AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day : ಪ್ರೀತಿಯ ಕಡೆಗೆ ಮೊದಲ ಹೆಜ್ಜೆ

Valentine's Day : ನನ್ನ ಕಥೆಯನ್ನೇ ಹೇಳುವುದಾದರೆ ನನಗೆ ಸುಮಾರು 17ರ ಹದಿಹರೆಯದ ವಯಸ್ಸು ಸರಿ-ತಪ್ಪುಗಳನ್ನು ಗುರುತಿಸುವ ಸಂಪೂರ್ಣ ಹಿಡಿತವಿಲ್ಲದ ಕ್ಷಣ ಜೀವನವೆಂಬ, ನದಿಯಲ್ಲಿ ಹಾಯಾಗಿ ತೇಲುವ ಸಮಯದಲ್ಲಿ ಪ್ರೀತಿಯ ಮಾಯಾಲೋಕದ ಸುಳಿಗೆ ಸಿಲುಕಿ ಪ್ರೀತಿಯ ಹಾಳ ನೋಡುವ ಆಸೆ ಆಯಿತು. ಆ ಕ್ಷಣ ಕಣ್ಮುಚ್ಚಿದರೆ ಮನಸ್ಸು ಕದ್ದ ಚೋರನನ್ನು ಬಿಟ್ಟು ಯಾರೂ ಬರುತ್ತಿರಲಿಲ್ಲ.

Valentine's Day : ಪ್ರೀತಿಯ ಕಡೆಗೆ ಮೊದಲ ಹೆಜ್ಜೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Feb 14, 2022 | 2:44 PM

Share

ನಂಬಿಕೆಯ ಇನ್ನೊಂದು ಹೆಸರೇ ಪ್ರೀತಿ ಎಂದರೆ ತಪ್ಪಾಗದು. ಸಹನೆ ,ತಾಳ್ಮೆ ,ಕೋಪ, ಜಗಳ-ಮುನಿಸುಗಳಿಗೆ ಪ್ರೀತಿ ತೆರೆದಿಟ್ಟ ಅಂಚೆ. ಗೊತ್ತು ಗೊತ್ತಿಲ್ಲದೆಯೋ ಪ್ರೀತಿಯ ಸೆಳೆತಕ್ಕೆ ಸರಿಯಾಗಿ ಪ್ರೇಮದ ಜೈಲಿನಲ್ಲಿ ಹಾಯಾಗಿ ಇರಲು ಬಯಸುವ ವಯಸ್ಸು ನಮ್ಮದು. ಪ್ರೀತಿಯ ಜೇನಾಗಿ ಮಕರಂದವನ್ನು ಸವಿಯುವ ಆತಂಕ ಸಹಜ. ಪ್ರೇಮಿಗಳಿಗೆ ಹಕ್ಕಿಯಂತೆ ಆಕಾಶದಂತಿರುವ ಪ್ರೀತಿಯನ್ನು ಸುತ್ತುವ ತವಕ. ನನ್ನ ಕಥೆಯನ್ನೇ ಹೇಳುವುದಾದರೆ ನನಗೆ ಸುಮಾರು 17ರ ಹದಿಹರೆಯದ ವಯಸ್ಸು ಸರಿ-ತಪ್ಪುಗಳನ್ನು ಗುರುತಿಸುವ ಸಂಪೂರ್ಣ ಹಿಡಿತವಿಲ್ಲದ ಕ್ಷಣ ಜೀವನವೆಂಬ, ನದಿಯಲ್ಲಿ ಹಾಯಾಗಿ ತೇಲುವ ಸಮಯದಲ್ಲಿ ಪ್ರೀತಿಯ ಮಾಯಾಲೋಕದ ಸುಳಿಗೆ ಸಿಲುಕಿ ಪ್ರೀತಿಯ ಹಾಳ ನೋಡುವ ಆಸೆ ಆಯಿತು. ಆ ಕ್ಷಣ ಕಣ್ಮುಚ್ಚಿದರೆ ಮನಸ್ಸು ಕದ್ದ ಚೋರನನ್ನು ಬಿಟ್ಟು ಯಾರೂ ಬರುತ್ತಿರಲಿಲ್ಲ. ಮನಸ್ಸಿನಲ್ಲಿ ಭಯ, ನಾನು ಏನು ಮಾಡುತ್ತಿರುವೆ ಎಂಬ ಪ್ರಶ್ನೆ , ಮನೆಯವರ ಪ್ರತಿಕ್ರಿಯೆಯ ಚಿಂತೆ, ಇದರ ಮಧ್ಯೆ ನನ್ನನ್ನು ಪ್ರೇಮದ ಸೆರೆಗೆ ಸೆಳೆದ ಚೋರನ ತುಂಟಾಟ, ಪ್ರೀತಿ, ನನ್ನ ಮನಸ್ಸನ್ನು ಸಮಾಧಾನ ಗೊಳಿಸುತ್ತಿತು.

ಹೀಗೆ ನಾವಿಬ್ಬರೂ  ಎಷ್ಟು ದಿನ ಇರಬಲ್ಲೆವು, ಎಲ್ಲ ಪ್ರೇಮಕಥೆಗಳಗೆ ನಿಷ್ಕಲ್ಮಶವಾದ ಪ್ರೀತಿಗೆ ವಿರಾಮ ಎಂಬ ಕೆಟ್ಟ ಅಧ್ಯಾಯ ಮಧ್ಯದಲ್ಲೆ ಬರಬಹುದು ಎಂದು ಯೋಚಿಸುವ ಸಂಧರ್ಭದಲ್ಲಿ, ಮನ ಕದ್ದವನ ಮುಗುಳುನಗೆ, ಅವನ ದೃಢವಾದ ಮಾತುಗಳು, ಅವನ ಗುರಿ, ನನ್ನ ಮನಸ್ಸಿನಲ್ಲಿ ನಂಬಿಕೆ ಮೂಡಿಸಿತು ಇವೆಲ್ಲ ಪ್ರಶ್ನೆಗಳಿಗೂ ಅಲ್ಪ ವಿರಾಮ ಹಾಕಿತು. ಇಂದಿಗೂ ಎಂದೆಂದಿಗೂ ಜೊತೆಗಿರುತ್ತೇವೆ ಎಂಬ ಆತ್ಮವಿಶ್ವಾಸ ಮೂಡಿತು, ಈ ಕ್ಷಣದವರೆಗೂ ಪ್ರೀತಿಯ ಅಮಲಿನಲ್ಲಿ ತೇಲುತ್ತಾ ಜೀವನದ ರೈಲುಬಂಡಿಯಲ್ಲಿ ಪ್ರಯಾಣಿಸುತ್ತಲೆ ಇದ್ದೇವಿ, ಇದೇ ಅಲ್ಲವೇ ಎರಡಕ್ಷರ ಪ್ರೀತಿಗಿರುವ ಶಕ್ತಿ.

ವಿನೀತ ಸುರೇಶ್ ಮೈಸೂರು

Published On - 6:30 am, Mon, 14 February 22

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!