AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaidehi‘s Birthday: ವೈದೇಹಿಯವರ ‘ಅಕ್ಕು’ ಚಂಪಾ ಶೆಟ್ಟಿಯವರೊಂದಿಗೆ ರಂಗದ ಮೇಲೆ ಬಂದಿದ್ದು ಹೀಗೆ

Champa Shetty : ‘ಅಂದು ನಾನು ವೈದೇಹಿಯವರಲ್ಲಿ ಕಂಡದ್ದು ಒಬ್ಬ ತಾಯಿಯ ಮಮತೆ ಎಂದರೆ ನಿಜಕ್ಕೂ ಉತ್ಪ್ರೇಕ್ಷೆಯಲ್ಲ. ಅಂದು ನಾಟಕ ಮಾಡಲು ಅನುಮತಿ ನೀಡಿದ್ದರ ಜೊತೆಗೆ ಮಧ್ಯಾಹ್ನ ರೊಟ್ಟಿ ಊಟ ಮತ್ತು ರೈಲಿನ ಪ್ರಯಾಣಕ್ಕಾಗಿ ಪ್ರೀತಿಯ ಮೊಸರನ್ನದ ಬುತ್ತಿ. ತಾಯಿಯಂತೆ ಇನ್ನಾರು ಕೊಡಲು ಸಾಧ್ಯ?’ ಚಂಪಾ ಶೆಟ್ಟಿ

Vaidehi‘s Birthday: ವೈದೇಹಿಯವರ ‘ಅಕ್ಕು’ ಚಂಪಾ ಶೆಟ್ಟಿಯವರೊಂದಿಗೆ ರಂಗದ ಮೇಲೆ ಬಂದಿದ್ದು ಹೀಗೆ
ವೈದೇಹಿಯವರೊಂದಿಗೆ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರದ ನಿರ್ದೇಶಕಿ ಚಂಪಾ ಶೆಟ್ಟಿ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Feb 12, 2022 | 5:22 PM

Share

ವೈದೇಹಿ | Vaidehi : ಹಿಂದೆ ಪ್ರಜಾವಾಣಿಯಲ್ಲಿ  ಖ್ಯಾತ ವಿಮರ್ಶಕರಾದ ಡಾ.ಆಶಾದೇವಿಯವರು ಬರೆಯುತ್ತಿದ್ದ ಕಥೆ,ಕಾದಂಬರಿಗಳಲ್ಲಿನ ಪಾತ್ರಗಳನ್ನು ಕುರಿತಾದ ವಿಶೇಷ ಅಂಕಣವನ್ನು ತಪ್ಪದೆ ಓದುತ್ತಿದ್ದೆ. ಅವುಗಳಲ್ಲಿ ಕೆಲವು ನಾನು ಓದಿದ್ದ ಕತೆಗಳಾದರೆ ಕೆಲವು ಓದದೇ ಇದ್ದ ಕತೆಗಳ ಪಾತ್ರಗಳೂ ಇರುತ್ತಿದ್ದವು. ಹಾಗೆ ಓದುವಾಗ ನನಗೆ ಸಿಕ್ಕವರೇ ‘ಅಕ್ಕು’ ಮತ್ತು ವೈದೇಹಿ ಮೇಡಂ. ಓದಿದಾಗ, ವಿಮರ್ಶೆಯಲ್ಲಿಯೇ  ಇಷ್ಟು ಸೆಳೆಯುವ ಅಕ್ಕು ಇನ್ನು ಕತೆಯಲ್ಲಿ ಹೇಗಿರಬಹುದು? ಎಂದು ಕುತೂಹಲದಿಂದ, ಅಂದೇ ಹೋಗಿ ‘ವೈದೇಹಿ ಕತೆಗಳು’ ಪುಸ್ತಕವನ್ನು ಕೊಂಡು ತಂದೆ. ಒಬ್ಬ ರಂಗ ನಿರ್ದೇಶಕಿಯಾಗಿ ನಾನು ಕತೆ ಕಾದಂಬರಿಗಳನ್ನು ಓದುವಾಗ ಅವುಗಳಲ್ಲಿ ರಂಗಸಾಧ್ಯತೆ ಇದೆಯೇ? ಎಂಬ ಸಣ್ಣ ಬಯಕೆ ಸದಾ ಸುಪ್ತವಾಗಿರುತ್ತದೆ. ಅಕ್ಕುವನ್ನು ಓದುತ್ತಿದ್ದಂತೆಯೇ “ಅಕ್ಕು’’ ರಂಗದ ಮೇಲೆ ಬರಬೇಕೆಂಬ ಆಸೆ ಬಲವಾಯಿತು. ಕೂಡಲೇ ನಾನು ಓಡಿದ್ದು ನಮ್ಮ ತಂಡದವರೇ ಆದ, ವೈದೇಹಿಯವರಿಗೆ ಆಪ್ತರಾದ ಗೀತಾ ಸುರತ್ಕಲ್ ಅವರ ಮನೆಗೆ.

