Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಲಿ-ಸಿಂಹಗಳಲ್ಲಿ ಕೊರೊನಾ ವೈರಸ್​ ಕಾಣಿಸಿಕೊಳ್ಳುತ್ತಿರಲು ಕಾರಣವೇನು? ಬೆಕ್ಕುಗಳಿಗೇಕೆ ಅತಿ ಹೆಚ್ಚು ಕೊವಿಡ್​ 19 ಅಪಾಯ?

ಕಳೆದ ವರ್ಷ ಡಿಸೆಂಬರ್​​ನಲ್ಲಿ ಒಟ್ಟು 10 ಪ್ರಭೇದಗಳ ಮೇಲೆ ಪ್ರಯೋಗ ನಡೆದಿತ್ತು. ಅವುಗಳಲ್ಲಿ ಕೊರೊನಾ ಸೋಂಕಿನ ಸ್ಪೈಕ್​ ಪ್ರೋಟಿನ್​​ನ್ನು ಯಾವ ಪ್ರಭೇದದ ACE2 ಹೆಚ್ಚಾಗಿ ಸ್ವೀಕರಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲಾಗಿತ್ತು.

ಹುಲಿ-ಸಿಂಹಗಳಲ್ಲಿ ಕೊರೊನಾ ವೈರಸ್​ ಕಾಣಿಸಿಕೊಳ್ಳುತ್ತಿರಲು ಕಾರಣವೇನು? ಬೆಕ್ಕುಗಳಿಗೇಕೆ ಅತಿ ಹೆಚ್ಚು ಕೊವಿಡ್​ 19 ಅಪಾಯ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Jun 09, 2021 | 2:57 PM

ಚೆನ್ನೈನ ವಂಡಾಲೂರು ಪ್ರಾಣಿಸಂಗ್ರಹಾಲಯದಲ್ಲಿರುವ ನೀಲಾ ಎಂಬ 9 ವರ್ಷದ ಹೆಣ್ಣು ಸಿಂಹ ಇತ್ತೀಚೆಗಷ್ಟೇ ಶಂಕಿತ ಕೊರೊನಾ ಸೋಂಕಿನಿಂದ ಕಳೆದವಾರ ಮೃತಪಟ್ಟಿದೆ. ಅದಕ್ಕೂ ಮೊದಲೂ ಮೂಗಿನಿಂದ ನೀರು ಸುರಿಯುತ್ತಿತ್ತು. ಅಂದಿನಿಂದಲೂ ಹುಲಿ, ಪ್ರಾಣಿಗಳ ಮೇಲೆ ಒಂದು ಕಣ್ಣಿಡಲಾಗಿದೆ. ಭೋಪಾಲ್​​ನ ನ್ಯಾಷನಲ್​ ಇನ್​​ಸ್ಟಿಟ್ಯೂಟ್ ಆಫ್​ ಹೈ ಸೆಕ್ಯೂರಿಟಿ ಅನಿಮಲ್​ ಡಿಸೀಸ್​​ನಲ್ಲಿರುವ ಸುಮಾರು 9 ಸಿಂಹಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

ಕಳೆದ ವಾರ ರಾಂಚಿಯ ಭಗವಾನ್​​ ಬಿರ್ಸಾ ಬಯಾಲಜಿಕಲ್​ ಪಾರ್ಕ್​ನಲ್ಲಿದ್ದ 10 ವರ್ಷದ ಹುಲಿಯೊಂದು ಜ್ವರದಿಂದ ಸಾವನ್ನಪ್ಪಿತ್ತು. ಮೃತ ಹುಲಿಯ ಗಂಟಲು ಮಾದರಿಯನ್ನು ಕೊರೊನಾ ಟೆಸ್ಟ್​​ಗೆ ಒಳಪಡಿಸಿದಾಗ ವರದಿ ನೆಗೆಟಿವ್​ ಬಂದಿತ್ತು. ಆದರೂ ಅದರ ಒಳಾಂಗಗಳನ್ನು ಬರೇಲಿಯ ಭಾರತೀಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ತಪಾಸಣೆಗಾಗಿ ಕಳಿಸಲಾಗಿತ್ತು. ಉಳಿದ ಹುಲಿಗಳಿಗೂ ತಪಾಸಣೆ ಮಾಡಲಾಗಿತ್ತು. ಹೀಗೆ ಪದೇಪದೆ ಪ್ರಾಣಿಗಳಿಗೂ ಕೊರೊನಾ ಬಾಧಿಸುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ.

