AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೆರೆನಾಡ ನುಡಿಯೊಳಗಾಡಿ; ಹೆಂಗಸೂ ಅಂದರೆ ದೇಹವನ್ನು ಕಟ್ಟಿಹಾಕಬೇಕು, ಮನಸ್ಸನ್ನು ಅಡಗಿಸಿಡಬೇಕು

Indraneela Story by A. Vennila : ಸೂಳೆಯೂ ಕಾಸಿಗಾಗಿಯೇ ಹಲ್ಲುಕಚ್ಚಿ ಮಲಗುತ್ತಾಳೆ. ಸಂತೋಷವಾಗಿಯೇ ಮಲಗುತ್ತಾಳೆಯೆ? ಸಂಸಾರದಲ್ಲಿ ಯಾವಳಾದರೂ ಗಂಡನ ಜತೆ ಮಲಗಬೇಕು, ಏಳಬೇಕು ಎಂದು ಹೊರಗೆ ಹೇಳಿಕೊಂಡು ತಿರುಗುತ್ತಾಳೇನೇ?

Literature: ನೆರೆನಾಡ ನುಡಿಯೊಳಗಾಡಿ; ಹೆಂಗಸೂ ಅಂದರೆ ದೇಹವನ್ನು ಕಟ್ಟಿಹಾಕಬೇಕು, ಮನಸ್ಸನ್ನು ಅಡಗಿಸಿಡಬೇಕು
ಲೇಖಕಿ ಅ. ವೆನ್ನಿಲಾ, ಅನುವಾದಕ ಕೆ. ನಲ್ಲತಂಬಿ
ಶ್ರೀದೇವಿ ಕಳಸದ
|

Updated on:Mar 18, 2022 | 3:39 PM

Share

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಅಮ್ಮ ಹೊರಟು ಬಂದುಬಿಡುತ್ತಾಳೆ. “ನಿನ್ನನು ಹೆತ್ತು ಬೆಳಸಿದ್ದಕ್ಕೆ, ಇದೇ ಏನೇ ನೀನು ನನಗೆ ತಂದು ಕೊಡುವ ಒಳ್ಳೆಯ ಹೆಸರು? ಎರಡು ಮಕ್ಕಳನ್ನು ಹೆತ್ತ ಮೇಲೆ ಶರೀರ ಸುಖ ಕೇಳುತ್ತಿದೆಯೇ? ಮಕ್ಕಳನ್ನು ಸಾಕಿದೆವಾ, ಓದಿಸಿದೆವಾ, ಅವನ್ನು ಬೆಳೆಸಿದೆವಾ ಅಂತ ಇಲ್ಲದೆ, ಗಂಡನ ಜತೆ ಯಾವಾಗ ಮಲಗಬೇಕು ಎಂದು ಕೇಳುತ್ತೀಯಲ್ಲೇ? ನನ್ನ ಹೊಟ್ಟೆಯಲ್ಲೇ ಹುಟ್ಟಿದೆಯಾ? ಅಕ್ಕಪಕ್ಕದಲ್ಲಿ ವಿಷಯ ಸೋರಿದರೆ, ಮುಖಕ್ಕೆ ಉಗಿಯುತ್ತಾರೆ, ಕಣೇ. ಸೂಳೇ ಸಹ ಕಾಸಿಗಾಗಿಯೇ ದಿನ ಪೂರ್ತಿ ಮಲಗುತ್ತಾಳೆ. ಅವಳೇನು ಬರುವವನೊಂದಿಗೆಲ್ಲಾ ಸಂತೋಷವಾಗಿಯೇ ಮಲಗುತ್ತಾಳೆ? ಪಾಪ, ಹೊಟ್ಟೆ ಪಾಡು ಎಂದು ಹಲ್ಲು ಕಚ್ಚಿಕೊಂಡು ಮಲಗುತ್ತಾಳೆ. ಸಂಸಾರದಲ್ಲಿ ಯಾವಳಾದರೂ ಗಂಡನ ಜತೆ ಮಲಗಬೇಕು, ಏಳಬೇಕು ಎಂದು ಹೊರಗೆ ಹೇಳಿಕೊಂಡು ತಿರುಗುತ್ತಾಳೇನೇ? ಹುಡುಕಿ ಬಂದರೆ ಇಲ್ಲ ಅಂತ ಹಿಂತಿರುಗಿ ಕಳಿಸದೆ ಮಲಗಬೇಕು. ಅದಲ್ಲವೇ ಹೆಂಗಸು? ಹಣ ಆಸ್ತಿ ಸಂಪಾದಿಸಿದೆವೇ, ಸಂಸಾರ ನಡೆಸಿದೆವೇ ಅಂತ ಇಲ್ಲದೆ, ಊರಲ್ಲಿಲ್ಲದ ಅಪರೂಪವಾಯಿತಲ್ಲಾ” ಎಂದು ನನ್ನನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತಾಳೆ.

ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ

(ಭಾಗ 14)

“ಹೆಂಗಸೂ ಅಂದರೆ ದೇಹವನ್ನು ಕಟ್ಟಿಹಾಕಬೇಕು. ಮನಸ್ಸನ್ನು ಅಡಗಿಸಿಡಬೇಕು” ಪ್ರತಿ ಕೈಗೆಲಸಕ್ಕೂ ಒಂದೊಂದು ಮಾತು ಆಡುತ್ತಾಳೆ.

“ನಾನು ಹೋಗೋರ್ ಬರೋರ್ ಜತೆ ಮಲಗಬೇಕೆಂದು ಕೇಳುತ್ತಿದ್ದೇನೆಯೇ. ಕಣ್ಣನ ಜತೆಯಲ್ಲವೇ ಕೇಳುತ್ತಿದ್ದೇನೆ? ಇಷ್ಟು ವರ್ಷ ಕೇಳಿದನೇ? ನನಗೆ ನಾನು ಅರ್ಥವಾಗಲಿಲ್ಲವೇ? ನಾನು ಕಂಡುಕೊಳ್ಳದಿದ್ದರೂ ದೇಹ ಹಿಂಸೆ ಮಾಡುತ್ತಿದೆಯಲ್ಲಾ? ನಾನು ಎಲ್ಲ ಹೆಂಗಸರ ಹಾಗೆಯೇ ಇದ್ದನಲ್ಲಾ. ಮೈಮೇಲೆ ಭೂತ ಬಂದಂತೆ ಆಗಿದೆಯಲ್ಲಾ.” ದೇಹವನ್ನು ನೋಡಿ ಭಯ ಬಿದ್ದೇ ಸನ್ಯಾಸಿಗಳಾದರೋ? ಒಳಗಿಂದೂ ಹೆಡೆ ಎತ್ತಿ ಆಡುವ ನಾಗವನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಾಗದೆ, ಕಾಯವನ್ನು ತೊರೆಯಲು ಸನ್ಯಾಸಿಗಳು ಬಯಸಿದರೋ? ಅಲ್ಪಸುಖ ಎಂದು ಕ್ಷುಲ್ಲಕವಾಗಿ ಹೇಳಿದರೆ ಮತ್ತೆ ಹೀಗಾಗದಿರಲಿ ಎಂಬ ಮುಂದಾಲೋಚನೆಯೋ?

