ಅಬ್ಬಾಬ್ಬ.. 24 ವರ್ಷಗಳಿಂದ ಎಳನೀರು ಕುಡಿದು ಜೀವಿಸುತ್ತಿರುವ ವ್ಯಕ್ತಿ, ಇದರಿಂದ ದೂರವಾಯಿತು ಈ ಕಾಯಿಲೆ

ದೀರ್ಘಕಾಲದ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (GERD)ಯಿಂದ ಬಳಲುತ್ತಿದ್ದ ಶ್ರೀ ಬಾಲಕೃಷ್ಣನ್ ಕಳೆದ 24 ವರ್ಷಗಳಿಂದ ಎಳನೀರು  ಹೊರತು ಪಡಿಸಿ ಬೇರೇನೂ ತಿಂದಿಲ್ಲ ಎಂದು ಹೇಳಿಕೊಂಡಿರುವ ವಿಡಿಯೋವನ್ನು ನಟಿ ಶೆನಾಜ್ ಟ್ರೆಜರಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಬ್ಬಾಬ್ಬ.. 24 ವರ್ಷಗಳಿಂದ ಎಳನೀರು ಕುಡಿದು ಜೀವಿಸುತ್ತಿರುವ ವ್ಯಕ್ತಿ, ಇದರಿಂದ ದೂರವಾಯಿತು ಈ ಕಾಯಿಲೆ
ಎಳನೀರು ಮಾತ್ರ ಸೇವಿಸಿ ಜೀವನ ನಡೆಸುತ್ತಿದ್ದ ಬಾಲಕೃಷ್ಣನ್
Image Credit source: Instagram

Updated on: Feb 18, 2023 | 12:58 PM

ಸಾಮಾನ್ಯವಾಗಿ ಎಳನೀರು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ? ಇದು ನಿಮ್ಮ ದೇಹವನ್ನು ತಂಪಾಗಿಡುತ್ತದೆ. ಇದಲ್ಲದೇ ಪ್ರತಿದಿನ ಎಳನೀರು ಕುಡಿಯುವುದರಿಂದ ಅಧಿಕ ರಕ್ತದೊತ್ತಡದ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದಲ್ಲದೇ , ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡಬಹುದು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಬ್ಬರು ವ್ಯಕ್ತಿ ಕಳೆದ 24 ವರ್ಷಗಳಿಂದ ಎಳನೀರು ಹೊರತು ಪಡಿಸಿ ಬೇರೇನೂ ತಿಂದಿಲ್ಲ. ಜೊತೆಗೆ ತನ್ನ ಕಾಯಿಲೆಯನ್ನು ಎಳನೀರು ವಾಸಿ ಮಾಡಿದೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ದೀರ್ಘಕಾಲದ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (GERD)ಯಿಂದ ಬಳಲುತ್ತಿದ್ದ ಶ್ರೀ ಬಾಲಕೃಷ್ಣನ್ ಕಳೆದ 24 ವರ್ಷಗಳಿಂದ ಎಳನೀರು  ಹೊರತು ಪಡಿಸಿ ಬೇರೇನೂ ತಿಂದಿಲ್ಲ ಎಂದು ಹೇಳಿಕೊಂಡಿರುವ ವಿಡಿಯೋವನ್ನು ನಟಿ ಶೆನಾಜ್ ಟ್ರೆಜರಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ ಎಂದರೇನು?

ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಯು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯಾಗಿದೆ. ನೀವು ಎದೆಯುರಿ ಹೊಂದಿದ್ದರೆ, ನಿಮ್ಮ ಎದೆಯ ಹಿಂಭಾಗದಲ್ಲಿ ಸುಡುವ ಸಂವೇದನೆ, ನೀವು ಮಲಗಿರುವಾಗ ಅಥವಾ ಊಟವನ್ನು ಸೇವಿಸಿದಾಗ ಇಂತಹ ಲಕ್ಷಣಗಳು ಕಾಣಿಸಿಕೊಂಡರೆ, ಇದು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಡಿಸೀಸ್ (GERD) ನ ಲಕ್ಷಣಗಳಾಗಿವೆ.

ಇದನ್ನೂ ಓದಿ: ಆರೋಗ್ಯಕರ ಜೀರ್ಣಕ್ರಿಯೆಗಾಗಿ ಈ ಗಿಡಮೂಲಿಕೆಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ರೂಢಿಸಿಕೊಳ್ಳಿ

ನಟಿ ಶೆನಾಜ್ ಟ್ರೆಜರಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

ನನಗೆ ಜಿಇಆರ್‌ಡಿ ಇರುವುದು ತಿಳಿದ ನಂತರ, ನನ್ನ ದೇಹವು ಕ್ಷೀಣಿಸಲು ಪ್ರಾರಂಭವಾಯಿತು. ನಂತರ, ಚಿಕಿತ್ಸೆಯ ಭಾಗವಾಗಿ ತೆಂಗಿನಕಾಯಿಯನ್ನು ತಿನ್ನಲು ಪ್ರಾರಂಭಿಸಿದೆ. ಈಗ ನನ್ನ ದೇಹದಲ್ಲಿ ಸಾಕಷ್ಟು ಬದಲಾವಣೆಯನ್ನುಂಟು ಮಾಡಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ತೆಂಗಿನಕಾಯಿಯಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸೋಡಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳು ಹೇರಳವಾಗಿದ್ದು, ಇದು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ ವಿರುದ್ಧ ಹೋರಾಡಲು ಸಹಾಯಮಾಡಿದೆ. ಜೊತೆಗೆ ಈಗ ಫಿಟ್ ಆಂಡ್​​ ಫೈನ್ ಆಗಿದ್ದೇನೆ ಎಂದು ಹೇಳಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:47 pm, Sat, 18 February 23

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us