ಚಂಪಾ ಶೆಟ್ಟಿ, ರಂಗಕಲಾವಿದೆ, ನಿರ್ದೇಶಕಿ (Champa Shetty)

*

ವೈದೇಹಿಯವರನ್ನು ಕೆಲವು ವೇದಿಕೆಗಳಲ್ಲಿ ಕಂಡಿದ್ದೆನಾದರೂ ಅವರನ್ನು ಎಂದೂ ಮಾತನಾಡಿಸುವ ಅವಕಾಶ ಸಿಕ್ಕಿರಲಿಲ್ಲ. ಆಗ ನನ್ನ ಕಲ್ಪನೆಯಲ್ಲಿದ್ದ ವೈದೇಹಿಯವರಿಗೂ ಮುಂದೆ ನಾನು ಕಂಡ ವೈದೇಹಿಯವರಿಗೂ ಅಜಗಜಾಂತರ ಎಂದು ತಿಳಿದದ್ದು ನಂತರದಲ್ಲಿ. ನನ್ನ ಕಲ್ಪನೆಯ ಪ್ರಕಾರ ವೈದೇಹಿಯವರೆಂದರೆ, ಬಹಳ ಸಿಟ್ಟು, ಯಾರೊಡನೆಯೂ ಹೆಚ್ಚು ಮಾತನಾಡುವುದಿಲ್ಲ. ಹೀಗೆ ನನ್ನದೇ ಕೆಲವು ಊಹೆಗಳಿದ್ದವು. ಆದರೆ ಗೀತಾ ಸುರತ್ಕಲ್ ರವರನ್ನು ಭೇಟಿ ಮಾಡಿ ಹೀಗೆ ಅಕ್ಕು ನಾಟಕ ಮಾಡಬೇಕೆಂದಿದ್ದೇನೆ, ಅದಕ್ಕೆ ವೈದೇಹಿಯವರ ಅನುಮತಿ ಬೇಕೆಂದಾಗ, ಗೀತಾ , ‘ಅದಕ್ಕೇನಂತೆ ಆ ಜವಾಬ್ದಾರಿ ನನ್ನದು ವೈದೇಹಿ ಖಂಡಿತಾ ಇಲ್ಲ ಎನ್ನುವುದಿಲ್ಲ’ ಎಂದಾಗ ನನಗೆ ಒಮ್ಮೆಲೇ ಆಶ್ಚರ್ಯ, ಅನುಮಾನ. ಆದರೆ ಗೀತಾರವರು ಕೊಟ್ಟ ಭರವಸೆಯ ಮೇಲೆ ಅಕ್ಕುವನ್ನು ರಂಗದ ಮೇಲೆ ತರಲು ಮನದಲ್ಲಿಯೇ ತಯಾರಿ ನಡೆಸಿ ನಂತರ ಅವರ ಅನುಮತಿ ಪಡೆಯಲು ನಾನು ಮತ್ತು ಗೀತಾ ಸುರತ್ಕಲ್ ಹೊರಟದ್ದು ನೇರ ಮಣಿಪಾಲ್​ಗೆ. ಗೀತಾ ಎಷ್ಟೇ ಹೇಳಿದ್ದರೂ ನನ್ನೊಳಗೊಂದು ರೀತಿಯ ಭಯ, ಆತಂಕ ಕಾಡುತ್ತಲೇ ಇತ್ತು. ಆದರೆ ವೈದೇಹಿಯವರ ಮನೆಗೆ ಹೋಗಿ ಅವರನ್ನು ಭೇಟಿ ಮಾಡಿದ ಘಳಿಗೆ ನಿಜಕ್ಕೂ ಅವರ ಬಗೆಗಿದ್ದ ನನ್ನ ಅನಿಸಿಕೆಗಳೂ ಪೂರಾ ತಲೆಕೆಳಗಾಗಿದ್ದವು.