ಸುಖದಲ್ಲಿ ಚಿಕ್ಕದು ದೊಡ್ಡದು ಉಂಟೇ? ಅಲ್ಪ ಸುಖ ಎಂದು ಹೇಳಿದರು? ಸ್ವಲ್ಪ ಸಮಯವೇ ಉಳಿಯುತ್ತದೆ ಎಂಬುದಕ್ಕಾಗಿಯೇ? ಗಂಡು ಹೆಣ್ಣು ಕೂಡುವುದು ಪಡೆಯುವುದು ಕೀಳೇ? ಉಳಿದ ಸುಖಗಳನ್ನು ಒಂಟಿಯಾಗಿ ಅನುಭವಿಸಬಹುದು. ಒಂಟಿಯಾಗಿ ನಗಬಹುದು. ಆಳಬಹುದು. ಕೋಪಿಸಿಕೊಳ್ಳಬಹುದು. ಕಾಮವನ್ನು ರುಚಿಸಲು ಇಬ್ಬರು ಬೇಕೇ ಬೇಕು. ಸ್ವಸುಖ ಕಂಡುಕೊಳ್ಳುವವವರೂ ಇದ್ದಾರಂತೆ. ನಮ್ಮ ಊರಿನಲ್ಲಿ ರಸ್ತೆಗಳಲ್ಲಿ ಇದ್ದಾರೆಯೇ? ಕೇಳಿಲ್ಲ. ಪ್ರಕೃತಿಯ ಕೂಡುವಿಕೆ ಎಂದರೆ ಎರಡೂ ಲಿಂಗವಲ್ಲವೇ? ಜನಾಂಗ ಬೆಳೆಯಲು ಬುನಾದಿಯಾದ ಸುಖವನ್ನು ಅಲ್ಪ ಸುಖ ಎನ್ನುತ್ತಾರೆಯೇ? ಮನುಷ್ಯರ ನಡುವೆ ನಡೆಯುವುದರಿಂದ ಅಲ್ಪ ಸುಖವೇ?

ಹಿರಿಯ ಸುಖ ಇದೆಯೇ? ದೇವರನ್ನು ಆರಾಧಿಸಿದರೆ ಹಿರಿಯ ಸುಖವೇ? ದೇವರನ್ನು ಆರಾಧಿಸಿದ್ದಾರೆ, ದೇವರನ್ನು ಪಡೆದಿದ್ದಾರೆಯೇ? ದೇವರ ಪಾದಕಮಲಗಳನ್ನು ಸೇರಿದರೆ, ಪರಮಸುಖ ಎಂದು ಹೇಳಬಹುದು. ಸೇರಿದ್ದಾಗಿ ಯಾರೂ ಹೇಳಲಿಲ್ಲವಲ್ಲಾ. ಹೇಳಿದವರು ಯಾರು ಪಡೆಯಲಿಲ್ಲವಲ್ಲಾ.

ಭಾಗ 12 : Literature: ನೆರೆನಾಡ ನುಡಿಯೊಳಗಾಡಿ; ಸಾವಿರ ಸಲ ಒಂದಾಗಿ ಕಲೆತ ದೇಹ ತನ್ನಿಚ್ಛೆಯಂತೆ ಮುತ್ತು ಕೊಡಬೇಕೆಂದರೆ 

ನೆಮ್ಮದಿಯಾಗಿ ನಡೆಯುತ್ತಿದ್ದ ಜೀವನದಲ್ಲಿ ಯಾಕೆ ಈ ದುಂಬಿಯ ಕೊರೆತ? ದೇಹವನ್ನು ನನ್ನ ಬುದ್ಧಿ ನಿಯಂತ್ರಿಸುವ ಶಕ್ತಿಯನ್ನು ಕಳೆದುಕೊಂಡಿತೆ? ಯಾಕೆ ನಿಯಂತ್ರಿಸಬೇಕು ಎಂದು ಮನಸ್ಸು ಹಟ ಮಾಡುತ್ತದೆಯೇ? ಸಂಸಾರದಲ್ಲಿ ದೇಹ ಸುಖಕ್ಕೆ ಯಾವ ಸ್ಥಾನವಿದೆ? ಬದುಕಿನ ಶಾಂತಿಯನ್ನು ನಾನೇ ಕೆಡವುತ್ತಿದ್ದೇನೆಯೇ? ಅರಳಿದ ದೇಹ. ಸುಖ ತುಂಬಿದ ಚಿಲುಮೆ. ಕೆರಳಿದ ಮನಸ್ಸಿನ ಉದ್ವೇಗ. ನಾನು ಕೇಳಲಿಲ್ಲವಲ್ಲಾ? ಮರೆಮಾಚಿಕೊಂಡು ಸುಳ್ಳಾಗಿ ಇರಬೇಕೇ? ನನ್ನನ್ನು ಸಂಪೂರ್ಣವಾಗಿ ವ್ಯಕ್ತಪಡಿಸುವುದು ಸಂಸಾರದಲ್ಲಿ ಸಾಧ್ಯವಿಲ್ಲದ ಕಾರ್ಯವೇ? ಮಡದಿಯ ಮೇಲೆ ನಂಬಿಕೆ ಕಳೆದುಕೊಂಡ ರಾಜರು ಬೇಟೆಗೆ ಹೋಗುವಾಗ, ಉಕ್ಕಿನ ಕವಚದಿಂದ ಹೆಂಡತಿಯ ದೇಹಕ್ಕೆ ಬೀಗ ಹಾಕಿ, ಕೈಯಲ್ಲೇ ಬೀಗದ ಕೀಲಿಯನ್ನು ಕೊಂಡೊಯ್ಯುತ್ತಾರಂತಲ್ಲಾ? ನನ್ನ ದೇಹಕ್ಕೆ ನಾನೇ ಒಂದು ಉಕ್ಕಿನ ಕವಚ ಹಾಕಿಕೊಳ್ಳಬೇಕೇನು? ನನಗೆ ನಾನೇ ಒಂದು ಮುಖವಾಡ ಹಾಕಿಕೊಳ್ಳಬೇಕೇನು? ಹಾಕಿಕೊಂಡರೆ ತಪ್ಪಿಸಿಕೊಳ್ಳಬಹುದೇ?

