AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Year End 2022: ಈ ವರ್ಷ ಜನರು ಕಲಿತ ಆರೋಗ್ಯ ಮತ್ತು ನೈರ್ಮಲ್ಯದ ಪಾಠಗಳು

ನಿಯಮಿತವಾಗಿ ಕೈಗಳನ್ನು ತೊಳೆಯುವುದರಿಂದ ಹಿಡಿದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ, ಕಳೆದ ಒಂದು ವರ್ಷದಲ್ಲಿ ನಾವು ಕಲಿತ ನೈರ್ಮಲ್ಯ ಪಾಠಗಳ ಪಟ್ಟಿ ಇಲ್ಲಿದೆ.

Year End 2022: ಈ ವರ್ಷ ಜನರು ಕಲಿತ ಆರೋಗ್ಯ ಮತ್ತು ನೈರ್ಮಲ್ಯದ ಪಾಠಗಳು
ಸಾಂದರ್ಭಿಕ ಚಿತ್ರ Image Credit source: HT
TV9 Web
| Edited By: |

Updated on:Dec 31, 2022 | 7:36 PM

Share

ನಿಯಮಿತವಾಗಿ ಕೈಗಳನ್ನು ತೊಳೆಯುವುದರಿಂದ ಹಿಡಿದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ, ಕಳೆದ ಒಂದು ವರ್ಷದಲ್ಲಿ ನಾವು ಕಲಿತ ನೈರ್ಮಲ್ಯ ಪಾಠಗಳ ಪಟ್ಟಿ ಇಲ್ಲಿದೆ. ನಮ್ಮ ಜೀವನದಲ್ಲಿ ಕೊರೋನಾ ವೈರಸ್ (Corona virus) ಎಂಬ ಮಹಾಮಾರಿ ಪ್ರಾರಂಭವಾದಾಗಿನಿಂದ, ಕಳೆದ ಕೆಲವು ವರ್ಷಗಳಲ್ಲಿ ನಾವು ಅನೇಕ ರೋಗಗಳಿಗೆ ಬಲಿಯಾಗಿದ್ದೇವೆ. ಕೋವಿಡ್ ನಾವು ಯೋಚಿಸುವ, ಬದುಕುವ ವಿಧಾನ ಮತ್ತು ಆವು ಆಧ್ಯತೆ ನೀಡುವ ವಿಷಯಗಳನ್ನು ಬದಲಾಯಿಸಿದೆ. ಕಾಲಾನಂತರದಲ್ಲಿ, ನಾವು ಜೀವನದ ಅರ್ಥವನ್ನು ಚೆನ್ನಾಗಿ ಕಲಿತಿದ್ದೇವೆ ಮತ್ತು ವೈರಸ್, ಹೇಗೆ ಬದುಕಬೇಕೆಂಬ ನಮ್ಮ ಗ್ರಹಿಕೆಯನ್ನು ಬದಲಾಯಿಸಿತು. ನಾವು ಜೀವನವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದ್ದೇವೆ. ಅದು ಯಾವುದೇ ಸಮಯದಲ್ಲಿ ಕೊನೆಗೊಳ್ಳಬಹುದು ಎಂಬುವುದನ್ನು ತಿಳಿದಿದ್ದೇವೆ. ಮತ್ತು ಕೊರೋನಾದಿಂದ ಭಯವು ಒಂದು ದೊಡ್ಡ ಪ್ರೇರಕವಾಗಿದೆ ಎಂದು ಅವರು ಹೇಳುತ್ತಾರೆ. ಮತ್ತು ಅದು ನಮಗೆ ಬಲ ನೀಡುತ್ತದೆ. ಈ ಬಾರಿ ಇದು ಕೇವಲ ಸಾವಿನ ಭಯವಾಗಿತ್ತು. ನಾವು ನಮ್ಮ ಕಛೇರಿಗಳನ್ನು ಮನೆಗೆ ತರಲು ಪ್ರಾರಂಭಿಸಿದಾಗ ನಾವು ಕೆಲಸ ಮತ್ತು ಜೀವನದ ನಡುವಿನ ಸಮತೋಲನವನ್ನು ಆಧ್ಯತೆಯನ್ನಾಗಿ ಮಾಡಿಕೊಂಡಿದ್ದೇವೆ ಹಾಗೂ ನಮ್ಮ ಪ್ರೀತಿ ಪಾತ್ರರಿಗೆ ಕೃತಜ್ಞರಾಗಿರಲು ಕಲಿತಿದ್ದೇವೆ.