ಇದನ್ನೂ ಓದಿ : Vaidehi‘s Birthday : ವೈದೇಹಿ ಎಂಬ ‘ಇರುವಂತಿಗೆ’ ಅರಳಿದ ಕಥೆ ಇಲ್ಲಿದೆ, ಓದಿ ಸವಿತಾ ನಾಗಭೂಷಣ ಬರಹ

Kannada writer Vaidehi Birthday Special write up by Director Champa Shetty

ವೈದೇಹಿಯವರೊಂದಿಗೆ ಚಂಪಾ ಶೆಟ್ಟಿ

ಅಂದು ನಾನು ವೈದೇಹಿಯವರಲ್ಲಿ ಕಂಡದ್ದು ಒಬ್ಬ ತಾಯಿಯ ಮಮತೆ ಎಂದರೆ ನಿಜಕ್ಕೂ ಉತ್ಪ್ರೇಕ್ಷೆಯಲ್ಲ. ಅಂದು ನಾಟಕ ಮಾಡಲು ಅನುಮತಿ ನೀಡಿದ್ದರ ಜೊತೆಗೆ ಮಧ್ಯಾಹ್ನ ರೊಟ್ಟಿ ಊಟ ಮತ್ತು ರೈಲಿನ ಪ್ರಯಾಣಕ್ಕಾಗಿ ಪ್ರೀತಿಯ ಮೊಸರನ್ನದ ಬುತ್ತಿ. ತಾಯಿಯಂತೆ ಇನ್ನಾರು ಕೊಡಲು ಸಾಧ್ಯ? ನಾನು ಯಾರು, ನನ್ನ ಹಿನ್ನೆಲೆ ಏನು? ನಾಟಕ ಹೇಗೆ ಮಾಡಬಹುದು? ಎಂಬ ಯಾವ ಚಿಂತೆಯೂ ಮಾಡದೆ “ಒಬ್ಬ ಹೆಣ್ಣುಮಗಳು ಪ್ರಯತ್ನ ಮಾಡುತ್ತಿದ್ದೀಯಾ ಎಂದರೆ ನನ್ನ ಬೆಂಬಲ ಇದ್ದೇ ಇರುತ್ತದೆ’’ ಎಂದು ಒಂದೇ ಮಾತಿನಲ್ಲಿ ಅನುಮತಿ ನೀಡಿದ್ದರು. ಆದರೆ ಎರಡು ಷರತ್ತುಗಳೊಂದಿಗೆ!

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಇದನ್ನೂ ಓದಿ : Vaidehi‘s Birthday: ‘ಈ ಗೌರವ ಗೀರವ ಎಲ್ಲ ಪುರುಷಲೋಕದ್ದು, ನಂಗ್ಯಾಕೆ? ಬೇಕಾ ಇದೆಲ್ಲಾ, ಯೋಚಿಸು’ ಎಂದರು ವೈದೇಹಿ

Published On - 4:23 pm, Sat, 12 February 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