AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tattoo: ಭಾರತೀಯ ಬುಡಕಟ್ಟು ಸಂಸ್ಕೃತಿಯ ಒಂದು ಭಾಗವೇ ನಾವೀಗ ಫ್ಯಾಶನ್ ಆಗಿ ಬಳಸುತ್ತಿರುವ ಟ್ಯಾಟೂಗಳು; ಇಲ್ಲಿದೆ ಇದರ ಕುರಿತ ಮಾಹಿತಿ

ಟ್ಯಾಟೂ ಹಾಕಿಸಿಕೊಳ್ಳುವುದು ವಿದೇಶಿಗರಿಂದ ಭಾರತಕ್ಕೆ ಬಂದ ಹೊಸ ಫ್ಯಾಶನ್ ಎಂದು ನೀವು ತಿಳಿದುಕೊಂಡಿದ್ದರೆ ಅದು ತಪ್ಪು ಮಾಹಿತಿ. ಈ ಕಲೆಯು ಭಾರತೀಯ ಬುಡಕಟ್ಟು ಸಂಪ್ರದಾಯಕ್ಕೆ ತಕ್ಕಂತೆ ಧಾರ್ಮಿಕವಾಗಿ ಪೂಜಿಸಲ್ಪಟ್ಟಿದೆ.

Tattoo: ಭಾರತೀಯ ಬುಡಕಟ್ಟು ಸಂಸ್ಕೃತಿಯ ಒಂದು ಭಾಗವೇ ನಾವೀಗ ಫ್ಯಾಶನ್ ಆಗಿ ಬಳಸುತ್ತಿರುವ ಟ್ಯಾಟೂಗಳು; ಇಲ್ಲಿದೆ ಇದರ ಕುರಿತ ಮಾಹಿತಿ
Taato
TV9 Web
| Updated By: ಅಕ್ಷತಾ ವರ್ಕಾಡಿ|

Updated on:Oct 27, 2022 | 11:04 PM

Share

ಹಳ್ಳಿ ಪ್ರದೇಶಗಳಲ್ಲಿ ತಮ್ಮ ಸಮುದಾಯಕ್ಕೆ ತಕ್ಕಂತೆ ಕಲೆ ಮತ್ತು ಸಂಸ್ಕೃತಿ ಪ್ರತೀಕವಾಗಿ ಒಂದೊಂದು ವಿಭಿನ್ನ ರೀತಿಯ ಹಚ್ಚೆಗಳನ್ನು ಹಾಕುವುದೇ ಸಾಂಪ್ರದಾಯವಾಗಿದೆ. ಆದರೆ ಇಂದಿನ ಬದಲಾದ ಜೀವನ ಪದ್ಧತಿಯಿಂದಾಗಿ ಬುಡಕಟ್ಟು ಸಮುದಾಯಗಳ ಹಚ್ಚೆಗಳು ಕಣ್ಮರೆಯಾಗುತ್ತಿವೆ. ತಮ್ಮ ಸಮುದಾಯದ ಹಚ್ಚೆ ಅಭ್ಯಾಸಗಳು ಏನೆಂದು ಯುವ ಪೀಳಿಗೆಗೆ ತಿಳಿಸುವುದು ಅಗತ್ಯವಾಗಿದೆ.

ಇಂದು ಹಚ್ಚೆ ಅಥವಾ ಟ್ಯಾಟೂಗಳು ಯುವಪೀಳಿಗೆಗೆ ಫ್ಯಾಶನ್ ಆಗಿ ಬದಲಾಗಿದ್ದು, ದಿನಕ್ಕೊಂದು ರೀತಿಯ ಹೊಸ ಹೊಸ ವಿನ್ಯಾಸಗಳ ಆವಿಷ್ಕಾರಗಳನ್ನು ಕಾಣಬಹುದು. ಇದೀಗ ಉದ್ಯಮವಾಗಿ ಬದಲಾಗಿದ್ದು, ಕೆಲವೊಂದಷ್ಟು ಜನರು ನಾಲಿಗೆ, ಕಣ್ಣುಗಳೊಳಗೆ ಕೂಡ ಹಾಕಿರುವ ಅದೆಷ್ಟೋ ನಿದರ್ಶನಗಳಿವೆ.

