AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದಲ್ಲಿ ತೇವಾಂಶಭರಿತವಾದ ತ್ವಚೆ ನಿಮ್ಮದಾಗಬೇಕೆ? ಈ ಆಹಾರಗಳನ್ನು ಸೇವಿಸಿ

ಚಳಿಗಾಲವನ್ನು ಕೆಲವರು ಇಷ್ಟ ಪಟ್ಟರೆ, ಇನ್ನು ಕೆಲವರು ಯಾಕಾದರೂ ಚಳಿಗಾಲ ಬರುತ್ತದೆ ಎಂದುಕೊಳ್ಳುತ್ತಾರೆ. ಮುಖದ ಕಾಂತಿಯ ಬಗ್ಗೆ ಹೆಚ್ಚು ಗಮನ ಕೊಡುವ ಮಹಿಳೆಯರಂತೂ ಈ ಚಳಿಗಾಲವನ್ನು ಹೆಚ್ಚು ಇಷ್ಟ ಪಡುವುದೇ ಇಲ್ಲ. ಈ ಸಮಯದಲ್ಲಿ ಬಿಡದೇ ಕಾಡುವ ನೂರಾರು ಆರೋಗ್ಯ ಸಮಸ್ಯೆಗಳು ಒಂದೆಡೆಯಾದರೆ ಚರ್ಮದ ಅಂದವು ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಕೆಲವು ಆಹಾರಗಳನ್ನು ಸೇವಿಸುವ ಮೂಲಕ ತ್ವಚೆಯನ್ನು ತೇವಾಂಶ ಭರಿತವಾಗಿಟ್ಟುಕೊಳ್ಳಬಹುದು.

ಚಳಿಗಾಲದಲ್ಲಿ ತೇವಾಂಶಭರಿತವಾದ ತ್ವಚೆ ನಿಮ್ಮದಾಗಬೇಕೆ? ಈ ಆಹಾರಗಳನ್ನು ಸೇವಿಸಿ
ಸಾಯಿನಂದಾ
| Edited By: |

Updated on: Jan 30, 2024 | 1:00 PM

Share

ಚಳಿಗಾಲದಲ್ಲಿ ಆರೋಗ್ಯ ಹಾಗೂ ತ್ವಚೆಯ ಕಡೆಗೆ ಗಮನ ಕೊಡುವುದು ಬಹುಮುಖ್ಯ. ಈ ಸಮಯದಲ್ಲಿ ತಂಪಾದ ವಾತಾವರಣವಿರುವ ಕಾರಣ ತ್ವಚೆ ಹಾಗೂ ಚರ್ಮವು ಒಣಗಿದಂತಾಗುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ನಾನಾ ರೀತಿಯ ಉತ್ಪನ್ನಗಳನ್ನು ತ್ವಚೆಯ ರಕ್ಷಣೆಗೆ ಬಳಸುವುದರ ಜೊತೆಗೆ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆ ಮಾಡಿಕೊಂಡು, ತ್ವಚೆಗೆ ಪೋಷಕಾಂಶಯುಕ್ತ ಆಹಾರವನ್ನು ನೀಡುವುದು ಅಗತ್ಯ.

ತ್ವಚೆಯ ಆರೈಕೆಗೆ ಈ ಆಹಾರಗಳನ್ನು ಸೇವಿಸಿ

* ಟೊಮ್ಯಾಟೊ : ಚಳಿಗಾಲದಲ್ಲಿ ತ್ವಚೆಯನ್ನು ತೇವಾಂಶಭರಿತವಾಗಿ ಇಡಲು ಟೊಮೆಟೊವನ್ನು ಸೇವಿಸುವುದು ಬಹಳ ಉತ್ತಮ. ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುವ ಈ ಟೊಮೊಟೊದಲ್ಲಿ ವಿಟಮಿನ್ ಸಿ ಲೈಕೋಪೀನ್‌ನಲ್ಲಿ ಸಮೃದ್ಧವಾಗಿದ್ದು, ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ಈ ಗುಣಗಳು ನಿಮ್ಮ ಚರ್ಮವನ್ನು ಪರಿಸರದಿಂದ ಹಾಗೂ ವಿಕಿರಣದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ನೀರಿನ ಅಂಶವು ಹೆಚ್ಚಾಗಿರುವುದರಿಂದ ಚರ್ಮವನ್ನು ಒಳಗಿನಿಂದ ಹೈಡ್ರೇಟ್ ಆಗಿರಿಸುತ್ತದೆ. ಹೀಗಾಗಿ ಟೊಮೊಟೊವನ್ನು ಸಲಾಡ್ ಗಳು, ಸೂಪ್ ಗಳು ಹಾಗೂ ಸಾಸ್ ಗಳನ್ನು ಮಾಡಿ ಸೇವಿಸಬಹುದು.

