Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೋಡನೋಡುತ್ತಿದ್ದಂತೆ ಬಾಯ್ಬಿಟ್ಟ ಭೂಮಿ; ಪಾತಾಳಕ್ಕೆ ಬಿದ್ದ ಮೂರು ಕಾರುಗಳು, ಭಯಾನಕ ದೃಶ್ಯ ಸೆರೆ

ಈ ಭಯಾನಕ ಘಟನೆ ನಡೆದ ಬಳಿಕ ಸ್ಥಳಕ್ಕೆ ಏಳು ಅಗ್ನಿಶಾಮಕ ಟ್ರಕ್​​ಗಳು ಮತ್ತು ಒಂದು ವಿಶೇಷ ರಕ್ಷಣಾ ಘಟಕ ತೆರಳಿತ್ತು. ಅದೃಷ್ಟವಶಾತ್​ ಯಾರಿಗೂ ಗಾಯವಾಗಿಲ್ಲ ಎಂದು ಸ್ಥಳಕ್ಕೆ ತೆರಳಿದ್ದ ಅಗ್ನಿಶಾಮಕ ದಳವೊಂದು ಟೈಮ್ಸ್​ ಆಫ್​ ಇಸ್ರೇಲ್​ ಮಾಧ್ಯಮಕ್ಕೆ ಮಾಹಿತಿ ನೀಡಿದೆ.

Viral Video: ನೋಡನೋಡುತ್ತಿದ್ದಂತೆ ಬಾಯ್ಬಿಟ್ಟ ಭೂಮಿ; ಪಾತಾಳಕ್ಕೆ ಬಿದ್ದ ಮೂರು ಕಾರುಗಳು, ಭಯಾನಕ ದೃಶ್ಯ ಸೆರೆ
ನೆಲ ಬಾಯ್ಬಿಟ್ಟ ಸ್ಥಳ
Follow us
TV9 Web
| Updated By: Lakshmi Hegde

Updated on:Jun 09, 2021 | 4:32 PM

ನಾವು ನಿಂತಿದ್ದ ನೆಲ ಒಮ್ಮೆಲೇ ಕುಸಿದು..ಹಾಗೆ ಬಾಯ್ಬಿಟ್ಟ ಭೂಮಿಯಲ್ಲಿ ನಾವು ಬೀಳುವ ದೃಶ್ಯವನ್ನು ಕಲ್ಪನೆ ಮಾಡಿಕೊಳ್ಳಲೂ ಭಯವಾಗುತ್ತದೆ..ಆದರೆ ಇದೇ ನೈಜ ಘಟನೆಯೊಂದು ನಡೆದಿದೆ. ನೋಡನೋಡುತ್ತಿದ್ದಂತೆ ನೆಲ ಬಾಯ್ಬಿಟ್ಟು ದೊಡ್ಡದೊಂದು ಹೊಂಡ ಸೃಷ್ಟಿಯಾಗಿದೆ. ಆ ಸಮಯದಲ್ಲಿ ಅಲ್ಲೇ ನಿಂತಿದ್ದ ಮೂರು ಕಾರುಗಳು ಹೊಂಡದೊಳಗೆ ಬಿದ್ದಿರುವ ವಿಡಿಯೋ ಒಂದು ಸಿಕ್ಕಾಪಟೆ ವೈರಲ್​ ಆಗಿದ್ದು, ತೀವ್ರ ಭಯಾನಕ ಎನ್ನಿಸಿದೆ.

ಜೆರುಸೆಲಂನ ಆಸ್ಪತ್ರೆಯೊಂದರ ಪಾರ್ಕಿಂಗ್​ ಸ್ಥಳದಲ್ಲಿ ಹೀಗೆ ಭೂಮಿ ಕುಸಿದು ದೊಡ್ಡ ಹೊಂಡ ಸೃಷ್ಟಿಯಾಗಿದೆ. ನಿಲ್ಲಿಸಿದ್ದ ಕಾರುಗಳ ಕೆಳಗಿನ ಭೂಮಿ ಬಾಯ್ಬಿಟ್ಟು ಮೂರು ಕಾರುಗಳು ಅದರೊಳಗೆ ಬಿದ್ದ ದೃಶ್ಯ, ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೂರು ಕಾರುಗಳು ಬಿದ್ದಿವೆ ಎಂದರೆ ಅದೆಷ್ಟು ದೊಡ್ಡ ಹೊಂಡ ಎಂಬುದನ್ನು ಊಹಿಸಿಕೊಳ್ಳಿ. ಊಹಿಸುವುದೂ ಬೇಡ.. ಕೆಳಗಿನ ವಿಡಿಯೋ ನೋಡಿ.

ಈ ಭಯಾನಕ ಘಟನೆ ನಡೆದ ಬಳಿಕ ಸ್ಥಳಕ್ಕೆ ಏಳು ಅಗ್ನಿಶಾಮಕ ಟ್ರಕ್​​ಗಳು ಮತ್ತು ಒಂದು ವಿಶೇಷ ರಕ್ಷಣಾ ಘಟಕ ತೆರಳಿತ್ತು. ಅದೃಷ್ಟವಶಾತ್​ ಯಾರಿಗೂ ಗಾಯವಾಗಿಲ್ಲ ಎಂದು ಸ್ಥಳಕ್ಕೆ ತೆರಳಿದ್ದ ಅಗ್ನಿಶಾಮಕ ದಳವೊಂದು ಟೈಮ್ಸ್​ ಆಫ್​ ಇಸ್ರೇಲ್​ ಮಾಧ್ಯಮಕ್ಕೆ ಮಾಹಿತಿ ನೀಡಿದೆ. ಈ ಜಾಗದ ಸಮೀಪ ಸುರಂಗ ಮಾರ್ಗವೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಕಾಮಗಾರಿಯಿಂದಾಗಿಯೇ ಹೀಗೆ ಭೂಕುಸಿತ ಉಂಟಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಳೆದ ವಾರ ಬರೋಬ್ಬರಿ 300 ಅಡಿ ಆಳದ ಗುಂಡಿಯೊಂದು ಮೆಕ್ಸಿಕೋದ ಕೃಷಿಭೂಮಿಯಲ್ಲಿ ನಿರ್ಮಾಣವಾಗಿ ಆತಂಕ ಹುಟ್ಟಿಸಿತ್ತು. ಮೊದಲು ಸಣ್ಣದಾಗಿದ್ದ ಈ ಕುಳಿ ಬರಬರುತ್ತ ದೊಡ್ಡದಾಗುತ್ತ ಹೋಗಿತ್ತು. ನಂತರ ಅದರಲ್ಲಿ ನೀರು ತುಂಬಿತ್ತು.

ಇದನ್ನೂ ಓದಿ: ಇಂಧನ ದರ ಏರಿಕೆ ವಿರುದ್ಧ ಕಾಂಗ್ರೆಸ್ ಸಮರ; 5 ದಿನಗಳ ಕಾಲ ‘100 ನಾಟೌಟ್’ ಕ್ಯಾಂಪೇನ್: ಡಿ ಕೆ ಶಿವಕುಮಾರ್ ಘೋಷಣೆ

3 parked cars fell into sinkhole out side of Jerusalem hospital

Published On - 4:31 pm, Wed, 9 June 21

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್