ಟ್ಯಾಟೂಗಳು ಸಾಮಾನ್ಯವಾಗಿ ಚರ್ಮದ ವರ್ಣದ್ರವ್ಯವನ್ನು ಬದಲಾಯಿಸಲು, ಅಳಿಸಲಾಗದ ಅಥವಾ ತಾತ್ಕಾಲಿಕ ಶಾಯಿ, ರಂಗುಗಳು ಹಾಗೂ ವರ್ಣದ್ರವ್ಯಗಳನ್ನು ಚರ್ಮದ ಒಳಪದರದಲ್ಲಿ ಹಾಕಿ ವಿನ್ಯಾಸವನ್ನು ಮಾಡಲಾಗುತ್ತದೆ.

ಟ್ಯಾಟೂ ಹಾಕಿಸಿಕೊಳ್ಳುವುದು ವಿದೇಶಿಗರಿಂದ ಭಾರತಕ್ಕೆ ಬಂದ ಹೊಸ ಫ್ಯಾಶನ್ ಎಂದು ನೀವು ತಿಳಿದುಕೊಂಡಿದ್ದರೆ ಅದು ತಪ್ಪು ಮಾಹಿತಿ. ಈ ಕಲೆಯು ಭಾರತೀಯರಲ್ಲಿ ಯುಗಗಳಿಂದಲೂ ಜನಪ್ರಿಯವಾಗಿದೆ. ಈಶಾನ್ಯದ ಖೋಯ್ಬು ಬುಡಕಟ್ಟು ಮತ್ತು ನೀಲಿಗಿರ್ಸ್‌ನ ತೋಡಾ ಬುಡಕಟ್ಟಿನಿಂದ ಮಧ್ಯಪ್ರದೇಶದ ಬೈಗಾ ಬುಡಕಟ್ಟಿನವರೆಗೂ ಆವರ ಸಂಪ್ರದಾಯಕ್ಕೆ ತಕ್ಕಂತೆ ಧಾರ್ಮಿಕವಾಗಿ ಪೂಜಿಸಲ್ಪಟ್ಟಿದೆ.

