AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಕೆಲವರೊಂದಿಗೆ ಮಾತನಾಡಲು ನಾವು ಹಿಂಜರಿಯುತ್ತೇವೆ ಏಕೆ?

ನಮ್ಮ ಭಾವನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಮಾತು ಅಥವಾ ಭಾಷೆಯನ್ನು ಸಂವಹನ ಮಾಧ್ಯಮವನ್ನಾಗಿ ಬಳಸುತ್ತೇವೆ.

Relationship: ಕೆಲವರೊಂದಿಗೆ ಮಾತನಾಡಲು ನಾವು ಹಿಂಜರಿಯುತ್ತೇವೆ ಏಕೆ?
Conversation
TV9 Web
| Edited By: |

Updated on: Aug 24, 2022 | 1:48 PM

Share

ನಮ್ಮ ಭಾವನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಮಾತು ಅಥವಾ ಭಾಷೆಯನ್ನು ಸಂವಹನ ಮಾಧ್ಯಮವನ್ನಾಗಿ ಬಳಸುತ್ತೇವೆ. ಕೆಲವರೊಂದಿಗೆ ಮಾತನಾಡಲು ತುಂಬಾ ಖುಷಿಯಾಗುತ್ತದೆ ಏಕೆಂದರೆ ಏನೋ ಒಂದು ರೀತಿಯ ಆತ್ಮೀಯತೆ, ಮೊದಲ ಬಾರಿ ಮಾತನಾಡಿದರೂ ನಮ್ಮವರೆಂಬ ಭಾವ ಮೂಡುತ್ತದೆ. ಎಲ್ಲವನ್ನೂ ಮನಸ್ಸು ಬಿಚ್ಚಿ ಹೇಳಿಕೊಳ್ಳುವ ತವಕ ಉಂಟಾಗುತ್ತದೆ. ಆದರೆ ಎಲ್ಲರೊಂದಿಗೂ ಒಂದೇ ರೀತಿ ಮಾತನಾಡಲು ಸಾಧ್ಯವಿಲ್ಲ.

ಆದರೆ ಇನ್ನೂ ಕೆಲವರು ನಮ್ಮವರೇ ಆಗಿದ್ದರೂ ಅವರ ಬಳಿ ಮಾತನಾಡಲು ಇಷ್ಟವೇ ಆಗುವುದಿಲ್ಲ. ಕೆಲವರು ಸದಾ ಮುಖವನ್ನು ಗಂಟು ಹಾಕಿಕೊಂಡಿದ್ದರೆ, ಇನ್ನೂ ಕೆಲವರು ನಮ್ಮ ಮಾತುಗಳಿಗೆ ಸ್ಪಂದಿಸುವುದೇ ಇಲ್ಲ, ಇನ್ನೂ ಕೆಲವರು ಕೇಳಿಸಿಕೊಂಡೂ ಕೇಳಿಸಿಕೊಳ್ಳದವರಂತಿರುತ್ತಾರೆ, ಇನ್ನೂ ಕೆಲವರು ನಾವು ಏನೋ ಹೇಳುವ ಮುನ್ನವೇ ಅವರೇ ಏನೋ ಹೇಳಿ ಬಾಯಿ ಮುಚ್ಚಿಸಿ ಬಿಡುತ್ತಾರೆ ಇಂತಹವರ ಬಳಿ ಮಾತನಾಡಲು ಹಿಂಜರಿಕೆಯಾಗುವುದುಂಟು.

ಇನ್ನೂ ಕೆಲವು ಕಾರಣಗಳು ಇಲ್ಲಿವೆ ಅಭದ್ರತೆ ಹೊಂದಿರುವವರು: ಅಭದ್ರತೆ ಹೊಂದಿರುವ ಜನರು ತಮ್ಮ ಕ್ರಿಯೆಗಳನ್ನು ಸಮರ್ಥಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಮತ್ತು ಅವರೊಂದಿಗೆ ಮಾತನಾಡಲು ಕಷ್ಟವಾಗಬಹುದು.

ನಿಮ್ಮ ವಿಷಯವನ್ನು ಬೇರೊಬ್ಬರಲ್ಲಿ ಚರ್ಚಿಸುವವರು ನಿಮ್ಮ ಬಳಿ ವಿನಯದಿಂದ ಮಾತನಾಡಿ ನಿಮ್ಮೆಲ್ಲಾ ವಿಷಯವನ್ನು ಕೇಳಿಸಿಕೊಂಡು ಬೇರೆಯವರ ಬಳಿ ಮಾತನಾಡುವವರನ್ನು ಕಂಡರೆ ಹಿಂಜರಿಕೆಯಾಗುತ್ತದೆ.

ನಿಮ್ಮ ಮಾತನ್ನು ಆಲಿಸದವರು: ನಿಮ್ಮ ಮಾತನ್ನು ಆಲಿಸದವರು ಉತ್ತಮ ಕೇಳುಗರಾಗಿರಲು ಸಾಧ್ಯವಿಲ್ಲ.

ಮಾತು ಕೇಳದೆಯೇ ಸಲಹೆ ನೀಡುವವರು: ನಿಮ್ಮ ಸಂಪೂರ್ಣ ಮಾತನ್ನು ಆಲಿಸದೆಯೇ ಕೆಲವರು ನಿಮಗೆ ಸಲಹೆ ನೀಡುತ್ತಾರೆ ಅಂದರೆ ನಿಮ್ಮ ಮಾತನ್ನು ಕೇಳುವ ವ್ಯವಧಾನ ಅವರಿಗಿರುವುದಿಲ್ಲ. ಅಂತವರ ಬಳಿ ಮಾತನಾಡಲು ಹಿಂಜರಿಯುವುದು ಸಾಮಾನ್ಯ.

ಬೇಡದ ಸಲಹೆಗಳು: ಅವರು ನಿಮ್ಮ ಹಿತೈಷಿಗಳಲ್ಲದಿದ್ದರೆ ನಿಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಸಾಗ ಬೇಡದ ಸಲಹೆಗಳನ್ನು ನೀಡುತ್ತಾರೆ ಇಂಥವರಿಂದ ನೀವು ದೂರ ಇರುವಿರಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