ಹುಲಿ, ಸಿಂಹಗಳು ದುರ್ಬಲ ಪ್ರಾಣಿಗಳೇ? ಕೊರೊನಾ ವೈರಸ್​ ತನ್ನ ಮೇಲ್ಮೈ ಮೇಲೆ ಸ್ಪೈಕ್​ ಪ್ರೋಟಿನ್​ ಹೊಂದಿರುತ್ತದೆ. ಈ ಸ್ಪೈಕ್ ಪ್ರೋಟಿನ್​, ಯಾವುದೇ ಪ್ರಬೇಧದ ಜೀವಿಗಳ ದೇಹದಲ್ಲಿರುವ ACE2 ಎಂಬ ಆತಿಥೇಯ ಪ್ರೊಟೀನ್​ ಜತೆ ಬಂಧಿಸಲ್ಪಟ್ಟು ಸೋಂಕನ್ನು ಉಂಟು ಮಾಡುತ್ತವೆ. ವಿವಿಧ ಪ್ರಭೇದದ ಜೀವಿಗಳು ವಿಭಿನ್ನ ರೀತಿಯಲ್ಲಿ ACE2ನ್ನು ಹೊರಸೂಸುತ್ತವೆ. ಆಯಾ ಜೀವಿಗಳಲ್ಲಿರುವ ACE2 ಪ್ರೊಟೀನ್​ ಹೇಗೆ ಹೊಂದಿಕೊಳ್ಳುತ್ತದೆ ಎಂಬ ಆಧಾರದ ಮೇಲೆ ಸೋಂಕು ತಗುಲುವ ಪ್ರಮಾಣ ಆಧಾರಿತವಾಗುತ್ತಿದೆ. ಸಾಕು ಬೆಕ್ಕುಗಳು ಮತ್ತು ಅದೇ ಪ್ರಭೇದದ ದೊಡ್ಡ ಪ್ರಾಣಿಗಳಿಗೆ ಕೊರೊನಾ ಸೋಂಕು ತಗುಲುತ್ತದೆ ಎಂಬುದನ್ನು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ಮನುಷ್ಯರು ಮತ್ತು ಬೆಕ್ಕುಗಳ ದೇಹದಲ್ಲಿರುವ ACE2 ಪ್ರೋಟಿನ್​ಗಳ ಮಾದರಿ ಒಂದೇ ತೆರೆನಾಗಿ ಇರುವುದಿರಂದ ಈ ಪ್ರಭೇದಗಳಲ್ಲಿ ಸೋಂಕಿನ ಆತಂಕ ಜಾಸ್ತಿಯಾಗಿರುತ್ತದೆ ಎಂಬುದು ಅಧ್ಯಯನಗಳ ವರದಿ ಹೇಳಿದೆ.

ಕಳೆದ ವರ್ಷ ಡಿಸೆಂಬರ್​​ನಲ್ಲಿ ಒಟ್ಟು 10 ಪ್ರಭೇದಗಳ ಮೇಲೆ ಪ್ರಯೋಗ ನಡೆದಿತ್ತು. ಅವುಗಳಲ್ಲಿ ಕೊರೊನಾ ಸೋಂಕಿನ ಸ್ಪೈಕ್​ ಪ್ರೋಟಿನ್​​ನ್ನು ಯಾವ ಪ್ರಭೇದದ ACE2 ಹೆಚ್ಚಾಗಿ ಸ್ವೀಕರಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲಾಗಿತ್ತು. ಈ ಅಧ್ಯಯನದ ಪ್ರಕಾರ ಮನುಷ್ಯನನ್ನು ಬಿಟ್ಟರೆ ಅತಿ ವೇಗವಾಗಿ ಕೊರೊನಾ ಸೋಂಕಿಗೆ ಒಳಗಾಗುವ ಪ್ರಭೇದಗಳೆಂದರೆ ಫೆರೆಟ್, ಬೆಕ್ಕು ಮತ್ತು ಸಿವೆಟ್ಸ್​ಗಳು ಎಂಬುದು ಸಾಬೀತಾಗಿದೆ.