ಕೆಲವೊಂದು ಬುಡಕಟ್ಟುಗಳಲ್ಲಿ ಬಳಸುವ ಹಚ್ಚೆಗಳ ಕುರಿತ ವಿವರಗಳೆಂದರೆ

  • ಬೈಗಾ ಬುಡಕಟ್ಟಿನ ಮಹಿಳೆಯರು ತಮ್ಮ ದೇಹದ ಮೇಲೆ ಹಚ್ಚೆಗಳನ್ನು ಆಭರಣಗಳಂತೆ ಹಾಕಿರುವುದನ್ನು ಕಾಣಬಹುದು. ಈ ಹಚ್ಚೆಗಳು ಅಲ್ಲಿನ ಪ್ರದೇಶದ ಕುತೂಹಲ ಮತ್ತು ಆಸಕ್ತಿಯನ್ನು ಹುಟ್ಟುಹಾಕುವ ವಿವಿಧ ಚಿತ್ರಣಗಳನ್ನು ಬಿಡಿಸಲಾಗುತ್ತದೆ.
  • ಅರುಣಾಚಲ ಪ್ರದೇಶದ ಅಪತಾನಿ ಬುಡಕಟ್ಟು ಜನಾಂಗದವರ ತಮ್ಮ ಮುಖದ ಮೇಲಿನ ಹಚ್ಚೆಯ ಜೊತೆಗೆ ಮೂಗಿಗೆ ಚುಚ್ಚಿರುವ ಆಭರಣವೇ ವಿಭಿನ್ನವಾಗಿದ್ದು, ಅದರ ಜೊತೆಗೆ ಮಹಿಳೆಯರು ಹಣೆಯಿಂದ ಮೂಗಿನ ತುದಿಯವರೆಗೆ ಉದ್ದನೆಯ ಗೆರೆ ಮತ್ತು ಗಲ್ಲದ ಮೇಲೆ ಐದು ಚಿಕ್ಕ ಗೆರೆಗಳನ್ನು ಕಾಣಬಹುದು. ಇದು ಅವರ ಸಂಸ್ಕೃತಿ ಸಂಪ್ರದಾಯವನ್ನು ತಿಳಿಸುತ್ತದೆ.
  • ನಾಗಾಲ್ಯಾಂಡ್‌ನ ಬುಡಕಟ್ಟು ಸಮುದಾಯವೊಂದು ಯುದ್ಧದ ಸಂದರ್ಭದಲ್ಲಿ ತಮ್ಮ ಶಕ್ತಿಯನ್ನು ಸೂಚಿಸುವ ಸಲುವಾಗಿ ಮುಖದ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು.
  • ಗುಜರಾತಿನ ರಾಬರಿಸ್ ಮತ್ತು ಭರ್ವಾಡ್ಸ್ ಬುಡಕಟ್ಟು ತಮ್ಮ ವಿಸ್ತಾರವಾದ ಟ್ರಜ್ವಾ ಟ್ಯಾಟೂಗಳಿಗೆ ಹೆಸರುವಾಸಿಯಾಗಿದ್ದರು, ಇದು ಸೌಂದರ್ಯ ಮತ್ತು ಸಹಿಷ್ಣುತೆಯ ಸಂಕೇತವಾಗಿದೆ.

ಹಿಂದಿನ ಕಾಲದ ಹಚ್ಚೆಗಳು ಒಬ್ಬರ ಸಮುದಾಯದ ಗುರುತಾಗಿದ್ದು, ನಾನು ಯಾರು ಮತ್ತು ನಾನು ಎಲ್ಲಿಂದ ಬಂದಿದ್ದೇನೆ ಎಂದು ವಿವರಿಸುವಂತಹ ಕಲೆಯಾಗಿತ್ತು.

ಇದನ್ನು ಓದಿ: ಜೀವನದಲ್ಲಿ ಒಂಟಿಯಾದೇ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ ಇಲ್ಲಿದೆ ಸಮಸ್ಯೆಗೆ ಸೂಕ್ತ ಸಲಹೆ

ಸಾಂಪ್ರದಾಯಿಕವಾಗಿ ಹಿಂದಿನ ಸಾಂಪ್ರದಾಯವನ್ನು ಬಿಂಬಿಸುವ ಹಚ್ಚೆಯು ವೇಗವಾಗಿ ಕಣ್ಮರೆಯಾಗುತ್ತಿವೆ. ತಮ್ಮ ಸಮುದಾಯದ ಹಚ್ಚೆ ಅಭ್ಯಾಸಗಳು ಏನೆಂದು ಇನ್ನೂ ಕೆಲವು ಸಮುದಾಯಗಳಿಗೆ ಮಾತ್ರ ತಿಳಿದಿವೆ. ಬದಲಾದ ಜೀವನ ಪದ್ದತಿಯಿಂದಾಗಿ ಕಲೆಗಳು ಕಣ್ಮರೆಯಾಗುತ್ತಿರುವುದು ವಿಪರ್ಯಾಸ. ಆದರೆ ಇಂದು ಹೊಸ ಆಯಾಮದೊಂದಿಗೆ ಈ ಹಚ್ಚೆಗಳು ಉದ್ಯಮವಾಗಿ ಬೆಳೆಯುತ್ತಿದೆ. ಇದು ದೇಹದ ಚರ್ಮಕ್ಕೆ ಎಷ್ಟು ಹಾನಿಕಾರಕ ಎಂಬುದನ್ನು ತಿಳಿಯಬೇಕಿದೆ.

Published On - 4:24 pm, Thu, 27 October 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?