Garbhageete: ಮಗುವಿಗೆ ಶಿಕ್ಷಣ ನೀಡುವುದರ ಜತೆಗೆ ಪೋಷಕರು ಕೂಡ ಶಿಕ್ಷಿತರಾಗಬೇಕು: ಕಮಲಾ ಭಾರದ್ವಾಜ್

ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಬೇಕು, ವಿದ್ಯಾವಂತರನ್ನಾಗಿ ಮಾಡಬೇಕು, ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಬೇಕು ಎಂಬುದು ಎಲ್ಲಾ ಪೋಷಕರ ಕನಸಾಗಿದೆ.

Garbhageete: ಮಗುವಿಗೆ ಶಿಕ್ಷಣ ನೀಡುವುದರ ಜತೆಗೆ ಪೋಷಕರು ಕೂಡ ಶಿಕ್ಷಿತರಾಗಬೇಕು: ಕಮಲಾ ಭಾರದ್ವಾಜ್
Kamala Bharadwaj
Follow us
| Updated By: ನಯನಾ ರಾಜೀವ್

Updated on: Sep 06, 2022 | 2:43 PM

ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಬೇಕು, ವಿದ್ಯಾವಂತರನ್ನಾಗಿ ಮಾಡಬೇಕು, ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಬೇಕು ಎಂಬುದು ಎಲ್ಲಾ ಪೋಷಕರ ಕನಸಾಗಿದೆ. ನಾನು ನನ್ನ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುತ್ತಿದ್ದೇನೆಯೇ ಇಲ್ಲವೇ ಎಂಬುದು ಸಾಕಷ್ಟು ಪೋಷಕರನ್ನು ಕಾಡುವ ಪ್ರಶ್ನೆಯಾಗಿದೆ ಈ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ.

ಮಗುವಿಗೆ ಅಗತ್ಯವಾದ ಶಿಕ್ಷಣ, ಆಹಾರ, ಆಟಿಕೆಗಳು ಸೇರಿದಂತೆ ಎಲ್ಲಾ ಪ್ರಮುಖ ಬೇಡಿಕೆಗಳನ್ನು ನೀವು ಈಡೇರಿಸಿದ್ದೀರಿ ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇಷ್ಟೇ ಸಾಕೇ ಎಂಬುದು ಪ್ರಶ್ನೆಯಾಗಿದೆ.

ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರ ಜತೆಗೆ ನೀವು ಕೂಡ ಶಿಕ್ಷಿತರಾಗಬೇಕು. ಅದರ ಜತೆಗೆ ನಿಜವಾದ ಕರ್ತವ್ಯವೇನೆಂಬುದನ್ನು ಅರಿಯಬೇಕು. ಮಗುವಿನ ನಿಜವಾದ ಶಿಕ್ಷಣ ಎಂದರೆ ಏನು, ಪೋಷಕರ ಕರ್ತವ್ಯವೇನು, ಮಗುವಿಗೆ ಶಿಕ್ಷಣ ನೀಡುವುದರ ಅರ್ಥವೇನು ಎಂಬುದು ಮನದಟ್ಟಾಗಬೇಕು.

ಮಕ್ಕಳಿಗೆ ಜೀವ ಕೊಟ್ಟಾಗ ಪೋಷಕರಿಗೆ ಮಕ್ಕಳ ನಿಜವಾದ ಶಿಕ್ಷಣವೇನು, ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು ಎಂಬುದರ ಕುರಿತು ಕಡಿಮೆ ಆಲೋಚನೆ ಮಾಡುತ್ತಾರೆ.

ಮತ್ತಷ್ಟು ಓದಿ

ಕೆಲವು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಆಹಾರ ಹಾಗೂ ಅವರ ಬೇಡಿಕೆಗಳನ್ನು ಪೂರೈಸಿದರೆ ಉತ್ತಮ ಪೋಷಕರಾಗುತ್ತೇವೆ ಎಂದುಕೊಂಡಿರುತ್ತಾರೆ.

