AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day : ಪ್ರೀತಿಯ ಕಡೆಗೆ ಮೊದಲ ಹೆಜ್ಜೆ

Valentine's Day : ನನ್ನ ಕಥೆಯನ್ನೇ ಹೇಳುವುದಾದರೆ ನನಗೆ ಸುಮಾರು 17ರ ಹದಿಹರೆಯದ ವಯಸ್ಸು ಸರಿ-ತಪ್ಪುಗಳನ್ನು ಗುರುತಿಸುವ ಸಂಪೂರ್ಣ ಹಿಡಿತವಿಲ್ಲದ ಕ್ಷಣ ಜೀವನವೆಂಬ, ನದಿಯಲ್ಲಿ ಹಾಯಾಗಿ ತೇಲುವ ಸಮಯದಲ್ಲಿ ಪ್ರೀತಿಯ ಮಾಯಾಲೋಕದ ಸುಳಿಗೆ ಸಿಲುಕಿ ಪ್ರೀತಿಯ ಹಾಳ ನೋಡುವ ಆಸೆ ಆಯಿತು. ಆ ಕ್ಷಣ ಕಣ್ಮುಚ್ಚಿದರೆ ಮನಸ್ಸು ಕದ್ದ ಚೋರನನ್ನು ಬಿಟ್ಟು ಯಾರೂ ಬರುತ್ತಿರಲಿಲ್ಲ.

Valentine's Day : ಪ್ರೀತಿಯ ಕಡೆಗೆ ಮೊದಲ ಹೆಜ್ಜೆ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Feb 14, 2022 | 2:44 PM

Share

ನಂಬಿಕೆಯ ಇನ್ನೊಂದು ಹೆಸರೇ ಪ್ರೀತಿ ಎಂದರೆ ತಪ್ಪಾಗದು. ಸಹನೆ ,ತಾಳ್ಮೆ ,ಕೋಪ, ಜಗಳ-ಮುನಿಸುಗಳಿಗೆ ಪ್ರೀತಿ ತೆರೆದಿಟ್ಟ ಅಂಚೆ. ಗೊತ್ತು ಗೊತ್ತಿಲ್ಲದೆಯೋ ಪ್ರೀತಿಯ ಸೆಳೆತಕ್ಕೆ ಸರಿಯಾಗಿ ಪ್ರೇಮದ ಜೈಲಿನಲ್ಲಿ ಹಾಯಾಗಿ ಇರಲು ಬಯಸುವ ವಯಸ್ಸು ನಮ್ಮದು. ಪ್ರೀತಿಯ ಜೇನಾಗಿ ಮಕರಂದವನ್ನು ಸವಿಯುವ ಆತಂಕ ಸಹಜ. ಪ್ರೇಮಿಗಳಿಗೆ ಹಕ್ಕಿಯಂತೆ ಆಕಾಶದಂತಿರುವ ಪ್ರೀತಿಯನ್ನು ಸುತ್ತುವ ತವಕ. ನನ್ನ ಕಥೆಯನ್ನೇ ಹೇಳುವುದಾದರೆ ನನಗೆ ಸುಮಾರು 17ರ ಹದಿಹರೆಯದ ವಯಸ್ಸು ಸರಿ-ತಪ್ಪುಗಳನ್ನು ಗುರುತಿಸುವ ಸಂಪೂರ್ಣ ಹಿಡಿತವಿಲ್ಲದ ಕ್ಷಣ ಜೀವನವೆಂಬ, ನದಿಯಲ್ಲಿ ಹಾಯಾಗಿ ತೇಲುವ ಸಮಯದಲ್ಲಿ ಪ್ರೀತಿಯ ಮಾಯಾಲೋಕದ ಸುಳಿಗೆ ಸಿಲುಕಿ ಪ್ರೀತಿಯ ಹಾಳ ನೋಡುವ ಆಸೆ ಆಯಿತು. ಆ ಕ್ಷಣ ಕಣ್ಮುಚ್ಚಿದರೆ ಮನಸ್ಸು ಕದ್ದ ಚೋರನನ್ನು ಬಿಟ್ಟು ಯಾರೂ ಬರುತ್ತಿರಲಿಲ್ಲ. ಮನಸ್ಸಿನಲ್ಲಿ ಭಯ, ನಾನು ಏನು ಮಾಡುತ್ತಿರುವೆ ಎಂಬ ಪ್ರಶ್ನೆ , ಮನೆಯವರ ಪ್ರತಿಕ್ರಿಯೆಯ ಚಿಂತೆ, ಇದರ ಮಧ್ಯೆ ನನ್ನನ್ನು ಪ್ರೇಮದ ಸೆರೆಗೆ ಸೆಳೆದ ಚೋರನ ತುಂಟಾಟ, ಪ್ರೀತಿ, ನನ್ನ ಮನಸ್ಸನ್ನು ಸಮಾಧಾನ ಗೊಳಿಸುತ್ತಿತು.

ಹೀಗೆ ನಾವಿಬ್ಬರೂ  ಎಷ್ಟು ದಿನ ಇರಬಲ್ಲೆವು, ಎಲ್ಲ ಪ್ರೇಮಕಥೆಗಳಗೆ ನಿಷ್ಕಲ್ಮಶವಾದ ಪ್ರೀತಿಗೆ ವಿರಾಮ ಎಂಬ ಕೆಟ್ಟ ಅಧ್ಯಾಯ ಮಧ್ಯದಲ್ಲೆ ಬರಬಹುದು ಎಂದು ಯೋಚಿಸುವ ಸಂಧರ್ಭದಲ್ಲಿ, ಮನ ಕದ್ದವನ ಮುಗುಳುನಗೆ, ಅವನ ದೃಢವಾದ ಮಾತುಗಳು, ಅವನ ಗುರಿ, ನನ್ನ ಮನಸ್ಸಿನಲ್ಲಿ ನಂಬಿಕೆ ಮೂಡಿಸಿತು ಇವೆಲ್ಲ ಪ್ರಶ್ನೆಗಳಿಗೂ ಅಲ್ಪ ವಿರಾಮ ಹಾಕಿತು. ಇಂದಿಗೂ ಎಂದೆಂದಿಗೂ ಜೊತೆಗಿರುತ್ತೇವೆ ಎಂಬ ಆತ್ಮವಿಶ್ವಾಸ ಮೂಡಿತು, ಈ ಕ್ಷಣದವರೆಗೂ ಪ್ರೀತಿಯ ಅಮಲಿನಲ್ಲಿ ತೇಲುತ್ತಾ ಜೀವನದ ರೈಲುಬಂಡಿಯಲ್ಲಿ ಪ್ರಯಾಣಿಸುತ್ತಲೆ ಇದ್ದೇವಿ, ಇದೇ ಅಲ್ಲವೇ ಎರಡಕ್ಷರ ಪ್ರೀತಿಗಿರುವ ಶಕ್ತಿ.

ವಿನೀತ ಸುರೇಶ್ ಮೈಸೂರು

Published On - 6:30 am, Mon, 14 February 22

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು