AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Toothache: ಹಲ್ಲುನೋವಿನಿಂದ ತಕ್ಷಣ ಪರಿಹಾರ ಬೇಕೆ? ಈ 3 ವಿಧಾನಗಳನ್ನು ಅನುಸರಿಸಿ

ಹಲ್ಲು ನೋವು ಯಾವ ಸಂದರ್ಭದಲ್ಲಿ ಬೇಕಾದರೂ ನಿಮ್ಮನ್ನು ಕಾಡಬಹುದು, ಹುಳುಕು ಹಲ್ಲು, ಗಟ್ಟಿ ಆಹಾರ ಸೇವನೆ, ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು, ಕ್ಯಾಲ್ಸಿಯಂ ಕೊರತೆ, ಬ್ಯಾಕ್ಟೀರಿಯಾದ ಸೋಂಕು, ದುರ್ಬಲ ಹಲ್ಲುಗಳಂತಹ ಹಲವು ಕಾರಣಗಳಿಂದ ಹಲ್ಲುನೋವು ಉಂಟಾಗುತ್ತದೆ.

Toothache: ಹಲ್ಲುನೋವಿನಿಂದ ತಕ್ಷಣ ಪರಿಹಾರ ಬೇಕೆ? ಈ 3 ವಿಧಾನಗಳನ್ನು ಅನುಸರಿಸಿ
Toothache
TV9 Web
| Updated By: ನಯನಾ ರಾಜೀವ್|

Updated on: Aug 24, 2022 | 11:09 AM

Share

ಹಲ್ಲು ನೋವು ಯಾವ ಸಂದರ್ಭದಲ್ಲಿ ಬೇಕಾದರೂ ನಿಮ್ಮನ್ನು ಕಾಡಬಹುದು, ಹುಳುಕು ಹಲ್ಲು, ಗಟ್ಟಿ ಆಹಾರ ಸೇವನೆ, ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು, ಕ್ಯಾಲ್ಸಿಯಂ ಕೊರತೆ, ಬ್ಯಾಕ್ಟೀರಿಯಾದ ಸೋಂಕು, ದುರ್ಬಲ ಹಲ್ಲುಗಳಂತಹ ಹಲವು ಕಾರಣಗಳಿಂದ ಹಲ್ಲುನೋವು ಉಂಟಾಗುತ್ತದೆ.

ಯಾವುದೇ ಹಲ್ಲಿನ ಸಮಸ್ಯೆಯ ಚಿಕಿತ್ಸೆಗಾಗಿ ನಾವು ದಂತವೈದ್ಯರ ಬಳಿಗೆ ಹೋಗುತ್ತೇವೆ. ಕೆಲವೊಮ್ಮೆ ಹಲ್ಲು ನೋವು ರಾತ್ರಿ ಶುರುವಾಗುತ್ತದೆ, ಆ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಾವು ನೋವಿನಿಂದ ನರಳುತ್ತೇವೆ. ನಿಮಗೂ ಹಠಾತ್ ಹಲ್ಲು ನೋವು ಕಾಣಿಸಿಕೊಂಡು ವೈದ್ಯರ ಬಳಿ ಹೋಗಲಾಗದಿದ್ದರೆ.. ಕೆಲವು ಮನೆಮದ್ದು ಸಲಹೆಗಳನ್ನು ಅನುಸರಿಸಬಹುದು.

ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಹಲ್ಲುನೋವಿನಿಂದ ಶೀಘ್ರ ಪರಿಹಾರವನ್ನು ಪಡೆಯಬಹುದು. ಹಲ್ಲುನೋವು ಮತ್ತು ಸೋಂಕನ್ನು ಪರಿಣಾಮಕಾರಿಯಾಗಿ ಗುಣಪಡಿಸುವ ಕೆಲವು ಮನೆಮದ್ದುಗಳಿವೆ ತಿಳಿಯೋಣ.

ಬೆಚ್ಚಗಿನ ನೀರಿನಿಂದ ತೊಳೆಯಿರಿ ಹಲ್ಲುನೋವು ನಿವಾರಿಸಲು ಬೆಚ್ಚಗಿನ ನೀರಿನಿಂದ ಗಾರ್ಗ್ಲ್ ಮಾಡಿ. ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಬಹುದು. ಇದು ನೋವನ್ನು ಸಹ ನಿವಾರಿಸುತ್ತದೆ.

ನೀವು ಕೆಲವು ಸೆಕೆಂಡುಗಳ ಕಾಲ ನಿಮ್ಮ ಬಾಯಿಯಲ್ಲಿ ಬೆಚ್ಚಗಿನ ನೀರನ್ನು ಹಿಡಿದಿಟ್ಟುಕೊಳ್ಳಿ ಮತ್ತು ನಂತರ ಅದನ್ನು ಉಗುಳಿ, ಬೆಚ್ಚಗಿನ ನೀರಿನಿಂದ ಗಾರ್ಗ್ಲಿಂಗ್ ಮಾಡಿ ಒಸಡುಗಳಲ್ಲಿನ ನೋವನ್ನು ಕಡಿಮೆ ಮಾಡಿ.

ಪುದೀನಾ ಟೀ ಯಾವುದೇ ಚಹಾವನ್ನು ಕುಡಿಯುವುದರಿಂದ ಹಲ್ಲುನೋವು ನಿವಾರಿಸಲು ಸಹಾಯ ಮಾಡುತ್ತದೆ. ಪುದೀನಾ ಚಹಾವು ನೋವನ್ನು ಶಮನಗೊಳಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿದೆ. ಹಲ್ಲುನೋವು ಕಡಿಮೆ ಮಾಡಲು ಪುದೀನಾ ಚಹಾ ತುಂಬಾ ಪರಿಣಾಮಕಾರಿಯಾಗಿದೆ.

ಲವಂಗದ ಎಣ್ಣೆ ಹಲ್ಲುನೋವು ಕಡಿಮೆ ಮಾಡುವಲ್ಲಿ ಲವಂಗದ ಎಣ್ಣೆ ತುಂಬಾ ಪರಿಣಾಮಕಾರಿ. ತಜ್ಞರ ಪ್ರಕಾರ, ಲವಂಗದ ಎಣ್ಣೆಯ ಕೆಲವು ಹನಿಗಳನ್ನು ನೋಯುತ್ತಿರುವ ಹಲ್ಲಿನ ಮೇಲೆ ಹಚ್ಚುವುದರಿಂದ ಹಲ್ಲುನೋವು ಮತ್ತು ಉರಿಯೂತವನ್ನು ತುಂಬಾ ಸಮಯದವರೆಗೆ ಕಡಿಮೆ ಮಾಡಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!