
ಹೈದರಾಬಾದ್, ಫೆಬ್ರವರಿ 2: ಬಾಂಗ್ಲಾದೇಶದಲ್ಲಿ ಕಳೆದ 3 ತಿಂಗಳಿನಿಂದ ಬಂಧನದಲ್ಲಿದ್ದ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ 9 ಮೀನುಗಾರರು (Fishermen) ಸ್ವದೇಶಕ್ಕೆ ಮರಳಿದ್ದಾರೆ. ಜನವರಿ 29ರಂದು ಬಾಂಗ್ಲಾದೇಶದ ಕೋಸ್ಟ್ ಗಾರ್ಡ್ ಮೀನುಗಾರರನ್ನು ಭಾರತದ ಕೋಸ್ಟ್ ಗಾರ್ಡ್ಗೆ ಹಸ್ತಾಂತರಿಸಲಾಯಿತು. ನಂತರ ಅವರು ಅವರನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದರು.
2025ರ ಅಕ್ಟೋಬರ್ನಲ್ಲಿ ಮೀನುಗಾರಿಕೆಗೆ ಹೋಗಿದ್ದ 9 ಮೀನುಗಾರರು ಬಂಗಾಳಕೊಲ್ಲಿಯಲ್ಲಿ ಮೀನುಗಾರಿಕೆ ಮಾಡುವಾಗ ಅಜಾಗರೂಕತೆಯಿಂದ ಸಮುದ್ರದ ಗಡಿಯನ್ನು ದಾಟಿದ್ದರು. ಹೀಗಾಗಿ, ಬಾಂಗ್ಲಾದೇಶದ ನೌಕಾಪಡೆಯ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ನಂತರ ಅವರನ್ನು ಬಗೇರ್ಹಟ್ ಜೈಲಿನಲ್ಲಿ ಇರಿಸಲಾಗಿತ್ತು.
Nine #fishermen from #Vizianagaram dist, #AndhraPradesh returned to #Visakhapatnam on Monday after being released from a Bangladesh jail.
They were detained by #Bangladesh Navy, in October last year for inadvertently crossing maritime boundaries while fishing in the Bay of… pic.twitter.com/m8Z4z252nL
— Surya Reddy (@jsuryareddy) February 2, 2026
ಇದನ್ನೂ ಓದಿ: Chanchal Bhowmik: ಬಾಂಗ್ಲಾದೇಶದಲ್ಲಿ ಮತ್ತೊಂದು ಹಿಂದೂ ಯುವಕನ ಹತ್ಯೆ; ಗ್ಯಾರೇಜ್ನೊಳಗೆ ಸಜೀವ ದಹನ
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಮಾತುಕತೆಗಳ ನಂತರ ಮೀನುಗಾರರನ್ನು ಬಿಡುಗಡೆ ಮಾಡಲಾಯಿತು. ಬಾಂಗ್ಲಾದಿಂದ ಬಿಡುಗಡೆಯಾದ ಅವರು ಇಂದು ವಿಶಾಖಪಟ್ಟಣಂ ಕರಾವಳಿಗೆ ತಲುಪಿದ್ದಾರೆ.
ಬಾಂಗ್ಲಾದೇಶದಿಂದ ಬಿಡುಗಡೆಯಾದ ಮೀನುಗಾರರನ್ನು ಮರುಪಲ್ಲಿ ಚಿನ್ನಪ್ಪಣ್ಣ, ರಮೇಶ್ ಅಪ್ಪಲಕೊಂಡ, ಪ್ರವೀಣ್, ರಾಮು, ನಕ್ಕ ರಾಮು, ಸೀತಯ್ಯ ಎಂದು ಗುರುತಿಸಲಾಗಿದೆ. ಅವರಲ್ಲಿ 6 ಮಂದಿ ಭೋಗಪುರಂ ಮಂಡಲದ ಕೊಂಡರಾಜುಪಾಲಂ ಗ್ರಾಮದವರು ಮತ್ತು ಮೂವರು ವಿಜಯನಗರಂ ಜಿಲ್ಲೆಯ ತಿಪ್ಪಲವಲಸ ಗ್ರಾಮದವರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