* ಚಿಯಾ ಬೀಜಗಳು : ಈ ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲವಾಗಿದೆ. ಈ ಬೀಜಗಳು ಚರ್ಮದ ನೈಸರ್ಗಿಕ ತೈಲವನ್ನು ಕಾಪಾಡುವುದರೊಂದಿಗೆ ತೇವಾಂಶವು ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಅದಲ್ಲದೇ, ಚರ್ಮವನ್ನು ಒಳಗಿನಿಂದ ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಈ ಬೀಜಗಳನ್ನು ಮೊಸರು ಅಥವಾ ಸಲಾಡ್‌ ಗಳಿಗೆ ಬೆರೆಸಿ ಸೇವಿಸಬಹುದು.

* ಬಾದಾಮಿ : ಬಾದಾಮಿಯಲ್ಲಿ ಕೊಬ್ಬುಗಳು, ಪ್ರೋಟೀನ್ ಮತ್ತು ಫೈಬರ್‌, ವಿಟಮಿನ್ ಇ ಹೇರಳವಾಗಿದ್ದು,ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿದೆ. ಈ ಬಾದಾಮಿ ಸೇವನೆ ಮಾಡುವುದರಿಂದ ಚರ್ಮವನ್ನು ಆಕ್ಸಿಡೇಟಿವ್ ಒತ್ತಡದಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅದಲ್ಲದೇ ಚರ್ಮದಲ್ಲಿ ತೇವಾಂಶವು ಕುಂದದಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ: ಮುಖದ ಅಂದಕ್ಕಷ್ಟೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು ಅರಶಿನ, ಇಲ್ಲಿದೆ ಸಿಂಪಲ್ ಮನೆ ಮದ್ದು

* ತೆಂಗಿನ ನೀರು: ತೆಂಗಿನ ನೀರಿನಲ್ಲಿ ಸೈಟೊಕಿನ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ ಗಳಿದ್ದು, ವಯಸ್ಸಾಗದಂತೆ ನೈಸರ್ಗಿಕವಾಗಿ ತ್ವಚೆಯನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ಈ ಸಮಯದಲ್ಲಿ ಈ ತೆಂಗಿನ ನೀರನ್ನು ಕುಡಿಯಬಹುದು, ಇಲ್ಲವಾದರೆ ಜ್ಯೂಸ್ ಅಥವಾ ಚಟ್ನಿಗಳಿಗೆ ಬಳಸಬಹುದು.

* ಮೊಸರು : ಮೊಸರಿನಲ್ಲಿ ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದ್ದು, ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದಲ್ಲದೇ ಚರ್ಮವನ್ನು ನೈಸರ್ಗಿಕವಾಗಿ ಕಾಪಾಡುವುದರೊಂದಿಗೆ ತೇವಾಂಶದ ನಷ್ಟವನ್ನು ತಡೆದು, ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಈ ಮೊಸರನ್ನು ಆಹಾರವಾಗಿ ಸೇವಿಸಬಹುದು. ಇಲ್ಲದಿದ್ದರೆ ಮೊಸರಿನ ಫೇಸ್ ಮಾಸ್ಕ್ ಅಥವಾ ಮಾಯಿಶ್ಚರೈಸರ್ ಆಗಿ ಬಳಸುವ ಮೂಲಕ ತ್ವಚೆಯ ರಕ್ಷಣೆಯನ್ನು ಮಾಡಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