ಜೀರುಂಡೆಯ ನುಂಗಿದ ಗುರತೂ ಇಲ್ಲದೆ ಹಲ್ಲಿ ಮುಂದಿನ ಬೇಟೆಗಾಗಿ ಕಾಯುತ್ತಿತ್ತು. ಮಂಕು ಬೆಳಕಲ್ಲಿ, ಯಾಳಿನಿಯೂ, ಆದಿಯೂ ತುಂಬ ಸುಂದರವಾಗಿ ಕಾಣಿಸಿದರು. ಅವರ ನಿರಾಳತೆ ನನ್ನೊಳಗೆ ಆವರಿಸಿತು. ನಿದ್ದೆ ಕಳೆದುಕೊಂಡು, ಶಾಂತಿ ಇಲ್ಲದೆ, ಎಂಥ ಅವಸ್ಥೆ ಇದು.

ಹಾಸಿಗೆಯ ಹೊರಗೆ ಚಾಚಿದ್ದ ಕಣ್ಣನ ಕಾಲುಗಳನ್ನು ಹಿಡಿದಂತೆ ಹಾಸಿಗೆಯ ಮೇಲೆ ಒರಗಿದೆ. ಗೊಂದಲವೇ, ಭಯವೇ ಏನೆಂದು ಭಾವನೆಯನ್ನು ವಿಂಗಡಿಸಲಾಗಲಿಲ್ಲ. ಪ್ರೀತಿಯಿಂದ ಮಡಿಲಲ್ಲಿ ಹಾಕಿಕೊಂಡು ಎರಡೂ ಕೈಗಳಿಂದ ಆಲಿಂಗಿಸಿಕೊಂಡರೆ ಚೆನ್ನಾಗಿರುತ್ತದೆ. ತಲೆಯನ್ನು ಸವರಿ, ‘ನಾನಿದ್ದೇನೆ’ ಎಂದು ಕಾರ್ಯದಲ್ಲಿ ಅರಿವು ಮೂಡಿಸಿದರೆ ಶಾಂತವಾಗಬಹುದು. ‘ಏನು ನಿದ್ದೆ ಮಾಡಲಿಲ್ಲವೇ?” ಎಂದು ಕೇಳಿದರೂ ಸಾಕು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 13: Literature: ನೆರೆನಾಡ ನುಡಿಯೊಳಗಾಡಿ; ದೇಹಸುಖ ಬೇಕೆಂದು ಒಬ್ಬ ಸಂಸಾರಿ ಹೆಣ್ಣು ಕಾಯುತ್ತಿದ್ದಾಳೆ ಎಂದರೆ

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi 

Published On - 3:31 pm, Fri, 18 March 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