ನಾವು ವರ್ಷದ ಉತ್ತಮ ದಿನಗಳನ್ನು ಕೊನೆಗೊಳಿಸುತ್ತಿರುವಾಗ, ಕಳೆದ ಒಂದು ವರ್ಷದಲ್ಲಿ ನಾವು ಕಲಿತ ಆರೋಗ್ಯ ಮತ್ತು ನೈರ್ಮಲ್ಯದ ಪಾಠಗಳ ಪಟ್ಟಿ ಮತ್ತು ಉತ್ತಮವಾಗಿ ಬದುಕಲು ನಾವು ಅವುಗಳನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಂಡಿದ್ದೇವೆ ಎಂಬುದನ್ನು ನಾವು ಇಲ್ಲಿ ತಿಳಿಸಿದ್ದೇವೆ.

ಕೈ ತೊಳೆಯುವುದು: ಎರಡು ವರ್ಷಗಳ ಹಿಂದೆ ಕೋವಿಡ್ ಸಮಯದಲ್ಲಿ ಕಡ್ಡಾಯ ಮುನ್ನೆಚ್ಚರಿಕೆಯಾಗಿ ಪ್ರಾರಂಭವಾದ ಈ ಕೈತೊಳೆಯುವ ಅಭ್ಯಾಸ ನಮ್ಮ ಜೀವನದ ಭಾಗವಾಗಿದೆ. ಗೊತ್ತಿದ್ದೋ ಅಥವಾ ಕೆಲವೊಮ್ಮೆ ತಿಳಿಯದೆಯೋ ಕೈತೊಳೆಯಲು ಪ್ರಾರಂಭಿಸುತ್ತೇವೆ. ಇದು ಉತ್ತಮ ಅಭ್ಯಾಸವಾಗಿದೆ. ವಿಶೇಷವಾಗಿ ನಾವು ಹೊರಗಿನಿಂದ ಹಿಂತಿರುಗುವಾಗ ನಾವು ಹೊತ್ತೊಯ್ಯಬಹುದಾದ ಸೂಕ್ಷ್ಮಜೀವಿಗಳು ಮತ್ತು ವೈರಸ್‌ಗಳ ಬಗ್ಗೆ ಎಚ್ಚರಿಕೆ ವಹಿಸುತ್ತೇವೆ. ಭಾರತದ ಬಹುತೇಕ ಭಾಗಗಳಲ್ಲಿ ಕೈಯಲ್ಲಿ ತಿನ್ನುವ ಸಂಸ್ಕೃತಿಯನ್ನು ಹೊಂದಿದ್ದೇವೆ. ಮೊದಲು ಸಾಬೂನಿನಿಂದ ಕೈ ತೊಳೆಯುವುದು ಮತ್ತು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಕಡ್ಡಾಯವಾಗಿದೆ.

