ಭವ್ಯವಾದ ಪ್ರಭೇದಗಳ ದುರಂತ ಅಳಿವು: ಕಳೆದ 100 ವರ್ಷಗಳಲ್ಲಿ ಅಳಿದುಹೋದ ಪ್ರಾಣಿಗಳು ಇವು

ಅಳಿವಿನಂಚಿನಲ್ಲಿರುವ ಪ್ರಭೇದಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ಸಂರಕ್ಷಿಸಲು, ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸಲು ಮತ್ತು ಜೀವವೈವಿಧ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಲು ನಾವು ಕ್ರಮ ಕೈಗೊಳ್ಳುವುದು ಬಹಳ ಮುಖ್ಯ

ಭವ್ಯವಾದ ಪ್ರಭೇದಗಳ ದುರಂತ ಅಳಿವು: ಕಳೆದ 100 ವರ್ಷಗಳಲ್ಲಿ ಅಳಿದುಹೋದ ಪ್ರಾಣಿಗಳು ಇವು
ಅಳಿದುಹೋದ ಪ್ರಾಣಿಗಳುImage Credit source: greenpeace
Follow us
|

Updated on:Jun 13, 2023 | 12:49 PM

ಕಳೆದ ಶತಮಾನದಲ್ಲಿ, ನಮ್ಮ ಗ್ರಹವು ಹಲವಾರು ಪ್ರಾಣಿ ಪ್ರಭೇದಗಳ (Animals) ಹೃದಯ ವಿದ್ರಾವಕ ಅಳಿವಿಗೆ (Extinct) ಸಾಕ್ಷಿಯಾಗಿದೆ. ಈ ಸುಂದರ ಜೀವಿಗಳು, ಒಮ್ಮೆ ಅಭಿವೃದ್ಧಿ ಹೊಂದುತ್ತಿರುವ ಭೂಮಿಯಿಂದ ಕಣ್ಮರೆಯಾಗಿವೆ. ಈ ಅಳಿವುಗಳು ನೈಸರ್ಗಿಕ ಜಗತ್ತನ್ನು ರಕ್ಷಿಸುವಲ್ಲಿ ಮತ್ತು ಸಂರಕ್ಷಿಸುವಲ್ಲಿ ನಾವು ಹೊಂದಿರುವ ಅಪಾರ ಜವಾಬ್ದಾರಿಯನ್ನು ಒತ್ತಿ ಹೇಳುತ್ತದೆ. ಇಲ್ಲಿ, ಕಳೆದ 100 ವರ್ಷಗಳಲ್ಲಿ ಜಗತ್ತಿನಾದ್ಯಂತ ಅಳಿದುಹೋಗಿರುವ ಕೆಲವು ವಿಶಿಷ್ಟ ಹಾಗು ಅಪರೂಪದ ಪ್ರಾಣಿಗಳು

ಆಸ್ಟ್ರೇಲಿಯಾ ಮೂಲದ, ಹಸಿರು ಮತ್ತು ಹಳದಿ ಗರಿಗಳಿಂದ ರೋಮಾಂಚನಗೊಳಿಸುವ ಪ್ಯಾರಡೈಸ್ ಗಿಳಿ. ಇವು ವಾಸಿಸಲು ಸ್ಥಳವಿಲ್ಲದೆ ಮತ್ತು ಬೇಟೆಗೆ ಬಲಿಯಾಗಿ 20 ನೇ ಶತಮಾನದ ಆರಂಭದಲ್ಲಿ ಅಳಿವಿನಂಚಿಗೆ ತಲುಪಿತು. ಸಿಸಿಲಿಯನ್ ತೋಳ, ಒಮ್ಮೆ ಇಟಲಿಯ ಕಾಡುಗಳಲ್ಲಿ ಸುತ್ತಾಡುತ್ತಾ ಇದ್ದ ಪ್ರಾಣಿ, ಆದರೆ ಇವುಗಳು ಕೂಡ ಬೇಟೆ ಮತ್ತು ಆವಾಸಸ್ಥಾನದ ನಷ್ಟದಿಂದಾಗಿ ಇವು ಅವನತಿ ಹೊಂದಿವೆ.

ಥೈಲಸಿನ್ ಎಂದೂ ಕರೆಯಲ್ಪಡುವ ಟ್ಯಾಸ್ಮೆನಿಯನ್ ಹುಲಿ ಆಧುನಿಕ ಕಾಲದ ಅತಿದೊಡ್ಡ ಮಾಂಸಾಹಾರಿ ಪ್ರಾಣಿಯಾಗಿದೆ. ಇವುಗಳನ್ನು ಸಂರಕ್ಷಿಸಲ್ಪಟ್ಟಿದ್ದರೂ ಸಹ, ಪಟ್ಟುಬಿಡದೆ ಬೇಟೆಯಾಡಲಾಯಿತು ಮತ್ತು ಕಿರುಕುಳ ನೀಡಲಾಯಿತು. 1936 ರಲ್ಲಿ ಸೆರೆ ಹಿಡಿದ ಬಳಿಕ ಕೊನೆಯ ಹುಲಿ ಸೆರೆಯಲ್ಲಿ ಮರಣ ಹೊಂದಿತು. ಒಮ್ಮೆ ಕ್ಯಾಲಿಫೋರ್ನಿಯಾದ ಕರಾವಳಿ ದಿಬ್ಬಗಳಲ್ಲಿ ಕಂಡುಬಂದ ಕ್ಸೆರ್ಸೆಸ್ ಬ್ಲೂ ಚಿಟ್ಟೆ, ನಗರೀಕರಣ ಮತ್ತು ಸಸ್ಯಗಳ ಅವನತಿಯಿಂದಾಗಿ ಬಲಿಯಾಯಿತು.

ಜಪಾನಿನ ಸಮುದ್ರ ಸಿಂಹ, ಒಮ್ಮೆ ಜಪಾನ್ ಸಮುದ್ರದಲ್ಲಿ ಹೇರಳವಾಗಿ ಕಾಣ ಸಿಗುತ್ತಿದ್ದ ಜಪಾನಿನ ಸಮುದ್ರ ಸಿಂಹ, ಅದರ ತುಪ್ಪಳ ಮತ್ತು ಮಮಾಸಕ್ಕಾಗಿ ಜನರು ಪಟ್ಟುಬಿಡದೆ ಅದನ್ನು ಬೇಟೆ ಮಾಡಿದರು. ಅದರ ಸಂಖ್ಯೆಯು ಶೀಘ್ರವಾಗಿ ಕುಸಿಯಿತು, ಮತ್ತು ಕೊನೆಯದಾಗಿ 1974 ರಲ್ಲಿಅವನತಿ ಹೊಂದಿತು. ಕ್ರೆಸೆಂಟ್ ನೇಲ್-ಟೈಲ್ ವಾಲಾಬಿ, ಬುಬಲ್ ಹಾರ್ಟೆಬೀಸ್ಟ್, ಸೇಂಟ್ ಹೆಲೆನಾ ಡಾರ್ಟರ್, ಕಾಕವಾಹಿ, ಗುವಾಮ್ ಫ್ಲೈಯಿಂಗ್ ಫಾಕ್ಸ್, ಕ್ಯಾಸ್ಪಿಯನ್ ಟೈಗರ್, ಸಯಾಮಿ ಫ್ಲಾಟ್-ಬಾರ್ಬೆಲ್ಡ್ ಕ್ಯಾಟ್ಫಿಶ್, ಯುನ್ನಾನ್ ಲೇಕ್ ನ್ಯೂಟ್ ಮತ್ತು ಗೋಲ್ಡನ್ ಲೇಕ್ ಟೋಡ್ ಇತ್ತೀಚಿನ ಇತಿಹಾಸದಲ್ಲಿ ಭೂಮಿಯಿಂದ ಕಣ್ಮರೆಯಾದ ಇತರ ಗಮನಾರ್ಹ ಪ್ರಾಣಿಗಳಾಗಿವೆ.

ಇದನ್ನೂ ಓದಿ: ಅಂತರ್ಮುಖಿಯಾಗಿರುವುದು ಅಸ್ವಸ್ಥತೆಯಲ್ಲ, ನಿಮ್ಮನ್ನು ನೀವು ಬದಲಾಯಿಸಲು ಬಯಸಿದರೆ ಹೀಗೆ ಮಾಡಿ

ಅಳಿವಿನಂಚಿನಲ್ಲಿರುವ ಪ್ರಭೇದಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ಸಂರಕ್ಷಿಸಲು, ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸಲು ಮತ್ತು ಜೀವವೈವಿಧ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಲು ನಾವು ಕ್ರಮ ಕೈಗೊಳ್ಳುವುದು ಬಹಳ ಮುಖ್ಯ. ಸಾಮೂಹಿಕ ಪ್ರಯತ್ನಗಳ ಮೂಲಕ ಮಾತ್ರ ನಾವು ಭವಿಷ್ಯದ ನಷ್ಟಗಳನ್ನು ತಡೆಯಬಹುದು ಮತ್ತು ನಮ್ಮ ಗ್ರಹವನ್ನು ಹಂಚಿಕೊಳ್ಳುವ ಮಾನವರು ಮತ್ತು ಭವ್ಯವಾದ ಜೀವಿಗಳ ನಡುವೆ ಸಾಮರಸ್ಯದ ಸಹಬಾಳ್ವೆಯನ್ನು ಖಚಿತಪಡಿಸಿಕೊಳ್ಳಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:48 pm, Tue, 13 June 23

ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!