚ ಒಳಗೊಂಡಿದೆ.

ಕಾಶ್ಮೀರಕ್ಕೆ ಹೋಗಲು ಪ್ಲಾನ್ ಮಾಡುತ್ತಿರುವವರಿಗೆ ಸಿಹಿ ಸುದ್ದಿ; IRCTC ವತಿಯಿಂದ 6 ದಿನದ ಜನ್ನತ್-ಎ-ಕಾಶ್ಮೀರ ಟೂರ್ ಪ್ಯಾಕೇಜ್ ಘೋಷಣೆ
ಕಾಶ್ಮೀರ
Follow us
|

Updated on: Mar 17, 2023 | 8:00 AM

ಭೂಮಿ ಮೇಲಿನ ಸ್ವರ್ಗ ಎಂದೆ ಕರೆಸಿಕೊಳ್ಳುವ ಜಮ್ಮು ಕಾಶ್ಮೀರ(Jammu Kashmir) ನೋಡಬೇಕೆಂಬುವುದು ಅನೇಕ ಜನರ ಆಸೆ. ಸದ್ಯ ಕಾಶ್ಮೀರದಲ್ಲಿ ಬೇಸಿಗೆಯ ರಜೆಯನ್ನು ಕಳೆಯಲು ಇಷ್ಟ ಪಡುವವರಿಗೆ ಐಆರ್​ಸಿಟಿಸಿ(IRCTC )ಶುಭ ಸುದ್ದಿ ನೀಡಿದೆ. ಭಾರತೀಯ ರೈಲ್ವೆ ಕಾಶ್ಮೀರ ಟೂರ್ ಪ್ಯಾಕೇಜ್(Jannat-e-Kashmir Tour Package) ಅನ್ನು ಘೋಷಿಸಿದೆ. 6-ದಿನಗಳ ಈ ಕಾಶ್ಮೀರ ಪ್ರವಾಸದ ಪ್ಯಾಕೇಜ್‌ನಲ್ಲಿ ಊಟ, ವಸತಿ ಮತ್ತು ವಿಮಾನ ದರ ಸೇರಿದಂತೆ ಎಲ್ಲಾ ಪ್ರಯಾಣ ವೆಚ್ಚಗಳು ಒಳಗೊಂಡಿವೆ.

ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಭಾರತೀಯ ರೈಲ್ವೆಯ ಒಂದು ವಿಭಾಗವಾಗಿದ್ದು, ಈ ಕಾಶ್ಮೀರ ಪ್ರವಾಸದ ಪ್ಯಾಕೇಜ್​ಗೆ ಜನ್ನತ್-ಎ-ಕಾಶ್ಮೀರ್ ಎಂಬ ಹೆಸರು ನೀಡಲಾಗಿದೆ. ಈ ಪ್ಯಾಕೇಜ್ ಏಪ್ರಿಲ್ 9 ರಿಂದ ಪ್ರಾರಂಭವಾಗುತ್ತೆ.

ಕಾಶ್ಮೀರ ಟೂರ್ ಪ್ಯಾಕೇಜ್​ನಲ್ಲಿ ಏನೇನು ಸವಲತ್ತುಗಳಿವೆ?

ಈ ಪ್ಯಾಕೇಜ್​ನಲ್ಲಿ ನಿಮ್ಮ ರೌಂಡ್-ಟ್ರಿಪ್ ಎಕಾನಮಿ ಫ್ಲೈಟ್ ಟಿಕೆಟ್‌ಗಳನ್ನು ಕವರ್ ಮಾಡಲಾಗುವುದು. ಮತ್ತು ಶ್ರೀನಗರದಲ್ಲಿ ಬೋಟ್‌ ಹೌಸ್​ನಲ್ಲಿ ಒಂದು ರಾತ್ರಿ ಕಳೆಯಲು ಜೊತೆಗೆ ಹೋಟೆಲ್‌ನಲ್ಲಿ ನಾಲ್ಕು ರಾತ್ರಿ ತಂಗುವ ವೆಚ್ಚ ಭರಿಸಲಾಗುತ್ತೆ. ಅಲ್ಲದೆ, ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ನಾನ್-ಎಸಿ ವಾಹನದಲ್ಲಿ ಕರೆದುಕೊಂಡು ಹೋಗಿ ತೋರಿಸಲಾಗುತ್ತೆ. ಸೋನ್ಮಾರ್ಗ್, ಗುಲ್ಮಾರ್ಗ್, ಪಹಲ್ಗಾಮ್, ದಾಲ್ ಸರೋವರ ಮತ್ತು ಹಲವಾರು ಇತರ ರಮಣೀಯ ಸ್ಥಳಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ.

ಇದನ್ನೂ ಓದಿ: Bharat Nepal Ashtha Yatra: ಮಾರ್ಚ್​ 31 ರಿಂದ ಭಾರತ ನೇಪಾಳ ಆಸ್ತಾ ಯಾತ್ರೆ ಆರಂಭಿಸಲಿದೆ ಭಾರತೀಯ ರೈಲ್ವೆ, ವಿವರಗಳು ಇಲ್ಲಿವೆ

IRCTC ಕಾಶ್ಮೀರ ಪ್ರವಾಸ ಪ್ಯಾಕೇಜ್ ದರ ಎಷ್ಟು?

ಕಾಶ್ಮೀರ ಪ್ರವಾಸದ ಪ್ಯಾಕೇಜ್‌ನ ವೆಚ್ಚವು 41,300 ರೂ ರಿಂದ ಪ್ರಾರಂಭವಾಗಿ 61,000 ವರೆಗೆ ಇರುತ್ತದೆ. ಒಬ್ಬ ವ್ಯಕ್ತಿಯ ಟಿಕೆಟ್‌ ದರ ಸುಮಾರು 60,100ರೂ ವರೆಗೂ ಹೋಗಬಹುದು. ಆದರೆ ಇಬ್ಬರು ಒಟ್ಟಿಗೆ ಪ್ರಯಾಣಿಸಿದರೆ ವೆಚ್ಚವು ಪ್ರತಿ ವ್ಯಕ್ತಿಗೆ 44,900ರೂಗೆ ಇಳಿಯುತ್ತದೆ. ಮೂರು ಜನರು ಒಟ್ಟಿಗೆ ಪ್ರಯಾಣಿಸುತ್ತಿದ್ದರೆ, ಪ್ರತಿ ವ್ಯಕ್ತಿಗೆ 44,000 ಗೆ ಇಳಿಯುತ್ತದೆ. ಹಾಸಿಗೆ ಇಲ್ಲದ ಮಕ್ಕಳ ಟಿಕೆಟ್ ದರ 41,300ರೂ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್