ಮಾಸ್ಕ್ ಧರಿಸುವುದು: ಮಾಸ್ಕ್​ಗಳು ವೈರಸ್‌ಗಳಿಂದ ನಮ್ಮನ್ನು ರಕ್ಷಿಸುವುದಿಲ್ಲ, ಇದು ಗಾಳಿಯಲ್ಲಿನ ಮಾಲಿನ್ಯಕಾರಕಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತವೆ. ಅಕ್ಟೋಬರ್‌ನಲ್ಲಿ ದೀಪಾವಳಿ ಮತ್ತು ಚಳಿಗಾಲದ ಮೂಲೆಯಲ್ಲಿ, ದೆಹಲಿ ಜನರು ಎದುರಿಸುತ್ತಿರುವ ಸಂಕಟ ಮತ್ತು ಮಾಲಿನ್ಯದ ದೃಷ್ಟಿಯಲ್ಲಿ ಅನೇಕ ಸಾವು ನೋವುಗಳು ಸಂಭವಿಸತ್ತು. ಇದರೊಂದಿಗೆ ಕೋವಿಡ್ ಇದ್ದೋ ಅಥವಾ ಇಲ್ಲದೆಯೇ ದೈನಂದಿನ ಜೀವನಕ್ಕೆ ಮಾಸ್ಕ್ ಕಡ್ಡಾಯ ಎಂದು ಕಲಿತಿದ್ದೇವೆ.

ಇದನ್ನು ಓದಿ:ಈ ವರ್ಷ ಅತೀ ಹೆಚ್ಚು ಗೂಗಲ್​ನಲ್ಲಿ ಹುಡುಕಿದ ಟಾಪ್ 10 ಆಯುರ್ವೇದ ಗಿಡಮೂಲಿಕೆಗಳು

ಕೆಲಸ ಮಾಡುವುದು: ನಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವುದರಿಂದ ನಾವು ಯಾವುದೇ ವೈರಸ್ ಅಥವಾ ಯಾವುದೇ ರೋಗವನ್ನು ಎದುರಿಸಲು ಅಗತ್ಯವಿರುವ ಪ್ರತಿರಕ್ಷೆಯ ಮಟ್ಟವನ್ನು ಹೆಚಿಸಲು ಸಹಾಯ ಮಾಡುತ್ತದೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯು ನಾವು ಒಡ್ಡಿಕೊಳ್ಳುವ ರೋಗಗಳ ವಿರುದ್ಧ ಹೋರಡಲು ಸಹಾಯ ಮಾಡುತ್ತದೆ. ಆದ್ದರಿಂದ ಆರೋಗ್ಯಕರ ಜೀವನಶೈಲಿಯನ್ನು ನಡೆಸುವುದು ಮತ್ತು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉತ್ತಮ ಆಹಾರ ಕ್ರಮನ್ನು ನಡೆಸುವುದು ಮುಖ್ಯವಾಗಿದೆ.

ಮಧ್ಯಪಾನ, ಧೂಪಪಾನ: ಮಧ್ಯಪಾನ, ತಂಬಾಕು ಸೇವನೆ, ಮತ್ತು ಧೂಮಪಾನವು ಅತ್ಯಂತ ಹಾನಿಕಾರಕವಾಗಿದೆ. ಮತ್ತು ಅವು ದೇಹದ ರೋಗ ನಿರೋಧಕ ಶಕ್ತಿಯನ್ನು ಮತ್ತಷ್ಟು ಹಾಳು ಮಾಡುತ್ತವೆ. ಧೂಮಪಾನ ಮಾಡುವವರು ಶ್ವಾಸಕೋಶದ ಅವಸ್ಥತೆಗಳು, ಲಿವರ್ ಸಮಸ್ಯೆಗಳು ಮತ್ತು ಹೃದಯ ರಕ್ತನಾಳಗಳ ಕಾಯಿಲೆಗಳಿಂದ ಬಳಲುತ್ತಾರೆ. ಆರೋಗ್ಯಕರ ಮತ್ತು ಸುಧೀರ್ಘ ಜೀವನವನ್ನು ನಡೆಸಲು ನಾವು ಈ ಹಾನಿಕಾರಕ ಅಭ್ಯಾಸಗಳನ್ನು ಕಡಿಮೆ ಮಾಡಬೇಕು ಮತ್ತು ಅಂತಿಮವಾಗಿ ಈ ಅಭ್ಯಾಸಗಳನ್ನು ತ್ಯಜಿಸಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:09 pm, Mon, 26 December 22

ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