ಬೆಕ್ಕುಗಳಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಇದರ ದೈತ್ಯತಳಿಗಳ ಜೀನೋಮ್​ ಮೇಲೆ ನಾವು ಪ್ರಯೋಗ ನಡೆಸಿಲ್ಲ. ಆದರೆ ಹುಲಿ-ಸಿಂಹಗಳೂ ಈ ಪ್ರಭೇದಕ್ಕೆ ಹತ್ತಿರದಲ್ಲೇ ಇರುವುದರಿಂದ ಅವಕ್ಕೂ ಕೊರೊನಾ ತಗುಲುವ ಸಾಧ್ಯತೆ ಅಧಿಕವಾಗಿದೆ ಎಂದು ಪಿಎಲ್​​ಒಎಸ್​ PLOS ಕಂಪ್ಯೂಟೇಶನಲ್ ಬಯಾಲಜಿಹ ಹಿರಿಯ ಲೇಖಕ ಲ್ಯೂಯಿಸ್​ ಸೆರೆನೋ ಹೇಳಿದ್ದಾರೆ.

ಕಳೆದ ಆಗಸ್ಟ್​​​ನಲ್ಲಿ ಫ್ರಂಟರೀಸ್​ ಇನ್​ ವೆಟರ್ನರಿ ಬಯಾಲಜಿಯಲ್ಲಿ ಈ ಬಗ್ಗೆ ವರದಿಯೊಂದು ಪ್ರಕಟವಾಗಿತ್ತು. ಬೊಲೊಗ್ನಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ್ದ ಅಧ್ಯಯನ ವರದಿ ಇದಾಗಿತ್ತು. ಈ ಅಧ್ಯಯನಕಾರರು ಆರು ಬೆಕ್ಕುಗಳು ಮತ್ತು ಒಂದು ಹುಲಿಯ ಅಂಗಾಂಶಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದರು. ಇವುಗಳ ಜಠರಗರುಳಿನ ಟ್ರ್ಯಾಕ್ಟ್​​ನಲ್ಲಿರುವ ACE2 ವ್ಯಾಪಕ ಅಭಿವ್ಯಕ್ತಿಯ ಬಗ್ಗೆ ಅಧ್ಯಯನ ಮಾಡಿದ್ದರು. ಈ ವೇಳೆ ಸೋಂಕಿಗೆ ಒಳಗಾಗುವ ಆತಂಕ ಹುಲಿಗಳಿಗಿಂತ, ಬೆಕ್ಕಿನಲ್ಲೇ ಜಾಸ್ತಿ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: Viral Video: ವರ ಪಕ್ಕದಲ್ಲಿರುವಾಗಲೇ ಸ್ನೇಹಿತ ಕೊಟ್ಟ ಗಿಫ್ಟ್​ ನೋಡು ವಧು ಕಂಗಾಲು! ಏನದು ಕುತೂಹಲ ಕೆರಳಿಸಿದ ಉಡುಗೊರೆ?

Published On - 2:56 pm, Wed, 9 June 21

VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಸಾಲ ಮಾಡುವ ಸಂದರ್ಭ ಬರಬಹುದು
Daily Horoscope: ಈ ರಾಶಿಯವರಿಗೆ ಇಂದು ಸಾಲ ಮಾಡುವ ಸಂದರ್ಭ ಬರಬಹುದು
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