ಬಳಿಕ ಮಗು ಶಾಲೆಗೆ ಹೋಗಲು ಆರಂಭಿಸುತ್ತದೆ, ಆಗ ಪೋಷಕರು ತಮ್ಮ ಜವಾಬ್ದಾರಿಯನ್ನು ಶಿಕ್ಷಕರ ಕೈಗೆ ವರ್ಗಾಯಿಸುತ್ತಾರೆ, ಹಾಗೆಯೇ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಇನ್ನುಮುಂದೆ ಶಿಕ್ಷಕರದ್ದು ಎಂದುಕೊಳ್ಳುತ್ತಾರೆ.

ಆದರೆ ಪೋಷಕರ ಕರ್ತವ್ಯ ಅಷ್ಟೆಕ್ಕೆ ಮುಗಿಯುವುದಿಲ್ಲ, ಕೆಲವು ಪೋಷಕರು ಮಾತ್ರ ಮಕ್ಕಳ ಜೀವನದುದ್ದಕ್ಕೂ ತಾವು ನೀಡಬೇಕಾದ ತಿಳಿವಳಿಕೆಯನ್ನು ನೀಡುತ್ತಲೇ ಇರುತ್ತಾರೆ. ಮಕ್ಕಳಿಗೆ ದೊಡ್ಡವರಿಗೆ ಗೌರವ ಕೊಡುವುದು ಹೇಗೆ, ವಿಧೇಯತೆ, ನೇರವಾಗಿ ಮಾತನಾಡುವುದು, ಸತ್ಯವನ್ನೇ ಹೇಳುವುದು, ಕೋಪವಿಲ್ಲದೆ ಮಾತನಾಡುವುದು, ಶಾಂತ ಸ್ವಭಾವ, ನಿಸ್ವಾರ್ಥ ಭಾವನೆ ಇವೆಲ್ಲವನ್ನೂ ಹೇಳಿಕೊಡಬೇಕು.

ಮತ್ತಷ್ಟು ಓದಿ

ನೀವು ನಿಮ್ಮ ಮಕ್ಕಳ ಎದುರು ಜಗಳವಾಡುವುದು, ಕೆಟ್ಟ ಶಬ್ದಗಳನ್ನು ಬಳಸಿ ಮಾತನಾಡುವುದು, ಕೋಪ ಇವೆಲ್ಲವೂ ಪರಿಣಾಮ ಬೀರುತ್ತದೆ. ಕೇವಲ ನಿಮ್ಮ ಮಕ್ಕಳು ಮಾತ್ರವಲ್ಲ ಆ ವಯಸ್ಸಿನವು ಯಾರೇ ಇರಲಿ ನಿಮ್ಮ ನಡವಳಿಕೆ ಚೆನ್ನಾಗಿರಬೇಕು.

ಮಕ್ಕಳು ಏನೇ ಪ್ರಶ್ನೆಗಳನ್ನು ಕೇಳಲಿ ಅದಕ್ಕೆ ಸಿಲ್ಲಿಯಾಗಿ ಉತ್ತರಿಸುವುದು, ಹಾಸ್ಯಭರಿತವಾಗಿ ಮಾತನಾಡುವುದು ಅದೆಲ್ಲವನ್ನೂ ತಪ್ಪಿಸಿ, ಏಕೆಂದರೆ ಮಕ್ಕಳು ಮುಗ್ಧರಾಗಿರುತ್ತಾರೆ ನಿಮಗೆ ಉತ್ತರ ಗೊತ್ತಿದ್ದರೆ ತಿಳಿಸಿ, ಇಲ್ಲವಾದಲ್ಲಿ ಪ್ರಾಮಾಣಿಕವಾಗಿ ಗೊತ್ತಿಲ್ಲ ಎಂದು ಒಪ್ಪಿಕೊಳ್ಳಿ.

ಮಕ್ಕಳಿಗೆ 12-14ನೇ ವಯಸ್ಸಿನಲ್ಲಿ ಹೇಳಿದ್ದನ್ನು ಕೇಳಿ ತಿಳಿದುಕೊಳ್ಳುವ ಸಾಮರ್ಥ್ಯವಿರುತ್ತದೆ. ಆಗ ಮಕ್ಕಳಿಗೆ ಸರಿ ತಪ್ಪಿನ ಕುರಿತು ಅರ್ಥ ಮಾಡಿಸುವುದು ಸುಲಭ.

ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.

ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು